AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN Updates: ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆಯಾ? ತಿಳಿದುಕೊಳ್ಳುವುದು ಹೇಗೆ?

How To Know Your PAN Is Active: ಆಧಾರ್ ನಂಬರ್ ಜೊತೆ ಜೋಡಿತವಾಗದ ಪಾನ್ ಅನ್ನು ನಿಷ್ಕ್ರಿಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ನಿಮ್ಮ ಪಾನ್ ಕಾರ್ಡ್ ಇನ್ನೂ ಚಾಲನೆಯಲ್ಲಿದೆಯಾ, ಅಥವಾ ನಿಷ್ಕ್ರಿಯಗೊಂಡಿದೆಯಾ ಎಂದು ಆನ್​ಲೈನ್​ನಲ್ಲೇ ತಿಳಿದುಕೊಳ್ಳಬಹುದು.

PAN Updates: ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆಯಾ? ತಿಳಿದುಕೊಳ್ಳುವುದು ಹೇಗೆ?
ಪ್ಯಾನ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 22, 2023 | 6:06 PM

Share

ಪಾನ್ ಎಂದರೆ ಪರ್ಮನೆಂಟ್ ಅಕೌಂಟ್ ನಂಬರ್ (PAN- Permanent Account Number). ಇದು ಆದಾಯ ತೆರಿಗೆ ಇಲಾಖೆಯಿಂದ ಎಲ್ಲರಿಗೂ ಕೊಡುವ 10 ಅಕ್ಷರ ಅಂಕಿ ಸಂಯೋಜನೆಯ ನಂಬರ್. ದೊಡ್ಡ ಮೊತ್ತದ ಹಣಕಾಸು ವಹಿವಾಟು ನಡೆಸಲು, ಬ್ಯಾಂಕ್ ಖಾತೆ ಇತ್ಯಾದಿ ತೆರೆಯಲು ಪಾನ್ ನಂಬರ್ ಅತ್ಯಗತ್ಯ. ಪಾನ್ ನಂಬರ್ ಹೊಂದಿರುವವರು ಆಧಾರ್ ಕಾರ್ಡ್​ಗೆ ಅದನ್ನು ಲಿಂಕ್ ಮಾಡಬೇಕೆಂದು ಸರ್ಕಾರ ಹೇಳುತ್ತಲೇ ಬಂದಿದೆ. ಗಡುವು ವಿಸ್ತರಣೆಯಾಗುತ್ತಲೇ ಬಂದಿದ್ದು ಈಗ ಡೆಡ್​ಲೈನ್ ಮಾರ್ಚ್ 31ಕ್ಕೆ ಇದೆ.

ಒಬ್ಬ ವ್ಯಕ್ತಿ ಒಂದು ಆಧಾರ್, ಒಂದು ವೋಟರ್ ಐಡಿ ಹೊಂದಬಹುದಾದಂತೆ ಒಂದು ಪಾನ್ ಕಾರ್ಡ್ ಮಾತ್ರ ಹೊಂದಬಹುದು. ಆಧಾರ್ ಜೊತೆ ಪಾನ್ ನಂಬರ್ ಲಿಂಕ್ ಆಗದೇ ಹೋದರೆ ಅದು ನಿಷ್ಕ್ರಿಯಗೊಳ್ಳುತ್ತದೆ. ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಇನ್ನೂ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪಾನ್ ನಂಬರ್ ಚಾಲನೆಯಲ್ಲಿ ಇದೆಯಾ, ಇಲ್ಲವಾ ಎಂದು ತಿಳಿದುಕೊಳ್ಳಲು ಅವಕಾಶ ಇದೆ.

ಪಾನ್ ಕಾರ್ಡ್ ಸಿಂಧು ಇದೆಯಾ ಎಂದು ತಿಳಿಯುವುದು ಹೇಗೆ?

  • ಮೊದಲು ಇನ್ಕಮ್ ಟ್ಯಾಕ್ಸ್ ಪೋರ್ಟಲ್​ಗೆ ಹೋದರೆ, ಎಡಗಡೆ ಕ್ವಿಕ್ ಲಿಂಕ್ಸ್ ಸೆಕ್ಷನ್ ಕಾಣಬಹುದು. ಅಲ್ಲಿ ವೆರಿಫೈ ಯುವರ್ ಪಾನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಪಾನ್ ನಂಬರ್, ನಿಮ್ಮ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಭರ್ತಿ ಮಾಡಬೇಕು.
  • ಈ ವಿವರ ತುಂಬಿದ ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್​ಗೆ ಬಂದ ಓಟಿಪಿ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ವ್ಯಾಲಿಡೇಟ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪಾನ್ ಕಾರ್ಡ್ ವಿವರಗಳು ಸರಿಯಾಗಿದ್ದರೆ ಪಾನ್ ಈಸ್ ಆ್ಕಕ್ಟಿವ್ ಅಂಡ್ ಡೀಟೇಲ್ಸ್ ಆರ್ ಆ್ಯಸ್ ಪರ್ ಪಾನ್ ಎಂಬ ಸಂದೇಶ ಬರುತ್ತದೆ.
  • ಒಂದು ವೇಳೆ, ಹೆಸರು ವಿವರ ಬದಲಾಗಿದ್ದು, ಪಾನ್ ಸಂಖ್ಯೆ ಸರಿಯಾಗಿದ್ದರೆ, ಆಗ ಪಾನ್ ಈಸ್ ಆ್ಯಕ್ಟಿವ್, ಬಟ್ ಡೀಟೇಲ್ಸ್ ಆರ್ ನಾಟ್ ಆ್ಯಸ್ ಪರ್ ಪಾನ್ ಎಂಬ ಸಂದೇಶ ಬರುತ್ತದೆ.
  • ನಿಮ್ಮದೇ ವೈಯಕ್ತಿಕ ವಿವರದಲ್ಲಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಇದ್ದರೆ ಹೆಚ್ಚಿನ ಮಾಹಿತಿ ಬೇಕೆಂದು ಕೇಳಲಾಗುತ್ತದೆ. ಆಗ ನಿಮ್ಮ ತಂದೆಯ ಹೆಸರು ಮತ್ತಿತರ ವಿವರ ನಮೂದಿಸಬೇಕಾಗುತ್ತದೆ.

ಹೆಚ್ಚಿನ ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Wed, 22 February 23

ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವು, 11 ಜನರಿಗೆ ಗಾಯ
ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವು, 11 ಜನರಿಗೆ ಗಾಯ
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಯೋಜನೆಯ 500ನೇ ಕೋಟಿ ಟಿಕೆಟ್ ವಿತರಿಸಲಿರುವ ಸಿದ್ದರಾಮಯ್ಯ
ಯೋಜನೆಯ 500ನೇ ಕೋಟಿ ಟಿಕೆಟ್ ವಿತರಿಸಲಿರುವ ಸಿದ್ದರಾಮಯ್ಯ
ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣ: ಟಿಕೆಟ್ ವಿತರಿಸಿದ ಸಿಎಂ ಸಿದ್ದರಾಮಯ್ಯ
ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣ: ಟಿಕೆಟ್ ವಿತರಿಸಿದ ಸಿಎಂ ಸಿದ್ದರಾಮಯ್ಯ