Sign In

By signing in or creating an account, you agree with Associated Broadcasting Company's Terms & Conditions and Privacy Policy.

stock market

stock market

ಸ್ಟಾಕ್ ಮಾರ್ಕೆಟ್ ಎಂದರೆ ಷೇರುಪೇಟೆ. ಅಥವಾ ಷೇರು ವಿನಿಮಯ ಮಾರುಕಟ್ಟೆ. ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ. ಭಾರತದ ಷೇರು ಮಾರುಕಟ್ಟೆ ವಿಶ್ವದಲ್ಲೇ ಐದನೇ ಅತಿದೊಡ್ಡದು. 4 ಟ್ರಿಲಿಯನ್ ಡಾಲರ್​ನಷ್ಟು ಷೇರುಸಂಪತ್ತು ಇಲ್ಲಿದೆ.

ಇನ್ನೂ ಹೆಚ್ಚು ಓದಿ

ಸೆಬಿ ನಿರ್ಧಾರಗಳು… ಎಫ್​​ಪಿಐ ವಿವರ ಸಲ್ಲಿಕೆ ಮಿತಿ ಹೆಚ್ಚಳ; ಮುಂಗಡ ಶುಲ್ಕ ಮಿತಿ ಹೆಚ್ಚಳ; ಉನ್ನತ ಮಟ್ಟದ ಸಮಿತಿ ರಚನೆ

SEBI board key decisions: ಫಾರೀನ್ ಪೋರ್ಟ್​​ಫೋಲಿಯೋ ಹೂಡಿಕೆದಾರರು ಸಮಗ್ರ ಮಾಹಿತಿ ಘೋಷಣೆ ಮಾಡಲು ಇರುವ ಮಿತಿಯನ್ನು 25,000 ಕೋಟಿ ರೂನಿಂದ 50,000 ಕೋಟಿ ರೂಗೆ ಏರಿಸಲಾಗಿದೆ. ನೂತನ ಸೆಬಿ ಛೇರ್ಮನ್ ತುಹಿನ್ ಕಾಂತ ಪಾಂಡೆ ನೇತೃತ್ವದಲ್ಲಿ ನಡೆದ ಸೆಬಿ ಮಂಡಳಿ ಸಭೆಯಲ್ಲಿ ಕೆಲ ಪ್ರಮುಖ ಕ್ರಮಗಳಿಗೆ ಅನುಮೋದನೆ ಸಿಕ್ಕಿದೆ. ಸೆಬಿ ಸದಸ್ಯರ ಆಸ್ತಿಪಾಸ್ತಿ ವಿವರ, ಹಿತಾಸಕ್ತಿ ಸಂಘರ್ಷ ಪ್ರಕರಣಗಳ ಪರಾಮರ್ಶೆಗೆ ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಷೇರುಪೇಟೆ ಸಖತ್ ಗೂಳಿ ಓಟ; ನಷ್ಟವೆಲ್ಲಾ ಉಡೀಸ್; ಈ ತಿಂಗಳೇ ಹೊಸ ದಾಖಲೆ ಮಾಡಲಿವೆ ಸೆನ್ಸೆಕ್ಸ್, ನಿಫ್ಟಿ

Stock market bull run for successive 6th session: ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಆರನೇ ದಿನ ಲಾಭದಲ್ಲಿ ಅಂತ್ಯಗೊಂಡಿವೆ. ಈ ವರ್ಷ ಕಂಡಿದ್ದ ನಷ್ಟವೆಲ್ಲಾ ಆರು ದಿನದ ಓಟದಲ್ಲಿ ಭರ್ತಿಯಾಗಿವೆ. ಎಲ್ಲಾ ಸೆಕ್ಟರ್​​ಗಳು ಪಾಸಿಟಿವ್ ಆಗಿವೆ. ಬ್ಯಾಂಕಿಂಗ್ ಮತ್ತು ಐಟಿ ವಲಯದ ಷೇರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಎಫ್​​ಐಐಗಳು ಭಾರತಕ್ಕೆ ಮತ್ತೆ ಮುಗಿಬೀಳುತ್ತಿವೆ. ಇದರ ಜೊತೆಗೆ ವಿಐಎಕ್ಸ್ ಎನ್ನುವ ಭಯ ಸಂವೇದಿ ಸೂಚ್ಯಂಕ ಕೂಡ ಏರುತ್ತಿರುವುದು ಮತ್ತೊಂದು ಸಣ್ಣ ಮಾರ್ಕೆಟ್ ಕರೆಕ್ಷನ್ ಸಾಧ್ಯತೆಯನ್ನು ತೋರಿಸುತ್ತಿದೆ.

ಷೇರು ಟಿಪ್ಸ್; ಸಮಯ ಬಂದಾಗ ಮಾರಿಬಿಡಿ; ಕಂಪನಿ ಚೆನ್ನಾಗಿದೆ ಅಂತ ಕೊನೆ ತನಕ ಇಟ್ಕೋಬೇಡಿ

Stock market tips: ಷೇರುಗಳನ್ನು ಕೊಂಡಾಗ ಅದನ್ನು ಯಾವಾಗ ಮಾರಬೇಕು, ಎಷ್ಟು ದಿನ ಇಟ್ಟುಕೊಂಡರೆ ಉತ್ತಮ ರಿಟರ್ಸ್ ಸಿಗುತ್ತದೆ ಎಂಬ ಲೆಕ್ಕಾಚಾರ ಬಹಳ ಕಡಿಮೆ ಜನರಿಗೆ ತಿಳಿದಿರಬಹುದು. ಷೇರು ವಿಷಯದಲ್ಲಿ ಸೆಂಟಿಮೆಂಟ್ ಇರಕೂಡದು. ಹಿಂದೆಲ್ಲಾ ಸೂಪರ್​​ಸ್ಟಾರ್ ಎನಿಸಿದ್ದ ಷೇರುಗಳು ಇವತ್ತು ಹೇಳಹೆಸರಿಲ್ಲದಂತಾಗಿವೆ. ಮಾರಿಗೋಲ್ಡ್ ವೆಲ್ತ್ ಸಂಸ್ಥಾಪಕ ಅರವಿಂದ್ ದತ್ತ ಒಂದು ಅಮೂಲ್ಯ ಟಿಪ್ಸ್ ಹಂಚಿಕೊಂಡಿದ್ದಾರೆ.

ಗರಿಗೆದರಿದ ಷೇರುಪೇಟೆ; 900 ಅಂಕ ಗಳಿಸಿದ ಸೆನ್ಸೆಕ್ಸ್; 267 ಅಂಕ ಹೆಚ್ಚಿಸಿಕೊಂಡ ನಿಫ್ಟಿ; ಇವತ್ತು ಮಾರುಕಟ್ಟೆ ಏರುತ್ತಿರುವುದು ಯಾಕೆ?

Know why Indian stock market rising: ಭಾರತದ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಷೇರುಗಳು ಇವತ್ತು ಪಾಸಿಟಿವ್ ಆಗಿವೆ. ಹೆಚ್ಚಿನ ಸೂಚ್ಯಂಕಗಳು ಅಂಕಗಳನ್ನು ಹೆಚ್ಚಿಸಿಕೊಂಡಿವೆ. ಸೆನ್ಸೆಕ್ಸ್ 75,000 ಅಂಕಗಳು, ಹಾಗು ನಿಫ್ಟಿ 22,776 ಅಂಕಗಳ ಮಟ್ಟಕ್ಕೆ ಹೋಗಿವೆ. ಜಾಗತಿಕ ಮಾರುಕಟ್ಟೆಗಳ ಏರಿಕೆ, ಭಾರತೀಯ ಷೇರುಗಳ ಆಕರ್ಷಕ ಬೆಲೆ, ರುಪಾಯಿ ಮೌಲ್ಯ ಹೆಚ್ಚಳ ಇವೇ ಮುಂತಾದ ಕಾರಣಗಳನ್ನು ಗುರುತಿಸಲಾಗಿದೆ.

Robert Kiyosaki: 1929ರಲ್ಲಿ ಷೇರುಪೇಟೆ ಮಹಾಕುಸಿತದ ಪರಿಣಾಮ ಭೀಕರ; ಈ ಬಾರಿ ಅದನ್ನೂ ಮೀರಿಸಿದ ಕುಸಿತವಾ?

Stock market crash 1929 vs 2025: 1929ರಲ್ಲಿ ಆದ ಸ್ಟಾಕ್ ಮಾರ್ಕೆಟ್ ಕುಸಿತವನ್ನು ಮೀರಿಸುವಂತಹ ಕುಸಿತ ಈಗ ಆಗುತ್ತಿದೆ ಎಂದು ರಾಬರ್ಟ್ ಕಿಯೋಸಾಕಿ ಎಚ್ಚರಿಸಿದ್ದಾರೆ. ಎಲ್ಲಾ ಬಬ್ಬಲ್​​ಗಳು ಒಡೆಯಲೇಬೇಕು ಎಂದು ತಮ್ಮ ಹಿಂದಿನ ಹೇಳಿಕೆಗಳನ್ನು ಅವರು ಪುನರುಚ್ಚರಿಸಿದ್ದಾರೆ 1929ರಲ್ಲಿ ಅಮೆರಿಕದ ಷೇರು ಮಾರುಕಟ್ಟೆ ಅರ್ಧದಷ್ಟು ಕುಸಿತ ಕಂಡಿತ್ತು. ಹತ್ತು ವರ್ಷ ಕಾಲ ಜಾಗತಿಕ ಆರ್ಥಿಕ ಡಿಪ್ರೆಶನ್ ನೆಲಸಿತ್ತು. ಅದರಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾದವು.

IndusInd Crisis: ನಿನ್ನೆ ಪ್ರಪಾತಕ್ಕೆ ಬಿದ್ದಿದ್ದ ಇಂಡಸ್​​ಇಂಡ್ ಬ್ಯಾಂಕ್ ಷೇರುಬೆಲೆ ಇವತ್ತು ಸಖತ್ ಏರಿಕೆ; ಬಿದ್ದಿದ್ಯಾಕೆ, ಏಳುತ್ತಿರುವುದ್ಯಾಕೆ?

IndusInd bank crisis explained: ಇಂಡಸ್​ಇಂಡ್ ಬ್ಯಾಂಕ್​​ನ ಷೇರುಬೆಲೆ ನಿನ್ನೆ ಶೇ. 27ರಷ್ಟು ನಷ್ಟ ಕಂಡಿತು. ಇವತ್ತು ಶೇ. 5ರಷ್ಟು ಮೇಲೇರಿದೆ. ಈ ಬ್ಯಾಂಕ್ ತನ್ನ ಡಿರೈವೇಟಿವ್ಸ್ ಪೋರ್ಟ್​​ಫೋಲಿಯೋದಲ್ಲಿ ತಪ್ಪು ಲೆಕ್ಕಾಚಾರ ಅಥವಾ ತಪ್ಪು ಅಂದಾಜು ಮಾಡಲಾಗಿರುವುದನ್ನು ಒಪ್ಪಿಕೊಂಡಿದೆ. ಈ ತಪ್ಪು ಎಣಿಕೆಯಿಂದಾಗಿ ಬ್ಯಾಂಕ್​ನ ಲಾಭದಲ್ಲಿ ಕತ್ತರಿ ಬೀಳುವ ಸಾಧ್ಯತೆ ಇದೆ. ಇದಕ್ಕಿಂತ ಹೆಚ್ಚಾಗಿ ಬ್ಯಾಂಕು ಈ ವಿಚಾರವನ್ನು ತುಂಬಾ ದಿನ ಮುಚ್ಚಿಟ್ಟುಕೊಂಡಿದ್ದು ಹೂಡಿಕೆದಾರರಿಗೆ ಇರಿಸುವು ಮುರುಸು ತಂದಿರಬಹುದು.

Dividend Funds: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳು

Dividend Yielding Mutual Funds: ಷೇರುಗಳಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಸುಲಭ ಮತ್ತು ಸುರಕ್ಷಿತ ಸಾಧನವಾಗಿ ಮ್ಯೂಚುವಲ್ ಫಂಡ್​​ಗಳಿವೆ. ಷೇರುದಾರರಿಗೆ ಡಿವಿಡೆಂಡ್ ನೀಡುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಫಂಡ್​ಗಳು ಜನಪ್ರಿಯವಾಗುತ್ತಿವೆ. ಇಂಥ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳು ಮಾಮೂಲಿಯ ಮೌಲ್ಯ ವರ್ಧನೆ ಜೊತೆಗೆ ಡಿವಿಡೆಂಡ್ ಆದಾಯವನ್ನೂ ನೀಡುತ್ತವೆ. ಈ ಬಗ್ಗೆ ಒಂದು ವರದಿ.

ಅಮೆರಿಕದಲ್ಲಿ ಒಮ್ಮಿಂದೊಮ್ಮೆ ಕರಗಿದ ಷೇರುಸಂಪತ್ತು ಭಾರತದ ಜಿಡಿಪಿಗೆ ಸಮ; ಯಾಕಿಷ್ಟು ಹೊಡೆತ?

US stock markets crash: ಅಮೆರಿಕದ ಷೇರು ಮಾರುಕಟ್ಟೆ ಸೋಮವಾರದ ವಹಿವಾಟಿನಲ್ಲಿ ಅತೀವ ಹಿನ್ನಡೆ ಕಂಡಿದೆ. ಫೆಬ್ರುವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಮಾರುಕಟ್ಟೆ ಇದೀಗ 4 ಟ್ರಿಲಿಯನ್ ಡಾಲರ್​​ನಷ್ಟು ನಷ್ಟ ಮಾಡಿಕೊಂಡಿದೆ. ಅದರಲ್ಲೂ ಟೆಕ್ನಾಲಜಿ ಸ್ಟಾಕ್​​​ಗಳು ಅತೀವ ಕುಸಿತ ಕಂಡಿವೆ. ಡೊನಾಲ್ಡ್ ಟ್ರಂಪ್ ನೀತಿಗಳು ಹೂಡಿಕೆದಾರರನ್ನು ಧೃತಿಗೆಡಿಸಿರಬಹುದು. ಭಾರತದ ಷೇರು ಮಾರುಕಟ್ಟೆ ಮೇಲೂ ಇದರ ಪರಿಣಾಮಗಳಾಗುತ್ತಿವೆ.

ಜ್ಯಾಕ್​ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು

Finding multibagger stocks: ಬಿಎಸ್​​ಇ ಮತ್ತು ಎನ್​​ಎಸ್​​ಇನಲ್ಲಿ ಐದು ಸಾವಿರಕ್ಕೂ ಹೆಚ್ಚು ಷೇರುಗಳು ಲಿಸ್ಟ್ ಆಗಿವೆ. ಇದರಲ್ಲಿ ಉತ್ತಮ ಷೇರುಗಳನ್ನು ಪತ್ತೆ ಮಾಡಲು ಟೆಕ್ನಿಕಲ್ ಮೆಟ್ರಿಕ್ಸ್ ಹಲವುಂಟು. ಅದಕ್ಕಿಂತ ಬಹಳ ಮೂಲಭೂತವಾದ ಮತ್ತು ಬಹಳ ಮುಖ್ಯವಾದ ಮೂರ್ನಾಲ್ಕು ಅಂಶಗಳನ್ನು ಗಮನಿಸಬೇಕೆಂದು ಕ್ರಿಸ್ ಮೇಯರ್ ಹೇಳುತ್ತಾರೆ. ‘100 ಬ್ಯಾಗರ್ಸ್’ ಪುಸ್ತಕದ ಕರ್ತೃವಾದ ಅವರು ಹೇಳಿದ ಅಂಶಗಳು ಇಲ್ಲಿವೆ...

65,000 ಕೋಟಿ ರೂ ಮೌಲ್ಯದ ಕಂಪನಿಯ ಸಿಇಒಗೆ ಇನ್ಸ್​​ಟಾಗ್ರಾಮ್ ಬಳಸಲು ಕನ್​ಫ್ಯೂಷನ್

Zerodha CEO Nithin Kamath: ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕಿಂಗ್ ಕಂಪನಿಯಾದ ಝೀರೋಧದ ಸಹ-ಸಂಸ್ಥಾಪಕ ನಿತಿನ್ ಕಾಮತ್ ತಮ್ಮ ಎಕ್ಸ್​​ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ತನಗೆ ಇನ್ಸ್​ಟಾಗ್ರಾಂ ಬಳಕೆ ಮಾಡುವುದು ಬಹಳ ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿರುವ ಅವರು, ಸ್ಕ್ರೀನ್​ಶಾಟ್ ಅನ್ನೂ ಲಗತ್ತಿಸಿದ್ದಾರೆ. ತಮ್ಮ ತಂಡದವರೊಂದಿಗೆ ಇನ್ಸ್​​ಟಾ ಬಳಕೆ ಬಗ್ಗೆ ಮಾಹಿತಿ ಪಡೆಯುತ್ತಿರುವ ಸಂವಾದವು ಈ ಸ್ಕ್ರೀನ್ ಶಾಟ್​​ನಲ್ಲಿ ಇದೆ.

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ