AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ ಐಎಂಎಫ್

ಭಾರತದ ನಗದು ವರ್ಗಾವಣೆ ಯೋಜನೆಯನ್ನು ಐಎಂಎಫ್​ನ ಹಣಕಾಸು ವ್ಯವಹಾರಗಳ ವಿಭಾಗದ ಉಪ ನಿರ್ದೇಶಕ ಪಾವೊಲೊ ಮೌರೊ ಅವರು ಶ್ಲಾಘಿಸಿದ್ದು, ಭಾರತದಿಂದ ಕಲಿಯಲು ಬಹಳಷ್ಟು ಇವೆ ಎಂದಿದ್ದಾರೆ.

ಭಾರತದಲ್ಲಿ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ ಐಎಂಎಫ್
ಭಾರತದಲ್ಲಿ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ ಐಎಂಎಫ್Image Credit source: flickr.com
TV9 Web
| Edited By: |

Updated on:Oct 13, 2022 | 11:39 AM

Share

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund- IMF)ನ ಹಣಕಾಸು ವ್ಯವಹಾರಗಳ ವಿಭಾಗದ ಉಪ ನಿರ್ದೇಶಕ ಪಾವೊಲೊ ಮೌರೊ ಅವರು ಭಾರತದ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ್ದು, ದೇಶದ ಸಂಪೂರ್ಣ ಗಾತ್ರವನ್ನು ಪರಿಗಣಿಸಿ ಇದನ್ನು “ಆರ್ಥಿಕ ಮೂಲಸೌಕರ್ಯಗಳ ಅದ್ಭುತ” ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ ಭಾರತದಿಂದ ಕಲಿಯಲು ಬಹಳಷ್ಟಿದೆ ಎಂಬುದಕ್ಕೆ ಜಾಗತಿಕ ಸಾಲದಾತರು ಹಲವಾರು ಉದಾಹರಣೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್ ಗ್ರೂಪ್ (WBG)ನ ಆಡಳಿತ ಮಂಡಳಿಗಳ ವಾರ್ಷಿಕ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. “ನಮ್ಮಲ್ಲಿ ಪ್ರತಿಯೊಂದು ಖಂಡದಿಂದ ಮತ್ತು ಪ್ರತಿಯೊಂದು ಹಂತದ ಆದಾಯದ ಉದಾಹರಣೆಗಳಿವೆ. ನಾನು ಭಾರತದವನ್ನು ಪರಿಗಣಿಸಿದಾಗ ಅದು ನಿಜವಾಗಿಯೂ ಸಾಕಷ್ಟು ಪ್ರಭಾವಶಾಲಿಯಾಗಿದೆ” ಎಂದು ಅವರು ಹೇಳಿದರು.

ಭಾರತದ ನಗದು ವರ್ಗಾವಣೆ ಯೋಜನೆಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದಾಗ ದೇಶದ ಸಂಪೂರ್ಣ ಗಾತ್ರವನ್ನು ಒತ್ತಿಹೇಳುತ್ತಾ ಮಾತನಾಡಿದ ಮೌರೊ, ” ನಿರ್ದಿಷ್ಟವಾಗಿ ಗುರಿಪಡಿಸುವ ಕಾರ್ಯಕ್ರಮಗಳಿವೆ. ಮಹಿಳೆಯರು, ವೃದ್ಧರು, ರೈತರನ್ನು ಗುರಿಯಾಗಿಸುವ ಕಾರ್ಯಕ್ರಮಗಳಿವೆ” ಎಂದರು. ಅಲ್ಲದೆ ಭಾರತದ ಸಾಕಷ್ಟು ತಾಂತ್ರಿಕ ಆವಿಷ್ಕಾರಗಳ ಯಶಸ್ಸಿನ ಬಗ್ಗೆ ಗಮನಸೆಳೆದರು.

ಐಎಂಎಫ್‌ನ ಹಣಕಾಸು ವ್ಯವಹಾರಗಳ ವಿಭಾಗದ ನಿರ್ದೇಶಕ ವಿಟರ್ ಗ್ಯಾಸ್ಪರ್, “ತಂತ್ರಜ್ಞಾನದ ಬಳಕೆಯ ಅತ್ಯಂತ ಸ್ಪೂರ್ತಿದಾಯಕ ಉದಾಹರಣೆಗಳಲ್ಲಿ ಒಂದಾಗಿ, ಅತ್ಯಂತ ಅಗತ್ಯವಿರುವ ಜನರಿಗೆ ಬೆಂಬಲವನ್ನು ಗುರಿಯಾಗಿಸುವ ಅತ್ಯಂತ ಜಟಿಲ ಸಮಸ್ಯೆಗಳನ್ನು ಪರಿಹರಿಸಲು ನಾವು ಒಂದಾಗಿದ್ದೇವೆ” ಎಂದರು. ಭಾರತದ ಆರ್ಥಿಕತೆಯು ವಿಶ್ವದ ಇತರೆ ದೇಶಗಳ ಆರ್ಥಿಕತೆಗಿಂದ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ಭಾರತದ ನಗದು ವರ್ಗಾವಣೆ ಯೋಜನೆಯು ಪ್ರಶಂಸೆಗೆ ಪಾತ್ರವಾಗುತ್ತಿದೆ.

ಐಎಂಎಫ್ ತನ್ನ ಇತ್ತೀಚಿನ ವಿಶ್ವ ಆರ್ಥಿಕ ಔಟ್ಲುಕ್ ವರದಿಯಲ್ಲಿ, “ಭಾರತದ ದೃಷ್ಟಿಕೋನವು 2022ರಲ್ಲಿ ಶೇಕಡಾ 6.8 ರಷ್ಟು ಬೆಳವಣಿಗೆಯಾಗಿದೆ. ಇದು ಜುಲೈ ಮುನ್ಸೂಚನೆಯಿಂದ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ನಿರೀಕ್ಷೆಗಿಂತ ದುರ್ಬಲವಾದ ಔಟ್​ಟರ್ನ್ ಮತ್ತು ಹೆಚ್ಚು ಕಡಿಮೆಯಾದ ಬಾಹ್ಯ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದೆ. ಜುಲೈ 2022ರ ವರದಿಯಲ್ಲಿ ಐಎಂಎಫ್ 2022ರ ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7.4ಕ್ಕೆ ನಿಗದಿಪಡಿಸಿತ್ತು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Thu, 13 October 22

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ