AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Go First: ಗೋಫಸ್ಟ್ ವಿರುದ್ಧ ತಿರುಗಿಬಿದ್ದ ಡೆಲಿವೆರಿ; ನ್ಯಾಯಮಂಡಳಿಯಿಂದ ಐಆರ್​ಪಿಗೆ ನೋಟೀಸ್ ಜಾರಿ

Delhivery Allegations Against Go First: ಗೋಫಸ್ಟ್ ಏರ್​ಲೈನ್ಸ್ ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಬರೇ ನಾಟಕ. ಅಂದು ಇನ್ಸಾಲ್ವೆನ್ಸಿಗೆ ಮೊರೆ ಹೋಗುವ ದಿನವೇ ತನ್ನಿಂದ ಹಣ ಪಡೆದಿತ್ತು. ದುರುದ್ದೇಶಪೂರ್ವಕವಾಗಿ ತನ್ನಿಂದ ಹಣ ಪಡೆದಿದೆ ಎಂದು ಡೆಲಿವರಿ ಸಂಸ್ಥೆ ಆರೋಪ ಮಾಡಿದೆ.

Go First: ಗೋಫಸ್ಟ್ ವಿರುದ್ಧ ತಿರುಗಿಬಿದ್ದ ಡೆಲಿವೆರಿ; ನ್ಯಾಯಮಂಡಳಿಯಿಂದ ಐಆರ್​ಪಿಗೆ ನೋಟೀಸ್ ಜಾರಿ
ಗೋಫಸ್ಟ್ ಏರ್​ಲೈನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2023 | 12:16 PM

Share

ನವದೆಹಲಿ: ಸಾಲ ಬಿಕ್ಕಟ್ಟು ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಗೋ ಫಸ್ಟ್ ಏರ್​ಲೈನ್ಸ್ ವಿರುದ್ಧ ಸಪ್ಲೈ ಚೈನ್ ಆಪರೇಟಿಂಗ್ ಕಂಪನಿ ಡೆಲಿವೆರಿ (Delhivery) ವಂಚನೆ ದೂರು ದಾಖಲಿಸಿದೆ. ಈ ದೂರಿನ ಮೇರೆಗೆ ಈ ಪ್ರಕರಣದಲ್ಲಿ ಗೋ ಫಸ್ಟ್ (Go First Airlines) ಪರವಾಗಿ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಐಆರ್​ಪಿ ಅಭಿಷೇಕ್ ಲಾಲ್ ಅವರಿಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ನೋಟೀಸ್ ನೋಡಿದೆ. ಕರ್ನಾಟಕ ಮೂಲದ ಅಭಿಷೇಕ್ ಲಾಲ್ ಈ ಆರೋಪದ ಬಗ್ಗೆ ಎರಡು ವಾರದಲ್ಲಿ ಉತ್ತರಿಸಬೇಕಾಗಿದೆ.

ಗೋಫಸ್ಟ್ ಏರ್​ಲೈನ್ಸ್ ವಿರುದ್ಧ ಡೆಲಿವೆರಿ ಆರೋಪ ಏನು?

ಗೋಫಸ್ಟ್ ಏರ್​ಲೈನ್ಸ್ ತನ್ನ ಹಣಕಾಸು ಬಿಕ್ಕಟ್ಟು ಪರಿಹಾರಕ್ಕಾಗಿ ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಬರೇ ನಾಟಕ. ಅಂದು ಇನ್ಸಾಲ್ವೆನ್ಸಿಗೆ ಮೊರೆ ಹೋಗುವ ದಿನವೇ ತನ್ನಿಂದ ಹಣ ಪಡೆಯಲಾಗಿತ್ತು. ದುರುದ್ದೇಶಪೂರ್ವಕವಾಗಿ ತನ್ನಿಂದ ಹಣ ಪಡೆದಿದೆ ಎಂದು ಸರಕು ಸರಬರಾಜು ಸಂಸ್ಥೆಯಾದ ಡೆಲಿವರಿಯ ಆರೋಪ.

ನ್ಯಾಯಮಂಡಳಿಗೆ ಇನ್ಸಾಲ್ವೆನ್ಸಿ ಅರ್ಜಿ ಸಲ್ಲಿಸುವ ಮುನ್ನ ಸರಕು ವಸ್ತುಗಳನ್ನು ಕಾರ್ಗೊ ವಿಮಾನದಲ್ಲಿ ಸಾಗಿಸುವ ಸಂಬಂಧ ಗೋಫಸ್ಟ್ ತನ್ನಿಂದ ಸುಮಾರು 1.58 ಕೋಟಿ ರೂ ಹಣ ಪಡೆದಿತ್ತು. ಆದರೆ, ಯಾವ ಸರಕನ್ನೂ ಸಾಗಿಸಿಲ್ಲ. ಗೋಫಸ್ಟ್ ಮೇ 2ರಂದು ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತ್ತು. ಅದೇ ದಿನ ಅರ್ಜಿಗೆ ಮುನ್ನ ತನ್ನಿಂದ 57 ಲಕ್ಷ ರೂ ಪಡೆದಿತ್ತು ಎಂದು ಡೆಲಿವರಿ ತನ್ನ ದೂರಿನಲ್ಲಿ ಆರೋಪ ಮಾಡಿದೆ.

ಇದನ್ನೂ ಓದಿED Raid: ಎಸ್​ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್​ಫ್ರಾ ಕಂಪನಿ ಮೇಲೆ ಇಡಿ ರೇಡ್

ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್​ನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಇಬ್ಬರು ನ್ಯಾಯಾಧೀಶರಿರುವ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇನ್ಸಾಲ್ವೆನ್ಸಿ ಸಮಸ್ಯೆಗೆ ಪರಿಹಾರ ಹುಡುಕಲು ಗೋಫಸ್ಟ್ ಪರವಾಗಿ ಐಆರ್​ಪಿಯಾಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಲಾಲ್ ಅವರಿಗೆ ನೋಟೀಸ್ ಕೊಡಲಾಗಿದೆ. ಜುಲೈ 24ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

1 ಕೋಟಿ ರೂವರೆಗೂ ದಂಡ ಸಾಧ್ಯತೆ

ದುರುದ್ದೇಶಪೂರ್ವಕವಾಗಿ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿರುವುದು ಸಾಬೀತಾದರೆ ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್ (ಐಬಿಸಿ) ಕಾಯ್ದೆಯ ಸೆಕ್ಷನ್ 65ರ ಅಡಿಯಲ್ಲಿ 1 ಲಕ್ಷದಿಂದ 1 ಕೋಟಿ ರೂವರೆಗೆ ದಂಡ ವಿಧಿಸಲಾಗುವ ಅವಕಾಶ ಇದೆ.

ಇದನ್ನೂ ಓದಿChatGPT Maker With Modi: ಮೋದಿ ಭೇಟಿ ಮಾಡಿದ ಆಲ್ಟ್​​ಮ್ಯಾನ್; ಪ್ರಧಾನಿಗಳ ಉತ್ತರಕ್ಕೆ ಖುಷಿಗೊಂಡರಾ ಎಐ ಟ್ರೆಂಡ್​ಸೆಟ್ಟರ್?

ಗೋಫಸ್ಟ್ ಸಂಸ್ಥೆ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಲು ಏನು ಕಾರಣ?

ಗೋಫಸ್ಟ್ ಏರ್​ಲೈನ್ಸ್ ಸಂಸ್ಥೆಯ ಅರ್ಧದಷ್ಟು ವಿಮಾನಗಳು ತಾಂತ್ರಿಕ ತೊಂದರೆಯಿಂದಾಗಿ ಹಾರಾಟವಾಗದೇ ನಿಂತಿದ್ದವು. ಇದರಿಂದ ತನ್ನ ಆದಾಯ ನಿಂತುಹೋಗಿ ಸಾಲ ಮರುಪಾವತಿಯೂ ಸಾಧ್ಯವಾಗುತ್ತಿಲ್ಲ. ತನ್ನ ಸಾಲದ ಮರುರಚನೆ ಮಾಡಲಾಗುವಂತೆ ಗೋಫಸ್ಟ್ ಅರ್ಜಿ ಹಾಕಿತ್ತು.

ಗೋಫಸ್ಟ್ ಒಟ್ಟು 11,463 ಕೋಟಿ ರೂ ಸಾಲ ಹೊಂದಿರುವುದು ತಿಳಿದುಬಂದಿದೆ. ಇದರಲ್ಲಿ ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್ ಮತ್ತು ಡ್ಯೂಷೆ ಬ್ಯಾಂಕುಗಳಿಗೆ 6,521 ರೂ ಕೊಡಬೇಕು ಎಂದು ಗೋಫಸ್ಟ್ ತನ್ನ ಇನ್ಸಾಲ್ವೆನ್ಸಿ ಫೈಲಿಂಗ್ ವೇಳೆ ತಿಳಿಸಿದೆ. ಗೋ ಫಸ್ಟ್ ಏರ್​ಲೈನ್ಸ್​ಗೆ ವಿಮಾನಗಳನ್ನು ಗುತ್ತಿಗೆಗೆ ಕೊಟ್ಟಿರುವ ಸಂಸ್ಥೆಗಳು ಇದೀಗ ವಿಮಾನ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸುತ್ತಿವೆ. ಇದನ್ನು ಗೋಫಸ್ಟ್ ವಿರೋಧಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ