AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Byju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್

Byju's Sues Lender Redwood: ಸಾಲಗಾರರು ಅನಗತ್ಯವಾಗಿ ಹಿಂಸೆ ಕೊಟ್ಟು ಮಾನ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೈಜುಸ್, ತನಗೆ ಸಾಲ ಕೊಟ್ಟಿರುವ ರೆಡ್​ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ವಿರುದ್ಧವೇ ಕೋರ್ಟ್​ನಲ್ಲಿ ದಾವೆ ಹಾಕಿದೆ.

Byju's vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್
ಬೈಜುಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 06, 2023 | 1:05 PM

Share

ನ್ಯೂಯಾರ್ಕ್: ಭಾರತದ ನಂಬರ್ ಒನ್ ಆನ್​ಲೈನ್ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (Byju’s) ಇದೀಗ ತನ್ನ ಸಾಲಗಾರರ (Lenders) ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ನಿನ್ನೆ ಜೂನ್ 5ರಂದು ಸಾಲದ ಕಂತೊಂದನ್ನು ಕಟ್ಟಲು ಡೆಡ್​ಲೈನ್ ಇತ್ತು. ಆದರೆ, 40 ಮಿಲಿಯನ್ ಡಾಲರ್ (ಸುಮಾರು 330 ಕೋಟಿ ರೂ) ಮೊತ್ತದ ಅ ಸಾಲದ ಹಣವನ್ನು ಕಟ್ಟುವ ಬದಲು ಬೈಜುಸ್ ಅಮೆರಿಕದ ನ್ಯೂಯಾರ್ಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. 330 ಕೋಟಿ ರೂ ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಸಾಲಗಾರರು ಅನಗತ್ಯವಾಗಿ ಹಿಂಸೆ ಕೊಟ್ಟು ಮಾನ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೈಜುಸ್, ತನಗೆ ಸಾಲ ಕೊಟ್ಟಿರುವ ರೆಡ್​ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ವಿರುದ್ಧವೇ ಕೋರ್ಟ್​ನಲ್ಲಿ ದಾವೆ ಹಾಕಿದೆ.

ರೆಡ್​ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ದುರಾಸೆಯಿಂದ ತನ್ನ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದೆ. ಈ ಸಂಸ್ಥೆಯನ್ನು ಅನರ್ಹಗೊಳಸಬೇಕು ಎಂದು ನ್ಯೂಯಾರ್ಕ್ ಸುಪ್ರೀಂಕೋರ್ಟ್​ನಲ್ಲಿ ಬೈಜುಸ್ ಸಂಸ್ಥೆ ಮನವಿ ಮಾಡಿದೆ.

ಇದರೊಂದಿಗೆ ಬೈಜೂಸ್ ಹಾಗೂ ಅವರ ಸಾಲಗಾರರ ಮಧ್ಯೆ ಅಮೆರಿಕದಲ್ಲಿ ಎರಡು ಕಡೆ ಕೋರ್ಟ್ ಕೇಸ್ ದಾಖಲಾದಂತಾಗಿದೆ. ಡೆಲಾವೇರ್​ನಲ್ಲಿ ಬೈಜುಸ್​ನ ಸಾಲಗಾರರು ಕೆಲ ತಿಂಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದು, ಅಮೆರಿಕದಲ್ಲಿರುವ ಬೈಜೂಸ್​ನ ಅಂಗಸಂಸ್ಥೆ ಆಲ್ಫಾವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಕೇಸ್​ನ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿByju’s: ಬೈಜೂಸ್​ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ

ಇದರ ಮಧ್ಯೆ ಈಗ ಬೈಜೂಸ್ ನಿಗದಿತ ಅವಧಿಯೊಳಗೆ ಸಾಲದ ಕಂತು ಕಟ್ಟದೇ ಇರುವುದರಿಂದ ಲೋನ್ ಡೀಫಾಲ್ಟ್ ಆದಂತಾಗಿದೆ. ಕಾನೂನು ಪ್ರಕಾರ ಸಾಲಗಾರರು ಬೈಜೂಸ್ ಅಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಕೋರ್ಟ್ ಮೆಟ್ಟಿಲೇರುವ ಮೂಲಕ ಸಾಲದ ವಿಚಾರವು ವಿವಾದದಲ್ಲಿ ಇರುವುದರಿಂದ ಅದು ಇತ್ಯರ್ಥ ಆಗುವವರೆಗೂ ತಾನು ಸಾಲದ ಕಂತು ಕೊಟ್ಟುವ ಅವಶ್ಯಕತೆಯೇ ಇಲ್ಲ ಎಂಬುದು ಬೈಜುಸ್​ನ ವಾದ. ಅವಧಿಗೆ ಮುನ್ನವೇ ಸಾಲ ಕೊಡುವಂತೆ ರೆಡ್​ವುಡ್ ಒತ್ತಡ ಹಾಕುತ್ತಿದೆ ಎಂದೂ ಅದು ಆರೋಪಿಸಿದೆ.

ಏನಿದು ಬೈಜೂಸ್ ಸಾಲದ ವಿವಾದ?

ಅಮೆರಿಕದ ರೆಡ್​ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆಯಿಂದ ಬೈಜುಸ್ 1.2 ಬಿಲಿಯನ್ ಡಾಲರ್​ನಷ್ಟು ಟರ್ಮ್ ಲೋನ್ ಬಿ (ಟಿಎಲ್​ಬಿ) ಸಾಲ ಪಡೆದಿತ್ತು. ಟರ್ಮ್ ಲೋನ್ ಬಿ ಪ್ರಕಾರ ಆರಂಭಿಕ ಹಂತಗಳಲ್ಲಿ ಹೆಚ್ಚಿನ ಮೊತ್ತದ ಕಂತುಗಳನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಕೊನೆಕೊನೆಯಲ್ಲಿ ಕಂತಿನ ಮೊತ್ತ ಬಹಳ ಹೆಚ್ಚು ಇರುತ್ತದೆ. ಹೊಸ ಸ್ಟಾರ್ಟಪ್​ಗಳು ಸಾಮಾನ್ಯವಾಗಿ ಇಂಥ ಟಿಎಲ್​ಬಿ ಸಾಲಗಳನ್ನು ಪಡೆಯುತ್ತವೆ.

ಇದನ್ನೂ ಓದಿAlert Alert: ದೇಶಬಿಟ್ಟು ಪರಾರಿಯಾಗುತ್ತಿದ್ದಾರೆ… ಮಾಲೀಕರ ವಿರುದ್ಧವೇ ದೂರು ದಾಖಲಿಸಿದ ಉದ್ಯೋಗಿಗಳು

ಬೈಜುಸ್ ಸುಮಾರು 1.2 ಬಿಲಿಯನ್ ಡಾಲರ್ (9900 ಕೋಟಿ ರೂ) ಸಾಲ ಪಡೆದಿತ್ತು. ಅದರಲ್ಲಿ ಇದ್ದ ಕೆಲ ಷರತ್ತುಗಳಲ್ಲಿ ಹಣಕಾಸು ಲಾಭ ನಷ್ಟದ ವರದಿ ಘೋಷಣೆ ಮಾಡುವುದೂ ಒಂದು. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಬೈಜುಸ್ ತನ್ನ ಫೈನಾನ್ಷಿಯಲ್ ರಿಸಲ್ಟ್ ಪ್ರಕಟಿಸಲು ವಿಫಲವಾಗಿತ್ತು. ಅಂದರೆ ಗಡುವಿನೊಳಗೆ ಅದು ವರದಿ ಘೋಷಿಸಲಿಲ್ಲ. ಇದನ್ನೇ ನೆವವಾಗಿಸಿಕೊಂಡು ಸಾಲಗಾರರು ಬೈಜುಸ್​ನಿಂದ ಸಾಲದ ಷರತ್ತು ಮುರಿದಿದೆ ಎಂದು ಹೇಳಿ ಇಡೀ ಸಾಲದ ಮೊತ್ತವನ್ನು ತತ್​ಕ್ಷಣವೇ ಪಾವತಿಸುವಂತೆ ನೋಟೀಸ್ ನೀಡಿದ್ದವು.

ಈಗ ಏಕಾಏಕಿ ಎಲ್ಲಾ ಸಾಲದ ಮೊತ್ತವನ್ನು ಕೇಳುವುದು ಅಕ್ರಮ ಎನ್ನುವ ಬೈಜುಸ್, ಡೆಲಾವೇರ್ ಕೋರ್ಟ್​ನಲ್ಲಿ ಇದನ್ನು ಪ್ರಶ್ನಿಸಿದೆ. ಇದರ ಬೆನ್ನಲ್ಲೇ ನ್ಯೂಯಾರ್ಕ್ ಕೋರ್ಟ್​ನಲ್ಲಿ ರೆಡ್​ವುಡ್ ಸಂಸ್ಥೆ ವಿರುದ್ದವೂ ಬೈಜುಸ್ ದಾವೆ ಹೂಡಿದೆ. ಈ ಪ್ರಕರಣವನ್ನು ನ್ಯಾಯಾಲಯಗಳು ಯಾವ ರೀತಿಯಲ್ಲಿ ಇತ್ಯರ್ಥ ಮಾಡುತ್ತವೆ ಎಂದು ಕಾದುನೋಡಬೇಕು. ಇದರ ಮಧ್ಯೆ ಬೈಜೂಸ್ ಸಂಸ್ಥೆ ತನ್ನ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯನ್ನು ಮುಂದಿನ ವರ್ಷ ಐಪಿಒಗೆ ತೆರೆಸಿ ಒಂದಷ್ಟು ಬಂಡವಾಳ ಸಂಗ್ರಹಿಸುವ ಇರಾದೆಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:16 am, Tue, 6 June 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ