AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

stock market

stock market

ಸ್ಟಾಕ್ ಮಾರ್ಕೆಟ್ ಎಂದರೆ ಷೇರುಪೇಟೆ. ಅಥವಾ ಷೇರು ವಿನಿಮಯ ಮಾರುಕಟ್ಟೆ. ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ. ಭಾರತದ ಷೇರು ಮಾರುಕಟ್ಟೆ ವಿಶ್ವದಲ್ಲೇ ಐದನೇ ಅತಿದೊಡ್ಡದು. 4 ಟ್ರಿಲಿಯನ್ ಡಾಲರ್​ನಷ್ಟು ಷೇರುಸಂಪತ್ತು ಇಲ್ಲಿದೆ.

ಇನ್ನೂ ಹೆಚ್ಚು ಓದಿ

ಭಾರತದ ಷೇರು ಮಾರುಕಟ್ಟೆ ಇವತ್ತು ಕುಸಿತ; ಏನಿರಬಹುದು ಕಾರಣಗಳು? ಇಲ್ಲಿದೆ ಡೀಟೇಲ್ಸ್

Indian stock market updates: ಭಾರತದ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಇಂದು ಬುಧವಾರ (ಏಪ್ರಿಲ್ 22) ಹಿನ್ನಡೆ ಕಂಡಿವೆ. ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂ ನಷ್ಟವಾಗಿದೆ. ನಿಫ್ಟಿ50 ಸೂಚ್ಯಂಕ ಮತ್ತೊಮ್ಮೆ 24,400 ಅಂಕಗಳ ಮಟ್ಟದಿಂದ ಕೆಳಗೆ ಇಳಿದಿದೆ. ಶೇರು ಮಾರುಕಟ್ಟೆಯ ಇವತ್ತಿನ ಹಿನ್ನಡೆಗೆ ಏನು ಕಾರಣ ಇರಬಹುದು? ಇಲ್ಲಿದೆ ಡೀಟೇಲ್ಸ್.

ಸೆನ್ಸೆಕ್ಸ್ 1,400 ಅಂಕ ಏರಿಕೆ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು; ಷೇರುಪೇಟೆ ಖುಷಿಯಲ್ಲಿರುವುದು ಯಾಕೆ?

Indian stock market updates: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಇವತ್ತು ಬಹುತೇಕ ಶೇ. 2ರಷ್ಟು ಏರಿಕೆಗೊಂಡಿವೆ. ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು ಸಿಕ್ಕಿದೆ. ಬಜಾರು ಇವತ್ತು ಸೂಪರ್ ಎನಿಸಲು ಹಲವು ಕಾರಣಗಳಿವೆ. ಅಮೆರಿಕ ಇರಾನ್ ಮಧ್ಯೆ ಮತ್ತೆ ಮಾತುಕತೆ ಆರಂಭಗೊಳ್ಳುವ ಸಾಧ್ಯತೆ ಇರುವುದೂ ಸೇರಿದಂತೆ ಮಾರುಕಟ್ಟೆಗೆ ಖುಷಿ ಕೊಟ್ಟಿರುವ ಕಾರಣಗಳೇನು ಎನ್ನುವ ವಿವರ ಇಲ್ಲಿದೆ.

ಸೀಸ್​ಫೈರ್ ಮಾತ್ರವಲ್ಲ, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು

Indian stock market, reasons for the rise: ಭಾರತದ ಷೇರು ಮಾರುಕಟ್ಟೆಗೆ ಅತಿಹೆಚ್ಚು ಖುಷಿ ಸಿಕ್ಕ ದಿನಗಳಲ್ಲಿ ಇವತ್ತಿನದೂ (ಏ. 8) ಒಂದು. ಸೆನ್ಸೆಕ್ಸ್, ನಿಫ್ಟಿ ಹಾಗೂ ಇತರ ಹಲವು ಪ್ರಮುಖ ಸೂಚ್ಯಂಕಗಳು ಉತ್ತಮ ದಾಖಲೆ ಮಾಡಿವೆ. ಸೆನ್ಸೆಕ್ಸ್, ನಿಫ್ಟಿ ಬಹುತೇಕ ಶೇ. 4ರಷ್ಟು ಹೆಚ್ಚಳ ಕಂಡಿವೆ. ಬ್ಯಾಂಕ್ ನಿಫ್ಟಿ ಬರೋಬ್ಬರಿ ಶೇ. 6ರಷ್ಟು ಹೆಚ್ಚಿವೆ. ಈ ಮಾರುಕಟ್ಟೆ ವೃದ್ಧಿಗೆ ಪ್ರಮುಖ ಕಾರಣಗಳೇನು, ಇಲ್ಲಿದೆ ವಿವರ.

ಇರಾನ್ ಯುದ್ಧದಿಂದೀಚೆ ಹೂಡಿಕೆದಾರರಿಗೆ 41 ಲಕ್ಷ ರೂ ನಷ್ಟ; ಷೇರುಗಳಲ್ಲಿ ಹೂಡಿಕೆ ಮಾಡುವ ಸಮಯವಾ?

Investors in Indian stock market lose Rs 41 trillion since start of Iran war: ಇರಾನ್ ಯುದ್ಧ ಫೆಬ್ರುವರಿ 28ರಂದು ಆರಂಭವಾಯಿತು. ಅಲ್ಲಿಂದೀಚೆ ಷೇರು ಮಾರುಕಟ್ಟೆ ಶೇ. 10ಕ್ಕಿಂತಲೂ ಹೆಚ್ಚಿನ ಕುಸಿತ ಆಗಿದೆ. ಬಿಎಸ್​ಇ ಲಿಸ್ಟೆಡ್ ಕಂಪನಿಗಳ ಒಟ್ಟು ಷೇರು ಸಂಪತ್ತಿನಲ್ಲಿ 41 ಲಕ್ಷ ಕೋಟಿ ರೂ ಕುಸಿತವಾಗಿದೆ. ಅಂದರೆ, ಹೂಡಿಕೆದಾರರಿಗೆ ಈ ಒಂದು ತಿಂಗಳಲ್ಲಿ ಆಗಿರುವ ನಷ್ಟ 41 ಲಕ್ಷ ಕೋಟಿ ರೂ.

ಮಾರ್ಚ್ ತಿಂಗಳಲ್ಲಿ 27 ದಿನಗಳಲ್ಲಿ 1.14 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳ ಹೊರಹರಿವು; ಇದು ಹೊಸ ಮಾಸಿಕ ದಾಖಲೆ

FPIs take away investments of over Rs 1 lakh crore in March in Indian equities: 2026ರ ಮಾರ್ಚ್ ತಿಂಗಳಲ್ಲಿ ಭಾರತೀಯ ಈಕ್ವಿಟಿಗಳಿಂದ ಕಂಡ ಹೊರಹರಿವು ಒಂದು ಲಕ್ಷ ಕೋಟಿ ರೂ ದಾಟಿದೆ. ಮಾರ್ಚ್ 1ರಿಂದ 27ರವರೆಗೆ ಫಾರೀನ್ ಪೋರ್ಟ್​ಫೋಲಿಯೋ ಇನ್ವೆಸ್ಟರ್​ಗಳು 1,13,380 ಕೋಟಿ ರೂ ಮೊತ್ತದ ಹೂಡಿಕೆಗಳನ್ನು ಹಿಂಪಡೆದುಕೊಂಡಿವೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್​ಗಳಿದ್ದು ಹೂಡಿಕೆಗಳು ಮತ್ತಷ್ಟು ಹೊರಹೋಗಬಹುದು.

ಬ್ಯಾಂಕು, ಷೇರು, ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಹೂಡಿಕೆದಾರರ ಹಣ ಏನಾಗುತ್ತೆ? ಇಲ್ಲಿದೆ ಡೀಟೇಲ್ಸ್

How much safe is the investments in Bank, shares and mutual funds: ಭಾರತದಲ್ಲಿ ಅನೇಕ ರೀತಿಯ ಹೂಡಿಕೆಗಳಿಗೆ ಅವಕಾಶ ಇದೆ. ಆದರೆ, ಆರ್​ಬಿಐ, ಸೆಬಿ ಇತ್ಯಾದಿ ನಿಯಂತ್ರಕರಿಂದ ಮಾನ್ಯವಾಗಿರುವ ಸಂಸ್ಥೆಗಳ ಹೂಡಿಕೆ ಸ್ಕೀಮ್​ಗಳಲ್ಲಿ ಹಣ ತಕ್ಕಮಟ್ಟಿಗೆ ಸುರಕ್ಷಿತವಾಗಿರುತ್ತದೆ. ಅಪಾಯದಿಂದ ಹೊರತಲ್ಲವಾದರೂ, ಈ ಹೂಡಿಕೆಗಳು ಎಷ್ಟು ಸುರಕ್ಷಿತ, ಎಷ್ಟು ಅಪಾಯಕಾರಿ ಎನ್ನುವ ಮಾಹಿತಿ ಇಲ್ಲಿದೆ.

ಶುಕ್ರವಾರ ಗರಿಗೆದರಿದ ಷೇರು ಬಜಾರು; ನಿನ್ನೆ ನೆಲಕಚ್ಚಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಂಡಿದ್ದು ಯಾಕೆ?

Know why stock market turned positive a day after big crash: ಜಾಗತಿಕ ಷೇರು ಮಾರುಕಟ್ಟೆಗಳು ಮಾರ್ಚ್ 20, ಶುಕ್ರವಾರ ಸಕಾರಾತ್ಮಕ ಭಾವನೆಯಲ್ಲಿವೆ. ಹೆಚ್ಚಿನ ದೇಶಗಳ ಮಾರುಕಟ್ಟೆ ಹಸಿರುಬಣ್ಣಕ್ಕೆ ತಿರುಗಿದೆ. ಭಾರತದ ಷೇರು ಮಾರುಕಟ್ಟೆಯ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳು ಬಹಳಷ್ಟು ಅಂಕಗಳನ್ನು ಗಳಿಸಿವೆ. ಜಾಗತಿಕ ರಾಜಕೀಯ ಅನಿಶ್ಚಿತತೆಯಲ್ಲೂ ಮಾರುಕಟ್ಟೆ ಪಾಸಿಟಿವ್ ಆಗಿರಲು ಏನು ಕಾರಣ?

ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

Indian stock market crashes on Ugadi day: ಯುಗಾದಿ ಹಬ್ಬದ ದಿನವಾದ ಇಂದು ಗುರುವಾರ ಭಾರತೀಯ ಷೇರು ಮಾರುಕಟ್ಟೆ ತಲ್ಲಣಗೊಂಡಿದೆ. ಬಿಎಸ್​ಇಯ ಸೆನ್ಸೆಕ್ಸ್, ಎನ್​ಎಸ್​ಇಯ ನಿಫ್ಟಿ ಇಂಡೆಕ್ಸ್​ಗಳು ತೀವ್ರ ಹಿನ್ನಡೆ ಕಂಡಿವೆ. ಸೆನ್ಸೆಕ್ಸ್ ಬಹುತೇಕ 2,500 ಅಂಕಗಳನ್ನು ನಷ್ಟ ಮಾಡಿಕೊಂಡಿದೆ. ನಿಫ್ಟಿ 23,000 ಅಂಕಗಳ ಗಡಿಯೊಳಗೆ ಇಳಿಯುವ ಧಾವಂತದಲ್ಲಿದೆ. ಈ ಕುಸಿತಕ್ಕೆ ಏನು ಕಾರಣ?

ಭಾರತದ ಷೇರುಪೇಟೆ ಭರ್ಜರಿ ಕುಸಿತ; 8 ಲಕ್ಷ ಕೋಟಿ ರೂ ನಷ್ಟ; ಶೇ 80 ಷೇರುಗಳಿಗೆ ಹಿನ್ನಡೆ

Indian stock market seeing Bear dance: ಜಾಗತಿಕವಾಗಿ ಷೇರು ಮಾರುಕಟ್ಟೆಗಳು ಹಿನ್ನಡೆಯಲ್ಲಿವೆ. ಇರಾನ್ ಯುದ್ಧ, ತೈಲ ಬೆಲೆ ಏರಿಕೆ ಇತ್ಯಾದಿ ಸಂಗತಿಗಳು ಮಾರುಕಟ್ಟೆಯನ್ನು ಅಲುಗಾಡಿಸುತ್ತಿವೆ. ಭಾರತದ ಷೇರು ಮಾರುಕಟ್ಟೆ ಬುಧವಾರ ಶೇ. 2ರಷ್ಟು ಕುಸಿತ ಕಂಡಿದೆ. ಹೂಡಿಕೆದಾರರಿಗೆ ಎಂಟು ಲಕ್ಷ ಕೋಟಿ ರೂ ನಷ್ಟ ಎದುರಾಗಿದೆ.

ಮಧ್ಯಪ್ರಾಚ್ಯ ಯುದ್ಧಕ್ಕೆ ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಒಂದೇ ದಿನ 15,000 ಅಂಕಗಳು ಪತನ; ಶೇ. 9ರಷ್ಟು ಸಂಪತ್ತು ನಷ್ಟ

Pakistan stock market down by 9pc in a single session: ಇಂದು ಸೋಮವಾರ ಭಾರತವೂ ಒಳಗೊಂಡಂತೆ ವಿಶ್ವದ ಷೇರು ಮಾರುಕಟ್ಟೆಗಳು ಗಡಗಡ ನಡುಗಿವೆ. ಆದರೆ, ಪಾಕಿಸ್ತಾನದ ಮಾರುಕಟ್ಟೆ ಅಕ್ಷರಶಃ ಪ್ರಕ್ಷುಬ್ದಗೊಂಡಿತ್ತು. ಹೂಡಿಕೆದಾರರು ಮನಬಂದಂತೆ ಷೇರುಗಳನ್ನು ಮಾರಹೊರಟಿದ್ದರು. ಒಂದೇ ದಿನ, ಪಾಕಿಸ್ತಾನದ ಪೇಟೆ ಶೇ. 9ರಷ್ಟು ಕುಸಿತ ಕಂಡಿತ್ತು.

ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ?

Reasons for stock market crash today: ಇಂದು ಮಂಗಳವಾರ (ಫೆ. 24) ಭಾರತದ ಷೇರು ಮಾರುಕಟ್ಟೆ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶೇ. 1ರಷ್ಟು ಕುಸಿತ ಕಂಡಿವೆ. ಬೆಳಗಿನ ವಹಿವಾಟಿನ ಅರ್ಧಗಂಟೆಯಲ್ಲಿ ಹೂಡಿಕೆದಾರರಿಗೆ 4 ಟ್ರಿಲಿಯನ್ ರೂಗಳಷ್ಟು ನಷ್ಟವಾಗಿದೆ. ಷೇರು ಮಾರುಕಟ್ಟೆ ಇವತ್ತು ಕುಸಿಯಲು ಕೆಲ ಸಂಭಾವ್ಯ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ

Patanjali Foods sees big revenue and profit increase: ಡಿಸೆಂಬರ್ ತ್ರೈಮಾಸಿಕದಲ್ಲಿ ಪತಂಜಲಿ ಫುಡ್ಸ್ ಉತ್ತಮ ಪ್ರದರ್ಶನ ನೀಡಿದ್ದು, ಲಾಭವನ್ನು ಶೇ.60 ರಷ್ಟು ಹೆಚ್ಚಿಸಿಕೊಂಡು ₹593 ಕೋಟಿಗೆ ತಲುಪಿದೆ. ಕಂಪನಿಯ ಒಟ್ಟು ಆದಾಯವು ₹10,000 ಕೋಟಿಗಳನ್ನು ಮೀರಿದೆ. ಹಿಂದಿನ ವರ್ಷದಕ್ಕಿಂತ ಇದು ಶೇ.16.5 ರಷ್ಟು ಭಾರಿ ಏರಿಕೆಯಾಗಿದೆ. ಬಾಬಾ ರಾಮದೇವ್ ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ ₹1 ಲಕ್ಷ ಕೋಟಿ ತಲುಪುವ ಗುರಿಯನ್ನು ಹೊಂದಿದ್ದಾರೆ.

ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ