AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಕೊಡೋದ್ರಲ್ಲಿ ಬೆಂಗಳೂರು ನಂ. 1; ಭವಿಷ್ಯದ ಜಾಬ್ ಮಾರ್ಕೆಟ್ ಆಗುತ್ತಿವೆ ಈ ಸಣ್ಣ ನಗರಗಳು

TeamLease report on job market in India: ಭಾರತದಲ್ಲಿ ಅತಿಹೆಚ್ಚು ಉದ್ಯೋಗಸೃಷ್ಟಿಯಾಗುತ್ತಿರುವುದು ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ ನಗರಗಳಲ್ಲಿ. ಇದರ ಮಧ್ಯೆ ಎರಡನೇ ಸ್ತರದ ನಗರಗಳೂ ಕೂಡ ಪೈಪೋಟಿ ನೀಡುತ್ತಿವೆ. ತಮಿಳುನಾಡಿನ ಕೊಯಮತ್ತೂರು, ಹರ್ಯಾಣದ ಗುರುಗ್ರಾಮ್ ನಗರಗಳಲ್ಲಿ ಉದ್ಯೋಗಾವಕಾಶ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಟೀಮ್​ಲೀಸ್​ನ ವರದಿ ಹೇಳಿದೆ.

ಕೆಲಸ ಕೊಡೋದ್ರಲ್ಲಿ ಬೆಂಗಳೂರು ನಂ. 1; ಭವಿಷ್ಯದ ಜಾಬ್ ಮಾರ್ಕೆಟ್ ಆಗುತ್ತಿವೆ ಈ ಸಣ್ಣ ನಗರಗಳು
ಉದ್ಯೋಗ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 02, 2024 | 5:45 PM

Share

ನವದೆಹಲಿ, ಡಿಸೆಂಬರ್ 2: ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಮೊದಲಾದ ನಗರಗಳಲ್ಲಿ ಸಾಕಷ್ಟು ಉದ್ಯಮಗಳು ಬೆಳವಣಿಗೆ ಹೊಂದಿದ್ದು ಅಲ್ಲಿ ಉದ್ಯೋಗಾವಕಾಶ ವಿಫುಲವಾಗಿವೆ. ಈ ಮಧ್ಯೆ ಎರಡನೇ ಸ್ತರದ ನಗರಗಳು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು ಪ್ರಮುಖ ಉದ್ಯೋಗ ಮಾರುಕಟ್ಟೆಗಳಾಗುವ ಹಾದಿಯಲ್ಲಿವೆ. ಟೀಮ್ ಲೀಸ್ ಎನ್ನುವ ಮಾನವ ಸಂಪನ್ಮೂಲ ಸೇವೆಯ ಏಜೆನ್ಸಿಯ ವರದಿ ಪ್ರಕಾರ, ಕೊಯಂಬತ್ತೂರು, ಜೈಪುರ್, ನಾಗಪುರ್, ಲಕ್ನೋ ಮತ್ತು ಗುರುಗ್ರಾಮ್ ನಗರಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತಿದೆ. ಆದರೆ, ಜಾಬ್ ಮಾರ್ಕೆಟ್​ನಲ್ಲಿ ಬೆಂಗಳೂರು ಈಗಲೂ ನಂಬರ್ ಒನ್ ಆಗಿದೆ ಎನ್ನುವುದು ಗಮನಾರ್ಹ.

ಟೀಮ್ ಲೀಸ್ ವರದಿ ಪ್ರಕಾರ ಉದ್ಯೋಗಸೃಷ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಇಲ್ಲಿ ಉದ್ಯೋಗಾವಕಾಶ ಶೇ. 53.1ರಷ್ಟು ಹೆಚ್ಚಾಗಿದೆ. ಮುಂಬೈನಲ್ಲಿ ಶೇ. 50.2, ಹೈದರಾಬಾದ್​ನಲ್ಲಿ ಶೇ. 48.2ರಷ್ಟು ಹೆಚ್ಚು ಉದ್ಯೋಗಗಳ ಸೃಷ್ಟಿಯಾಗಿದೆ.

ಇದನ್ನೂ ಓದಿ: ಭಾರತದ ವೈದ್ಯಕೀಯ ತಂತ್ರಜ್ಞಾನ ಉದ್ಯಮಕ್ಕೆ ಅಗಾಧ ಬೆಳವಣಿಗೆಯ ಶಕ್ತಿ ಇದೆ: ಸಿಐಐ ಅನಿಸಿಕೆ

ಪ್ರಮುಖ ಕ್ಲೈಂಟ್​ಗಳು, ಕೌಶಲ್ಯವಂತ ಕೆಲಸಗಾರರು, ಸ್ಥಾಪಿತ ಮೂಲಸೌಕರ್ಯಗಳ ಲಭ್ಯತೆ ಇತ್ಯಾದಿ ಅನುಕೂಲಗಳು ಬೆಂಗಳೂರು ಮೊದಲಾದ ನಗರಗಳಲ್ಲಿ ಇವೆ. ಈ ಕಾರಣಕ್ಕೆ ಸಹಜವಾಗಿ ಹೊಸ ಉದ್ಯೋಗಗಳ ಸೃಷ್ಟಿ ಈ ನಗರಗಳಲ್ಲಿ ಹೆಚ್ಚಿವೆ ಎನ್ನುವುದು ಟೀಮ್ ಲೀಸ್​ನ ಅನಿಸಿಕೆ.

ಆದರೆ, ಕೊಯಂಬತ್ತೂರು, ಗುರುಗ್ರಾಮ್ ಮೊದಲಾದ ಎರಡನೇ ಸ್ತರದ ನಗರಗಳಲ್ಲಿ ಬೆಳವಣಿಗೆ ಆಗುತ್ತಿರುವ ಅಚ್ಚರಿಯ ವಿಚಾರವನ್ನು ಟೀಮ್​ಲೀಸ್ ಗುರುತಿಸಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಶೇ. 24.6, ಗುರುಗ್ರಾಮ್​ನಲ್ಲಿ ಸೇ. 22.6, ಜೈಪುರ್​ನಲ್ಲಿ ಶೇ. 20.3, ಲಕ್ನೋನಲ್ಲಿ ಶೇ. 18.5, ನಾಗಪುರ್​ನಲ್ಲಿ ಶೇ. 16.7ರಷ್ಟು ಉದ್ಯೋಗಸೃಷ್ಟಿಯಾಗಿದೆಯಂತೆ. ಈ ಬೆಳವಣಿಗೆಯ ಹಿಂದೆ ಕೆಲವಾರು ಕಾರಣಗಳನ್ನು ಗುರುತಿಸಲಾಗಿದೆ.

ಇದನ್ನೂ ಓದಿ: ಇಟಿಎಫ್ ರಿಟರ್ನ್​ನ ಮರುಹೂಡಿಕೆ ನಿಯಮ ಸೇರಿದಂತೆ ಇಪಿಎಫ್​ನಲ್ಲಿ ಮಹತ್ವದ ಬದಲಾವಣೆ

ಈ ಕಾರಣಗಳಲ್ಲಿ ಪ್ರಮುಖವಾದುದೆಂದರೆ, ಬೆಂಗಳೂರಿನಂಥ ನಗರಗಳಲ್ಲಿ ರಿಯಲ್ ಎಸ್ಟೇಟ್ ವೆಚ್ಚ ಹಾಗೂ ಬಾಡಿಗೆ ದರ ಬಹಳ ದುಬಾರಿ. ಇದಕ್ಕೆ ಹೋಲಿಸಿದರೆ ಎರಡನೇ ಸ್ತರದ ನಗರಗಳಲ್ಲಿ ಕಡಿಮೆ ವೆಚ್ಚ ಇರುತ್ತದೆ. ಇನ್ನೊಂದು ಪ್ರಮುಖ ಕಾರಣವೆಂದರೆ, ಈ ಸಣ್ಣ ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಕೌಶಲ್ಯವಂತ ಕೆಲಸಗಾರರ ಲಭ್ಯತೆಯೂ ಅಧಿಕ ಇದೆ. ಹೀಗಾಗಿ, ಹಲವು ಉದ್ದಿಮೆಗಳು ಈ ಸಣ್ಣ ನಗರಗಳಲ್ಲಿ ನೆಲೆ ನಿಲ್ಲಲು ಯತ್ನಿಸುತ್ತಿವೆ ಎಂಬ ವಿಚಾರವನ್ನು ಟೀಮ್​ಲೀಸ್​ನ ವರದಿಯಲ್ಲಿ ಎತ್ತಿ ತೋರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?