AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market: ಷೇರುಪೇಟೆ ಸತತ ಕುಸಿತದ ನೋವಿನಲ್ಲಿ ಹೂಡಿಕೆದಾರರು ಹಂಚಿಕೊಂಡ ತಮಾಷೆ ವಿಡಿಯೊ, ಮೀಮ್​ಗಳಿವು

Trending: ಷೇರು ಮಾರುಕಟ್ಟೆಯಲ್ಲಿ ಇಂದಿನ ವಹಿವಾಟನ್ನು ಹೊರತುಪಡಿಸಿ ಕಳೆದ ಮೂರು ದಿನಗಳಲ್ಲಿ ಷೇರು ಮೌಲ್ಯ ಕುಸಿತಗೊಂಡಿದ್ದವು. ಇದರಿಂದಾಗಿ ಹೂಡಿಕೆದಾರರು ನಷ್ಟ ಅನುಭವಿಸಿದ್ದು, ಈ ಬಗ್ಗೆ ತಮಾಷೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

Stock Market: ಷೇರುಪೇಟೆ ಸತತ ಕುಸಿತದ ನೋವಿನಲ್ಲಿ ಹೂಡಿಕೆದಾರರು ಹಂಚಿಕೊಂಡ ತಮಾಷೆ ವಿಡಿಯೊ, ಮೀಮ್​ಗಳಿವು
ಷೇರುಪೇಟೆ ಸತತ ಕುಸಿತದ ನೋವಿನಲ್ಲಿ ಹೂಡಿಕೆದಾರರು ಹಂಚಿಕೊಂಡ ತಮಾಷೆ ವಿಡಿಯೋ, ಮೀಮ್​ಗಳಿವು
TV9 Web
| Edited By: Rakesh Nayak Manchi|

Updated on:Sep 27, 2022 | 11:39 AM

Share

ಷೇರು ಮಾರುಕಟ್ಟೆ (Stock Market) ವಹಿವಾಟಿನ ವಾರದ ಎರಡನೇ ದಿನವಾದ ಇಂದು (ಸೆ.27) ವಹಿವಾಟುಗಳು ಕೊಂಚ ಚೇತರಿಸಿಕೊಂಡಿರುವುದು ಬಿಟ್ಟರೆ ಕಳೆದ ಮೂರು ದಿನಗಳಿಂದ ಹೂಡಿಕೆದಾರರು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಂಡಿದ್ದರು. ಅಂದರೆ ಸೆಕ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಸತತ ಮೂರು ದಿನಗಳು ಕೂಡ ಕುಸಿತಕಂಡಿದ್ದವು. ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹಾಕಿದ ಹಣ ಕೈ ಜಾರಿದ್ದವು. ಕಣ್ಣುಮುಂದೆಯೇ ಹೂಡಿದ ಬಂಡವಾಳ ಕೈಜಾರಿದವು. ಈ ನೋವಿನಲ್ಲೇ ಹೂಡಿಕೆದಾರರು ಕೆಲವೊಂದು ತಮಾಷೆಯ ವಿಡಿಯೋ (Funny Videos)ಗಳನ್ನು. ಮೀಮ್ಸ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ಷೇರು ಮಾರುಕಟ್ಟೆಯಲ್ಲಿ ಕುಸಿತದ ಬಗ್ಗೆ ಟ್ರೋಲ್, ಮೀಮ್ ಹಾಗೂ ತಮಾಷೆಯ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ವಿಕ್ರಾಂತ್ ಎಂಬವರು ಸದ್ಯದ ಸ್ಥಿತಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ವಿಡಿಯೋದಲ್ಲಿ, ಟ್ರ್ಯಾಕ್ಟರ್​ನಲ್ಲಿ ಜನರು ಬರುವುದನ್ನು ಕಾಣಬಹುದು. ಇದನ್ನು ಷೇರು ಮಾರುಕಟ್ಟೆಗೆ ಹೋಲಿಕೆ ಮಾಡಿ ನೋಡುವುದಾದರೆ, ಇಲ್ಲಿ ಷೇರು ಮಾರುಕಟ್ಟೆ ಟ್ರ್ಯಾಕ್ಟರ್ ಆಗಿದ್ದು, ಜನರು ಬಂಡವಾಳವಾಗಿದೆ. ಷೇರು ಮಾರುಕಟ್ಟೆಯಲ್ಲಿ ಸಾಕಷ್ಟ ಹಣವನ್ನು ಬಂಡವಾಳವಾಗಿ ಸುರಿದ ಹೂಡಿಕೆದಾರರ ಬಂಡವಾಳ ನೀರಿನಲ್ಲಿ ಕರಗಿಹೋಗುವುದನ್ನು ತೋರಿಸಲಾಗಿದೆ.

ರುಶಬ್ ಪಾಲ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಅಳುವುದನ್ನು ಕಾಣಬಹುದು. ಅಲ್ಲದೆ “ಇಂದಿನ ಕುಸಿತದ ನಂತರ ನಾನು ಮತ್ತು ನನ್ನ ಹುಡುಗರು ಬಂಡವಾಳ ನೋಡುತ್ತಿದ್ದೇವೆ” ಎಂದು ಶೀರ್ಷಿಕೆ ನೀಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣ ಕಳೆದುಕೊಂಡ ನಂತರ ಹೂಡಿಕೆದಾರರ ನೋವಿನ ಸ್ಥಿತಿಯನ್ನು ಇದು ತೋರಿಸುತ್ತಿದೆ.

ಫಾಕ್ಸ್ ನ್ಯೂಸ್ ವರದಿ ಮಾಡಿರುವ ವಿಡಿಯೋವನ್ನ ಆರ್​ಎನ್​ಸಿ ರಿಸರ್ಚ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಬಿಡೆನ್ ಅಧಿಕಾರ ವಹಿಸಿಕೊಂಡ ನಂತರ ಷೇರು ಮಾರುಕಟ್ಟೆಯ ಮೌಲ್ಯವು $ 7.6 ಟ್ರಿಲಿಯನ್ ಕಡಿಮೆಯಾಗಿದೆ ಎಂದು ಶೀರ್ಷಿಕೆ ಬರೆಯಲಾಗಿದೆ. ಇದಕ್ಕೆ Keyser Soze ಎಂಬವರು ಪ್ರತಿಕ್ರಿಯಿಸಿದ್ದು, “ಮಾರುಕಟ್ಟೆಗಳು ನಜ್ಜುಗುಜ್ಜಾಗುತ್ತಿವೆ, ಜೀವಗಳು ನಾಶವಾಗಿವೆ, ನಿವೃತ್ತಿ ಹೊಂದಿದ ಪಿಪಿಎಲ್ ಮತ್ತೆ ಕೆಲಸಕ್ಕೆ ಬಲವಂತವಾಗಿ, ಉಳಿತಾಯ ಖಾತೆಗಳು ಬರಿದಾಗುತ್ತಿವೆ ಮತ್ತು ಬೆಲೆಗಳು ಗಗನಕ್ಕೇರುತ್ತಿವೆ!” ಎಂದು ಹೇಳಿಕೊಂಡಿದ್ದಾರೆ.

ತ್ವರಿತವಾಗಿ ಶ್ರೀಮಂತರಾಗಲು ಹೋಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು Diogo Trading ಎಂಬ ಟ್ವಿಟರ್ ಖಾತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವವರ ಕಿವಿ ಹಿಂಡಿದೆ. ಫೋಟೋದಲ್ಲಿ ಇರುವಂತೆ, ನಿಧಾನ ಮತ್ತು ಸ್ಥಿರ ಲಾಭಗಳು ಮತ್ತು ತ್ವರಿತವಾಗಿ ಶ್ರೀಮಂತರಾಗುತ್ತಾರೆ ಎಂಬ ಎರಡು ಹೂಡಿಕೆ ಮಾಡುವ ಕಂಪನಿಯನ್ನು ತೋರಿಸಲಾಗಿದೆ. ಇದರಲ್ಲಿ ತ್ವರಿತ ಶ್ರೀಮಂತರಾಗುವ ಕಂಪನಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೂಡಿಕೆ ಮಾಡುವುದನ್ನು ಹಾಗೂ ನಿಧಾನ ಮತ್ತು ಸ್ಥಿರ ಲಾಭ ಕಂಪನಿಗಳಲ್ಲಿ ಒಬ್ಬ ವ್ಯಕ್ತಿ ಹೂಡಿಕೆ ಮಾಡುವುದನ್ನು ತೋರಿಸಲಾಗಿದೆ.

“ಇದರಿಂದಾಗಿ ಹೆಚ್ಚಿನ ವ್ಯಾಪಾರಿಗಳು ವಿಫಲರಾಗಿದ್ದಾರೆ. ಅವರೆಲ್ಲರೂ ತ್ವರಿತವಾಗಿ ಶ್ರೀಮಂತರಾಗಲು ಪ್ರಯತ್ನಿಸುತ್ತಿದ್ದಾರೆ, ಮತ್ತು ಅವರು ದೀರ್ಘಾವಧಿಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಮಾರುಕಟ್ಟೆಯ ಪ್ರಮುಖ ಚಲನೆಗಳು ದಿನಗಳು ಮತ್ತು ವಾರಗಳಲ್ಲಿ ಸಂಭವಿಸುತ್ತವೆ. ಸ್ವಿಂಗ್ ವ್ಯಾಪಾರಿಯಾಗಿ ನೀವು ಪ್ರವೃತ್ತಿಯನ್ನು ಸವಾರಿ ಮಾಡಲು ತಾಳ್ಮೆಯ ಅಗತ್ಯವಿರುತ್ತದೆ. ಕಡಿಮೆ ಅಪಾಯದೊಂದಿಗೆ ದೊಡ್ಡ ಲಾಭವನ್ನು ಗಳಿಸಬಹುದು” ಎಂದು ಶೀರ್ಷಿಕೆಯೂ ಬರೆದುಕೊಂಡಿದ್ದಾರೆ.

ಉಳಿದ ಟ್ವೀಟ್​ಗಳು ಹೀಗಿವೆ

ಎಲ್ಲರೂ ತಮ್ಮ ನಷ್ಟದ ಬಗ್ಗೆ ಅಳುತ್ತಿರುವಾಗ ನಾನು ಹೆಚ್ಚು ಷೇರುಗಳನ್ನು ಖರೀದಿಸುತ್ತಿದ್ದೇನೆ ಎಂಬ ಶೀರ್ಷಿಕೆ ನೀಡಿ ನಾಯಿಯೊಂದು ಕಂಪ್ಯೂಟರ್ ಒತ್ತುತ್ತಿರುವ ಫೋಟೋವನ್ನು ನೆಟ್ಟಿಗರೊಬ್ಬರು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Tue, 27 September 22

Follow Us
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ