AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Go First: ಗೋಫಸ್ಟ್ ವಿರುದ್ಧ ತಿರುಗಿಬಿದ್ದ ಡೆಲಿವೆರಿ; ನ್ಯಾಯಮಂಡಳಿಯಿಂದ ಐಆರ್​ಪಿಗೆ ನೋಟೀಸ್ ಜಾರಿ

Delhivery Allegations Against Go First: ಗೋಫಸ್ಟ್ ಏರ್​ಲೈನ್ಸ್ ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಬರೇ ನಾಟಕ. ಅಂದು ಇನ್ಸಾಲ್ವೆನ್ಸಿಗೆ ಮೊರೆ ಹೋಗುವ ದಿನವೇ ತನ್ನಿಂದ ಹಣ ಪಡೆದಿತ್ತು. ದುರುದ್ದೇಶಪೂರ್ವಕವಾಗಿ ತನ್ನಿಂದ ಹಣ ಪಡೆದಿದೆ ಎಂದು ಡೆಲಿವರಿ ಸಂಸ್ಥೆ ಆರೋಪ ಮಾಡಿದೆ.

Go First: ಗೋಫಸ್ಟ್ ವಿರುದ್ಧ ತಿರುಗಿಬಿದ್ದ ಡೆಲಿವೆರಿ; ನ್ಯಾಯಮಂಡಳಿಯಿಂದ ಐಆರ್​ಪಿಗೆ ನೋಟೀಸ್ ಜಾರಿ
ಗೋಫಸ್ಟ್ ಏರ್​ಲೈನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2023 | 12:16 PM

Share

ನವದೆಹಲಿ: ಸಾಲ ಬಿಕ್ಕಟ್ಟು ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಗೋ ಫಸ್ಟ್ ಏರ್​ಲೈನ್ಸ್ ವಿರುದ್ಧ ಸಪ್ಲೈ ಚೈನ್ ಆಪರೇಟಿಂಗ್ ಕಂಪನಿ ಡೆಲಿವೆರಿ (Delhivery) ವಂಚನೆ ದೂರು ದಾಖಲಿಸಿದೆ. ಈ ದೂರಿನ ಮೇರೆಗೆ ಈ ಪ್ರಕರಣದಲ್ಲಿ ಗೋ ಫಸ್ಟ್ (Go First Airlines) ಪರವಾಗಿ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಐಆರ್​ಪಿ ಅಭಿಷೇಕ್ ಲಾಲ್ ಅವರಿಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ನೋಟೀಸ್ ನೋಡಿದೆ. ಕರ್ನಾಟಕ ಮೂಲದ ಅಭಿಷೇಕ್ ಲಾಲ್ ಈ ಆರೋಪದ ಬಗ್ಗೆ ಎರಡು ವಾರದಲ್ಲಿ ಉತ್ತರಿಸಬೇಕಾಗಿದೆ.

ಗೋಫಸ್ಟ್ ಏರ್​ಲೈನ್ಸ್ ವಿರುದ್ಧ ಡೆಲಿವೆರಿ ಆರೋಪ ಏನು?

ಗೋಫಸ್ಟ್ ಏರ್​ಲೈನ್ಸ್ ತನ್ನ ಹಣಕಾಸು ಬಿಕ್ಕಟ್ಟು ಪರಿಹಾರಕ್ಕಾಗಿ ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಬರೇ ನಾಟಕ. ಅಂದು ಇನ್ಸಾಲ್ವೆನ್ಸಿಗೆ ಮೊರೆ ಹೋಗುವ ದಿನವೇ ತನ್ನಿಂದ ಹಣ ಪಡೆಯಲಾಗಿತ್ತು. ದುರುದ್ದೇಶಪೂರ್ವಕವಾಗಿ ತನ್ನಿಂದ ಹಣ ಪಡೆದಿದೆ ಎಂದು ಸರಕು ಸರಬರಾಜು ಸಂಸ್ಥೆಯಾದ ಡೆಲಿವರಿಯ ಆರೋಪ.

ನ್ಯಾಯಮಂಡಳಿಗೆ ಇನ್ಸಾಲ್ವೆನ್ಸಿ ಅರ್ಜಿ ಸಲ್ಲಿಸುವ ಮುನ್ನ ಸರಕು ವಸ್ತುಗಳನ್ನು ಕಾರ್ಗೊ ವಿಮಾನದಲ್ಲಿ ಸಾಗಿಸುವ ಸಂಬಂಧ ಗೋಫಸ್ಟ್ ತನ್ನಿಂದ ಸುಮಾರು 1.58 ಕೋಟಿ ರೂ ಹಣ ಪಡೆದಿತ್ತು. ಆದರೆ, ಯಾವ ಸರಕನ್ನೂ ಸಾಗಿಸಿಲ್ಲ. ಗೋಫಸ್ಟ್ ಮೇ 2ರಂದು ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತ್ತು. ಅದೇ ದಿನ ಅರ್ಜಿಗೆ ಮುನ್ನ ತನ್ನಿಂದ 57 ಲಕ್ಷ ರೂ ಪಡೆದಿತ್ತು ಎಂದು ಡೆಲಿವರಿ ತನ್ನ ದೂರಿನಲ್ಲಿ ಆರೋಪ ಮಾಡಿದೆ.

ಇದನ್ನೂ ಓದಿED Raid: ಎಸ್​ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್​ಫ್ರಾ ಕಂಪನಿ ಮೇಲೆ ಇಡಿ ರೇಡ್

ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್​ನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಇಬ್ಬರು ನ್ಯಾಯಾಧೀಶರಿರುವ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇನ್ಸಾಲ್ವೆನ್ಸಿ ಸಮಸ್ಯೆಗೆ ಪರಿಹಾರ ಹುಡುಕಲು ಗೋಫಸ್ಟ್ ಪರವಾಗಿ ಐಆರ್​ಪಿಯಾಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಲಾಲ್ ಅವರಿಗೆ ನೋಟೀಸ್ ಕೊಡಲಾಗಿದೆ. ಜುಲೈ 24ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

1 ಕೋಟಿ ರೂವರೆಗೂ ದಂಡ ಸಾಧ್ಯತೆ

ದುರುದ್ದೇಶಪೂರ್ವಕವಾಗಿ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿರುವುದು ಸಾಬೀತಾದರೆ ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್ (ಐಬಿಸಿ) ಕಾಯ್ದೆಯ ಸೆಕ್ಷನ್ 65ರ ಅಡಿಯಲ್ಲಿ 1 ಲಕ್ಷದಿಂದ 1 ಕೋಟಿ ರೂವರೆಗೆ ದಂಡ ವಿಧಿಸಲಾಗುವ ಅವಕಾಶ ಇದೆ.

ಇದನ್ನೂ ಓದಿChatGPT Maker With Modi: ಮೋದಿ ಭೇಟಿ ಮಾಡಿದ ಆಲ್ಟ್​​ಮ್ಯಾನ್; ಪ್ರಧಾನಿಗಳ ಉತ್ತರಕ್ಕೆ ಖುಷಿಗೊಂಡರಾ ಎಐ ಟ್ರೆಂಡ್​ಸೆಟ್ಟರ್?

ಗೋಫಸ್ಟ್ ಸಂಸ್ಥೆ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಲು ಏನು ಕಾರಣ?

ಗೋಫಸ್ಟ್ ಏರ್​ಲೈನ್ಸ್ ಸಂಸ್ಥೆಯ ಅರ್ಧದಷ್ಟು ವಿಮಾನಗಳು ತಾಂತ್ರಿಕ ತೊಂದರೆಯಿಂದಾಗಿ ಹಾರಾಟವಾಗದೇ ನಿಂತಿದ್ದವು. ಇದರಿಂದ ತನ್ನ ಆದಾಯ ನಿಂತುಹೋಗಿ ಸಾಲ ಮರುಪಾವತಿಯೂ ಸಾಧ್ಯವಾಗುತ್ತಿಲ್ಲ. ತನ್ನ ಸಾಲದ ಮರುರಚನೆ ಮಾಡಲಾಗುವಂತೆ ಗೋಫಸ್ಟ್ ಅರ್ಜಿ ಹಾಕಿತ್ತು.

ಗೋಫಸ್ಟ್ ಒಟ್ಟು 11,463 ಕೋಟಿ ರೂ ಸಾಲ ಹೊಂದಿರುವುದು ತಿಳಿದುಬಂದಿದೆ. ಇದರಲ್ಲಿ ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್ ಮತ್ತು ಡ್ಯೂಷೆ ಬ್ಯಾಂಕುಗಳಿಗೆ 6,521 ರೂ ಕೊಡಬೇಕು ಎಂದು ಗೋಫಸ್ಟ್ ತನ್ನ ಇನ್ಸಾಲ್ವೆನ್ಸಿ ಫೈಲಿಂಗ್ ವೇಳೆ ತಿಳಿಸಿದೆ. ಗೋ ಫಸ್ಟ್ ಏರ್​ಲೈನ್ಸ್​ಗೆ ವಿಮಾನಗಳನ್ನು ಗುತ್ತಿಗೆಗೆ ಕೊಟ್ಟಿರುವ ಸಂಸ್ಥೆಗಳು ಇದೀಗ ವಿಮಾನ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸುತ್ತಿವೆ. ಇದನ್ನು ಗೋಫಸ್ಟ್ ವಿರೋಧಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ