AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ನಲ್ಲಿ ಹಂದಿ ಕಡಿಯುವ ಹಗರಣ ಟ್ರೆಂಡಿಂಗ್; ನಿತಿನ್ ಕಾಮತ್ ಉಲ್ಲೇಖಿಸಿದ ಈ ಸ್ಕ್ಯಾಮ್ ಏನು? ಯಾಕೆ ಇದು ಡೆಡ್ಲಿ?

Pig Butchering scam: ಪಿಗ್ ಬಚರಿಂಗ್ ಎಂಬುದು ಅನ್​ಲೈನ್ ವಂಚನೆಯ ಹಗರಣ. ಒಬ್ಬ ವ್ಯಕ್ತಿಯನ್ನು ವಂಚಿಸುವ ಮುನ್ನ ಅವರ ವಿಶ್ವಾಸ ಸಂಪಾದಿಸಿ ಆ ಬಳಿಕ ಆತನನ್ನು ಖೆಡ್ಡಾಗೆ ಬೀಳಿಸುವುದು ಈ ಸ್ಕ್ಯಾಮ್​ನ ಮೂಲತಂತ್ರ. ಝೀರೋಧ ಸಂಸ್ಥೆಯ ಸಿಇಒ ನಿತಿನ್ ಕಾಮತ್ ಇತ್ತೀಚೆಗೆ ಪಿಗ್ ಬಚರಿಂಗ್ ಸ್ಕ್ಯಾಮ್ ಬಗ್ಗೆ ಉಲ್ಲೇಖಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.

ಆನ್​ಲೈನ್​ನಲ್ಲಿ ಹಂದಿ ಕಡಿಯುವ ಹಗರಣ ಟ್ರೆಂಡಿಂಗ್; ನಿತಿನ್ ಕಾಮತ್ ಉಲ್ಲೇಖಿಸಿದ ಈ ಸ್ಕ್ಯಾಮ್ ಏನು? ಯಾಕೆ ಇದು ಡೆಡ್ಲಿ?
ನಿತಿನ್ ಕಾಮತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2023 | 12:23 PM

Share

ಬೆಂಗಳೂರು, ನವೆಂಬರ್ 16: ಆನ್​ಲೈನ್ ಜಗತ್ತು ಪ್ರಬಲಗೊಂಡಂತೆಯಲ್ಲಾ ವಿವಿಧೆಡೆ ಸೈಬರ್ ಕ್ರೈಮ್​ಗಳ (cybercrimes) ಸಂಖ್ಯೆ ಮತ್ತು ವೈವಿಧ್ಯತೆ ಬಹಳ ಹೆಚ್ಚಾಗಿದೆ. ಮೋಸದ ಬಗ್ಗೆ ಅರಿವು ಹೆಚ್ಚಾದಂತೆ ವಂಚಕರು ಹೊಸ ಹೊಸ ದಾರಿ ಹುಡುಕಿ ಮೋಸ ಮುಂದುವರಿಸುತ್ತಿದ್ದಾರೆ. ಝೀರೋಧ ಸಂಸ್ಥೆಯ ಸಿಇಒ ನಿತಿನ್ ಕಾಮತ್ ಇತ್ತೀಚೆಗೆ ಪಿಗ್ ಬಚರಿಂಗ್ ಸ್ಕ್ಯಾಮ್ (Pig Butchering scam) ಬಗ್ಗೆ ಉಲ್ಲೇಖಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅವರ ಪ್ರಕಾರ ಭಾರತದಲ್ಲಿ ಈ ಪಿಗ್ ಬಚರಿಂಗ್ ಅಥವಾ ಹಂದಿ ಕಡಿಯುವ ಹಗರಣ ಹತ್ತಾರು ಸಾವಿರ ಕೋಟಿ ರೂ ಮೊತ್ತದಷ್ಟಿದೆಯಂತೆ.

‘ಭಾರತದಲ್ಲಿ ಪಿಗ್ ಬಚರಿಂಗ್ ಸ್ಕ್ಯಾಮ್​ಗಳ ಮೊತ್ತ ಹತ್ತಾರು ಸಾವಿರ ಕೋಟಿ ರೂಗಳಷ್ಟಾಗುತ್ತದೆ. ಉದ್ಯೋಗ, ಹೈರಿಟರ್ನ್ ಹೂಡಿಕೆ, ಕ್ರಿಪ್ಟೋ ಹೂಡಿಕೆ ಇತ್ಯಾದಿ ನಕಲಿ ಆಫರ್​ಗಳನ್ನು ಅದೆಷ್ಟೋ ಜನರು ನಂಬಿ ಮೋಸ ಹೋಗುತ್ತಿರುವುದನ್ನು ನೋಡಿದಾಗ ಭಯವಾಗುತ್ತದೆ,’ ಎಂದು ನಿತಿನ್ ಕಾಮತ್ ಬರೆದಿದ್ದಾರೆ.

ಇದನ್ನೂ ಓದಿ: ಈ ಶಿಕ್ಷಕರಿಗೆ 83 ಲಕ್ಷ ಸಂಬಳ ಕೊಡಿ; 10 ಸಾವಿರ ರಿಟೈರ್ಡ್ ಟೀಚರ್​ಗಳನ್ನು ಟ್ರೈನರುಗಳಾಗಿ ನೇಮಿಸುವಂತೆ ನಾರಾಯಣಮೂರ್ತಿ ಸಲಹೆ

ಏನಿದು ಪಿಗ್ ಬಚರಿಂಗ್ ಹಗರಣ?

ಪಿಗ್ ಬಚರಿಂಗ್ ಎಂಬುದು ಅನ್​ಲೈನ್ ವಂಚನೆಯ ಹಗರಣ. ಒಬ್ಬ ವ್ಯಕ್ತಿಯನ್ನು ವಂಚಿಸುವ ಮುನ್ನ ಅವರ ವಿಶ್ವಾಸ ಸಂಪಾದಿಸಿ ಆ ಬಳಿಕ ಆತನನ್ನು ಖೆಡ್ಡಾಗೆ ಬೀಳಿಸುವುದು ಈ ಸ್ಕ್ಯಾಮ್​ನ ಮೂಲತಂತ್ರ. ಪಿಗ್ ಬಚರಿಂಗ್ ಎಂದರೆ ಹಂದಿ ಕಡಿಯುವುದು. ಚೀನಾದ Sha Zhu Pan ಸಂಪ್ರದಾಯದಲ್ಲಿ ಹೀಗೆ ಹಂದಿಯನ್ನು ಕೊಬ್ಬಿಸಿ ಕಡಿಯಲಾಗುತ್ತದೆ. ನಮ್ಮಲ್ಲಿ ಕುರಿ ಕಡಿಯುವ ಮುನ್ನ ಅದಕ್ಕೆ ಚೆನ್ನಾಗಿ ಮೇವು ಕೊಟ್ಟು ದಷ್ಟಪುಷ್ಟಗೊಳಿಸಿ ಕೊಬ್ಬಿಸಿರಲಾಗುತ್ತದೆ. ಕೊಬ್ಬಿರುವ ಕುರಿ ಕಡಿದರೆ ಲಾಭವಾಗುವುದು ಕಟುಕನಿಗೇ ಅಲ್ಲವಾ? ಅದೇ ರೀತಿಯದ್ದು ಪಿಗ್ ಬಚರಿಂಗ್ ಕೂಡ.

ನಿತಿನ್ ಕಾಮತ್ ತಮ್ಮ ಪೋಸ್ಟ್​ನಲ್ಲಿ ಈ ಸ್ಕ್ಯಾಮ್ ಹೇಗೆ ನಡೆಯುತ್ತದೆ ಎಂದು ವಿವರಿಸಿದ್ದಾರೆ. ಮೊದಲಿಗೆ ವಂಚಕರು ನಕಲಿ ಪ್ರೊಫೈಲ್ ರಚಿಸಿ, ಸ್ನೇಹ, ಪ್ರೀತಿ ಇತ್ಯಾದಿ ಮೂಲಕ ಟಾರ್ಗೆಟ್ ಜನರ ವಿಶ್ವಾಸ ಗಳಿಸುತ್ತಾರೆ. ಅವರಿಗೆ ಉತ್ತಮ ಉದ್ಯೋಗ, ಉತ್ತಮ ಹೂಡಿಕೆ ಇತ್ಯಾದಿ ಮೂಲಕ ಪುಸಲಾಯಿಸಿ ಹಣ ಪಡೆದು ವಂಚಿಸುತ್ತಾರೆ.

ಇದನ್ನೂ ಓದಿ: ಎಸ್​ಸಿಎಸ್​ಎಸ್​ನಿಂದ ನ್ಯಾಷನಲ್ ಸೇವಿಂಗ್ಸ್​ವರೆಗೂ; ಪೋಸ್ಟ್ ಆಫೀಸ್​ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು

‘ಕ್ರೌರ್ಯತೆ ಏನೆಂದರೆ ವಂಚನೆ ಎಸಗುತ್ತಿರುವ ವ್ಯಕ್ತಿ ಕೂಡ ಇನ್ನೊಂದು ರೀತಿಯಲ್ಲಿ ವಂಚನೆಗೆ ಬಲಿಯಾಗಿರುವವನೇ ಆಗಿರುತ್ತಾನೆ. ವಂಚಕ ಕಂಪನಿಗಳು ನೀಡುವ ಅಂತಾರಾಷ್ಟ್ರೀಯ ಉದ್ಯೋಗ ಆಫರ್​ಗಳ ಬಲೆಗೆ ಹಲವರು ಬಿದ್ದುಹೋಗುತ್ತಾರೆ. ಒಮ್ಮೆ ಅವರು ವಿದೇಶಕ್ಕೆ ಹೋದರೆ ಅಲ್ಲಿ ವಂಚಕರ ಕೈಗೆ ಸಿಕ್ಕಿಬೀಳುತ್ತಾರೆ. ಅವರ ಕೈಯಿಂದ ನಕಲಿ ಪ್ರೊಫೈಲ್ ಸೃಷ್ಟಿಸಿ ಇತರರನ್ನು ಸೆಳೆಯುವಂತೆ ಒತ್ತಾಯಪಡಿಸಲಾಗುತ್ತದೆ’ ಎಂದು ಝೀರೋಧ ಸಂಸ್ಥೆಯ ಸಂಸ್ಥಾಪಕರಾದ ಅವರು ಹೇಳಿದ್ದಾರೆ.

ಬಹಳ ಬಾರಿ ನಕಲಿ ಹುಡುಗಿಯ ಪ್ರೊಫೈಲ್ ಮಾಡಿ ಹುಡುಗರನ್ನು ಆಕರ್ಷಿಸಿ ವಂಚಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಆನ್​ಲೈನ್ ಹನಿಟ್ರ್ಯಾಪಿಂಗ್ ರೀತಿಯದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ