AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ

BSNL 4G network: ಸತ್ತೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದಾಗಲೇ ಬಿಎಸ್ಸೆನ್ನೆಲ್ ಫೀನಿಕ್ಸ್​ನಂತೆ ಕಂಬ್ಯಾಕ್ ಮಾಡಿದೆ. 4ಜಿ ನೆಟ್ವರ್ಕ್ ಅನ್ನು ಬಹಳ ಬೇಗ ಅಳವಡಿಸುತ್ತಿದೆ. ಈಗಾಗಲೇ 50,000 ಟವರ್​ಗಳನ್ನು ಸ್ಥಾಪಿಸಿದೆ. ಈ ಪೈಕಿ ಜಿಯೋ, ಏರ್ಟೆಲ್, ವಿಐ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಬಿಎಸ್ಸೆನ್ನೆಲ್ 5,000 ಟವರ್ ಸ್ಥಾಪಿಸಿದೆ. ಜಿಯೋ, ಏರ್ಟೆಲ್​ನಿಂದ ಸಾಕಷ್ಟು ಗ್ರಾಹಕರು ಬಿಎಸ್ಸೆನ್ನೆಲ್​ಗೆ ವಲಸೆ ಬರುತ್ತಿದ್ದಾರೆ.

ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ
ಬಿಎಸ್ಸೆನ್ನೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 04, 2024 | 10:53 AM

Share

ನವದೆಹಲಿ, ನವೆಂಬರ್ 4: ಹತ್ತು ವರ್ಷದ ಹಿಂದೆ ಟೆಲಿಕಾಂ ವಲಯಕ್ಕೆ ಜಿಯೋ ಎನ್ನುವ ಬಿರುಗಾಳಿ ಎದ್ದು ಡಿಜಿಟಲ್ ಕ್ರಾಂತಿಯೇ ಸೃಷ್ಟಿಯಾಗಲು ಎಡೆಯಾಗಿತ್ತು. ಈಗ ಅದೇ ರೀತಿಯಲ್ಲಿ ಮಿಂಚಿನ ಸಂಚಾರ ನಡೆಸುವ ಸರದಿ ಬಿಎಸ್ಸೆನ್ನೆಲ್​ನದ್ದು. ದುಬಾರಿ ಡಾಟಾ ಬಿಸಿ ಎದುರಿಸುತ್ತಿರುವ ಮೊಬೈಲ್ ಗ್ರಾಹಕರಿಗೆ ಅಗ್ಗದ ದರಗಳ ಬಿಎಸ್ಸೆನ್ನೆಲ್ ಪರ್ಯಾಯ ಆಯ್ಕೆ ಆಗಿದೆ. ಲಕ್ಷಾಂತರ ಗ್ರಾಹಕರು ಜಿಯೋ, ಏರ್ಟೆಲ್ ತೊರೆದು ಬಿಎಸ್ಸೆನ್ನೆಲ್ ಅಪ್ಪುತ್ತಿದ್ದಾರೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಹಳ ಕ್ಷಿಪ್ರ ವೇಗದಲ್ಲಿ 4ಜಿ ನೆಟ್ವರ್ಕ್ ಅಳವಡಿಸುತ್ತಿದೆ.

ಒಂದು ಲಕ್ಷಕ್ಕೂ ಹೆಚ್ಚು 4ಜಿ ಟವರ್​ಗಳನ್ನು ಸ್ಥಾಪಿಸುವ ಗುರಿ ಇಟ್ಟಿರುವ ಬಿಎಸ್ಸೆನ್ನೆಲ್, ಈಗಾಗಲೇ 50,000 ಟವರ್ ಸ್ಥಾಪಿಸಿದೆ. ಇದರಲ್ಲಿ 41,000 ಟವರ್​ಗಳು ಕಾರ್ಯಾಚರಣೆ ಹಂತ ಪ್ರವೇಶಿಸಿವೆ. ಇದೇ ವೇಳೆ, ಬಿಎಸ್ಸೆನ್ನೆಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವ ಟೆಲಿಕಾಂ ಆಪರೇಟರ್​ಗಳ ಉಪಸ್ಥಿತಿಯೇ ಇಲ್ಲದ ರಿಮೋಟ್ ಸ್ಥಳಗಳನ್ನು ಪ್ರವೇಸಿಸುತ್ತಿದೆ. ಇಂಥ ಪ್ರದೇಶಗಳಲ್ಲಿ 5,000 ಟವರ್​ಗಳನ್ನು ಭಾರತೀಯ ದೂರ ಸಂಚಾರ ನಿಗಮವು ಸ್ಥಾಪಿಸಿದೆ.

ಇದನ್ನೂ ಓದಿ: ರಫ್ತು ಮಾರುಕಟ್ಟೆಯಲ್ಲಿ ಭಾರತದ ವೃದ್ಧಿ; ಪೆಟ್ರೋಲಿಯಂ, ಹರಳು ಇತ್ಯಾದಿ ವಸ್ತುಗಳ ಭರ್ಜರಿ ರಫ್ತು

ಭಾರತದಲ್ಲಿ ಶೇ. 95ರಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಕವರೇಜ್ ಇದೆ. ಇನ್ನುಳಿದ ಶೇ. 5ರಷ್ಟು ಪ್ರದೇಶವನ್ನು ಬಿಎಸ್ಸೆನ್ನೆಲ್ ಟಾರ್ಗೆಟ್ ಮಾಡಿದೆ. ಇದರ ಜೊತೆಗೆ ಅದು ತನ್ನ ಅಗ್ಗದ ರೀಚಾರ್ಜ್ ದರಗಳನ್ನು ಕಡಿಮೆ ಮಾಡುವ ಯಾವ ಯೋಜನೆಯೂ ಹಾಕಿಕೊಂಡಿಲ್ಲ. ಇದು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳಿಗೆ ತಲೆ ನೋವು ತರುವ ಸಂಗತಿ.

ಕಳೆದ ಎರಡು ತಿಂಗಳಲ್ಲಿ ಬಿಎಸ್ಸೆನ್ನೆಲ್ ಸುಮಾರು 55 ಲಕ್ಷ ಹೊಸ ಬಳಕೆದಾರರನ್ನು ಪಡೆದಿದೆ. ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಎನಿಸಿದ ರಿಲಾಯನ್ಸ್ ಜಿಯೋ ಇದೇ ವೇಳೆ 40 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್ಸೆನ್ನೆಲ್​ಗೆ ಸಿಗುತ್ತಿರುವ ಹೊಸ ಗ್ರಾಹಕರಲ್ಲಿ ಹೆಚ್ಚಿನವರು ಜಿಯೋ ಮತ್ತು ಏರ್ಟೆಲ್​ನಿಂದ ವಲಸೆ ಹೋದವರೇ ಆಗಿದ್ದಾರೆ.

ಇದನ್ನೂ ಓದಿ: ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ

ಜಿಯೋ ಮತ್ತು ಏರ್​ಟೆಲ್​ಗೆ ಮತ್ತಷ್ಟು ತಲೆನೋವು ಸಂಗತಿ ಎಂದರೆ ಬಿಎಸ್ಸೆನ್ನೆಲ್​ನ 5ಜಿ ಪ್ಲಾನ್. ಸದ್ಯ ಬಿಎಸ್ಸೆನ್ನೆಲ್ 4ಜಿ ನೆಟ್ವರ್ಕ್ ಅಭಿವೃದ್ಧಿಪಡಿಸುತ್ತಿದೆ. ಜಿಯೋ, ಏರ್ಟೆಲ್ ಮತ್ತು ವಿಐ ಸಂಸ್ಥೆಗಳು 5ಜಿ ಸರ್ವಿಸ್ ಆಫರ್ ಮಾಡುತ್ತಿವೆ. ಅಗಾಧ ವೇಗದ ಇಂಟರ್ನೆಟ್ ಅನ್ನು 5ಜಿ ಒದಗಿಸುತ್ತದೆ. ಹೀಗಾಗಿ, ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಎಣಿಕೆ ಇದೆ. ಆದರೆ, ಬಿಎಸ್ಸೆನ್ನೆಲ್ ಕೂಡ 5ಜಿ ಸರ್ವಿಸ್ ಆರಂಭಿಸಲಿದೆ. ಸ್ಥಳೀಯವಾಗಿ ಅಭಿವೃದ್ಧಿಯಾದ ತಂತ್ರಜ್ಞಾನ ಸಹಾಯದಿಂದ ಬಿಎಸ್ಸೆನ್ನೆಲ್ ತನ್ನ ನೆಟ್ವರ್ಕ್ ಅನ್ನು 5ಜಿಗೆ ಅಪ್​ಗ್ರೇಡ್ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?