AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ

Patanjali Foods sees big revenue and profit increase: ಡಿಸೆಂಬರ್ ತ್ರೈಮಾಸಿಕದಲ್ಲಿ ಪತಂಜಲಿ ಫುಡ್ಸ್ ಉತ್ತಮ ಪ್ರದರ್ಶನ ನೀಡಿದ್ದು, ಲಾಭವನ್ನು ಶೇ.60 ರಷ್ಟು ಹೆಚ್ಚಿಸಿಕೊಂಡು ₹593 ಕೋಟಿಗೆ ತಲುಪಿದೆ. ಕಂಪನಿಯ ಒಟ್ಟು ಆದಾಯವು ₹10,000 ಕೋಟಿಗಳನ್ನು ಮೀರಿದೆ. ಹಿಂದಿನ ವರ್ಷದಕ್ಕಿಂತ ಇದು ಶೇ.16.5 ರಷ್ಟು ಭಾರಿ ಏರಿಕೆಯಾಗಿದೆ. ಬಾಬಾ ರಾಮದೇವ್ ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ ₹1 ಲಕ್ಷ ಕೋಟಿ ತಲುಪುವ ಗುರಿಯನ್ನು ಹೊಂದಿದ್ದಾರೆ.

ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2026 | 8:14 PM

Share

FMCG ದೈತ್ಯನಾಗಿ ಬೆಳೆದಿರುವ ಪತಂಜಲಿ ಫುಡ್ಸ್ ಡಿಸೆಂಬರ್ ತ್ರೈಮಾಸಿಕದಲ್ಲಿ ಐತಿಹಾಸಿಕ ಮತ್ತು ಪ್ರಭಾವಶಾಲಿ ಪ್ರದರ್ಶನ ನೀಡಿದೆ. ಇತ್ತೀಚೆಗೆ ಬಿಡುಗಡೆಯಾದ ತ್ರೈಮಾಸಿಕ ಹಣಕಾಸು ವರದಿ ಪ್ರಕಾರ, ಕಂಪನಿಯ ಒಟ್ಟು ಆದಾಯವು ₹10,000 ಕೋಟಿ ಮೀರಿದೆ. ಇದು ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಶೇಕಡಾ 16.53 ರಷ್ಟು ಆದಾಯ ಹೆಚ್ಚಳವಾಗಿದೆ. ಇದು ಯಾವುದೇ ತ್ರೈಮಾಸಿಕದಲ್ಲಿ ಕಂಡ ಅತ್ಯುತ್ತಮ ಫಲಿತಾಂಶ ಎನಿಸಿದೆ. ಪತಂಜಲಿ ಫುಡ್ಸ್​ನ ಲಾಭದಲ್ಲೂ ಕೂಡ ಶೇಕಡಾ 60 ರಷ್ಟು ಏರಿಕೆ ಆಗಿದೆ.

ಎಫ್​ಎಂಸಿಜಿ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಪತಂಜಲಿ ಸಂಸ್ಥೆಯ ಹಲವು ಉತ್ಪನ್ನಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಕಂಪನಿಯ ಒಟ್ಟು ಆದಾಯಕ್ಕೆ FMCG ಬ್ಯುಸಿನೆಸ್ ಶೇಕಡಾ 30 ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ. ಪತಂಜಲಿಯ ಬ್ಯುಸಿನೆಸ್ ಮಾಡಲ್ ಸಮರ್ಪಕವಾಗಿರುವುದರ ದ್ಯೋತಕ ಇದು. ಹೋಮ್ ಮತ್ತು ಪರ್ಸನಲ್ ಕೇರ್ ಬ್ಯುಸಿನೆಸ್​ನಲ್ಲಿ ಪತಂಜಲಿಗೆ 626 ಕೋಟಿ ರೂ ಆದಾಯ ಮತ್ತು ಶೇ. 25 ಲಾಭ ಹೆಚ್ಚಳ ದಾಖಲಾಗಿದೆ.

ಲಕ್ಷ ಕೋಟಿ ರೂ ಮಾರುಕಟ್ಟೆ ಬಂಡವಾಳದ ಗುರಿ

ಬಾಬಾ ರಾಮದೇವ್ ಅವರು ಪತಂಜಲಿಯ ಭವಿಷ್ಯದ ಸ್ಟ್ರಾಟಿಜಿ ಬಗ್ಗೆ ಕೆಲ ಮಾತುಗಳನ್ನಾಡಿದ್ದಾರೆ. ಪತಂಜಲಿ ಫುಡ್ಸ್​ನ ಮಾರ್ಕೆಟ್ ಕ್ಯಾಪಿಟಲ್ ಸದ್ಯ 57,000 ಕೋಟಿ ರೂ ಇದೆ. ಮುಂದಿನ ಮೂರು ವರ್ಷದಲ್ಲಿ ಇದನ್ನು ಒಂದು ಲಕ್ಷ ಕೋಟಿ ರೂಗೆ ಏರಿಸುವ ಗುರಿ ಇರುವುದಾಗಿ ರಾಮದೇವ್ ಹೇಳಿದ್ದಾರೆ. ಇದೇ ವೇಳೆ, ಕಂಪನಿಯು ತನ್ನ ಒಟ್ಟು ವಹಿವಾಟನ್ನು ₹1 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನೂ ಹೊಂದಿದೆ.

ಇದನ್ನೂ ಓದಿ: ಪ್ರತೀ ದಿನ ಬೆಳಗ್ಗೆ ಪ್ರಾಣಾಯಾಮ ಮಾಡುವುದರಿಂದ ಏನು ಪ್ರಯೋಜನ? ಬಾಬಾ ರಾಮದೇವ್ ಅವರ ಟಿಪ್ಸ್ ಇಲ್ಲಿದೆ

ದೇಶೀಯ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಬಲಪಡಿಸುವುದು ಮತ್ತು ಪತಂಜಲಿಯನ್ನು ವಿಶ್ವದ ಅತಿದೊಡ್ಡ ಸ್ಥಳೀಯ FMCG ಕಂಪನಿಯನ್ನಾಗಿ ಮಾಡುವುದು ಕಂಪನಿಯ ಪ್ರಾಥಮಿಕ ಉದ್ದೇಶವಾಗಿದೆ. ಲಾಭದಾಯಕತೆಗೆ ಸಂಬಂಧಿಸಿದಂತೆ, ಮುಂದಿನ ಮೂರು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂಪಾಯಿಗಳ EBITDA ತಲುಪುವ ದೃಢವಾದ ಯೋಜನೆ ಇದೆ. ಖಾದ್ಯ ತೈಲದ ಪೂರೈಕೆಯನ್ನು ಸುಧಾರಿಸಲು, ತಾಳೆ ತೋಟಗಳನ್ನು ಅರವತ್ತು ಸಾವಿರ ಹೆಕ್ಟೇರ್‌ಗಳಿಂದ 1.10 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಲಾಗಿದೆ.

ವಿದೇಶಿ ಕಂಪನಿಗಳಿಗೆ ತೀವ್ರ ಸ್ಪರ್ಧೆ

ದಿನನಿತ್ಯ ಬಳಸುವ ಉತ್ಪನ್ನಗಳಲ್ಲಿ ವಿದೇಶಿ ಬ್ರ್ಯಾಂಡ್‌ಗಳು ಈಗ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ. ಭಾರತದ ದಂತ ಆರೈಕೆ ವಿಭಾಗದಲ್ಲಿ ಪತಂಜಲಿ ಕೋಲ್ಗೇಟ್ ಅನ್ನು ಮೀರಿಸಿದೆ ಎಂದು ಬಾಬಾ ರಾಮದೇವ್ ಸ್ಪಷ್ಟಪಡಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಪತಂಜಲಿ ದೇಶದಲ್ಲಿ ನಂಬರ್ ಒನ್ ಬ್ರ್ಯಾಂಡ್ ಆಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಸರ್ಕಾರ ಡೆಂಟಲ್ ಹಾಗೂ ಹೇರ್​ಕೇರ್​ನಂತಹ ಎಸೆನ್ಷಿಯಲ್ ಪ್ರಾಡಕ್ಟ್​ಗಳ ಮೇಲೆ ಜಿಎಸ್​ಟಿಯನ್ನು ಶೇ. 18ರಿಂದ 5ಕ್ಕೆ ಇಳಿಸಿದೆ. ಈ ತೆರಿಗೆ ರಿಯಾಯಿತಿಯ ಲಾಭವು ಪತಂಜಲಿಗೆ ದಕ್ಕುತ್ತಿದೆ. ಪರ್ಸನಲ್ ಕೇರ್ ಸೆಕ್ಟರ್​ನಲ್ಲಿ ಕಂಪನಿ ಸಾಧನೆ ಉತ್ತಮವಾಗಿದೆ.

ಇದನ್ನೂ ಓದಿ: ಜೇನುತುಪ್ಪದ ಪ್ರಯೋಜನಗಳೇನು, ಪತಂಜಲಿ ಜೇನುತುಪ್ಪದ ಶುದ್ಧತೆ ಎಷ್ಟು? ಇಲ್ಲಿದೆ ಮಾಹಿತಿ

ಹೂಡಿಕೆದಾರರಿಗೆ ಅದ್ಭುತ ಲಾಭ

ಷೇರು ಮಾರುಕಟ್ಟೆಯಲ್ಲಿ ಪತಂಜಲಿ ಫುಡ್ಸ್ ಹೂಡಿಕೆದಾರರ ವಿಶ್ವಾಸ ಉಳಿಸಿಕೊಂಡಿದೆ. ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಟ್ಟಿದೆ. ಇಂದು ಶುಕ್ರವಾರದ ಟ್ರೇಡಿಂಗ್ ಕೊನೆಯಲ್ಲಿ ಇದರ ಷೇರು ಬೆಲೆ ₹531 ಕ್ಕೆ ಮುಕ್ತಾಯವಾಗಿದೆ. ಕಳೆದ ಒಂದು ತಿಂಗಳಲ್ಲಿ, ಷೇರುಬೆಲೆ 5.93% ಹೆಚ್ಚಳ ಆಗಿದೆ. ಆದರೆ ಹತ್ತು ವರ್ಷಗಳ ಅವಧಿಯಲ್ಲಿ, ಹೂಡಿಕೆದಾರರಿಗೆ 6750% ಲಾಭವನ್ನು ಗಳಿಸಿಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?