AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಾಯನ್ಸ್​ನ ಜೆಎಫ್​ಎಸ್ ಷೇರುಬೆಲೆ ಕುಸಿಯುತ್ತಿದ್ದುದು ಯಾಕೆ? ಷೇರುಸೂಚಿಗಳಿಂದ ಹೊರಬೀಳುವುದು ಜಿಯೋಗೆ ಅನುಕೂಲವಾ? ಪ್ರೈಸ್​ಬ್ಯಾಂಡ್ ಬದಲಿಸಿದ್ದು ಯಾಕೆ? ಇಲ್ಲಿದೆ ಡೀಟೇಲ್ಸ್

Jio Financial Services: ರಿಲಾಯನ್ಸ್ ಇಂಡಸ್ಟ್ರೀಸ್​ನ ಜೆಎಫ್​ಎಸ್ ಅನ್ನು ಎಲ್ಲಾ ಷೇರು ಇಂಡೆಕ್ಸ್​ಗಳಿಂದ ಹೊರತೆಗೆಯಲಾಗುತ್ತಿದೆ. ಇಂಡೆಕ್ಸ್ ಫಂಡ್​ಗಳು ತಮ್ಮಲ್ಲಿರುವ ಎಲ್ಲಾ ಜೆಎಫ್​ಎಸ್ ಷೇರುಗಳನ್ನು ಮಾರಲಿವೆ. ಇದೇ ವೇಳೆ, ಜೆಎಫ್​ಎಸ್ ಮೇಲಿನ ಪ್ರೈಸ್ ಬ್ಯಾಂಡ್ ಅನ್ನು ಶೇ. 20ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಅದರ ಷೇರುಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ.

ರಿಲಾಯನ್ಸ್​ನ ಜೆಎಫ್​ಎಸ್ ಷೇರುಬೆಲೆ ಕುಸಿಯುತ್ತಿದ್ದುದು ಯಾಕೆ? ಷೇರುಸೂಚಿಗಳಿಂದ ಹೊರಬೀಳುವುದು ಜಿಯೋಗೆ ಅನುಕೂಲವಾ? ಪ್ರೈಸ್​ಬ್ಯಾಂಡ್ ಬದಲಿಸಿದ್ದು ಯಾಕೆ? ಇಲ್ಲಿದೆ ಡೀಟೇಲ್ಸ್
ಜಿಯೋ ಫೈನಾನ್ಷಿಯಲ್ ಸರ್ವಿಸಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 04, 2023 | 12:21 PM

Share

ನವದೆಹಲಿ, ಸೆಪ್ಟೆಂಬರ್ 4: ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಪ್ರತ್ಯೇಕಗೊಂಡಿರುವ ಜಿಯೋ ಫೈನಾನ್ಷಿಯಲ್ ಸರ್ವಿಸಸ್ (JFS- Jio Financial Services) ಷೇರುಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಬಿಎಸ್​ಇ ಮತ್ತು ಎನ್​ಎಸ್​ಇಯ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಎಲ್ಲಾ ಸೂಚ್ಯಂಕಗಳಿಂದ ಜೆಎಫ್​ಎಸ್ ಷೇರನ್ನು ಹೊರತೆಗೆಯಲಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ. ಇದೀಗ ಎರಡೂ ಷೇರುವಿನಿಮಯ ಕೇಂದ್ರಗಳಲ್ಲಿ ಜಿಯೋ ಷೇರಿಗೆ ವಹಿವಾಟು ಮಿತಿ (Circuit Limit) ಬದಲಿಸಲಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (NSE) ಜೆಎಫ್​ಎಸ್​ನ ಪ್ರೈಸ್ ಬ್ಯಾಂಡ್ ಅನ್ನು ಶೇ. 5ರಿಂದ ಶೇ. 20ಕ್ಕೆ ಹೆಚ್ಚಿಸಿದೆ. ಹಾಗೆಯೇ, ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್ (BSE) ಕೂಡ ಜೆಎಫ್​ಎಸ್​ನ ಪ್ರೈಸ್ ಬ್ಯಾಂಡ್ ಅನ್ನು ಶೇ. 20ಕ್ಕೆ ಹೆಚ್ಚಿಸಿದೆ. ಜೆಎಫ್​ಎಸ್ ಸೇರಿದಂತೆ 10 ಕಂಪನಿಗಳ ಷೇರುಗಳ ಸರ್ಕ್ಯುಟ್ ಲಿಮಿಟ್ ಅನ್ನು ಬಿಎಸ್​ಇ ಬದಲಾಯಿಸಿದೆ.

ಏನಿದು ಸರ್ಕ್ಯುಟ್ ಲಿಮಿಟ್ ಅಥವಾ ಪ್ರೈಸ್ ಬ್ಯಾಂಡ್?

ಒಂದು ಷೇರು ಒಮ್ಮೆಗೇ ದೊಡ್ಡ ಮಟ್ಟದಲ್ಲಿ ಏರಿಳಿತ ಕಾಣುವುದನ್ನು ತಪ್ಪಿಸಲು ಸ್ಟಾಕ್ ಎಕ್ಸ್​ಚೇಂಜ್​ಗಳು ಕೈಗೊಳ್ಳುವ ಕ್ರಮ. ಈಗ ಒಂದು ಷೇರಿನ ಸರ್ಕ್ಯುಟ್ ಲಿಮಿಟ್ ಶೇ. 5 ಎಂದು ನಿಗದಿ ಮಾಡಲಾಗಿದೆ ಎಂದಿಟ್ಟುಕೊಳ್ಳಿ. ಈ ಷೇರುಬೆಲೆ ಒಂದು ದಿನದಲ್ಲಿ ಶೇ. 5ಕ್ಕಿಂತ ಹೆಚ್ಚಾಗುವಂತಿಲ್ಲ, ಅಥವಾ ಇಳಿಕೆಯಾಗುವಂತಿಲ್ಲ.

ಇದನ್ನೂ ಓದಿ: ಅಮೆರಿಕದ ಏವಾ ಫಾರ್ಮಾ ಕಂಪನಿಯ ಮಾತ್ರೆ ತಯಾರಕಾ ಘಟಕ ಖರೀದಿಸಿದ ಬೆಂಗಳೂರಿನ ಬಯೋಕಾನ್

ಹೂಡಿಕೆದಾರರ ಹಿತ ಕಾಪಾಡಲು ಇಂಥ ಕ್ರಮಗಳನ್ನು ಅನುಸರಿಸಲಾಗುತ್ತದೆ. ಒಂದು ಷೇರು ಸರ್ಕ್ಯುಟ್ ಲಿಮಿಟ್​ನ ಹತ್ತಿರಕ್ಕೆ ಹೋದರೆ ಹೂಡಿಕೆದಾರರು ತಮ್ಮಲಿರುವ ಷೇರುಗಳನ್ನು ಮಾರಲೋ ಅಥವಾ ಹೊಸ ಷೇರುಗಳನ್ನು ಖರೀದಿಸಲೋ ಮುಂದಾಗಬಹುದು.

ಜೆಎಫ್​ಎಸ್ ಷೇರುಬೆಲೆ ಯಾಕೆ ಕಡಿಮೆ ಆಗುತ್ತಿತ್ತು?

ಜಿಯೋ ಫೈನಾನ್ಷಿಯಲ್ ಸರ್ವಿಸಸ್​ನ ಷೇರುಬೆಲೆ ಎನ್​ಎಸ್​ಇ ಮತ್ತು ಬಿಎಸ್​ಇಗಳಲ್ಲಿ ಕುಸಿಯುತ್ತಿರುವುದು ಕೆಲವರಿಗೆ ಅಚ್ಚರಿ ಮೂಡಿಸಿರಬಹುದು. ರಿಲಾಯನ್ಸ್ ಇಂಡಸ್ಟ್ರೀಸ್​ನ ಅಂಗ ಸಂಸ್ಥೆಯಾದ್ದರಿಂದ ಜೆಎಫ್​ಎಸ್ ಅನ್ನು ಸ್ಟಾಕ್ ಎಕ್ಸ್​ಚೇಂಜ್​ಗಳ ವಿವಿಧ ಸೂಚ್ಯಂಕಗಳಲ್ಲಿ ಒಳಗೊಳ್ಳಲಾಗಿತ್ತು. ಇದರಿಂದಾಗಿ ಎಲ್ಲಾ ಇಂಡೆಕ್ಸ್ ಫಂಡ್​ಗಳೂ ಜೆಎಫ್​ಎಸ್ ಮೇಲೆ ಹೂಡಿಕೆ ಮಾಡಿದವು. ಆದರೆ, ಯಾವಾಗ ಜೆಎಫ್​ಎಸ್ ಅನ್ನು ವಿವಿಧ ಇಂಡೆಕ್ಸ್​ಗಳಿಂದ ಹೊರತೆಗೆಯಬೇಕೆಂದು ನಿರ್ಧರಿಸಲಾಯಿತೋ ಆಗ ಇಂಡೆಕ್ಸ್ ಫಂಡ್​ಗಳು ಜೆಎಫ್​ಎಸ್ ಮೇಲಿನ ಹೂಡಿಕೆಯನ್ನು ಹಿಂಪಡೆಯುವುದು ಅನಿವಾರ್ಯವಾಯಿತು.

ಇದರಿಂದಾಗಿ ಜೆಎಫ್​ಎಸ್ ಷೇರುಬೆಲೆ ಪ್ರತೀ ದಿನ ಶೇ. 5ರಷ್ಟು ಇಳಿಕೆಯಾಯಿತು. ಶೇ. 5ರಷ್ಟು ಇಳಿಕೆ ಯಾಕೆಂದರೆ ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಇದರ ಸರ್ಕ್ಯುಟ್ ಲಿಮಿಟ್ ಅನ್ನು ಶೇ. 5ಕ್ಕೆ ನಿಗದಿ ಮಾಡಲಾಗಿತ್ತು.

ಇದನ್ನೂ ಓದಿ: ಸಿಂಗಾಪುರದ ನೂತನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ ಭಾರತದ ಆರ್ಥಿಕ ಬಲಾಬಲದ ಬಗ್ಗೆ ಹೇಳಿದ ಕುತೂಹಲಕಾರಿ ಸಂಗತಿಗಳು

ಬಿಎಸ್​ಇನ ಇಂಡೆಕ್ಸ್ ಫಂಡ್​ಗಳು ಈಗಾಗಲೇ ಎಲ್ಲಾ ಜೆಎಫ್​ಎಸ್ ಷೇರುಗಳನ್ನು ಬಿಕರಿ ಮಾಡಿವೆ. ಎನ್​ಎಸ್​ಇನಲ್ಲಿ 10 ಕೋಟಿ ಷೇರುಗಳನ್ನು ಇವತ್ತು ಅಥವಾ ನಾಳೆಯೊಳಗೆ ಮಾರುವ ಸಾಧ್ಯತೆ ಇದೆ.

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಆಗಸ್ಟ್ 21ರಂದು 265 ರೂ ಬೆಲೆಯೊಂದಿಗೆ ಷೇರುಪೇಟೆಗಳಲ್ಲಿ ಲಿಸ್ಟ್ ಆಗಿತ್ತು. ಆಗಸ್ಟ್ 25ರಷ್ಟರಲ್ಲಿ ಅದರ ಷೇರುಬೆಲೆ 214.50 ರುಪಾಯಿಗೆ ಕುಸಿದಿತು. ಆ ಬಳಿಕ ಎನ್​ಎಸ್​ಇ ಮತ್ತು ಬಿಎಸ್​ಇ ಎರಡೂ ಕಡೆ ಜೆಎಫ್​ಎಸ್ ಷೇರಿಗೆ ಬೇಡಿಕೆ ಬಂದಿದೆ. ಈಗ ಸರ್ಕ್ಯುಟ್ ಲಿಮಿಟ್ ಅನ್ನು ಶೇ. 20ರಷ್ಟು ಹೆಚ್ಚಿಸಿರುವುದು ಜೆಎಫ್​ಎಸ್ ಷೇರು ಖರೀದಿಸುವವರಿಗೆ ಒಳ್ಳೆಯ ಅನುಕೂಲ ಮಾಡಿಕೊಟ್ಟಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Mon, 4 September 23

Follow Us
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!