IKEA Nagasandra Store:  9 ಫುಟ್​ಬಾಲ್​ ಸ್ಟೇಡಿಯಂನಷ್ಟು ದೊಡ್ಡ IKEA ಸ್ಟೋರ್ ನಾಗಸಂದ್ರದಲ್ಲಿ ಆರಂಭ; 2ರಿಂದ 3 ಗಂಟೆ ಕಾಯೋದು ತಪ್ಪಿಲ್ಲ!

ಕರ್ನಾಟಕದ ರಾಜಧಾನಿ ಬೆಂಗಳೂರಿನ ನಾಗಸಂದ್ರದಲ್ಲಿ IKEAದ ಮಳಿಗೆ ಶುರುವಾಗಿದ್ದು, ವಾರಾಂತ್ಯದಲ್ಲಿ ಭಾರೀ ಜನಸಂದಣಿ ಆಗಿ ಎರಡ್ಮೂರು ಗಂಟೆ ಕಾಯುವಂತಾಗಿದೆ.

IKEA Nagasandra Store:  9 ಫುಟ್​ಬಾಲ್​ ಸ್ಟೇಡಿಯಂನಷ್ಟು ದೊಡ್ಡ IKEA ಸ್ಟೋರ್ ನಾಗಸಂದ್ರದಲ್ಲಿ ಆರಂಭ; 2ರಿಂದ 3 ಗಂಟೆ ಕಾಯೋದು ತಪ್ಪಿಲ್ಲ!
IKEA ನಾಗಸಂದ್ರ ಮಳಿಗೆ (ಟ್ವಿಟ್ಟರ್ ಚಿತ್ರ)Image Credit source: IKEA Nagasandra
Follow us
| Updated By: Srinivas Mata

Updated on: Jun 27, 2022 | 11:00 AM

ಬೆಂಗಳೂರಿನಲ್ಲಿ (Bengaluru) IKEA ಶುರುವಾಗಿದೆ. ಸ್ವೀಡಿಷ್​ರಿಂದ ಸ್ಥಾಪಿಸಿದ, ಡಚ್​ ಮೂಲದ ಬಹುರಾಷ್ಟ್ರೀಯ ಸಮೂಹ ಇದು. ಬೆಂಗಳೂರಿನಲ್ಲಿ ಇದು ಆರಂಭವಾದ ಮೊದಲ ವಾರಾಂತ್ಯಕ್ಕೆ ಭಾರೀ ಪ್ರಮಾಣದಲ್ಲಿ ಜನ ಸಂದಣಿ ಇತ್ತು. IKEAದಿಂದ ಜೋಡಿಸಲು ಸಿದ್ಧವಾದ ಪೀಠೋಪಕರಣಗಳನ್ನು ಮಾರಾಟ ಮಾಡಲಾಗುತ್ತದೆ ಹಾಗೂ ರೂಪಿಸಲಾಗುತ್ತದೆ. ಈ ಕಂಪೆನಿ ಮೊದಲ ಬಾರಿಗೆ ತನ್ನ ಸ್ಟೋರ್ ಅನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆರಂಭಿಸಿದೆ. ಅಂದಹಾಗೆ ಭಾರತದಲ್ಲಿ ಇದು ನಾಲ್ಕನೇ ಮಳಿಗೆ. ಈಗಾಗಲೇ ಹೈದರಾಬಾದ್, ನವೀಮುಂಬೈ ಹಾಗೂ ವೊರ್ಲಿಯಲ್ಲಿ ತೆರೆಯಲಾಗಿದೆ.

ನಿಮಗೆ ಅಚ್ಚರಿ ಎನಿಸಬಹುದು, ಬೆಂಗಳೂರಿನಲ್ಲಿ ಈ ಮಳಿಗೆಯೊಳಗೆ ಹೋಗುವುದಕ್ಕೆ ಜನ ಎರಡರಿಂದ ಮೂರು ಗಂಟೆ ಕಾದಿದ್ದಾರೆ. ಉದ್ದೋಉದ್ದದ ಸರತಿ ಸಾಲು. ನಿರೀಕ್ಷಿತ ರೀತಿಯಲ್ಲೇ ಭಾರೀ ಸ್ಪಂದನೆ ಬಂದಿದೆ. ಸದ್ಯಕ್ಕೆ ನಾಗಸಂದ್ರದಲ್ಲಿ ಈ ಮಳಿಗೆಗೆ ಕಾಯುವ ಸಮಯ 3 ಗಂಟೆ ಇದ್ದು, ಆನ್​ಲೈನ್​ ಮೂಲಕ ಯೋಜನೆ ರೂಪಿಸಿಕೊಳ್ಳಿ ಅಥವಾ ಶಾಪಿಂಗ್ ಮಾಡಿ ಡಂದು ಪೋಸ್ಟ್ ಮಾಡಲಾಗಿದೆ.

ಭಾರೀ ಸಂಖ್ಯೆಯಲ್ಲಿ ಜನ ಸೇರಿರುವಂಥ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗಂತ ಇದೇನು ಸಣ್ಣ- ಪುಟ್ಟ ಸ್ಟೋರ್ ಅಲ್ಲ. 12.2 ಎಕರೆಯಷ್ಟು ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಹೆಚ್ಚು ಕಡಿಮೆ 9 ಫುಟ್​ಬಾಲ್​ ಸ್ಟೇಡಿಯಂನಷ್ಟು ದೊಡ್ಡದು ಅಂದುಕೊಳ್ಳಿ. ಜನರಿಂದ ಗಿಜಿಗುಡುವ ಈ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಾನಾ ಬಗೆಯ ಕಮೆಂಟ್​ಗಳು ಬರುತ್ತಿವೆ.

ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾವನ್ನು ಸಮೀಕರಿಸಿ, ಬಳಕೆದಾರರು ತಮಾಷೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ: ಮಕ್ಕಳು- ಮರಿಯೊಂದಿಗೆ ಎಷ್ಟು ಸಮಯ ಕಾಯಬೇಕು ಎಂಬ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕ್ಷಮೆ ಕೇಳಿರುವ IKEA, ಸೂಕ್ತ ವ್ಯವಸ್ಥೆ ಮಾಡುವ ಭರವಸೆ ಕೂಡ ನೀಡಿದೆ.

ಬೆಂಗಳೂರಿನ ನಾಗಸಂದ್ರದಲ್ಲಿ 12.2 ಎಕರೆ ಜಾಗದಲ್ಲಿ 4,60,000 ಚದರಡಿ ವ್ಯಾಪ್ತಿಯಲ್ಲಿ IKEA ನಾಗಸಂದ್ರ ಸ್ಟೋರ್ ಇದೆ. 7000ದಷ್ಟು ಹೋಮ್ ಫರ್ನಿಷಿಂಗ್ ಪ್ರಾಡಕ್ಟ್ಸ್​ಗಳಿದ್ದು, ಜೂನ್ 22ನೇ ತಾರೀಕು ಸಾರ್ವಜನಿಕರಿಗಾಗಿ ಮುಕ್ತವಾಗಿದೆ.

ಇದನ್ನೂ ಓದಿ: ಬೆಂಗಳೂರು ಐಕಿಯಾ ಶಾಪಿಂಗ್​ ಮಾಲ್​​ ಮಳಿಗೆಗೆ ಮುಗಿಬಿದ್ದ ಜನ; ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ಫುಲ್​​ ಟ್ರಾಫಿಕ್​ ಜಾಮ್​​

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ