AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India AI: ಪ್ಯಾರಿಸ್​ನಲ್ಲಿ ಎಐ ಆ್ಯಕ್ಷನ್ ಸಮಿಟ್ 2025: ಭಾರತದಿಂದ ‘ಅಭಿವೃದ್ಧಿಗೆ ದತ್ತಾಂಶ’

India at Paris AI Action Summit: ಪ್ಯಾರಿಸ್​ನಲ್ಲಿ ಎಐ ಆ್ಯಕ್ಷನ್ ಸಮಿಟ್ ಇಂದು ಮತ್ತು ನಾಳೆ ನಡೆಯುತ್ತಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಕೋ-ಛೇರ್ಮನ್ ಆಗಿದ್ದಾರೆ. ಭಾರತದ ಎನ್​ಜಿಒಗಳಾದ ಎಐ4ಇಂಡಿಯಾ ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಂಡ್ ಗವರ್ನೆನ್ಸ್ ಸಂಸ್ಥೆಗಳು ಜಂಟಿಯಾಗಿ ಚರ್ಚಾಕೂಟವೊಂದನ್ನು ಆಯೋಜಿಸಿವೆ. ಉದಯೋನ್ಮುಖ ಆರ್ಥಿಕತೆಗಳಲ್ಲಿ ಎಐ ಪಾತ್ರದ ಕುರಿತ ಈ ಚರ್ಚಾಕೂಟದಲ್ಲಿ ತಜ್ಞರು ಮತ್ತು ನೀತಿ ರೂಪಕರು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

India AI: ಪ್ಯಾರಿಸ್​ನಲ್ಲಿ ಎಐ ಆ್ಯಕ್ಷನ್ ಸಮಿಟ್ 2025: ಭಾರತದಿಂದ ‘ಅಭಿವೃದ್ಧಿಗೆ ದತ್ತಾಂಶ’
ಎಐ ಸಮಿಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 10, 2025 | 5:50 PM

Share

ನವದೆಹಲಿ, ಫೆಬ್ರುವರಿ 10: ಫ್ರಾನ್ಸ್ ದೇಶದ ರಾಜಧಾನಿ ನಗರಿ ಪ್ಯಾರಿಸ್​ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಿಯಾ ಶೃಂಗಸಭೆ 2025 ಇಂದಿನಿಂದ ಎರಡು ದಿನ ನಡೆಯಲಿದ್ದು ಭಾರತ ಸಕ್ರಿಯವಾಗಿ ಪಾಲ್ಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಮಿಟ್​ನ ಸಹ-ಅಧ್ಯಕ್ಷರಾಗಿದ್ದಾರೆ. ಎಐ ಫಾರ್ ಇಂಡಿಯ (AI4India) ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಂಡ್ ಗವರ್ನೆನ್ಸ್ (ಸಿಪಿಆರ್​ಜಿ) ಜಂಟಿಯಾಗಿ ಚರ್ಚಾ ಕೂಟವೊಂದನ್ನು ಆಯೋಜಿಸುತ್ತಿವೆ. ‘ಡಾಟಾ ಫಾರ್ ಡೆವಲಪ್ಮೆಂಟ್: ಬ್ಯುಲ್ಡಿಂಗ್ ಎಐ ಇನ್ ದಿ ಗ್ಲೋಬಲ್ ಸೌತ್’ ವಿಷಯದಡಿ ಪ್ಯಾನಲ್ ಡಿಸ್ಕಶನ್ ಇರುತ್ತದೆ. ಉದಯೋನ್ಮುಖ ಆರ್ಥಿಕತೆಗಳಲ್ಲಿ ಎಐನ ಪಾತ್ರದ ಕುರಿತು ತಜ್ಞರು ಮತ್ತು ನೀತಿರೂಪಕರು ಚರ್ಚೆಗಳನ್ನು ನಡೆಸಲಿದ್ದಾರೆ.

‘ಡಾಟಾ ಫಾರ್ ಡೆವಲಪ್ಮೆಂಟ್’ ಚರ್ಚಾ ಕೂಟದಲ್ಲಿ ಮಾತನಾಡಲಿರುವ ತಜ್ಞರು…

  • ಅಭಿಷೇಕ್ ಸಿಂಗ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ
  • ಶಶಿ ಶೇಖರ್ ವೇಂಪಟಿ, ಎಐ4ಇಂಡಯಾ ಸಹ-ಸಂಸ್ಥಾಪಕರು
  • ಅಲೋಕ್ ಅಗರ್ವಾಲ್, ಎಐ4ಇಂಡಯಾ ಸಹ-ಸಂಸ್ಥಾಪಕರು
  • ರಮಾನಂದ್, ಸಿಪಿಆರ್​ಜಿ ನಿರ್ದೇಶಕರು
  • ಶಾನ್ ಡೋಗರ್ಟಿ (Sean Dougherty), ಒಇಸಿಡಿ ಹಿರಿಯ ಅಡ್ವೈಸರ್.
  • ಗುಂಜನ್ ಭಾರದ್ವಜ್, ಪಾರ್​ಟೆಕ್ಸ್ ಎನ್ ಸಹ-ಸಂಸ್ಥಾಪಕರು ಮತ್ತು ಸಿಇಒ.

ಇದನ್ನೂ ಓದಿ: ಮೂಲಸೌಕರ್ಯ ಅಭಿವೃದ್ಧಿಗೆ ಗಣನೀಯ ವೆಚ್ಚ; ಯುಪಿಎ, ಎನ್​ಡಿಎ ಸರ್ಕಾರಗಳ ಸಾಧನೆ ಹೋಲಿಸಿದ ಸಚಿವ ಜ್ಯೋತಿರಾದಿತ್ಯ

ಈ ಚರ್ಚಾಕೂಟದಲ್ಲಿ ಮೂರು ಪ್ರಮುಖ ಥೀಮ್​ಗಳಿವೆ. ಮೊದಲನೆಯದು, ದತ್ತಾಂಶ ಸಾರ್ವಭೌಮತೆ ಮತ್ತು ತೃತೀಯ ವಿಶ್ವ (Data Sovereignty and Global South). ದತ್ತಾಂಶವನ್ನು ಯಾರು ನಿಯಂತ್ರಿಸುತ್ತಾರೆ, ಹಾಗೂ ಉದಯೋನ್ಮುಖ ಆರ್ಥಿಕತೆಗಳು ಎಐ ಅಭಿವೃದ್ಧಿಯ ಫಲವನ್ನು ಸರಿಸಮಾನವಾಗಿ ಪಡೆಯುವುದು ಹೇಗೆ ಎಂಬ ಥೀಮ್​ನಲ್ಲಿ ಚರ್ಚೆಯಾಗುತ್ತದೆ.

ಎರಡನೆಯದು, ಆರ್ಥಿಕತೆಯ ಮರುಕಲ್ಪನೆಗೆ ಸಂಬಂಧಿಸಿದ್ದು. ಜಾಗತಿಕ ವ್ಯಾಪಾರದ ಮೇಲೆ ಎಐ ಪರಿಣಾಮ ಹಾಗೂ ಆರ್ಥಿಕ ಕ್ಷಮತೆ ಹೇಗೆ ಸಾಧಿಸಬಹುದು ಎನ್ನುವುದನ್ನು ವಿಶ್ಲೇಷಿಸಲಾಗುತ್ತದೆ.

ಇದನ್ನೂ ಓದಿ: AI Action Summit: ಎಐ ಶೃಂಗಸಭೆ, ಫ್ರಾನ್ಸ್​ಗೆ ಹೊರಟ ಪ್ರಧಾನಿ ಮೋದಿ

ಮೂರನೆಯ ಥೀಮ್ ಎಂದರೆ ನಾಳಿನ ದಿನಗಳಿಗೆ ಕೆಲಸಗಾರರನ್ನು ಅಣಿಗೊಳಿಸುವುದು ಹೇಗೆ ಎಂಬ ಕುರಿತದ್ದಾಗಿರುತ್ತದೆ. ಎಐ ಚಾಲಿತ ಕಾಲಘಟ್ಟದಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಪರಿವರ್ತನೆ ಹೇಗೆ ತರಬಹುದು ಎಂಬ ಚಿಂತನೆ ನಡೆಯುತ್ತದೆ. ಈ ಚರ್ಚಾಕೂಟದ ಮೂರು ಥೀಮ್​ಗಳ ಕುರಿತು ಸಿಪಿಆರ್​ಜಿ ಛೇರ್ಮನ್ ರಮನಾನಂದ್ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Mon, 10 February 25

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು