AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market

Share Market

ಷೇರ್ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆ ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸು ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ.

ಇನ್ನೂ ಹೆಚ್ಚು ಓದಿ

10 ಲಕ್ಷ ಟನ್ ಸಕ್ಕರೆ ಆಮದಿಗೆ ಸರ್ಕಾರ ಅನುಮತಿ; ಕುಸಿಯುತ್ತಿರುವ ಶುಗರ್ ಕಂಪನಿಗಳ ಷೇರುಬೆಲೆ

Reasons why Indian sugar stocks down on Friday: ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಹೆಚ್ಚಿನ ಸಕ್ಕರೆ ಕಂಪನಿಗಳ ಷೇರುಬೆಲೆ ಶುಕ್ರವಾರ ಕುಸಿದಿದೆ. ಮುಂದಿನ ಎರಡು ಎರಡೂವರೆ ತಿಂಗಳಲ್ಲಿ 10 ಲಕ್ಷ ಟನ್​ನಷ್ಟು ಸಕ್ಕರೆಯನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿಸಿದೆ. ಸರ್ಕಾರದ ಈ ನಿರ್ಧಾರವು ಸಕ್ಕರೆ ಕಂಪನಿಗಳ ಷೇರುಗಳನ್ನು ಕುಸಿಯುವಂತೆ ಮಾಡಿದೆ.

ಲಲಿತಾ ಜ್ಯುವೆಲ್ಲರಿ ಐಪಿಒಗೆ ಭರ್ಜರಿ ಸ್ಪಂದನೆ; 1,700 ಕೋಟಿ ರೂ ಮೊತ್ತಕ್ಕೆ 80,000 ಕೋಟಿ ರೂ ಮೌಲ್ಯದ ಬಿಡ್ಡಿಂಗ್

Lalithaa Jewellery Mart's Rs 1,700 crore IPO: ಆಭರಣ ತಯಾರಕರಾದ ಲಲಿತಾ ಜ್ಯುವೆಲ್ಲರಿ ಸಂಸ್ಥೆಯ 1,700 ಕೋಟಿ ರೂ ಮೊತ್ತದ ಐಪಿಒಗೆ ಸಖತ್ ಸ್ಪಂದನೆ ಸಿಕ್ಕಿದೆ. ಇದರಲ್ಲಿ 1,200 ಕೋಟಿ ರೂ ಮೌಲ್ಯದ ಹೊಸ ಶೇರುಗಳು, 500 ರೂ ಮೌಲ್ಯದ ಆಫರ್ ಫಾರ್ ಸೇಲ್ ಸೇರಿವೆ. 190-201 ಪ್ರೈಸ್ ಬ್ಯಾಂಡ್​ನ ಈ ಶೇರಿನ ಜಿಎಂಪಿ ಶೇ. 20ಕ್ಕಿಂತಲೂ ಹೆಚ್ಚಿದೆ.

ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ

Big investor Ramdeo Agrawal makes big prediction on Indian equity market: ಭಾರತದ ಷೇರು ಬಜಾರು ಮುಂದಿನ ಐದು ವರ್ಷದವರೆಗೆ ಹೂಡಿಕೆದಾರರಿಗೆ ವಾರ್ಷಿಕ ಶೇ. 15ರಷ್ಟು ಲಾಭ ತರಬಹುದು ಎಂದು ಹಣಕಾಸು ತಜ್ಞ ರಾಮದೇವ್ ಅಗರ್ವಾಲ್ ಹೇಳಿದ್ದಾರೆ. ಭಾರತದ ಆರ್ಥಿಕತೆ ಈ ಅವಧಿಯಲ್ಲಿ ಶೇ. 7.5ರಿಂದ 8.5ರಂತೆ ಬೆಳೆಯುತ್ತದೆ. ಕಾರ್ಪೊರೇಟ್ ಗಳಿಕೆ ಶೇ. 13-14ರಷ್ಟಿರುತ್ತೆ. ಇಂಡೆಕ್ಸ್ ಫಂಡ್​​ಗಳೇ ಶೇ. 14ರಷ್ಟು ರಿಟರ್ನ್ ನೀಡಬಹುದು ಎನ್ನುತ್ತಾರೆ ಅಗರ್ವಾಲ್.

ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ

Lalithaa Jewellery IPO from 2026 August 17th to 19th: ಭಾರತದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದೆನಿಸಿರುವ ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್​ನ ಐಪಿಒ ದಿನಾಂಕ, ಶೇರು ಬೆಲೆ ಇತ್ಯಾದಿ ಮಾಹಿತಿ ಹೊರಬಂದಿದೆ. ಇದರ ಐಪಿಒ ಆಗಸ್ಟ್ 17, ಸೋಮವಾರ ಶುರುವಾಗಿ ದಿನಾಂಕ 19, ಬುಧವಾರ ಮುಗಿಯುತ್ತದೆ. ಶೇರು ಬೆಲೆ 190-201 ಶ್ರೇಣಿಯಲ್ಲಿದೆ. ಹೂಡಿಕೆಗೆ ಇರುವ ಒಂದು ಲಾಟ್​ನಲ್ಲಿ 74 ಶೇರುಗಳಿದ್ದು, ಕನಿಷ್ಠ ಹೂಡಿಕೆ 14,060 ರೂ ಆಗಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ

Inflows into Equity mutual funds falls by 15pc in 2026 July: ಭಾರತದ ಮ್ಯೂಚುವಲ್ ಫಂಡ್ ಮಾರುಕಟ್ಟೆ ಕುಸಿತ ಕಂಡಿದೆ. ಮ್ಯೂಚುವಲ್ ಫಂಡ್​ಗಳ ಸಂಘಟನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜುಲೈ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಂದ ಶೇ. 15ರಷ್ಟು ಹೂಡಿಕೆ ಕುಸಿತವಾಗಿದೆ. ಲಾರ್ಜ್ ಕ್ಯಾಪ್ ಫಂಡ್​ಗಳು ಕಳೆದ 30 ತಿಂಗಳಲ್ಲೇ ಮೊದಲ ಬಾರಿಗೆ ನಿವ್ವಳ ಹೊರಹರಿವು ಕಂಡಿವೆ.

ಷೇರು ಮಾರುಕಟ್ಟೆಯ ಟ್ರೇಡಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ; ಇಲ್ಲಿದೆ ಹೊಸ ವೇಳಾಪಟ್ಟಿ

Stock market trading timings change from 2026 August 1st: ಷೇರು ಬಜಾರಿನ ಇಂಟ್ರಾಡೆ, ಡಿರೈವೇಟಿವ್ಸ್ ಟ್ರೇಡಿಂಗ್​ಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರೆಗ್ಯುಲರ್ ಷೇರು ವಹಿವಾಟು ಸಮಯ ಮಧ್ಯಾಹ್ನ 3:30ರವರೆಗೆ ಇರುತ್ತದೆ. ಇತರ ವಿವಿಧ ವಿಭಾಗಗಳಿಗೆ ಇರುವ ಸಮಯದಲ್ಲಿ ಬದಲಾವಣೆ ಇದೆ. ಎಫ್ ಅಂಡ್ ಒ ಕ್ಯಾಷ್ ಮಾರ್ಕೆಟ್​ನಲ್ಲಿ ನಿರಂತರ ಟ್ರೇಡಿಂಗ್ 3:15ಕ್ಕೆ ಮುಗಿಯುತ್ತದೆ. ಡೆರಿವೇಟಿವ್ಸ್​ಗೆ 10 ನಿಮಿಷ ಹೆಚ್ಚುವರಿ ಸಮಯ ಕೊಡಲಾಗಿದೆ.

ಷೇರುಪೇಟೆಯಲ್ಲಿ ಮಂಡೇ ಧಮಾಕ; ಸತತ ಕುಸಿತದ ಬಳಿಕ ಸಖತ್ ಚೇತರಿಸಿಕೊಂಡ ಮಾರುಕಟ್ಟೆ; ಏನು ಕಾರಣ?

Indian stock market rises on July 27th: ಷೇರು ಬಜಾರು ಸೋಮವಾರ ಸಖತ್ ಮೇಲೇರಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್ ಇವೆ. ಐಟಿ ಸೆಕ್ಟರ್ ಅಂತೂ ಟಾಪ್ ಗೇರ್​ಗೆ ಬಂದಿದೆ. ಸೆನ್ಸೆಕ್ಸ್, ನಿಫ್ಟಿ ಸರಾಸರಿಯಾಗಿ ಶೇ. 1ಎಷ್ಟು ಹಿಗ್ಗಿವೆ. ಕಳೆದ ವಾರದ ಎಲ್ಲಾ ಐದು ದಿನಗಳೂ ಕುಸಿತ ಕಂಡಿದ್ದ ಶೇರು ಮಾರುಕಟ್ಟೆ ಕಂಬ್ಯಾಕ್ ಮಾಡಲು ಏನು ಕಾರಣ?

ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ

Indian stock market big crash this week: ಶೇರು ಮಾರುಕಟ್ಟೆ ಈ ವಾರ ಸಖತ್ ಕುಸಿತ ಕಂಡಿದೆ. ಶುಕ್ರವಾರವೊಂದೇ ದಿನ 4 ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ. ಸೆನ್ಸೆಕ್ಸ್ ಸೋಮವಾರದಿಂದ ಶುಕ್ರವಾರದವರೆಗೆ ಎರಡು ಸಾವಿರಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ನಿಫ್ಟಿ ಹತ್ತಿರಹತ್ತಿರ 600 ಅಂಕಗಳ ನಷ್ಟ ಕಂಡಿದೆ. ಇದಕ್ಕೇನು ಕಾರಣ, ಇಲ್ಲಿದೆ ವರದಿ.

ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

Where to invest Rs 20 lakh lumpsum: ಹಣ ಗಳಿಸುವುದು ಮತ್ತು ಅದರಲ್ಲಿ ಸಾಧ್ಯವಾದಷ್ಟನ್ನು ಉಳಿಸುವುದು ಬಹಳ ಮುಖ್ಯ. ಈ ಉಳಿಸಿದ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದೂ ಕೂಡ ಮುಖ್ಯ. ನಿಮ್ಮ ಬಳಿ 20 ಲಕ್ಷ ರೂ ಲಂಪ್ಸಮ್ ಹಣ ಇದ್ದರೆ ಅದನ್ನು ಎಲ್ಲಿ ಹೂಡಿಕೆ ಮಾಡಬೇಕು? ರಿಸ್ಕ್ ಸಾಮರ್ಥ್ಯದ ರೀತ್ಯ ಮೂರು ರೀತಿಯ ಹೂಡಿಕೆ ಮಾರ್ಗಗಳಿವೆ. ಅದರ ವಿವರ ಈ ಲೇಖನದಲ್ಲಿದೆ.

ಶೇರುಬಜಾರು ಕುಸಿತ; ಕೆಂಪು ಬಣ್ಣಕ್ಕೆ ತಿರುಗಿದ ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳು; ಏನು ಕಾರಣ?

Reasons for fall of Sensex, Nifty on Monday: ಭಾರತದ ಶೇರು ಮಾರುಕಟ್ಟೆ ಇವತ್ತು ಸೋಮವಾರ ಶೇ. 0.5ರಿಂದ 1.0ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ 700 ಅಂಕಗಳವರೆಗೆ, ನಿಫ್ಟಿ 180 ಅಂಕಗಳವರೆಗೆ ಇಳಿಕೆ ಕಂಡಿವೆ. ಇಂಧನ, ಯುಟಿಲಿಟಿ, ಕನ್ಸೂಮರ್ ಡುರಬಲ್ ಇತ್ಯಾದಿ ಕೆಲವನ್ನು ಹೊರತುಪಡಿಸಿ, ಹೆಚ್ಚಿನ ಸೂಚ್ಯಂಕಗಳು ಹಿನ್ನಡೆ ಕಂಡಿವೆ.

ಷೇರುಬಜಾರಿನಲ್ಲಿ ಈ ವಾರ ಕಲರವ; 7 ಹೊಸ ಐಪಿಒಗಳು ಶುರು; 5 ಷೇರುಗಳ ಲಿಸ್ಟಿಂಗ್

Indian stock market this week, 7 new IPOs and 5 listings: ಭಾರತದ ಷೇರು ಮಾರುಕಟ್ಟೆಯಲ್ಲಿ ಈ ವಾರ ಜಾತ್ರೆಯಂತಹ ವಾತಾವರಣ ಇದೆ. ಬೆಂಗಳೂರಿನ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಸೇರಿ ಏಳು ಹೊಸ ಕಂಪನಿಗಳು ಐಪಿಒ ಬಿಡುಗಡೆ ಮಾಡುತ್ತಿವೆ. ಕಳೆದ ವಾರ ಐಪಿಒದಲ್ಲಿ ಉತ್ತಮ ಸ್ಪಂದನೆ ಪಡೆದಿದ್ದ ಐದು ಕಂಪನಿಗಳು ಈ ವಾರ ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಲಿಸ್ಟ್ ಆಗುತ್ತಿವೆ.

ಭಾರತದ ಷೇರುಬಜಾರು ಕಳೆದ 30 ವರ್ಷದಲ್ಲಿ ಎಷ್ಟು ಬಾರಿ ಬಿದ್ದಿದೆ? ಒಟ್ಟಾರೆ ತಂದಿರುವ ಲಾಭವೆಷ್ಟು? ಇಲ್ಲಿದೆ ಡೀಟೇಲ್ಸ್

Stock Market of India great for long term investment: ಷೇರು ಮಾರುಕಟ್ಟೆ ಈ ವರ್ಷ ಮೈನಸ್ ಲಾಭ ಕೊಟ್ಟಿದೆ. 2025ರ ದ್ವಿತೀಯಾರ್ಧದಿಂದ ಇದು ಕುಸಿತ ಕಂಡಿದೆ. ಆದರೆ, ದೀರ್ಘಾವಧಿಯಲ್ಲಿ ಮಾರುಕಟ್ಟೆ ಬಹಳ ಹೆಚ್ಚು ಲಾಭ ಕೊಟ್ಟಿದೆ. ಕಳೆದ 30 ವರ್ಷದಲ್ಲಿ ಮಾರುಕಟ್ಟೆ ಏಳೆಂಟು ಬಾರಿ ನೆಗಟಿವ್ ರಿಟರ್ನ್ ಕೊಟ್ಟಿದೆ. ಒಟ್ಟಾರೆಯಾಗಿ ಶೇ. 12-14ರಷ್ಟು ಬೆಳವಣಿಗೆ ಕಂಡಿದೆ.

ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ