AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ ಯೋಜನೆಗೆ ಕೈಜೋಡಿಸಿದ ದಕ್ಷಿಣ ಭಾರತೀಯ ಸಂಸ್ಥೆಗಳು; ಇವುಗಳ ಕೊಡುಗೆ ಏನು, ಇಲ್ಲಿದೆ ವಿವರ

South Indian Companies Role In Chandrayaan-3 Success ಎಚ್​ಎಎಲ್, ಮಿಧಾನಿ ಸೇರಿದಂತೆ ದಕ್ಷಿಣ ಭಾರತದ ಕೆಲ ಸಂಸ್ಥೆಗಳು ಚಂದ್ರಯಾನ ಯೋಜನೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ಹೊಂದಿವೆ. ರಾಕೆಟ್ ನಿರ್ಮಾಣದಿಂದ ಹಿಡಿದು ಪ್ರಮುಖ ಬಿಡಿಭಾಗಗಳನ್ನು ಈ ಸಂಸ್ಥೆಗಳು ಇಸ್ರೋಗೆ ಪೂರೈಕೆ ಮಾಡಿವೆ.

ಚಂದ್ರಯಾನ ಯೋಜನೆಗೆ ಕೈಜೋಡಿಸಿದ ದಕ್ಷಿಣ ಭಾರತೀಯ ಸಂಸ್ಥೆಗಳು; ಇವುಗಳ ಕೊಡುಗೆ ಏನು, ಇಲ್ಲಿದೆ ವಿವರ
ಚಂದ್ರಯಾನ-3 ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 23, 2023 | 7:19 PM

ಬೆಂಗಳೂರು, ಆಗಸ್ಟ್ 23: ಇಸ್ರೋ ನಿರ್ಮಿಸಿ ಕಳುಹಿಸಿದ ಚಂದ್ರಯಾನ-3 (Chandrayaan) ನೌಕೆ ಚಂದ್ರನ ದಕ್ಷಿಣ ಧ್ರುವದ ನೆಲದ ಮೇಲೆ ಯಶಸ್ವಿಯಾಗಿ ಇಳಿದಿದೆ. ಭಾರತದಿಂದ ಅನ್ಯಗ್ರಹದ ಮೇಲೆ ನೌಕೆ ಇಳಿಸಲಾಗಿದ್ದು ಇದೇ ಮೊದಲು. ಚಂದ್ರನ ದಕ್ಷಿಣ ಧ್ರುವದಲ್ಲಿ (Lunar South Pole) ನೌಕೆ ಇಳಿಸಿದ ಮೊದಲ ದೇಶ ಭಾರತ. ಬಹಳ ಕಡಿಮೆ ಬಜೆಟ್​ನಲ್ಲಿ ನಿರ್ಮಾಣಗೊಂಡು ಸುದೀರ್ಘ 41 ದಿನಗಳ ಕಾಲ ಆಗಸದಲ್ಲಿ ಪ್ರಯಾಣಿಸಿ ಚಂದ್ರನನ್ನು ಸ್ಪರ್ಧಿಸಿದೆ ಭಾರತದ ನೌಕೆ. ಈ ಮಹತ್ವದ ಸಾಧನೆಗೆ ಇಸ್ರೋ ಜೊತೆ ಹಲವು ಸಂಸ್ಥೆಗಳ ಸಹಕಾರ ಮತ್ತು ಕೊಡುಗೆ ಇದೆ. ಅದರಲ್ಲೂ ದಕ್ಷಿಣ ಭಾರತದ ಕೆಲ ಸಂಸ್ಥೆಗಳು ಚಂದ್ರಯಾನ ಯೋಜನೆಗೆ ಮಹತ್ವದ ಕೊಡುಗೆ ನೀಡಿವೆ.

ಎಚ್​ಎಎಲ್​ನಿಂದ ಪಿಎಸ್​ಎಲ್​ವಿ ರಾಕೆಟ್ ನಿರ್ಮಾಣ

1940ರಲ್ಲಿ ಶುರುವಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಎಚ್​ಎಎಲ್) ಸಂಸ್ಥೆ ಚಂದ್ರಯಾನ-3 ಯೋಜನೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಯುದ್ಧವಿಮಾನಗಳನ್ನು ತಯಾರಿಸುವಲ್ಲಿ ಕೌಶಲ್ಯ ಹೊಂದಿರುವ ಎಚ್​ಎಎಲ್ ಸಂಸ್ಥೆ ಚಂದ್ರಯಾನ ನೌಕೆಯನ್ನು ಹೊತ್ತುಹೋದ ಪಿಎಸ್​ಎಲ್​ವಿ ರಾಕೆಟ್ ನಿರ್ಮಾಣದ ಪಾತ್ರ ಹೊಂದಿದೆ. ಎಂಜಿನಿಯರಿಂಗ್ ಸಂಸ್ಥೆ ಎಲ್ ಅಂಡ್ ಟಿ ಜೊತೆ ಸೇರಿ ಎಚ್​ಎಎಲ್ ಸಂಸ್ಥೆ ಪಿಎಸ್​ಎಲ್​ವಿ ರಾಕೆಟ್​ಗಳನ್ನು ತಯಾರಿಸುತ್ತದೆ.

ಇದನ್ನೂ ಓದಿ: ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು

ಸೆಂಟಮ್ ಎಲೆಕ್ಟ್ರಾನಿಕ್ಸ್​ನಿಂದ 300ಕ್ಕೂ ಹೆಚ್ಚು ಬಿಡಿಭಾಗಗಳ ಸರಬರಾಜು

ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಚಂದ್ರಯಾನ-3 ಯೋಜನೆಗೆ 300ಕ್ಕೂ ಹೆಚ್ಚು ಪ್ರಮುಖ ಬಿಡಿಭಾಗಗಳನ್ನು ಸರಬರಾಜು ಮಾಡಿದೆ. 1994ರಲ್ಲಿ ಸ್ಥಾಪನೆಯಾದ ಸೆಂಟಮ್ ಎಲೆಕ್ಟ್ರಾನಿಕ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ ಮತ್ತು ಸಬ್​ಸಿಸ್ಟಂನಗಳ ಡಿಸೈನ್ ಮತ್ತು ತಯಾರಿಕಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದೆ.

ಮಿಧಾನಿಯಿಂದ ಟೈಟೇನಿಯಮ್ ಅಲಾಯ್

ಮಿಧಾನಿ (Midhani) ಎಂದೇ ಪರಿಚಿತವಾಗಿರುವ ಹೈದರಾಬಾದ್​ನ ಮಿಶ್ರಾ ಧಾತು ನಿಗಮ್ ಲಿ ಸಂಸ್ಥೆ ಚಂದ್ರಯಾನದ ಲ್ಯಾಂಡರ್ ಮತ್ತು ರೋವರ್ ತಯಾರಿಕೆಗೆ ಟೈಟೇನಿಯಮ್ ಅಲಾಯ್​ಗಳನ್ನು ಪೂರೈಸಿದೆ. ಚಂದ್ರಯಾನದ ವೇಳೆ ಎದುರಾಗುವ ಹವಾಮಾನ ವೈಪರೀತ್ಯಗಳನ್ನು ತಾಳಿಕೊಳ್ಳಲು ಈ ಟೈಟೇನಿಯಮ್ ಲೋಹಗಳು ಬಹಳ ಮುಖ್ಯ.

ಇದನ್ನೂ ಓದಿ: Chandrayaan-3: ಯೂಟ್ಯೂಬ್​ನಲ್ಲಿ ದಾಖಲೆ ಧೂಳೀಪಟ; ಇಲ್ಲಿದೆ ಅತಿಹೆಚ್ಚು ನೇರ ವೀಕ್ಷಣೆ ಕಂಡ ಘಟನೆಗಳ ಪಟ್ಟಿ; ಚಂದ್ರಯಾನ ಯಶಸ್ಸು ಕಂಡು ರೋಮಾಂಚಿತಗೊಂಡ ವೀಕ್ಷಕರು

ಎಂಟಿಎಆರ್ ಟೆಕ್ನಾಲಜೀಸ್

ಹೈದರಾಬಾದ್​ನ ಎಂಟಿಎಆರ್ ಟೆಕ್ನಾಲಜೀಸ್ ಸಂಸ್ಥೆ ಪ್ರಿಸಿಶನ್ ಎಂಜಿನಿಯರಿಂಗ್​ನಲ್ಲಿ ನಿಷ್ಣಾತಿ ಹೊಂದಿದೆ. ಚಂದ್ರಯಾನ ಯೋಜನೆಗೆ ಬೇಕಾದ ಕೆಲ ಪ್ರಮುಖ ಭಾಗಗಳನ್ನು ಎಂಟಿಎಆರ್ ತಯಾರಿಸಿ ಕೊಟ್ಟಿದೆ.

ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಹಲವು ಕಂಪನಿಗಳು ಇಸ್ರೋದ ಚಂದ್ರಯಾನಕ್ಕೆ ಕೊಡುಗೆ ನೀಡಿವೆ. ಇದರೊಂದಿಗೆ ಭಾರತದಲ್ಲಿ ಆರೋಗ್ಯಯುತವಾದ ಬಾಹ್ಯಾಕಾಶ ಯೋಜನೆಗಳ ಪರಿಸರ ನಿರ್ಮಾಣವಾದಂತಾಗಿದೆ. ಈಗಾಗಲೇ ಬಹಳಷ್ಟು ಖಾಸಗಿ ಕಂಪನಿಗಳು ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ