AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market

Share Market

ಷೇರ್ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆ ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸು ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ.

ಇನ್ನೂ ಹೆಚ್ಚು ಓದಿ

ಗಣೇಶ ಹಬ್ಬಕ್ಕೆ ಷೇರು ಮಾರುಕಟ್ಟೆ ಕ್ಲೋಸ್: ಬೆಂಗಳೂರು ಸೇರಿ ಹಲವೆಡೆ ಬ್ಯಾಂಕ್​ಗಳು ಬಂದ್, ಎಟಿಎಂ-ಯುಪಿಐ ಎಂದಿನಂತೆ ಲಭ್ಯ

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಷೇರು ಮಾರುಕಟ್ಟೆಗಳು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆದಾಗ್ಯೂ, ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಎಂದಿನಂತೆ 24 ಗಂಟೆಯೂ ಲಭ್ಯವಿರುತ್ತವೆ. ಸೆಪ್ಟೆಂಬರ್ 15 ಮತ್ತು 18 ರಂದು ಕೆಲವೆಡೆ ಬ್ಯಾಂಕ್ ಬಂದ್ ಇದ್ದು, ಸೆಪ್ಟೆಂಬರ್ 19ರಂದು ಬ್ಯಾಂಕ್ ತೆರೆದಿರುತ್ತದೆ. ಸೆಪ್ಟೆಂಬರ್ 20 ರಂದು ಭಾನುವಾರದ ರಜೆ ಇರಲಿದೆ.

ಟರ್ಮ್ ಇನ್ಷೂರೆನ್ಸ್​ಗೆ ಏಜೆಂಟ್​ಗಳು ಶಿಫಾರಸು ಮಾಡೋದು ನೋಡಿದ್ದೀರಾ? ಇಲ್ಲಿವೆ ಉತ್ತಮ ಲಾಭ ತರುವ ಕೆಲ ಹೂಡಿಕೆಗಳು

ಹೂಡಿಕೆ ಮಾಡಲು ಅನೇಕ ಮಾರ್ಗಗಳಿವೆ. ಆದರೆ, ಯಾವುದರಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲ ಹೆಚ್ಚಿನವರಲ್ಲಿ ಇರುತ್ತದೆ. ಅಂತೆಯೇ, ಏಜೆಂಟ್​ಗಳು ಮತ್ತು ಹಣಕಾಸು ಸಲಹೆಗಾರರ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಂಥ ಹೂಡಿಕೆಗಳಲ್ಲಿ ಮಧ್ಯವರ್ತಿಗಳ ಕಮಿಷನ್ ಇತ್ಯಾದಿ ವೆಚ್ಚವೇ ಹೆಚ್ಚಿರುತ್ತದೆ. ಇಂಥ ಕಮಿಷನ್ ಇಲ್ಲದ ಕೆಲ ಉತ್ತಮ ಹೂಡಿಕೆಗಳ ಅನ್ವೇಷಣೆ ಇಲ್ಲಿದೆ.

ಹೊಸ ಇಟಿಎಫ್ ಟ್ರೇಡಿಂಗ್ ನಿಯಮಗಳು ಇಂದಿನಿಂದ ಜಾರಿಗೆ; ಹೂಡಿಕೆದಾರರ ಮೇಲಾಗುವ ಪ್ರಮುಖ ಬದಲಾವಣೆಗಳಿವು…

ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳ ಮಾರುಕಟ್ಟೆಯನ್ನು ಬಲಗೊಳಿಸಲು ಸೆಬಿ ಹೊಸ ನಿಯಮಗಳನ್ನು ರೂಪಿಸಿದ್ದು, ಸೆ. 7ರಿಂದ ಜಾರಿಗೆ ಬಂದಿವೆ. ಇಟಿಎಫ್ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿ ಹೆಚ್ಚಿಸಲು, ಮತ್ತು ಹೂಡಿಕೆದಾರರಿಗೆ ಪಾರದರ್ಶಕತೆ ನೀಡಲು ಈ ಹೊಸ ನಿಯಮಗಳು ಸಹಕಾರಿಯಾಗಬಹುದು. ಫಂಡ್​ನ ನಿವ್ವಳ ಆಸ್ತಿ ಮೌಲ್ಯದ ದರದ ನಿಯಮದಲ್ಲೂ ಬದಲಾವಣೆ ಇದೆ.

ಜಾಗತಿಕವಾಗಿ ನಡುಗಿರುವ ಷೇರುಪೇಟೆಗಳು; ಭಾರತದಲ್ಲೂ ಸೆನ್ಸೆಕ್ಸ್, ನಿಫ್ಟಿ ಕುಸಿತ; ಈ ಅಲುಗಾಟಕ್ಕೆ ಏನು ಕಾರಣ?

Reasons for downfall of stock markets on September 2nd: ಇಂದು ಬುಧವಾರ ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಭಾರತದ ಹೆಚ್ಚಿನ ಸೂಚ್ಯಂಕಗಳು ಕೆಂಪುಬಣ್ಣಕ್ಕೆ ತಿರುಗಿವೆ. ಜಾಗತಿಕವಾಗಿಯೂ ಪ್ರಮುಖ ದೇಶಗಳ ಷೇರುಪೇಟೆಗಳು ಹಿನ್ನಡೆ ಕಂಡಿವೆ. ಬ್ಯಾಂಕುಗಳು, ಇಂಧನ ಉತ್ಪಾದಕರು ಮೊದಲಾದ ಸಂಸ್ಥೆಗಳ ಷೇರುಗಳು ಪಾಸಿಟಿವ್ ಇವೆ. ಈ ಹಿನ್ನಡೆಗೆ ಏನು ಕಾರಣ?

10 ಲಕ್ಷ ಟನ್ ಸಕ್ಕರೆ ಆಮದಿಗೆ ಸರ್ಕಾರ ಅನುಮತಿ; ಕುಸಿಯುತ್ತಿರುವ ಶುಗರ್ ಕಂಪನಿಗಳ ಷೇರುಬೆಲೆ

Reasons why Indian sugar stocks down on Friday: ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಹೆಚ್ಚಿನ ಸಕ್ಕರೆ ಕಂಪನಿಗಳ ಷೇರುಬೆಲೆ ಶುಕ್ರವಾರ ಕುಸಿದಿದೆ. ಮುಂದಿನ ಎರಡು ಎರಡೂವರೆ ತಿಂಗಳಲ್ಲಿ 10 ಲಕ್ಷ ಟನ್​ನಷ್ಟು ಸಕ್ಕರೆಯನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿಸಿದೆ. ಸರ್ಕಾರದ ಈ ನಿರ್ಧಾರವು ಸಕ್ಕರೆ ಕಂಪನಿಗಳ ಷೇರುಗಳನ್ನು ಕುಸಿಯುವಂತೆ ಮಾಡಿದೆ.

ಲಲಿತಾ ಜ್ಯುವೆಲ್ಲರಿ ಐಪಿಒಗೆ ಭರ್ಜರಿ ಸ್ಪಂದನೆ; 1,700 ಕೋಟಿ ರೂ ಮೊತ್ತಕ್ಕೆ 80,000 ಕೋಟಿ ರೂ ಮೌಲ್ಯದ ಬಿಡ್ಡಿಂಗ್

Lalithaa Jewellery Mart's Rs 1,700 crore IPO: ಆಭರಣ ತಯಾರಕರಾದ ಲಲಿತಾ ಜ್ಯುವೆಲ್ಲರಿ ಸಂಸ್ಥೆಯ 1,700 ಕೋಟಿ ರೂ ಮೊತ್ತದ ಐಪಿಒಗೆ ಸಖತ್ ಸ್ಪಂದನೆ ಸಿಕ್ಕಿದೆ. ಇದರಲ್ಲಿ 1,200 ಕೋಟಿ ರೂ ಮೌಲ್ಯದ ಹೊಸ ಶೇರುಗಳು, 500 ರೂ ಮೌಲ್ಯದ ಆಫರ್ ಫಾರ್ ಸೇಲ್ ಸೇರಿವೆ. 190-201 ಪ್ರೈಸ್ ಬ್ಯಾಂಡ್​ನ ಈ ಶೇರಿನ ಜಿಎಂಪಿ ಶೇ. 20ಕ್ಕಿಂತಲೂ ಹೆಚ್ಚಿದೆ.

ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ

Big investor Ramdeo Agrawal makes big prediction on Indian equity market: ಭಾರತದ ಷೇರು ಬಜಾರು ಮುಂದಿನ ಐದು ವರ್ಷದವರೆಗೆ ಹೂಡಿಕೆದಾರರಿಗೆ ವಾರ್ಷಿಕ ಶೇ. 15ರಷ್ಟು ಲಾಭ ತರಬಹುದು ಎಂದು ಹಣಕಾಸು ತಜ್ಞ ರಾಮದೇವ್ ಅಗರ್ವಾಲ್ ಹೇಳಿದ್ದಾರೆ. ಭಾರತದ ಆರ್ಥಿಕತೆ ಈ ಅವಧಿಯಲ್ಲಿ ಶೇ. 7.5ರಿಂದ 8.5ರಂತೆ ಬೆಳೆಯುತ್ತದೆ. ಕಾರ್ಪೊರೇಟ್ ಗಳಿಕೆ ಶೇ. 13-14ರಷ್ಟಿರುತ್ತೆ. ಇಂಡೆಕ್ಸ್ ಫಂಡ್​​ಗಳೇ ಶೇ. 14ರಷ್ಟು ರಿಟರ್ನ್ ನೀಡಬಹುದು ಎನ್ನುತ್ತಾರೆ ಅಗರ್ವಾಲ್.

ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ

Lalithaa Jewellery IPO from 2026 August 17th to 19th: ಭಾರತದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದೆನಿಸಿರುವ ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್​ನ ಐಪಿಒ ದಿನಾಂಕ, ಶೇರು ಬೆಲೆ ಇತ್ಯಾದಿ ಮಾಹಿತಿ ಹೊರಬಂದಿದೆ. ಇದರ ಐಪಿಒ ಆಗಸ್ಟ್ 17, ಸೋಮವಾರ ಶುರುವಾಗಿ ದಿನಾಂಕ 19, ಬುಧವಾರ ಮುಗಿಯುತ್ತದೆ. ಶೇರು ಬೆಲೆ 190-201 ಶ್ರೇಣಿಯಲ್ಲಿದೆ. ಹೂಡಿಕೆಗೆ ಇರುವ ಒಂದು ಲಾಟ್​ನಲ್ಲಿ 74 ಶೇರುಗಳಿದ್ದು, ಕನಿಷ್ಠ ಹೂಡಿಕೆ 14,060 ರೂ ಆಗಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ

Inflows into Equity mutual funds falls by 15pc in 2026 July: ಭಾರತದ ಮ್ಯೂಚುವಲ್ ಫಂಡ್ ಮಾರುಕಟ್ಟೆ ಕುಸಿತ ಕಂಡಿದೆ. ಮ್ಯೂಚುವಲ್ ಫಂಡ್​ಗಳ ಸಂಘಟನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜುಲೈ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಂದ ಶೇ. 15ರಷ್ಟು ಹೂಡಿಕೆ ಕುಸಿತವಾಗಿದೆ. ಲಾರ್ಜ್ ಕ್ಯಾಪ್ ಫಂಡ್​ಗಳು ಕಳೆದ 30 ತಿಂಗಳಲ್ಲೇ ಮೊದಲ ಬಾರಿಗೆ ನಿವ್ವಳ ಹೊರಹರಿವು ಕಂಡಿವೆ.

ಷೇರು ಮಾರುಕಟ್ಟೆಯ ಟ್ರೇಡಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ; ಇಲ್ಲಿದೆ ಹೊಸ ವೇಳಾಪಟ್ಟಿ

Stock market trading timings change from 2026 August 1st: ಷೇರು ಬಜಾರಿನ ಇಂಟ್ರಾಡೆ, ಡಿರೈವೇಟಿವ್ಸ್ ಟ್ರೇಡಿಂಗ್​ಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರೆಗ್ಯುಲರ್ ಷೇರು ವಹಿವಾಟು ಸಮಯ ಮಧ್ಯಾಹ್ನ 3:30ರವರೆಗೆ ಇರುತ್ತದೆ. ಇತರ ವಿವಿಧ ವಿಭಾಗಗಳಿಗೆ ಇರುವ ಸಮಯದಲ್ಲಿ ಬದಲಾವಣೆ ಇದೆ. ಎಫ್ ಅಂಡ್ ಒ ಕ್ಯಾಷ್ ಮಾರ್ಕೆಟ್​ನಲ್ಲಿ ನಿರಂತರ ಟ್ರೇಡಿಂಗ್ 3:15ಕ್ಕೆ ಮುಗಿಯುತ್ತದೆ. ಡೆರಿವೇಟಿವ್ಸ್​ಗೆ 10 ನಿಮಿಷ ಹೆಚ್ಚುವರಿ ಸಮಯ ಕೊಡಲಾಗಿದೆ.

ಷೇರುಪೇಟೆಯಲ್ಲಿ ಮಂಡೇ ಧಮಾಕ; ಸತತ ಕುಸಿತದ ಬಳಿಕ ಸಖತ್ ಚೇತರಿಸಿಕೊಂಡ ಮಾರುಕಟ್ಟೆ; ಏನು ಕಾರಣ?

Indian stock market rises on July 27th: ಷೇರು ಬಜಾರು ಸೋಮವಾರ ಸಖತ್ ಮೇಲೇರಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್ ಇವೆ. ಐಟಿ ಸೆಕ್ಟರ್ ಅಂತೂ ಟಾಪ್ ಗೇರ್​ಗೆ ಬಂದಿದೆ. ಸೆನ್ಸೆಕ್ಸ್, ನಿಫ್ಟಿ ಸರಾಸರಿಯಾಗಿ ಶೇ. 1ಎಷ್ಟು ಹಿಗ್ಗಿವೆ. ಕಳೆದ ವಾರದ ಎಲ್ಲಾ ಐದು ದಿನಗಳೂ ಕುಸಿತ ಕಂಡಿದ್ದ ಶೇರು ಮಾರುಕಟ್ಟೆ ಕಂಬ್ಯಾಕ್ ಮಾಡಲು ಏನು ಕಾರಣ?

ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ

Indian stock market big crash this week: ಶೇರು ಮಾರುಕಟ್ಟೆ ಈ ವಾರ ಸಖತ್ ಕುಸಿತ ಕಂಡಿದೆ. ಶುಕ್ರವಾರವೊಂದೇ ದಿನ 4 ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ. ಸೆನ್ಸೆಕ್ಸ್ ಸೋಮವಾರದಿಂದ ಶುಕ್ರವಾರದವರೆಗೆ ಎರಡು ಸಾವಿರಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ನಿಫ್ಟಿ ಹತ್ತಿರಹತ್ತಿರ 600 ಅಂಕಗಳ ನಷ್ಟ ಕಂಡಿದೆ. ಇದಕ್ಕೇನು ಕಾರಣ, ಇಲ್ಲಿದೆ ವರದಿ.

ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ