ಜುಲೈನಲ್ಲಿ ಹಣದುಬ್ಬರ ಕೇವಲ ಶೇ. 3.5; ಐದು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ; ಆರ್​ಬಿಐ ಗುರಿಯೂ ಯಶಸ್ವಿ

India's Retail Inflation in July 2024: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ಜುಲೈನಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. ಆ. 12ರಂದು ಬಿಡುಗಡೆ ಆದ ದತ್ತಾಂಶದ ಪ್ರಕಾರ 2024ರ ಜುಲೈನಲ್ಲಿ ರೀಟೇಲ್ ಹಣದುಬ್ಬರ ಶೇ. 3.5ರಷ್ಟಿದೆ. ಕಳೆದ 5 ವರ್ಷದಲ್ಲೇ ಇದು ಅತಿ ಕನಿಷ್ಠ ಬೆಲೆ ಏರಿಕೆ ದರ ಎನಿಸಿದೆ.

ಜುಲೈನಲ್ಲಿ ಹಣದುಬ್ಬರ ಕೇವಲ ಶೇ. 3.5; ಐದು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ; ಆರ್​ಬಿಐ ಗುರಿಯೂ ಯಶಸ್ವಿ
ಹಣದುಬ್ಬರ

Updated on: Aug 12, 2024 | 6:42 PM

ನವದೆಹಲಿ, ಆಗಸ್ಟ್ 12: ಜುಲೈ ತಿಂಗಳಲ್ಲಿ ಭಾರತದ ರೀಟೇಲ್ ಹಣದುಬ್ಬರ ದರ ಶೇ. 3.5ರಷ್ಟಿರುವುದು ತಿಳಿದಿಬಂದಿದೆ. ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 5.1ಕ್ಕೆ ಏರಿತ್ತು. ಈಗ ಆರ್​ಬಿಐನ ಹಣದುಬ್ಬರ ಗುರಿಯಾದ ಶೇ. 4ಕ್ಕಿಂತ ಕಡಿಮೆ ಮಟ್ಟಕ್ಕೆ ಅದು ಇಳಿದಿದೆ. ಕಳೆದ 5 ವರ್ಷದಲ್ಲೇ ಇದು ಅತಿ ಕಡಿಮೆ ಹಣದುಬ್ಬರ ದರವಾಗಿದೆ. ಇಂದು (ಆ. 12) ಬಿಡುಗಡೆ ಮಾಡಲಾದ ದತ್ತಾಂಶದಲ್ಲಿ ಈ ವಿವರ ಇದೆ.

ದಿಢೀರನೇ ಇಷ್ಟೊಂದು ಹಣದುಬ್ಬರ ದರ ಇಳಿಕೆ ಆಗುವುದು ನಿರೀಕ್ಷಿತವೇ ಆಗಿತ್ತು. ಅದಕ್ಕೆ ಕಾರಣ ದರಕ್ಕೆ ನಿಗದಿ ಮಾಡಲಾದ ಬೇಸ್​ನಲ್ಲಿ ಬದಲಾವಣೆ ಆಗಿದ್ದು. ಅಂದರೆ 2023ರ ಜುಲೈನಲ್ಲಿ ಹಣದುಬ್ಬರ ಶೇ. 7.4ರಷ್ಟಿತ್ತು. ಅದರ ಆಧಾರದ ಮೇಲೆ ಈ ಜುಲೈನ ಹಣದುಬ್ಬರ ದರ ಕಡಿಮೆ ಮಟ್ಟದಲ್ಲಿದೆ. ಹೆಚ್ಚಿನ ಸಮೀಕ್ಷೆಗಳಲ್ಲಿ ಆರ್ಥಿಕ ತಜ್ಞರು ಇದೇ ಕಾರಣಕ್ಕೆ ಜುಲೈನಲ್ಲಿ ಹಣದುಬ್ಬರ ಕಡಿಮೆ ಇರಬಹುದು ಎಂದು ಅಂದಾಜು ಮಾಡಿದ್ದರು. ಈ ಸಮೀಕ್ಷೆಗಳ ಪ್ರಕಾರ ಜುಲೈ ಹಣದುಬ್ಬರ ಶೆ. 3.24ರಿಂದ 4ರವರೆಗೆ ಇರಬಹುದು ಎಂದು ಹೇಳಲಾಗಿತ್ತು.

ಜುಲೈನಿಂದ ಸೆಪ್ಟಂಬರ್​ವರೆಗಿನ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ. 4.4ರಷ್ಟಿರಬಹುದು ಎಂದು ಆರ್​ಬಿಐ ಅಂದಾಜು ಮಾಡಿತ್ತು. ಆದರೆ, ವಾಸ್ತವದಲ್ಲಿ ಹಣದುಬ್ಬರ ಈ ಅವಧಿಯಲ್ಲಿ ಇನ್ನೂ ಕಡಿಮೆ ಇರುವ ಸಂಭಾವ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ

ಹಣದುಬ್ಬರ ಎಂದರೇನು?

ದೇಶದ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಆಗುವ ವ್ಯತ್ಯಯವನ್ನು ದಾಖಲಿಸುತ್ತದೆ ಈ ಹಣದುಬ್ಬರ. ಆಹಾರ ವಸ್ತುಗಳಿಂದ ಹಿಡಿದು ಪೆಟ್ರೋಲ್, ಡೀಸಲ್​ವರೆಗೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆ ಅಥವಾ ಇಳಿಕೆಯನ್ನು ಈ ಹಣದುಬ್ಬರ ಪ್ರತಿಫಲಿಸುತ್ತದೆ. ಕೆಲ ನಿರ್ದಿಷ್ಟ ಉತ್ಪನ್ನಗಳನ್ನು ಈ ಲೆಕ್ಕಾಚಾರಕ್ಕೆ ಬಳಸಲಾಗುತ್ತದೆ. ಅವುಗಳ ಅವಶ್ಯಕತೆಗೆ ಅನುಗುಣವಾಗಿ ತೂಕ ನೀಡಲಾಗುತ್ತದೆ. ಅಂದರೆ ಬಹಳ ಅಗತ್ಯವಾದ ಆಹಾರವಸ್ತುಗಳ ಬೆಲೆಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us