AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

stock market

stock market

ಸ್ಟಾಕ್ ಮಾರ್ಕೆಟ್ ಎಂದರೆ ಷೇರುಪೇಟೆ. ಅಥವಾ ಷೇರು ವಿನಿಮಯ ಮಾರುಕಟ್ಟೆ. ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ. ಭಾರತದ ಷೇರು ಮಾರುಕಟ್ಟೆ ವಿಶ್ವದಲ್ಲೇ ಐದನೇ ಅತಿದೊಡ್ಡದು. 4 ಟ್ರಿಲಿಯನ್ ಡಾಲರ್​ನಷ್ಟು ಷೇರುಸಂಪತ್ತು ಇಲ್ಲಿದೆ.

ಇನ್ನೂ ಹೆಚ್ಚು ಓದಿ

ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್​ಗಳಿವು…

Investor Raamdeo Agrawal tips on selecting stocks for investment: ಭಾರತದ ಅತಿದೊಡ್ಡ ಹಾಗೂ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ರಾಮದೇವ್ ಅಗರ್ವಾಲ್ ಒಬ್ಬರು. ಇವರು ಹೂಡಿಕೆ ಮಾಡಿರುವ ಅನೇಕ ಷೇರುಗಳು ಮಲ್ಟಿಬ್ಯಾಗರ್ ಆಗಿ ಓಡಿವೆ. ಮಲ್ಟಿಬ್ಯಾಗರ್ ಆಗಬಲ್ಲ ಷೇರನ್ನು ಮೊದಲೇ ಗುರುತಿಸುವುದು ಹೇಗೆ, ಯಾವ ರೀತಿಯ ಷೇರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಟಿಪ್ಸ್ ನೀಡಿದ್ದಾರೆ.

ಕ್ಲೇಮ್ ಆಗದೇ ಉಳಿದಿದೆ ಲಕ್ಷ ಕೋಟಿ ರೂ; ಜನರಿಗೆ ಹಣ ಮರಳಿಸಲು ಸರ್ಕಾರ ಹರಸಾಹಸ

PM Narendra Modi asks people to participate in 'Your Money, Your Right' campaign: ಬ್ಯಾಂಕು, ಇನ್ಷೂರೆನ್ಸ್, ಮ್ಯುಚುವಲ್ ಫಂಡ್, ಷೇರುಗಳಲ್ಲಿ ಲಕ್ಷ ಕೋಟಿ ರೂಗಿಂತ ಅಧಿಕ ಹಣ ಕ್ಲೇಮ್ ಆಗದೇ ಉಳಿದಿವೆ. ಇದನ್ನು ಮರಳಿಸಲು ಸರ್ಕಾರ ಹರಸಾಹಸ ನಡೆಸುತ್ತಿದೆ. ಅಂತೆಯೇ, ‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನ ಕೈಗೊಂಡಿದೆ. ಲಿಂಕ್ಡ್​ಇನ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡ ಒಂದು ಪೋಸ್ಟ್​ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

Stock Market: ಷೇರು ಮಾರುಕಟ್ಟೆ ಸೋಮವಾರ ಕುಸಿತ; ಈ ಹಿನ್ನಡೆಗೆ ಏನು ಕಾರಣ?

Reason for fall of Indian stock market: ಭಾರತದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಇವತ್ತು ಸೋಮವಾರ ಕುಸಿದಿವೆ. ನಿಫ್ಟಿ ಶೇ. 0.86, ಸೆನ್ಸೆಕ್ಸ್ ಶೇ. 0.71ರಷ್ಟು ಕುಸಿದಿವೆ. ಸತತ ಏಳೆಂದು ಮಾರುಕಟ್ಟೆ ದಿನಗಳು ವಿದೇಶೀ ಸಾಂಸ್ಥಿಕ ಹೂಡಿಕೆಗಳು ಭಾರತದಿಂದ ಹೊರಹೋಗಿವೆ. ರುಪಾಯಿ ದುರ್ಬಲಗೊಳ್ಳುತ್ತಿರುವುದು, ಕಚ್ಚಾ ತೈಲ ಬೆಲೆ ತುಸು ಏರಿರುವುದು ವಿದೇಶೀ ಹೂಡಿಕೆಗಳ ಹೊರಹರಿವಿಗೆ ಕಾರಣವಾಗಿರಬಹುದು.

4 ವರ್ಷದಿಂದ ನಂಬಿಸಿ, ಗೊತ್ತೇ ಆಗದಂತೆ 35 ಕೋಟಿ ರೂ ಎಗರಿಸಿಯೇ ಬಿಟ್ಟರು ಷೇರುಲೋಕದ ಖದೀಮರು

Story of how Bharat Harakchand Shah lost Rs 35 crore in trading fraud: ಹೂಡಿದ ಹಣವನ್ನು ನಿಮ್ಮ ಪರವಾಗಿ ಹಣಕಾಸು ಸಲಹಾ ಕಂಪೆನಿಗಳು ಡಬಲ್​ ಮಾಡುತ್ತವೆಂದು ಕಣ್ಣು ಮುಚ್ಚಿ ಕೂರಬೇಡಿ. ಆಗೊಮ್ಮೆ ಆದರೆ ಏನಾಗುತ್ತೆ ಎಂಬುದಕ್ಕೆ ಮುಂಬೈನ 72 ವರ್ಷದ ವ್ಯಕ್ತಿಗೆ ಆದ ವಂಚನೆಯ ಕಥೆ ಒಂದು ನಿದರ್ಶನವಾಗಿದೆ. 4 ವರ್ಷ ನಂಬಿಸಿ, ನಯವಾಗಿ 35 ಕೋಟಿ ರೂ ಯಾಮಾರಿಸಿರುವ ಘಟನೆ ಇದು...

ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳಿವು

Sensex and Nifty in record high: ಭಾರತದ ಷೇರುಮಾರುಕಟ್ಟೆಯ ಎರಡು ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದೂ ಪಾಸಿಟಿವ್ ಆಗಿವೆ. ಸೆನ್ಸೆಕ್ಸ್ ಇದೇ ಮೊದಲ ಬರಿಗೆ 86,000 ಅಂಕಗಳ ಗಡಿ ದಾಟಿದೆ. ನಿಫ್ಟಿ 26,300 ಅಂಕಗಳ ಗಡಿಯನ್ನೂ ಮುಟ್ಟಿದೆ. ಈ ಎರಡೂ ಸೂಚ್ಯಂಕಗಳು ಹೊಸ ದಾಖಲೆ ಎತ್ತರಕ್ಕೆ ಏರಲು ಕಾರಣವಾದ ಅಂಶಗಳು ಯಾವುವು?

ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ದಾಮೋದರನ್ ಆತಂಕ

Market not safe now, says Ashwath Damodaran: ಷೇರು ಮಾರುಕಟ್ಟೆ ಕುಸಿಯುತ್ತಿದೆ. ಅದರೊಂದಿಗೆ ಜೋಡಿತವಾಗಿರುವ ಹೂಡಿಕೆಗಳೂ ಅಸುರಕ್ಷಿತ ಎನಿಸಿವೆ ಎಂದು ಅಶ್ವಥ್ ದಾಮೋದರನ್ ಹೇಳಿದ್ದಾರೆ. ಅಮೆರಿಕದ ಮಾರ್ಕೆಟ್ ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ಆಗಿರುವ ದಾಮೋದರನ್ ಪ್ರಕಾರ, ಪಾಸಿವ್ ಫಂಡ್​ಗಳ ಪ್ರಾಬಲ್ಯ ಹೆಚ್ಚಾಗಿರುವುದು ಈ ಕುಸಿತಕ್ಕೆ ಕಾರಣ. ದಾಮೋದರನ್ ಮೊದಲ ಬಾರಿಗೆ ತಮ್ಮ ಜೀವನದಲ್ಲಿ ಚಿನ್ನ ಇತ್ಯಾದಿ ಭೌತಿಕ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರಂತೆ.

Mutual Funds: ರಾಶಿ ರಾಶಿ ಮ್ಯುಚುವಲ್ ಫಂಡ್​ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?

7 different types of mutual funds: ಮ್ಯುಚುವಲ್ ಫಂಡ್​ಗಳು ಭಾರತದಲ್ಲಿ ಜನಪ್ರಿಯ ಮತ್ತು ನೆಚ್ಚಿನ ಹೂಡಿಕೆಸ್ಥಳಗಳಾಗಿವೆ. ಕೋಟ್ಯಂತರ ಜನರು ಇದರಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದಲ್ಲಿ 2,500ಕ್ಕೂ ಅಧಿಕ ಮ್ಯೂಚುವಲ್ ಫಂಡ್ ಸ್ಕೀಮ್​ಗಳಿದ್ದು ಅವುಗಳಲ್ಲಿ ಯಾವುದರ ಮೇಲೆ ಹೂಡಿಕೆ ಮಾಡುವುದು? ಫಂಡ್​ಗಳ ಬಗ್ಗೆ ಮಾಹಿತಿಯನ್ನು ಸರಳಗೊಳಿಸಿ ಇಲ್ಲಿ ವಿವರಿಸುವ ಪ್ರಯತ್ನವಾಗಿದೆ.

ಪತಂಜಲಿ ಫುಡ್ಸ್ ಭರ್ಜರಿ ಲಾಭ ಹೆಚ್ಚಳದ ಬೆನ್ನಲ್ಲೇ ಷೇರುದಾರರಿಗೆ ಡಿವಿಡೆಂಡ್ ಘೋಷಣೆ; ರೆಕಾರ್ಡ್ ಡೇಟ್ ನಿಗದಿ

Patanjali Foods announces Rs 1.75 dividend per share: ಪತಂಜಲಿ ಫುಡ್ಸ್ ತನ್ನ ಷೇರುದಾರರಿಗೆ ಲಾಭದ ಬಾಗಿಲು ತೆರೆದಿದೆ. ಕಂಪನಿಯು ಪ್ರತಿ ಷೇರಿಗೆ ₹1.75 ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಇದರ ರೆಕಾರ್ಡ್ ಡೇಟ್ ಆಗಿ ನವೆಂಬರ್ 13, 2025 ಅನ್ನು ನಿಗದಿ ಮಾಡಲಾಗಿದೆ. ಪತಂಜಲಿ ಫುಡ್ಸ್ ಸಂಸ್ಥೆಯ ಎರಡನೇ ತ್ರೈಮಾಸಿಕ ಲಾಭದ ವರದಿಯೂ ಕೂಡ ಭರ್ಜರಿಯಾಗಿದೆ. 516.69 ಕೋಟಿ ರೂ ನಿವ್ವಳ ಲಾಭವನ್ನು ಇದು ತೋರಿಸಿದೆ.

ಇನ್ನು 8 ತಿಂಗಳಲ್ಲಿ ಸೆನ್ಸೆಕ್ಸ್ 1,00,000 ಅಂಕಗಳ ಗಡಿಯಾಚೆ? ಮಾರ್ಗನ್ ಸ್ಟಾನ್ಲೀ ಭವಿಷ್ಯ ಇದು

Sensex may reach 1,00,000 points by 2026 June, says Morgan Stanley: ಕಳೆದ 13 ತಿಂಗಳಲ್ಲಿ ಹಿನ್ನಡೆ ಕಂಡಿರುವ ಬಿಎಸ್​ಇ ಸೆನ್ಸೆಕ್ಸ್ ಮುಂದಿನ ದಿನಗಳಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ಭಾರತದ ಷೇರುಪೇಟೆಯ ಪ್ರೈಸ್ ಕರೆಕ್ಷನ್ ಮುಗಿದಿದೆ. ಮುಂದೆ ಬುಲ್ ರನ್ ಆಗಬಹುದು ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆ ಅಂದಾಜಿಸಿದೆ. ಇದರ ಪ್ರಕಾರ 2026ರ ಜೂನ್ ತಿಂಗಳಿಗೆ ಸೆನ್ಸೆಕ್ಸ್ 1,00,000 ಅಂಕಗಳ ಗಡಿ ಮುಟ್ಟಬಹುದು.

ಷೇರೇ ಇರಲಿ, ಬ್ಯುಸಿನೆಸ್ಸೇ ಇರಲಿ, ಹಣ ಹಾಕುವ ಮುನ್ನ ಪರಿಗಣಿಸಬೇಕಾದ ಅಂಶಗಳಿವು…

Stock investment tips: ಷೇರು ಮಾರುಕಟ್ಟೆಯಲ್ಲಿ ಇರುವ ಸಾವಿರಾರು ಷೇರುಗಳಲ್ಲಿ ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬುದು ಗೊಂದಲ ತರುವ ಸಂಗತಿ. ಹೂಡಿಕೆಗೆ ಷೇರುಗಳನ್ನು ಆಯ್ದುಕೊಳ್ಳಲು ಯಾವ ಮಾನದಂಡಗಳನ್ನು ಅನುಸರಿಸಬೇಕು? ಕಂಪನಿಯ ಆದಾಯ, ಲಾಭ, ಉದ್ಯಮದೊಳಗಿನ ಸ್ಪರ್ಧೆ ಇತ್ಯಾದಿ ಕೆಲ ಅಂಶಗಳನ್ನು ಗಣಿಸಬಹುದು. ಈ ಬಗ್ಗೆ ಮಾಹಿತಿ...

ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?

US Federal Reserve cuts its benchmark interest rates 3.75%-4.00%: ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು 3.75%-4.00% ಗೆ ಇಳಿಸಿದೆ. ಕಳೆದ ಬಾರಿಯ ಸಭೆಯಲ್ಲೂ ಬಡ್ಡಿ ದರ ಇಳಿಸಲಾಗಿತ್ತು. ಈ ವರ್ಷ ಎರಡು ಬಾರಿ ಫೆಡರಲ್ ರಿಸರ್ವ್ ತನ್ನ ಬಡ್ಡಿದರ ಇಳಿಸಿರುವುದು. ಈ ಬೆಳವಣಿಗೆಯನ್ನು ಮಾರುಕಟ್ಟೆ ಮೊದಲೇ ಗ್ರಹಿಸಿತ್ತಾದ್ದರಿಂದ ಜಾಗತಿಕವಾಗಿ ಹೆಚ್ಚೇನು ಪರಿಣಾಮ ಕಂಡಿಲ್ಲ. ಭಾರತದಲ್ಲಿ ಷೇರುಮಾರುಕಟ್ಟೆ ತುಸು ಕುಸಿತ ಕಂಡಿದೆ.

ಮಾರುಕಟ್ಟೆ ಕಮಾಲ್; ನಿಮಿಷಗಳಲ್ಲೇ ಹಲವು ಕೋಟಿ ಲಾಭ ಮಾಡಿದ ರೇಖಾ ಝುಂಝುನವಾಲ

Federal Bank Share Surge: Rekha Jhunjhunwala Gains Rs 67 Cr in Minutes: ಪ್ರಮುಖ ಹೂಡಿಕೆದಾರರಾದ ರೇಖಾ ಝುಂಝುನವಾಲಾ ಅವರಿಗೆ ದೀಪಾವಳಿ ಮೊದಲ ದಿನ ಫೆಡರಲ್ ಬ್ಯಾಂಕ್ ಷೇರುಗಳಿಂದ 67 ಕೋಟಿ ರೂ ಲಾಭ ದೊರೆತಿದೆ. ಬ್ಯಾಂಕ್‌ನ ಬಲವಾದ ಎರಡನೇ ತ್ರೈಮಾಸಿಕ ಫಲಿತಾಂಶಗಳಿಂದ ಷೇರುಬೆಲೆ ಶೇ 5.34ರಷ್ಟು ಏರಿದ್ದು, ಕೆಲವೇ ನಿಮಿಷಗಳಲ್ಲಿ ಅವರ ಸಂಪತ್ತು ಹೆಚ್ಚಾಯಿತು. ಇದು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ.

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ