AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತನ್ ಟಾಟಾ ವೈಯಕ್ತಿಕ ಆಸ್ತಿ ಯಾರಿಗೆ? ಅವರ ಕೊನೆಯಾಸೆ ಈಡೇರಿಸುವ ಜವಾಬ್ದಾರಿ ನಾಲ್ವರಿಗೆ ವಹಿಸಿದ್ದ ಟಾಟಾ

Ratan Tata's will details: ರತನ್ ಟಾಟಾ ಅವರು ಸಾಯುವ ಮುನ್ನ ಉಯಿಲು ಬರೆದಿಟ್ಟಿದ್ದು, ಅದರನ್ನು ಆಚರಣೆಗೆ ತರುವ ಹೊಣೆ ನಾಲ್ವರಿಗೆ ವಹಿಸಿದ್ದರು. ಉಯಿಲು ಬರೆಯಲು ನೆರವಾದ ವಕೀಲರಿಂದ ಹಿಡಿದು ತಮ್ಮ ಇಬ್ಬರು ಕಿರಿಯ ಸೋದರಿಯರಿಗೆ ಆ ಜವಾಬ್ದಾರಿ ಕೊಟ್ಟಿದ್ದರು ರತನ್ ಟಾಟಾ.

ರತನ್ ಟಾಟಾ ವೈಯಕ್ತಿಕ ಆಸ್ತಿ ಯಾರಿಗೆ? ಅವರ ಕೊನೆಯಾಸೆ ಈಡೇರಿಸುವ ಜವಾಬ್ದಾರಿ ನಾಲ್ವರಿಗೆ ವಹಿಸಿದ್ದ ಟಾಟಾ
ರತನ್ ಟಾಟಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2024 | 12:55 PM

ಮುಂಬೈ, ಅಕ್ಟೋಬರ್ 18: ರತನ್ ಟಾಟಾ ಹತ್ತು ದಿನಗಳ ಹಿಂದೆ ನಿಧನ ಹೊಂದುವ ಮೂಲಕ ತಮ್ಮ ಹಲವು ಬಂಧು ಬಳಗವನ್ನು ಅಗಲಿರುವು ಜೊತೆಗೆ ಸಾವಿರಾರು ಕೋಟಿ ರೂ ಮೌಲ್ಯದ ವೈಯಕ್ತಿಕ ಸಂಪತ್ತನ್ನೂ ಬಿಟ್ಟುಹೋಗಿದ್ದಾರೆ. ಅವರ ಷೇರುಪಾಲುಗಳೆಲ್ಲವನ್ನೂ ಸೇರಿಸಿದರೆ ವೈಯಕ್ತಿಕ ಸಂಪತ್ತಿನ ಮೌಲ್ಯ ಬರೋಬ್ಬರಿ 7,900 ಕೋಟಿ ರೂ ಆಗುತ್ತದೆ. ಅವರಿಗೆ ಮಕ್ಕಳಿಲ್ಲದಿರುವುದರಿಂದ ಅವರ ಆಸ್ತಿಪಾಸ್ತಿಗೆ ವಾರಸುದಾರರು ಯಾರು ಎಂಬುದು ಕುತೂಹಲ ಇದೆ. ವರದಿಗಳ ಪ್ರಕಾರ ರತನ್ ಟಾಟಾ ಅವರು ಉಯಿಲು ಬರೆದಿಟ್ಟಿರುವುದು ತಿಳಿದುಬಂದಿದೆ.

ರತನ್ ಟಾಟಾ ಬರೆದಿರುವ ವಿಲ್​ನಲ್ಲಿ ಏನಿದೆ ಎನ್ನುವ ವಿವರ ಸಾರ್ವಜನಿಕವಾಗಿ ಲಭ್ಯ ಇಲ್ಲ. ಈ ಉಯಿಲಿನಲ್ಲಿರುವ ಅಂಶಗಳನ್ನು ಜಾರಿಗೆ ತರುವ ಜವಾಬ್ದಾರಿಯನ್ನು ರತನ್ ಟಾಟಾ ಅವರು ನಾಲ್ವರಿಗೆ ವಹಿಸಿದ್ದಾರೆ. ವಕೀಲರಾದ ಡೇರಿಯಸ್ ಖಂಬಟ್ಟ, ತಮ್ಮ ಆಪ್ತ ಸ್ನೇಹಿತರಾದ ಮೆಹ್ಲಿ ಮಿಸ್ತ್ರಿ, ತಂಗಿಯರಾದ ಶಿರೀನ್ ಜೀಜೀಭೋಯ್ ಮತ್ತು ಡಿಯಾನಾ ಜೀಜೀಭೋಯ್, ಈ ನಾಲ್ವರಿಗೆ ಟಾಟಾ ಉಯಿಲನ್ನು ಕಾರ್ಯಗತಗೊಳಿಸು ಹೊಣೆಗಾರಿಕೆ ಇದೆ.

ಇದನ್ನೂ ಓದಿ: ಭಾರತವನ್ನು ಮಟ್ಟಹಾಕಲು ಚೀನಾದ ಜಲಾಸ್ತ್ರ? ವಿಶ್ವದ ಅತಿದೊಡ್ಡ ಹೈಡ್ರೊಪವರ್ ಪ್ರಾಜೆಕ್ಟ್ ಆದ್ರೆ ಏನು ಗತಿ?

ವಕೀಲರಾದ ಡೇರಿಯಸ್ ಖಂಬಟ ಅವರು ಈ ಉಯಿಲು ಬರೆಯಲು ರತನ್ ಟಾಟಾ ಅವರಿಗೆ ನೆರವಾದವರು ಎನ್ನಲಾಗಿದೆ. ಖಂಬಟ ಅವರು ಎರಡು ಪ್ರಮುಖ ಟಾಟಾ ಟ್ರಸ್ಟ್​ಗಳ ಟ್ರಿಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ರತನ್ ಟಾಟಾ ಬಹಳ ವಿಶ್ವಾಸ ಇರಿಸಿದ ವ್ಯಕ್ತಿಗಳಲ್ಲಿ ಇವರೂ ಒಬ್ಬರು.

ಇನ್ನು, ಮೆಹ್ಲಿ ಮಿಸ್ತ್ರಿ ಅವರು ರತನ್ ಟಾಟಾ ಅತ್ಯಂತ ನಂಬುವ ಸ್ನೇಹಿತ. ಇವರದ್ದು ದೀರ್ಘಕಾಲದ ಗೆಳೆತನ. 2016ರಲ್ಲಿ ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಉಚ್ಛಾಟಿಸಲಾಗಿದ್ದ ಸೈರಸ್ ಮಿಸ್ತ್ರಿ ಅವರ ಚಿಕ್ಕಪ್ಪನ ಮಗ ಈ ಮೆಹ್ಲಿ ಮಿಸ್ತ್ರಿ. ಸೈರಸ್​ರನ್ನು ಅವಮಾನ ರೀತಿಯಲ್ಲಿ ಉಚ್ಚಾಟಿಸಲಾದರೂ ರತನ್ ಟಾಟಾ ಮತ್ತು ಮೆಹ್ಲಿ ಮಿಸ್ತ್ರಿ ಗೆಳೆತನದ ಶಕ್ತಿ ಕುಂದಿರಲಿಲ್ಲ.

ಕಿರಿಯ ತಂಗಿಯ ಮೇಲೆ ಟಾಟಾಗೆ ಭಾರೀ ಪ್ರೀತಿ…

ರತನ್ ಟಾಟಾ ತಮ್ಮ ಉಯಿಲನ್ನು ಆಚರಣೆಗೆ ತರಲು ಜವಾಬ್ದಾರಿ ಕೊಟ್ಟಿರುವ ನಾಲ್ಕು ವ್ಯಕ್ತಿಗಳಲ್ಲಿ ಶಿರೀನ್ ಮತ್ತು ಡಿಯಾನಾ ಇದ್ದಾರೆ. ಇವರು ರತನ್ ಟಾಟಾ ಅವರಿಗೆ ಸಂಬಂಧದಲ್ಲಿ ಸೋದರಿಯರಾಗಬೇಕು. ರತನ್ ಟಾಟಾ ಅವರಿಗೆ ಜನ್ಮಕೊಟ್ಟಿದ್ದ ಸೋನೂ ಟಾಟಾ ಅವರು ಬೇರೆ ವ್ಯಕ್ತಿಯೊಂದಿಗೆ ಎರಡನೇ ಮದುವೆಯಾಗಿದ್ದರು. ಆ ಎರಡನೇ ಸಂಸಾರದಲ್ಲಿ ಹುಟ್ಟಿದವರೇ ಶಿರೀನ್ ಜೆಜೀಭೋಯ್ ಮತ್ತು ಡಿಯಾನ್ನಾ ಜೆಜೀಭೋಯ್. ಇವರ ಪೈಕಿ ಡಿಯಾನಾ ಜೆಜೀಭೋಯ್ ಅವರನ್ನು ಕಂಡರೆ ರತನ್ ಟಾಟಾಗೆ ವೈಯಕ್ತಿಕವಾಗಿ ಹೆಚ್ಚು ಮಮಕಾರ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಗಮನಿಸಿ, ಮುಂಗಡ ರೈಲು ಟಿಕೆಟ್ ಬುಕಿಂಗ್ ಅವಧಿ ಈಗ 60 ದಿನ ಮಾತ್ರ; ಮೂರು ತಿಂಗಳ ಮುಂಚೆ ಬುಕಿಂಗ್ ಅಸಾಧ್ಯ

ರತನ್ ಟಾಟಾ ಉಯಿಲಿನಲ್ಲಿ ಏನಿದೆ?

ಆಗಲೇ ಹೇಳಿದಂತೆ ರತನ್ ಟಾಟಾ ಅವರ ವಿಲ್ ಅಥವಾ ಉಯಿಲಿನ ವಿವರ ಸಾರ್ವತ್ರಿಕವಾಗಿ ಲಭ್ಯ ಇಲ್ಲ. ಈ ವಿಲ್​ನಲ್ಲಿ ಬರೆದಿರುವ ಪ್ರಕಾರ ಆಸ್ತಿಗಳನ್ನು ಹಂಚಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ವಿಲ್​ನಲ್ಲಿ ಕೆಲ ಆಸ್ತಿಗಳ ಹಂಚಿಕೆ ಬಗ್ಗೆ ನಿರ್ದಿಷ್ಟಪಡಿಸದೇ ಹೋದ ಸಂದರ್ಭದಲ್ಲಿ, ವೈಯಕ್ತಿಕ ಕಾನೂನು ಪ್ರಕಾರ ಅದನ್ನು ಹಂಚಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್