AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

stock market

stock market

ಸ್ಟಾಕ್ ಮಾರ್ಕೆಟ್ ಎಂದರೆ ಷೇರುಪೇಟೆ. ಅಥವಾ ಷೇರು ವಿನಿಮಯ ಮಾರುಕಟ್ಟೆ. ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ. ಭಾರತದ ಷೇರು ಮಾರುಕಟ್ಟೆ ವಿಶ್ವದಲ್ಲೇ ಐದನೇ ಅತಿದೊಡ್ಡದು. 4 ಟ್ರಿಲಿಯನ್ ಡಾಲರ್​ನಷ್ಟು ಷೇರುಸಂಪತ್ತು ಇಲ್ಲಿದೆ.

ಇನ್ನೂ ಹೆಚ್ಚು ಓದಿ

India vs China: ಚೀನಾ ಜಿಡಿಪಿ ಸಖತ್ತಾಗಿದ್ದರೂ ಷೇರು ಮಾರುಕಟ್ಟೆ ಲತ್ತೆ ಹೊಡೆಯುತ್ತಿರೋದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಡಾಟಾ

China vs India Stock Market: ಭಾರತದ ಷೇರುಪೇಟೆ ಓವರ್​​ವ್ಯಾಲ್ಯೂಡ್ ಆಗಿದೆ, ಚೀನಾ ಬಜಾರು ಅಂಡರ್​​ವ್ಯಾಲ್ಯೂಡ್ ಆಗಿದೆ. ಚೀನೀ ಷೇರುಗಳು ಆಕರ್ಷಕ ಬೆಲೆ ಹೊಂದಿವೆ ಎಂದು ಹೇಳಲಾಗುತ್ತದೆ. ಆದರೆ, 2007ರಿಂದ 2024ರ ಅವಧಿಯಲ್ಲಿ ಚೀನಾದ ಜಿಡಿಪಿ ಎರಡು ಪಟ್ಟು ಹೆಚ್ಚಳವಾಗಿದೆ. ಆದರೆ, ಅದರ ಷೇರುಮಾರುಕಟ್ಟೆ ಕೊಟ್ಟ ರಿಟರ್ನ್ಸ್ ಶೂನ್ಯ. ಇದಕ್ಕೆ ಹೋಲಿಸಿದರೆ ಭಾರತದ ನಿಫ್ಟಿ50 ಕಳೆದ 18 ವರ್ಷದಲ್ಲಿ ಶೇ. 500ರಷ್ಟು ಬೆಳೆದಿದೆ.

Pak stock market: ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಅಟ್ಟಾರಿ ಗಡಿ, ಸಿಂಧೂ ಜಲ ಒಪ್ಪಂದ ಮುಚ್ಚಿದ್ದು ಶಾಕ್ ಕೊಟ್ಟಿತಾ?

Pakistan stock market plunges after Pahalgam terror attack: ಕಾಶ್ಮೀರದ ಪಹಲ್ಗಾಮ್​​ನಲ್ಲಿ ಪ್ರವಾಸಿಗರನ್ನು ಉಗ್ರರು ನರಮೇಧ ಮಾಡಿದ ಘಟನೆ ಬಳಿಕ ಪಾಕಿಸ್ತಾನದ ಷೇರು ಮಾರುಕಟ್ಟೆ ಕುಸಿದಿದೆ. ನಿನ್ನೆ ಶೇ. 1ರಷ್ಟು ಕುಸಿದಿದ್ದ ಬಜಾರು, ಇವತ್ತು ಗುರುವಾರ ಶೇ. 1.32ರಷ್ಟು ಹಿನ್ನಡೆ ಕಂಡಿದೆ. ಸಿಂಧೂ ಜಲ ಒಪ್ಪಂದ ರದ್ದು ಮಾಡಿರುವುದು, ಅಟ್ಟಾರಿ ಮಾರ್ಗವನ್ನು ಬಂದ್ ಮಾಡಿರುವುದು ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ.

ಟ್ಯಾರಿಫ್ ಭೀತಿಯಲ್ಲೂ ಸತತ ಏಳನೇ ಬಾರಿ ಏರಿದ ಭಾರತೀಯ ಷೇರುಪೇಟೆ; ಏನು ಕಾರಣ?

Reasons for rise in sensex: ಭಾರತದ ಷೇರುಪೇಟೆಯ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಸತತ ಏಳು ಸೆಷನ್ಸ್ ಏರಿಕೆ ಕಂಡಿವೆ. ಪ್ರಾಫಿಟ್ ಬುಕಿಂಗ್ ಮಧ್ಯೆಯೂ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಬೆಳೆಯುತ್ತಿದೆ. ಟ್ಯಾರಿಫ್ ಭಯ ಕಡಿಮೆ ಆಗಿರುವುದು ಸೇರಿದಂತೆ ಭಾರತದ ಆರ್ಥಿಕತೆಯ ಸಕಾರಾತ್ಮಕತೆ ಅಂಶವು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿರಬಹುದು ಎನ್ನಲಾಗುತ್ತಿದೆ.

Wealth tips: ಷೇರು ಮಾರುಕಟ್ಟೆಯನ್ನು ನಂಬಬೇಕಾ? ಹೂಡಿಕೆ ಹೇಗಿರಬೇಕು? ಇಲ್ಲಿದೆ 7 ಟಿಪ್ಸ್

Tips for long-term wealth creation: ಷೇರು ಮಾರುಕಟ್ಟೆ ಚಂಚಲತೆಯಲ್ಲಿದ್ದಾಗ ಹೊಸ ಹೂಡಿಕೆದಾರರು ಬೆದರಿ ಓಡಬಹುದು. ಆದರೆ, ಅನುಭವಿ ಹೂಡಿಕೆದಾರರು ಇಂಥ ಸಂದರ್ಭವನ್ನೂ ಸದುಪಯೋಗಿಸಿಕೊಳ್ಳಬಲ್ಲುರು. ಅನುಭವಿಗಳ ಜಾಣ್ಮೆ, ಅನುಭವ ಆಧಾರದ ಮೇಲೆ ಒಂದಷ್ಟು ಪ್ರಮುಖ ಸಲಹೆಗಳು ಇಲ್ಲಿವೆ. ಹೂಡಿಕೆ ಹೇಗಿರಬೇಕು, ಹೊಸಬರ ನಿರ್ಧಾರ ಹೇಗಿರಬೇಕು ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಈ ವರ್ಷ ಸೆನ್ಸೆಕ್ಸ್ ಎಷ್ಟು ಅಂಕ ಹೆಚ್ಚುತ್ತೆ? ಮಾರ್ಗನ್ ಸ್ಟಾನ್ಲೀ ಪ್ರಕಾರ 82,000ಕ್ಕೆ ಏರಿಕೆ

Morgan Stanley target for Sensex: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಮಾರ್ಗನ್ ಸ್ಟಾನ್ಲೀ ಭಾರತದ ಷೇರು ಮಾರುಕಟ್ಟೆ ಬಗ್ಗೆ ಈ ವರ್ಷದ ತನ್ನ ನಿರೀಕ್ಷೆಯನ್ನು ಕಡಿಮೆ ಮಾಡಿದೆ. 2025ರ ಡಿಸೆಂಬರ್​​​ನಲ್ಲಿ ಸೆನ್ಸೆಕ್ಸ್ 93,000 ಅಂಕಗಳಿಗೆ ಏರಬುದು ಎಂದು ಮಾರ್ಚ್ ತಿಂಗಳಲ್ಲಿ ಅಂದಾಜು ಮಾಡಿತ್ತು. ಆದರೆ, ಈಗ ಅದನ್ನು 82,000 ಅಂಕಗಳಿಗೆ ಇಳಿಸಿದೆ. ಒಂದು ವೇಳೆ ಬುಲ್ ರನ್ ಆದರೂ 91,000 ಅಂಕ ದಾಟುವುದಿಲ್ಲ ಎಂದಿದೆ ಮಾರ್ಗನ್ ಸ್ಟಾನ್ಲೀ.

ಭಾರತದ ಷೇರು ಮಾರುಕಟ್ಟೆಗೆ ಇವತ್ತು ಶುಭ ಮಂಗಳವಾರ; ಭರ್ಜರಿ ಗೂಳಿ ಆಟಕ್ಕೆ ಕಾರಣವೇನು?

Reasons for positive vibe in Indian stock market: ಭಾರತದ ಷೇರು ಮಾರುಕಟ್ಟೆ ಇವತ್ತು ಸಖತ್ ಏರಿಕೆ ಕಾಣುತ್ತಿದೆ. ಜಾಗತಿಕವಾಗಿ ಹಲವು ಮಾರುಕಟ್ಟೆಗಳೂ ಪಾಸಿಟಿವ್ ಆಗಿವೆ. ಟ್ರಂಪ್ ಟ್ಯಾರಿಫ್ ಗೊಂದಲದ ಮಧ್ಯೆ ಷೇರುಪೇಟೆ ಸಕಾರಾತ್ಮಕವಾಗಿ ವರ್ತಿಸಲು ಕೆಲ ಕಾರಣಗಳಿವೆ. ಯುಎಸ್ ಡಾಲರ್ ಮೌಲ್ಯ ಕಡಿಮೆ ಆಗಿರುವುದು, ಹಣದುಬ್ಬರ ನಿಯಂತ್ರಣದಲ್ಲಿರುವುದು ಇವೇ ಮುಂತಾದ ಕೆಲ ಸಂಗತಿಗಳು ಮಾರುಕಟ್ಟೆಗೆ ಪಾಸಿಟಿವ್ ವೈಬ್ ತಂದಿದೆ.

Stock Market: ಭಾರತದ ಷೇರು ಮಾರುಕಟ್ಟೆಯಲ್ಲಿ ಇವತ್ತು ಭರ್ಜರಿ ಗೂಳಿ ಓಟ; ಏನು ಕಾರಣ?

Reasons for rising of Indian stock market today: ಭಾರತದ ಷೇರು ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳೂ ಇದು ಶುಕ್ರವಾರ ಹಸಿರು ಬಣ್ಣಕ್ಕೆ ತಿರುಗಿವೆ. ಸೂಚ್ಯಂಕಗಳು ಇವತ್ತಿನ ಬೆಳಗಿನ ವಹಿವಾಟಿನಲ್ಲಿ ಶೇ. 2.50ರವರೆಗೂ ಏರಿಕೆ ಕಂಡಿವೆ. ಆರ್​​ಬಿಐ ರಿಪೋ ದರ ಕಡಿತ, ಅಮೆರಿಕದ ಸುಂಕ ವಿರಾಮ ಇತ್ಯಾದಿ ಕ್ರಮಗಳು ಭಾರತದ ಮಾರುಕಟ್ಟೆಗೆ ಬೇಡಿಕೆ ಸಿಗುವಂತೆ ಮಾಡಿರಬಹುದು.

Sensex crash: ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಕಂಡ 5 ಅತಿದೊಡ್ಡ ಕುಸಿತಗಳಿವು

5 biggest one day crash in sensex history: ಭಾರತದ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಇಂದು (ಏ. 7) ಸಖತ್ ಕುಸಿತ ಕಂಡಿವೆ. ಸೆನ್ಸೆಕ್ಸ್ ಶೇ. 2.95ರಷ್ಟು ಕುಸಿದಿವೆ. ಸೆನ್ಸೆಕ್ಸ್ ಒಂದೇ ದಿನದಲ್ಲಿ ಇದಕ್ಕಿಂತ ಹೆಚ್ಚು ಕುಸಿದ ಇತಿಹಾಸ ಇದೆ. 1992ರ ಹರ್ಷದ್ ಮೆಹ್ತಾ ಹಗರಣದಿಂದ ಹಿಡಿದು 2020ರ ಕೋವಿಡ್ ಲಾಕ್​ಡೌನ್​ ಸಂದರ್ಭದಲ್ಲಿ ಒಂದೇ ದಿನದಲ್ಲಿ ಹೆಚ್ಚು ಕುಸಿದಿದ್ದಿದೆ.

ಭಾರತ ಮಾತ್ರವಲ್ಲ, ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ; ಏನು ಕಾರಣ?

Stock markets in India and worldwide crash: ಜಾಗತಿಕವಾಗಿ ಎಲ್ಲಾ ದೇಶಗಳ ಷೇರುಪೇಟೆಗಳು ಸೋಮವಾರ ಭಾರೀ ಕುಸಿತ ಕಂಡಿವೆ. ಅಮೆರಿಕ, ಯೂರೋಪ್, ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ರಕ್ತದೋಕುಳಿ ಆಗುತ್ತಿದೆ. ಅಮೆರಿಕದ ನಾಸ್ಡಾಕ್, ಎಸ್ ಅಂಡ್ ಪಿ ಇತ್ಯಾದಿ ಸೂಚ್ಯಂಕಗಳು ಥರಗುಟ್ಟುತ್ತಿವೆ. ತೈವಾನ್, ಹಾಂಕಾಂಗ್​ನ ಪೇಟೆಗಳು ಅಕ್ಷರಶಃ ತಲ್ಲಣಗೊಂಡಿವೆ.

ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?

Warren Buffett's $12B Profit: 2025ರಲ್ಲಿ ಹೆಚ್ಚಿನ ಶ್ರೀಮಂತರು ಷೇರು ಮಾರುಕಟ್ಟೆಯ ಕುಸಿತದಿಂದ ನಷ್ಟ ಅನುಭವಿಸಿದಾಗ, ವಾರನ್ ಬಫೆಟ್ 12 ಬಿಲಿಯನ್ ಡಾಲರ್ ಲಾಭ ಗಳಿಸಿದ್ದಾರೆ. ಅವರ ಚಾಣಾಕ್ಷ ಹೂಡಿಕೆ ತಂತ್ರ ಮತ್ತು 2024ರಲ್ಲಿ ಪ್ರಮುಖ ಷೇರುಗಳ ಮಾರಾಟದಿಂದಾಗಿ ಈ ಲಾಭ ಸಾಧ್ಯವಾಯಿತು. ಅವರ ಬರ್ಕ್ಷೈರ್ ಹಾಥ್ವೇ ಕಂಪನಿಯ ಬೃಹತ್ ನಗದು ಸಂಗ್ರಹವು ಸಂಭವನೀಯ ಅಪಾಯ ತಪ್ಪಿಸಲು ಸಹಾಯ ಮಾಡಿತು. ಮಾರುಕಟ್ಟೆಯಲ್ಲಿನ ಅತಿಯಾದ ಬೆಲೆಯನ್ನು ಅವರು ಮುಂಚಿತವಾಗಿ ಊಹಿಸಿದ್ದರು.

ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್
ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್
ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’