AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratan Tata: ಹಿರಿಯ ನಾಗರಿಕರಿಗೆ ಕಂಪಾನಿಯನ್ ನೀಡುವ ಸಂಸ್ಥೆಗೆ ಟಾಟಾ ಹೂಡಿಕೆ

ಹಿರಿಯ ನಾಗರಿಕರಿಗರಿಗೆಂದೇ ಆರಂಭಿಸಿರುವ "ಗುಡ್ ಫೆಲ್ಲೋಸ್" ಸಂಸ್ಥೆಯ ನೆರವಿಗೆ ಉದ್ಯಮಿ ರತನ್ ಟಾಟಾ ನಿಂತಿದ್ದಾರೆ. ಮಾದರಿ ಸಾಮಾಜಿಕ ಕೆಲಸದ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಟಾಟಾ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದ್ದಾರೆ.

Ratan Tata: ಹಿರಿಯ ನಾಗರಿಕರಿಗೆ ಕಂಪಾನಿಯನ್ ನೀಡುವ  ಸಂಸ್ಥೆಗೆ ಟಾಟಾ ಹೂಡಿಕೆ
Ratan Tata
TV9 Web
| Edited By: |

Updated on:Aug 18, 2022 | 11:06 AM

Share

ಮುಂಬೈ: ಹಿರಿಯ ನಾಗರಿಕರಿಗರಿಗೆಂದೇ ಆರಂಭಿಸಿರುವ “ಗುಡ್ ಫೆಲ್ಲೋಸ್” ಸಂಸ್ಥೆಯ ನೆರವಿಗೆ ಉದ್ಯಮಿ ರತನ್ ಟಾಟಾ ನಿಂತಿದ್ದಾರೆ. ಮಾದರಿ ಸಾಮಾಜಿಕ ಕೆಲಸದ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಟಾಟಾ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದ್ದಾರೆ. ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಕಗೆ ಈ ಸಂಸ್ಥೆ ಕಂಪಾನಿಯನ್ ಗಳನ್ನು ನೀಡುತ್ತದೆ. ಅಂದರೆ ಅವರಿಗೆ ಆತ್ಮೀಯರನ್ನು ನೇಮಿಸಿಕೊಡಲಾಗುತ್ತದೆ.

ಈ ಯುವಕರ ತಂಡ ಹಿರಿಯ ನಾಗರಿಕರನ್ನು ವಾರಕ್ಕೆ ಮೂರು ಸಾರಿ ಭೇಟಿ ಮಾಡುತ್ತಾರೆ. ಪ್ರತಿ ಸಾರಿ ಭೇಟಿಯಾದಾಗ 4 ಗಂಟೆ ಕಳೆಯುತ್ತಾರೆ. ಹಿರಿಯರ ನೋವು ಆಲಿಸುವುದು. ಅವರೊಂದಿಗೆ ಮಾತು-ಕತೆ, ಆಟ ಆಡುವುವುದು, ಸಾಂತ್ವನ ಹೇಳುವ ಕೆಲಸ ಈ ಸಮಯದಲ್ಲಿ ಮಾಡುತ್ತಾರೆ.

ಟಾಟಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ 25 ವರ್ಷದ ಶಂತನು ನಾಯ್ಡು ಸ್ಥಾಪನೆ ಮಾಡಿರುವ ಸಂಸ್ಥೆಗೆ ಟಾಟಾ ಸಂಸ್ಥೆ ಹಣ ಹೂಡಿದೆ. ರತನ್ ಟಾಟಾ ಅವರ ಕಚೇರಿಯಲ್ಲಿ 2018 ರಿಂದ ಕಾರ್ಯನಿರ್ವಹಿಸುತ್ತಿರುವ ಶಂತನು ಹೊಸ ಆಲೋಚನೆಗೆ ಟಾಟಾ ಬೆಂಬಲ ನೀಡಿದ್ದಾರೆ. ಶಂತನು ಟಾಟಾ ಗ್ರೂಪ್ ನ ಜನರಲ್ ಮ್ಯಾನೇಜರ್ ಆಗಿದ್ದು ರತನ್ ಟಾಟಾ ಅವರೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

50 ಮಿಲಿಯನ್ ಗೂ ಅಧಿಕ ಹಿರಿಯರು ಒಬ್ಬಂಟಿಯಾಗಿ ಜೀವನ ಕಳೆಯುವಂತಹ ಸ್ಥಿತಿ ಇದೆ. ಇದೆ ಮಾಹಿತಿ ಆಧಾರವಾಗಿಟ್ಟುಕೊಂಡು ಸಂಸ್ಥೆ ಹುಟ್ಟುಹಾಕಿದ್ದೇನೆ ಎಂದು ಶಂತನು ತಿಳಿಸಿದ್ದಾರೆ.

ವಯಸ್ಸಾದ ಮೇಲೆ ಒಬ್ಬಂಟಿಯಾಗಿರುವುದು ಎಷ್ಟು ಕಷ್ಟವೆಂದು ಹೇಳಲಾಗದು. ಹಾಗಾಗಿ ಇದರಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ರತನ್ ಟಾಟಾ ತಿಳಿಸಿದರು. ಗುಡ್‌ಫೆಲೋಸ್ ಸಂಸ್ಥೆ ಎರಡು ತಲೆಮಾರುಗಳನ್ನು ಒಂದು ಮಾಡುತ್ತಿದೆ. ಆಧುನಿಕ ಜಗತ್ತಿನ ಪರಿಣಾಮ ಹುಟ್ಟಿಕೊಂಡ ಸಾಮಾಜಿಕ ಸಮಸ್ಯೆಯ ಪರಿಹಾರಕ್ಕೆ ಇದು ನೆರವಾಗಬಲ್ಲದು. ಅಂಗವೈಕಲ್ಯ ಇರುವ ಜನರ ನೆರವಿಗೂ ಮುಂದಿನ ದಿನಗಳಲ್ಲಿ ನಿಲ್ಲಲಿದ್ದೇವೆ ಎಂದು ಟಾಟಾ ಇದೇ ಸಂದರ್ಭದಲ್ಲಿ ಹೇಳಿದರು.

Published On - 11:05 am, Thu, 18 August 22

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್