AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್​ಬಿಐ ಸಮ್ಮತಿ

RBI Approves Appointment of Isha Ambani: ಇಶಾ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರನ್ನು ಜೆಎಫ್​ಎಸ್​ಎಲ್​ನ ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಆರ್​ಬಿಐ ಅನುಮತಿ ನೀಡಿದೆ. ಆರ್​ಬಿಐನ ಈ ಅನುಮೋದನೆ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಅಷ್ಟರೊಳಗೆ ಜೆಎಫ್​ಎಸ್​ಎಲ್ ಸಂಸ್ಥೆ ಈ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್​ಬಿಐ ಸಮ್ಮತಿ
ಇಶಾ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2023 | 6:09 PM

Share

ನವದೆಹಲಿ, ನವೆಂಬರ್ 16: ರಿಲಾಯನ್ಸ್ ಸಾಮ್ರಾಜ್ಯದ ಯುವರಾಣಿ ಇಶಾ ಅಂಬಾನಿ (Isha Ambani) ಸೇರಿದಂತೆ ಮೂವರನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್​ನ ನಿರ್ದೇಶಕರನ್ನಾಗಿ ನೇಮಕ ಮಾಡುವುದಕ್ಕೆ ಆರ್​ಬಿಐ ನಿನ್ನೆ (ನ. 15) ಅನುಮೋದನೆ ನೀಡಿದೆ. ಇಶಾ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರನ್ನು ಜೆಎಫ್​ಎಸ್​ಎಲ್​ನ (Jio Financial Services) ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಆರ್​ಬಿಐ ನೀಡಿರುವ ಅನುಮತಿ ಇದು. ಆರ್​ಬಿಐನ ಈ ಅನುಮತಿ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಅಷ್ಟರೊಳಗೆ ಜೆಎಫ್​ಎಸ್​ಎಲ್ ಸಂಸ್ಥೆ ಈ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದರೆ, ಯಾಕೆ ನೇಮಕಾತಿ ಆಗಿಲ್ಲ ಎಂದು ಕಾರಣ ತಿಳಿಸಿ ಮತ್ತೊಮ್ಮೆ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು ಎಂದು ಆರ್​ಬಿಐ ತನ್ನ ಪತ್ರದಲ್ಲಿ ತಿಳಿಸಿದೆ.

ಇಶಾ ಅಂಬಾನಿ ಅವರು ಮುಕೇಶ್ ಅಂಬಾನಿಯ ಹಿರಿಯ ಮಗಳು. 32 ವರ್ಷದ ಅವರು ಮತ್ತು ಆಕಾಶ್ ಅಂಬಾನಿ ಇಬ್ಬರೂ ಕೂಡ ಅವಳಿಜವಳಿ. ಅನಂತ್ ಅಂಬಾನಿ ಮೂರನೇ ಮಗ. ಈ ಮೂವರೂ ಕೂಡ ಕಳೆದ ತಿಂಗಳು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮಂಡಳಿ ಸದಸ್ಯರಾಗಿ ನೇಮಕವಾಗಿದ್ದರು.

ಇದನ್ನೂ ಓದಿ: ಅಂಬಾನಿ ಮಕ್ಕಳಿಗೆ ಸಂಬಳ ಬೇಡ; ಮಂಡಳಿ ಸಭೆಯಲ್ಲಿ ಪಾಲ್ಗೊಂಡರೆ ಸಂಭಾವನೆ: ಆರ್​ಐಎಲ್ ನಿರ್ಣಯ

ಆಕಾಶ್ ಅಂಬಾನಿ ಅವರು ಜಿಯೋ ಇನ್ಫೋಕಾಮ್​ನ ಛೇರ್ಮನ್ ಆಗಿ ಜವಾಬ್ದಾರಿ ಪಡೆದಿದ್ದಾರೆ. ಇಶಾ ಅಂಬಾನಿ ರಿಲಾಯನ್ಸ್ ರೀಟೇಲ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ.

ಪಿರಾಮಲ್ ಕುಟುಂಬದ ಸೊಸೆಯಾಗಿರುವ ಇಶಾ ಅಂಬಾನಿ ಅಮೆರಿಕದ ಯಾಲೆ ಯೂನಿವರ್ಸಿಟಿ ಮತ್ತು ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಓದಿದವರು. 2016ರಲ್ಲಿ ಭಾರತದ ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಜಿಯೋದ ಪೂರ್ಣ ಕಾರ್ಯತಂತ್ರವನ್ನು ಇಶಾ ಅಂಬಾನಿ ರೂಪಿಸಿದ್ದರು ಎನ್ನಲಾಗುತ್ತಿದೆ. ಇದೀಗ ರಿಲಾಯನ್ಸ್ ರೀಟೇಲ್ ಸಂಸ್ಥೆಗೆ ಅವರು ಹೊಸ ಕಾಯಕಲ್ಪ ತರುವ ಪ್ರಯತ್ನದಲ್ಲಿದ್ದಾರೆ.

ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

ಇದೇ ವೇಳೆ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ನಿರ್ದೇಶಕರಾಗಿರುವ ಇತರ ಇಬ್ಬರೆಂದರೆ ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಸೇಥಿಯಾ. ಅಂಶುಮಾನ್ ಠಾಕೂರ್ ಅವರು 2014ರಿಂದ ರಿಲಾಯನ್ಸ್ ಗ್ರೂಪ್​ನಲ್ಲಿದ್ದಾರೆ. ಅದಕ್ಕೆ ಮುನ್ನ ಅವರು ಮಾರ್ಗನ್ ಸ್ಟಾನ್ಲೀ, ಎರ್ನ್ಸ್ಟ್ ಅಂಡ್ ಯಂಗ್ ಮತ್ತು ಆರ್ಥರ್ ಆಂಡರ್ಸನ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಒಟ್ಟು 24 ವರ್ಷದ ಕೆಲಸದ ಅನುಭವ ಹೊಂದಿದ್ದಾರೆ.

ಇನ್ನು, ಹಿತೇಶ್ ಸೇಠಿಯಾ ಅವರು ಸಿಎ ಓದಿದ್ದು ಹಾರ್ವರ್ಡ್ ಬಿಸಿನೆಸ್ ಸ್ಕೂಲ್​ನಲ್ಲೂ ಶಿಕ್ಷಣ ಪಡೆದಿದ್ದಾರೆ. ಐಸಿಐಸಿಐ ಬ್ಯಾಂಕ್​ನಲ್ಲಿ ಹೆಚ್ಚಿನ ಕೆಲಸದ ಅನುಭವ ಪಡೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್