ESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?

Benefits of ESI: ಸಂಘಟಿತ ವಲಯದ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ಭದ್ರತೆಗೆಂದು ರೂಪಿಸಲಾದ ಇಎಸ್​ಐ ಸ್ಕೀಮ್ ಒಂದು ವಿಮಾ ಯೋಜನೆಯಾಗಿದ್ದು ಹಲವು ಪ್ರಯೋಜನಗಳನ್ನು ತರುತ್ತದೆ.

ESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?
ಇಎಸ್​ಐ

Updated on: Jul 12, 2023 | 5:15 PM

ನೌಕರರ ರಾಜ್ಯ ಇನ್ಷೂರೆನ್ಸ್ ನಿಗಮದಿಂದ ನಡೆಸುವ ಇಎಸ್​ಐ ಯೋಜನೆ (ESI Scheme) ಹೆಸರು ಕೇಳಿರಬಹುದು. ಇಪಿಎಸ್​ನಂತೆ ಇದು ಕಡಿಮೆ ವೇತನ ವರ್ಗದ ನೌಕರರಿಗೆ ನೀಡಲಾಗುವ ವಿಮಾ ಸೌಲಭ್ಯವಾಗಿದೆ. ಇಎಸ್​ಐಸಿ ನಡೆಸುವ ಈ ಸ್ಕೀಮ್​ನಲ್ಲಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ವಿಮಾ ಕವರೇಜ್ ಕೊಡಲಾಗುತ್ತದೆ. ಸದಸ್ಯ ನೌಕರರಿಗೆ ಅನಾರೋಗ್ಯ, ತಾಯ್ತನ (Maternity), ಅಂಗವೈಕಲ್ಯಕ್ಕೆ (Disability) ಪರಿಹಾರ ಕೊಡಲಾಗುತ್ತದೆ. ಕೆಲಸ ಮಾಡುವಾಗ ಗಾಯಗೊಂಡು ಸಾವನ್ನಪ್ಪಿದರೆ ಪರಿಹಾರ ಸಿಗುತ್ತದೆ. ನೌಕರರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಸೌಲಭ್ಯವೂ ಇರುತ್ತದೆ.

ದೇಶಾದ್ಯಂತ 1.5 ಕೋಟಿಗೂ ಹೆಚ್ಚು ಇಎಸ್​ಐ ಸದಸ್ಯರಿದ್ದಾರೆ. ಪ್ರತೀ ವರ್ಷ 10 ಲಕ್ಷಕ್ಕೂ ಹೆಚ್ಚು ಹೊಸ ಸದಸ್ಯರ ಸೇರ್ಪಡೆ ಆಗುತ್ತಿದೆ. ಒಟ್ಟು ಫಲಾನುಭವಿಗಳ ಸಂಖ್ಯೆ 8 ಕೋಟಿಯಷ್ಟಿರುವುದು ತಿಳಿದುಬಂದಿದೆ.

ಏನಿದು ಇಎಸ್​ಐ ಯೋಜನೆ?

ಇದು ಸಂಘಟಿತ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಡಿಮೆ ಸಂಬಳದ ನೌಕರರಿಗೆಂದು ರೂಪಿಸಲಾದ ಯೋಜನೆ. 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಎಲ್ಲಾ ಸಂಸ್ಥೆಗಳು ಇಎಸ್​ಐ ಯೋಜನೆ ಜಾರಿಗೊಳಿಸುವುದು ಕಡ್ಡಾಯ. ತಿಂಗಳಿಗೆ 21,000 ರೂ ಹಾಗು ಅದಕ್ಕಿಂತ ಕಡಿಮೆ ಸಂಬಳ ಇರುವ ಉದ್ಯೋಗಿಗಳನ್ನು ಇಎಸ್​ಐ ಸ್ಕೀಮ್​ಗೆ ಸೇರಿಸುವುದು ಆ ಸಂಸ್ಥೆಯ ಹೊಣೆಗಾರಿಕೆ. ಉದ್ಯೋಗಿಯ ಸಂಬಳದ ಶೇ. 3.25ರಷ್ಟು ಹಣವನ್ನು ಸಂಸ್ಥೆ ಹೆಚ್ಚುವರಿಯಾಗಿ ಹಾಕುತ್ತದೆ. ಉದ್ಯೋಗಿಯ ಸಂಬಳದಿಂದ ಶೇ. 0.75ರಷ್ಟು ಹಣ ಇದಕ್ಕೆ ಹೋಗುತ್ತದೆ. ಒಟ್ಟು ಶೇ. 4ರಷ್ಟು ಸಂಬಳವು ಇಎಸ್​ಐ ಸ್ಕೀಮ್​ಗೆ ಭರ್ತಿಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿAadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?

ಉದ್ಯೋಗಿಯ ಸಂಬಳ 21,000 ರೂ ಒಳಗೆ ಇರುವವರೆಗೂ ಈ ಯೋಜನೆ ಚಾಲೂ ಇರುತ್ತದೆ. ಕೆಲಸ ಬದಲಿಸಿದರೂ ಅದೇ ಇಎಸ್​ಐ ನಂಬರ್ ಮುಂದುವರಿಯುತ್ತಿರುತ್ತದೆ. ಆದರೆ ಆ ಸಂಬಳದ ಗಡಿ ದಾಟಿದರೆ ಸ್ಕೀಮ್ ನಿಂತುಹೋಗುತ್ತದೆ.

ಈ ಸ್ಕೀಮ್​ನಲ್ಲಿ ಇಎಸ್​ಐಸಿ ಸದಸ್ಯರಿಗೆ ವೈದ್ಯಕೀಯ ಕವರೇಜ್, ಮೆಟರ್ನಿಟಿ ಕವರೇಜ್ ಇರುತ್ತದೆ. ಕೆಲಸ ಮಾಡುವಾಗ ಅಂಗ ಊನವಾದರೆ ಅದಕ್ಕೆ ಪರಿಹಾರ ಇರುತ್ತದೆ. ಸದಸ್ಯರ ಕುಟುಂಬಕ್ಕೂ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯ ಇರುತ್ತದೆ.

ಮತ್ತೊಂದು ವಿಶೇಷತೆ ಎಂದರೆ ಇಎಸ್​ಐ ಸದಸ್ಯ ಕೆಲಸ ಮಾಡುವಾಗ ಸಾವನ್ನಪ್ಪಿದರೆ ಅವರ ಅವಲಂಬಿತರೊಬ್ಬರಿಗೆ ತಿಂಗಳಿಗೆ ಕಂತುಗಳ ರೂಪದಲ್ಲಿ ಪರಿಹಾರ ಸಿಗುತ್ತಾ ಹೋಗುತ್ತದೆ.

ಸದಸ್ಯ ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ವೆಚ್ಚಕ್ಕೆಂದು 15,000 ರೂ ನೀಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us