Share Market

Share Market

ಷೇರ್ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆ ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸು ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ.

ಇನ್ನೂ ಹೆಚ್ಚು ಓದಿ

ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ

RIL share price go higher: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್​ನ ಮಾರುಕಟ್ಟೆ ಬಂಡವಾಳ ಜೂನ್ 28, ಶುಕ್ರವಾರ 21 ಲಕ್ಷ ಕೋಟಿ ರೂ ದಾಟಿದೆ. ಈ ಮಟ್ಟದ ಷೇರುಸಂಪತ್ತು ಹೊಂದಿದ ಮೊದಲ ಕಂಪನಿ ಆರ್​ಐಎಲ್ ಆಗಿದೆ. ನಿನ್ನೆಯಷ್ಟೇ ಜಿಯೋ ತನ್ನ ವಿವಿಧ ಮೊಬೈಲ್ ಪ್ಲಾನ್​ಗಳ ದರ ಪರಿಷ್ಕರಣೆ ಮಾಡಿತ್ತು. ಅದರ ಜೊತೆಗೆ ವಿವಿಧ ಬ್ರೋಕರೇಜ್ ಸಂಸ್ಥೆಗಳು ರಿಲಾಯನ್ಸ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ನೀಡಿವೆ.

ಅದಾನಿ ಗ್ರೂಪ್ ತೇಜೋವಧೆ ಉದ್ದೇಶದಿಂದ ಹಿಂಡನ್ಬರ್ಗ್ ವರದಿ: ಎಜಿಎಂ ಸಭೆಯಲ್ಲಿ ಗೌತಮ್ ಅದಾನಿ ಆರೋಪ

Gautam Adani at 32nd AGM: 2022ರಲ್ಲಿ ಬಿಡುಗಡೆ ಆದ ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಹಲವು ಗುರುತರ ಆರೋಪಗಳನ್ನು ಮಾಡಲಾಗಿತ್ತು. ಅದಾನಿ ಗ್ರೂಪ್ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಿಡುಗಡೆ ಆದ ಹಿಂಡನ್ಬರ್ಗ್ ರಿಸರ್ಚ್ ವರದಿಯಿಂದ ಭಾರೀ ಹಾನಿಯಾಗಿತ್ತು. ಸಂಸ್ಥೆಯ ತೇಜೋವಧೆ ಮಾಡಲೆಂದೇ ಹಿಂಡನ್ಬರ್ಗ್ ವರದಿ ರೂಪಿಸಲಾಗಿತ್ತು ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಹಣ ಕಟ್ ಆಯ್ತು, ಗೊತ್ತಿಲ್ಲ ಎಲ್ಲೋಯ್ತು; ಗ್ರೋ ಪ್ಲಾಟ್​ಫಾರ್ಮ್ ವಿರುದ್ಧ ವಂಚನೆ ಆರೋಪದ ಸದ್ದು

Groww platform controversy over allegations by an investor: ಬ್ರೋಕರ್ ಪ್ಲಾಟ್​ಫಾರ್ಮ್ ಆದ ಗ್ರೋ ವಿರುದ್ಧ ವ್ಯಕ್ತಿಯೊಬ್ಬರು ವಂಚನೆಯ ಆರೋಪ ಮಾಡಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಫೋಲಿಯೋ ಅಕೌಂಟ್ ರಚನೆಯಾದರೂ ಆ ಹಣ ಮ್ಯೂಚುವಲ್ ಫಂಡ್​ಗೆ ತಲುಪುವುದೇ ಇಲ್ಲ. ಮೂರ್ನಾಲ್ಕು ವರ್ಷದ ಬಳಿಕ ಫಂಡ್ ರಿಡೀಮ್ ಮಾಡಲು ಹೋದಾಗ ಸಾಧ್ಯವಾಗುವುದಿಲ್ಲ. ಗ್ರೋ ಕಸ್ಟಮರ್ ಕೇರ್ ವಿಭಾಗವನ್ನು ಸಂಪರ್ಕಿಸಿದರೆ ಉದ್ಧಟತನದಿಂದ ವರ್ತಿಸುತ್ತಾರೆ ಎಂದು ಆ ವ್ಯಕ್ತಿ ಆರೋಪ ಮಾಡಿದ್ದಾರೆ.

ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?

Know what is Front Running, an allegation faced by Quant MF: ಅಕ್ರಮ ನಡವಳಿಕೆ ಎಂದು ಪರಿಗಣಿಸಲಾಗಿರುವ ಫ್ರಂಟ್ ರನಿಂಗ್ ಅನ್ನು ಮಾಡುತ್ತಿರುವ ಆರೋಪ ಕ್ವಾಂಟ್ ಮ್ಯೂಚುವಲ್ ಫಂಡ್ ವಿರುದ್ಧ ಕೇಳಿಬಂದಿದೆ. ಸೆಬಿ ತನಿಖೆ ನಡೆಸುತ್ತಿದ್ದು, ಕ್ವಾಂಟ್​ನ ಮುಂಬೈ ಕಚೇರಿ ಹಾಗು ಹೈದರಾಬಾದ್​ನ ಒಂದು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಮ್ಯೂಚುವಲ್ ಫಂಡ್ ಸಂಸ್ಥೆಯ ದೊಡ್ಡ ನಡೆಯ ಬಗ್ಗೆ ಪೂರ್ವದಲ್ಲೇ ಮಾಹಿತಿ ಪಡೆವ ಡೀಲರ್​ಗಳು ಅದನ್ನು ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುವುದಕ್ಕೆ ಫ್ರಂಟ್ ರನಿಂಗ್ ಎನ್ನುತ್ತಾರೆ.

ಸಿಲ್ವರ್ ಇಟಿಎಫ್ ಹೊಸ ಟ್ರೆಂಡ್; ನಿಮ್ಮ ಹೂಡಿಕೆ ಹೆಚ್ಚು ಲಾಭದಾಯಕ, ಹೆಚ್ಚು ಸುರಕ್ಷಿತ

Silver ETFs in trending: ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್​ಗಳು ಜನಪ್ರಿಯತೆ ಪಡೆಯುತ್ತಿವೆ. ಇದರಲ್ಲೂ ಈಕ್ವಿಟಿ, ಡೆಟ್, ಗೋಲ್ಡ್ ಇತ್ಯಾದಿ ಬೇರೆ ಬೇರೆ ಅಸೆಟ್​ಗಳ ಇಟಿಎಫ್​ಗಳಿವೆ. ಇವುಗಳಲ್ಲಿ ಸಿಲ್ವರ್ ಇಟಿಎಫ್ ಟ್ರೆಂಡಿಂಗ್​ನಲ್ಲಿದೆ. ಎರಡೂವರೆ ವರ್ಷದ ಹಿಂದೆ ಆರಂಭವಾದ ಸಿಲ್ವರ್ ಇಟಿಎಫ್ ಫಂಡ್​ಗಳಲ್ಲಿ ಈಗಾಗಲೇ 5,400 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳಾಗಿವೆ.

ಆನ್​ಲೈನ್ ಗೇಮಿಂಗ್ ರೀತಿಯಲ್ಲಿ ಷೇರು ಮಾರುಕಟ್ಟೆಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮೇಲೆ ಅಧಿಕ ತೆರಿಗೆ ವಿಧಿಸುವ ಸಾಧ್ಯತೆ

ನವದೆಹಲಿ, ಜೂನ್ 20: ಮುಂದಿನ ತಿಂಗಳು ಮಂಡಿಸಲಾಗುವ ಬಜೆಟ್​ನಲ್ಲಿ (Union Budget 2024) ಕೆಲ ಪ್ರಮುಖ ಕ್ರಮಗಳ ನಿರೀಕ್ಷೆ ಇದೆ. ಷೇರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಹಳ ಹೆಚ್ಚುತ್ತಿರುವ ಫ್ಯೂಚರ್ಸ್ ಮತ್ತು ಆಪ್ಷನ್ಸ್ ವ್ಯವಹಾರಗಳಿಗೆ (F & O Trading) ಅಧಿಕ ತೆರಿಗೆ ವಿಧಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜಿಸಿರುವುದು ತಿಳಿದುಬಂದಿದೆ. ಈ ಬಗ್ಗೆ ಒಂದು ವರದಿ.

ಐದು ದಶಕದಲ್ಲಿ ಭಾರತದ ಸಂಪತ್ತು ಸಾವಿರ ಪ್ರತಿಶತದಷ್ಟು ಹೆಚ್ಚಾಗಲಿದೆ: ಎನ್​ಎಸ್​ಇ ಸಿಇಒ ಆಶೀಶ್ ಕುಮಾರ್ ಚೌಹಾಣ್

India wealth may multiply 10 times in 50 years, says NSE CEO: ಭಾರತ ಮುಂದಿನ ಐದು ದಶಕದಲ್ಲಿ ಶೇ. 1000ರಷ್ಟು, ಅಂದರೆ ಐದು ಪಟ್ಟು ಸಂಪತ್ತು ವೃದ್ಧಿ ಕಾಣಲಿದೆ ಎಂದು ಎನ್​ಎಸ್​ಇ ಎಂಡಿ ಆಶೀಶ್ ಕುಮಾರ್ ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೀನಾ, ಜಪಾನ್, ಐರೋಪ್ಯ ದೇಶಗಳಲ್ಲಿ ವಯಸ್ಸಾದರ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ. ಇದು ಭಾರತಕ್ಕೆ ಅನುಕೂಲವಾಗಲಿದೆ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಸಿಇಒ ಅಭಿಪ್ರಾಯಪಟ್ಟಿದ್ದಾರೆ.

ಒಂದು ವರ್ಷದಲ್ಲಿ ಡಬಲ್ ಲಾಭ ಕೊಟ್ಟಿವೆ ಈ ಪಿಎಸ್​ಯು ಮ್ಯೂಚುವಲ್ ಫಂಡ್​ಗಳು

Govt companies bring joy to investors: ಪಬ್ಲಿಕ್ ಸೆಕ್ಟರ್ ಅಥವಾ ಸರ್ಕಾರಿ ಸ್ವಾಮ್ಯದ ಕಂಪನಿಗಳು ಇತ್ತೀಚೆಗೆ ಗಮನಾರ್ಹವಾಗಿ ಬೆಳೆದಿವೆ. ಉತ್ತಮ ಲಾಭ ಮಾಡಿವೆ. ಈ ವಲಯವನ್ನು ಟ್ರ್ಯಾಕ್ ಮಾಡುವ ಮ್ಯೂಚುವಲ್ ಫಂಡ್​ಗಳೂ ಕೂಡ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದಿವೆ. ಒಂದು ವರ್ಷದಲ್ಲಿ ಇವು ಸರಾಸರಿಯಾಗಿ ಶೇ. 100ರಷ್ಟು ಲಾಭ ಮಾಡಿವೆ.

ಇಂಡಸ್ ಟವರ್ಸ್​ನ ಶೇ. 20ರಷ್ಟು ಷೇರುಪಾಲು ಮಾರಿದ ವೊಡಾಫೋನ್; 17,065 ಕೋಟಿ ರೂಗೆ ಬಿಕರಿ; ಷೇರುಪಾಲು ಹೆಚ್ಚಿಸಿಕೊಂಡ ಏರ್ಟೆಲ್

Vodafone sells stake in Indus Towers: ಇಂಡಸ್ ಟವರ್ಸ್ ಸಂಸ್ಥೆಯಲ್ಲಿ ತಾನು ಹೊಂದಿರುವ ಶೇ. 20ರಷ್ಟು ಷೇರುಗಳನ್ನು ವೊಡಾಫೋನ್ ಗ್ರೂಪ್ ಮಾರಿದೆ. 17,065 ಕೋಟಿ ರೂಗೆ ಬಿಕರಿಯಾಗಿದೆ. ಐ ಸ್ಕ್ವಯರ್ಡ್ ಕ್ಯಾಪಿಟಲ್, ಸ್ಟೋನ್ ಪೀಕ್ ಕಂಪನಿಗಳು ಹೆಚ್ಚಿನ ಷೇರುಗಳನ್ನು ಖರೀದಿ ಮಾಡಿವೆ. ಶೇ. 47ಕ್ಕೂ ಹೆಚ್ಚು ಷೇರುಪಾಲು ಹೊಂದಿರುವ ಭಾರ್ತಿ ಏರ್ಟೆಲ್ ಸಂಸ್ಥೆ ಶೇ. 1ರಷ್ಟು ಷೇರು ಖರೀದಿಸಿರುವುದು ತಿಳಿದುಬಂದಿದೆ.

ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ

Raymonds AGM on June 27th: ಮಾಲೀಕರ ಕೌಟುಂಬಿಕ ಜಗಳ ಮೂಲಕ ವಿವಾದಕ್ಕೆ ಈಡಾಗಿರುವ ರೇಮಂಡ್ಸ್ ಸಂಸ್ಥೆಯ ಎಜಿಎಂ ಅಥವಾ ವಾರ್ಷಿಕ ಮಹಾಸಭೆ ಜೂನ್ 27ರಂದು ನಡೆಯಲಿದೆ. ಛೇರ್ಮನ್ ಮತ್ತು ಎಂಡಿ ಗೌತಮ್ ಸಿಂಘಾನಿಯಾ ಅವರು ಮುಂದಿನ ಐದು ವರ್ಷ ಮಂಡಳಿ ನಿರ್ದೇಶಕರಾಗಿ ಮರು ಆಯ್ಕೆ ಬಯಸಿದ್ದಾರೆ. ಷೇರುದಾರರಿಂದ ಅಂದು ವೋಟಿಂಗ್ ನಡೆಯಲಿದೆ. ಗೌತಮ್ ಸಿಂಘಾನಿಯಾ ವಿರುದ್ಧವಾಗಿ ಮತ ಚಲಾಯಿಸುವಂತೆ ಷೇರುದಾರರಿಗೆ ಐಐಎಎಸ್ ಸಂಸ್ಥೆ ಸಲಹೆ ನೀಡಿದೆ.

ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ