AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget Deficit: ಸತತ ಐದನೇ ವರ್ಷ ಅಂದುಕೊಂಡಿದ್ದಕ್ಕಿಂತ ಮೀರಿ ಹೋಗಲಿದೆ ಕೇಂದ್ರದ ಬಜೆಟ್ ಕೊರತೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಿಂದಾಗಿ ಬಜೆಟ್​ ಕೊರತೆಯ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ.

Budget Deficit: ಸತತ ಐದನೇ ವರ್ಷ ಅಂದುಕೊಂಡಿದ್ದಕ್ಕಿಂತ ಮೀರಿ ಹೋಗಲಿದೆ ಕೇಂದ್ರದ ಬಜೆಟ್ ಕೊರತೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Jun 29, 2021 | 4:51 PM

ಕೊವಿಡ್ ಎರಡನೇ ಅಲೆ ಕಾರಣಕ್ಕೆ ಸತತ ಐದನೇ ವರ್ಷ ಬಜೆಟ್ ಕೊರತೆ ಗುರಿಯ ಅಂದಾಜು ಮೀರಿದೆ. ಕೊವಿಡ್​ ಪರಿಹಾರ ಕ್ರಮದ ಭಾಗವಾಗಿ ಖರ್ಚು ಹೆಚ್ಚಳವಾಗಿದೆ. ಇದರ ಜತೆಗೆ ಕೊವಿಡ್​ ಕಾರಣಕ್ಕೆ ನಿರ್ಬಂಧ ಹಾಕಿದ್ದರಿಂದ ಆದಾಯ ದುರ್ಬಲವಾಗಿದೆ. ಇದರಿಂದಾಗಿ ಒಂದು ಪರ್ಸಂಟೇಜ್​ ಪಾಯಿಂಟ್​ನಷ್ಟು ಕೊರತೆ ಜಾಸ್ತಿಯಾಗಲಿದೆ ಎಂದು ಆರು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ನೂಮುರಾ ಹೋಲ್ಡಿಂಗ್ಸ್ ಇಂಕ್ ಮತ್ತು ಬಾರ್​ಕ್ಲೇಸ್​ ಪಿಎಲ್​ಸಿ ಅಂದಾಜು ಮಾಡುವಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ವ್ಯತ್ಯಾಸ ಶೇ 7ಕ್ಕಿಂತ ಹೆಚ್ಚಾಗಲಿದೆ. ಸರ್ಕಾರವು ಫೆಬ್ರವರಿಯಲ್ಲಿ ಬಜೆಟ್ ಮಂಡನೆ ವೇಳೆಯಲ್ಲಿ ಅಂದಾಜು ಮಾಡಿರುವ ಪ್ರಕಾರ, ಈ ವ್ಯತ್ಯಾಸ ಶೇ 6.8ರಷ್ಟು. ಆದರೆ ಮುಂಬೈ ಮೂಲದ ಕೇರ್ ರೇಟಿಂಗ್ ಲಿಮಿಟೆಡ್​ ಅಂದಾಜಿಸುವಂತೆ ಶೇ 7.8ರಷ್ಟು ಬಜೆಟ್ ಕೊರತೆ ಆಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರದಂದು ಕೊರೊನಾ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಸರ್ಕಾರದಿಂದ ಸಾಲ ಖಾತ್ರಿ ಯೋಜನೆ ವಿಸ್ತರಣೆ ಮಾಡಿದೆ. ಈ ಹಿಂದೆ ಘೋಷಣೆ ಮಾಡಿದಂತೆ ಬಡವರಿಗೆ ಉಚಿತ ಆಹಾರ ಧಾನ್ಯ ನೀಡಲಾಗಿದೆ. ಈ ಕ್ರಮಗಳಿಂದಾಗಿ ಸರ್ಕಾರದ ಆರ್ಥಿಕತೆ ಮೇಲೆ ಇನ್ನಷ್ಟು ಹೊಡೆತ ಬಿದ್ದಿದೆ. ಈಗಾಗಲೇ ತೆರಿಗೆ ಆದಾಯ ಕಡಿಮೆ ಆಗಿದ್ದು, ಆಸ್ತಿ ಮಾರಾಟಕ್ಕೆ ಅಂತ ಇಟ್ಟಿರುವುದು ಕೂಡ ನಿರೀಕ್ಷಿತ ಫಲಿತಾಂಶ ತಂದಿಲ್ಲ. ಗ್ರಾಹಕರ ಬೆಲೆಯಲ್ಲಿನ ಏರಿಕೆ, ಬಾಂಡ್​ ಯೀಲ್ಡ್​ಗಳು ಮತ್ತು ಸ್ವ್ಯಾಪ್​ ದರಗಳು ಕೂಡ ಹೆಚ್ಚಾಗಿವೆ. ಇದಕ್ಕೆ ಕಾರಣವಾಗಿರುವುದು ನಿರೀಕ್ಷೆಗಿಂತ ಬೇಗ ಹಣಕಾಸು ಸ್ಥಿತಿ ಸಹಜ ಸ್ಥಿತಿಗೆ ಮರಳಬಹುದು ಎಂಬ ಕಾರಣಕ್ಕೆ ಹೀಗಾಗಬಹುದು.

ಬಹಳ ಹೆಚ್ಚು ವಹಿವಾಟಾದ 5 ವರ್ಷದ ಬಾಂಡ್ ಕಳೆದ ಎರಡು ವಾರದಲ್ಲಿ 19 ಬೇಸಿಸ್ ಪಾಯಿಂಟ್ಸ್ ಹೆಚ್ಚಾಗಿದೆ. ಸರ್ಕಾರದಿಂದ ಹೆಚ್ಚಿನ ಸಾಲ ಮಾಡುವುದರಿಂದ ಹೆಚ್ಚುವರಿ ಒತ್ತಡ ಆಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಡಾಯಿಶ್ ಬ್ಯಾಂಕ್​ ಎಜಿಯ ಆರ್ಥಿಕ ತಜ್ಞ ಕೌಶಿಕ್ ದಾಸ್ ಹೇಳುವಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.5ರಷ್ಟು ಕೊರತೆ ಆಗಬಹುದು. “ಮೇ ತಿಂಗಳಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಗ್ರಾಕ ದರ ಹಣದುಬ್ಬರ ಆಗಿದ್ದರಿಂದ ಬಾಂಡ್​ ಮಾರ್ಕೆಟ್​ನ ಸೆಂಟಿಮೆಂಟ್ ಮೇಲೇರಿದೆ,” ಎಂದು ದಾಸ್ ಹೇಳುತ್ತಾರೆ. “ಹೆಚ್ಚಿನ ಹಣಕಾಸಿನ ಕೊರತೆಯನ್ನು ನಿಭಾಯಿಸಲು ಹೆಚ್ಚುವರಿಯಾಗಿ ಮಾರುಕಟ್ಟೆಯಿಂದ ಸಾಲ ಪಡೆಯುವುದರಿಂದ ಹೆಚ್ಚಿನ ಅಪಾಯ ತಂದೊಡ್ಡಲಿದ್ದು, ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ವಿತ್ತೀಯ ನೀತಿ ಕ್ರಮವನ್ನು ಸಂಕೀರ್ಣಗೊಳಿಸುತ್ತದೆ,” ಎನ್ನುತ್ತಾರೆ.

ಬಜೆಟ್ ಕೊರತೆ (ಬಜೆಟ್ ಡಿಫಿಸಿಟ್) ಅಂದರೆ, ಸರ್ಕಾರಕ್ಕೆ ಅಂದಾಜು ವೆಚ್ಚದಿಂದ ಅಂದಾಜು ಆದಾಯವನ್ನು ಕಳೆದರೆ ಬರುವ ವ್ಯತ್ಯಾಸ.

ಇದನ್ನೂ ಓದಿ: Nirmala Sitharaman: ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಿಸಲು ಮತ್ತೊಂದು ಸುತ್ತಿನ ಪ್ಯಾಕೇಜ್ ಘೋಷಿಸಿದ ನಿರ್ಮಲಾ ಸೀತಾರಾಮನ್: ಕೇಂದ್ರದಿಂದ 8 ಅಂಶಗಳ ನೆರವು

(Due to covid- 19 second wave package announced by FM Nirmala Sitharaman current financial year budget deficit also increase beyond expectation)

ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು