Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratan Tata: ಹಿರಿಯ ನಾಗರಿಕರಿಗೆ ಕಂಪಾನಿಯನ್ ನೀಡುವ ಸಂಸ್ಥೆಗೆ ಟಾಟಾ ಹೂಡಿಕೆ

ಹಿರಿಯ ನಾಗರಿಕರಿಗರಿಗೆಂದೇ ಆರಂಭಿಸಿರುವ "ಗುಡ್ ಫೆಲ್ಲೋಸ್" ಸಂಸ್ಥೆಯ ನೆರವಿಗೆ ಉದ್ಯಮಿ ರತನ್ ಟಾಟಾ ನಿಂತಿದ್ದಾರೆ. ಮಾದರಿ ಸಾಮಾಜಿಕ ಕೆಲಸದ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಟಾಟಾ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದ್ದಾರೆ.

Ratan Tata: ಹಿರಿಯ ನಾಗರಿಕರಿಗೆ ಕಂಪಾನಿಯನ್ ನೀಡುವ  ಸಂಸ್ಥೆಗೆ ಟಾಟಾ ಹೂಡಿಕೆ
Ratan Tata
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 18, 2022 | 11:06 AM

ಮುಂಬೈ: ಹಿರಿಯ ನಾಗರಿಕರಿಗರಿಗೆಂದೇ ಆರಂಭಿಸಿರುವ “ಗುಡ್ ಫೆಲ್ಲೋಸ್” ಸಂಸ್ಥೆಯ ನೆರವಿಗೆ ಉದ್ಯಮಿ ರತನ್ ಟಾಟಾ ನಿಂತಿದ್ದಾರೆ. ಮಾದರಿ ಸಾಮಾಜಿಕ ಕೆಲಸದ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಟಾಟಾ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದ್ದಾರೆ. ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಕಗೆ ಈ ಸಂಸ್ಥೆ ಕಂಪಾನಿಯನ್ ಗಳನ್ನು ನೀಡುತ್ತದೆ. ಅಂದರೆ ಅವರಿಗೆ ಆತ್ಮೀಯರನ್ನು ನೇಮಿಸಿಕೊಡಲಾಗುತ್ತದೆ.

ಈ ಯುವಕರ ತಂಡ ಹಿರಿಯ ನಾಗರಿಕರನ್ನು ವಾರಕ್ಕೆ ಮೂರು ಸಾರಿ ಭೇಟಿ ಮಾಡುತ್ತಾರೆ. ಪ್ರತಿ ಸಾರಿ ಭೇಟಿಯಾದಾಗ 4 ಗಂಟೆ ಕಳೆಯುತ್ತಾರೆ. ಹಿರಿಯರ ನೋವು ಆಲಿಸುವುದು. ಅವರೊಂದಿಗೆ ಮಾತು-ಕತೆ, ಆಟ ಆಡುವುವುದು, ಸಾಂತ್ವನ ಹೇಳುವ ಕೆಲಸ ಈ ಸಮಯದಲ್ಲಿ ಮಾಡುತ್ತಾರೆ.

ಟಾಟಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ 25 ವರ್ಷದ ಶಂತನು ನಾಯ್ಡು ಸ್ಥಾಪನೆ ಮಾಡಿರುವ ಸಂಸ್ಥೆಗೆ ಟಾಟಾ ಸಂಸ್ಥೆ ಹಣ ಹೂಡಿದೆ. ರತನ್ ಟಾಟಾ ಅವರ ಕಚೇರಿಯಲ್ಲಿ 2018 ರಿಂದ ಕಾರ್ಯನಿರ್ವಹಿಸುತ್ತಿರುವ ಶಂತನು ಹೊಸ ಆಲೋಚನೆಗೆ ಟಾಟಾ ಬೆಂಬಲ ನೀಡಿದ್ದಾರೆ. ಶಂತನು ಟಾಟಾ ಗ್ರೂಪ್ ನ ಜನರಲ್ ಮ್ಯಾನೇಜರ್ ಆಗಿದ್ದು ರತನ್ ಟಾಟಾ ಅವರೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

50 ಮಿಲಿಯನ್ ಗೂ ಅಧಿಕ ಹಿರಿಯರು ಒಬ್ಬಂಟಿಯಾಗಿ ಜೀವನ ಕಳೆಯುವಂತಹ ಸ್ಥಿತಿ ಇದೆ. ಇದೆ ಮಾಹಿತಿ ಆಧಾರವಾಗಿಟ್ಟುಕೊಂಡು ಸಂಸ್ಥೆ ಹುಟ್ಟುಹಾಕಿದ್ದೇನೆ ಎಂದು ಶಂತನು ತಿಳಿಸಿದ್ದಾರೆ.

ವಯಸ್ಸಾದ ಮೇಲೆ ಒಬ್ಬಂಟಿಯಾಗಿರುವುದು ಎಷ್ಟು ಕಷ್ಟವೆಂದು ಹೇಳಲಾಗದು. ಹಾಗಾಗಿ ಇದರಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ರತನ್ ಟಾಟಾ ತಿಳಿಸಿದರು. ಗುಡ್‌ಫೆಲೋಸ್ ಸಂಸ್ಥೆ ಎರಡು ತಲೆಮಾರುಗಳನ್ನು ಒಂದು ಮಾಡುತ್ತಿದೆ. ಆಧುನಿಕ ಜಗತ್ತಿನ ಪರಿಣಾಮ ಹುಟ್ಟಿಕೊಂಡ ಸಾಮಾಜಿಕ ಸಮಸ್ಯೆಯ ಪರಿಹಾರಕ್ಕೆ ಇದು ನೆರವಾಗಬಲ್ಲದು. ಅಂಗವೈಕಲ್ಯ ಇರುವ ಜನರ ನೆರವಿಗೂ ಮುಂದಿನ ದಿನಗಳಲ್ಲಿ ನಿಲ್ಲಲಿದ್ದೇವೆ ಎಂದು ಟಾಟಾ ಇದೇ ಸಂದರ್ಭದಲ್ಲಿ ಹೇಳಿದರು.

Published On - 11:05 am, Thu, 18 August 22

ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ