AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್​ಬಿಐ ಸಮ್ಮತಿ

RBI Approves Appointment of Isha Ambani: ಇಶಾ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರನ್ನು ಜೆಎಫ್​ಎಸ್​ಎಲ್​ನ ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಆರ್​ಬಿಐ ಅನುಮತಿ ನೀಡಿದೆ. ಆರ್​ಬಿಐನ ಈ ಅನುಮೋದನೆ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಅಷ್ಟರೊಳಗೆ ಜೆಎಫ್​ಎಸ್​ಎಲ್ ಸಂಸ್ಥೆ ಈ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್​ಬಿಐ ಸಮ್ಮತಿ
ಇಶಾ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2023 | 6:09 PM

ನವದೆಹಲಿ, ನವೆಂಬರ್ 16: ರಿಲಾಯನ್ಸ್ ಸಾಮ್ರಾಜ್ಯದ ಯುವರಾಣಿ ಇಶಾ ಅಂಬಾನಿ (Isha Ambani) ಸೇರಿದಂತೆ ಮೂವರನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್​ನ ನಿರ್ದೇಶಕರನ್ನಾಗಿ ನೇಮಕ ಮಾಡುವುದಕ್ಕೆ ಆರ್​ಬಿಐ ನಿನ್ನೆ (ನ. 15) ಅನುಮೋದನೆ ನೀಡಿದೆ. ಇಶಾ ಅಂಬಾನಿ, ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಕುಮಾರ್ ಸೇಥಿಯಾ ಅವರನ್ನು ಜೆಎಫ್​ಎಸ್​ಎಲ್​ನ (Jio Financial Services) ನಿರ್ದೇಶಕರನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಆರ್​ಬಿಐ ನೀಡಿರುವ ಅನುಮತಿ ಇದು. ಆರ್​ಬಿಐನ ಈ ಅನುಮತಿ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಅಷ್ಟರೊಳಗೆ ಜೆಎಫ್​ಎಸ್​ಎಲ್ ಸಂಸ್ಥೆ ಈ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದರೆ, ಯಾಕೆ ನೇಮಕಾತಿ ಆಗಿಲ್ಲ ಎಂದು ಕಾರಣ ತಿಳಿಸಿ ಮತ್ತೊಮ್ಮೆ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು ಎಂದು ಆರ್​ಬಿಐ ತನ್ನ ಪತ್ರದಲ್ಲಿ ತಿಳಿಸಿದೆ.

ಇಶಾ ಅಂಬಾನಿ ಅವರು ಮುಕೇಶ್ ಅಂಬಾನಿಯ ಹಿರಿಯ ಮಗಳು. 32 ವರ್ಷದ ಅವರು ಮತ್ತು ಆಕಾಶ್ ಅಂಬಾನಿ ಇಬ್ಬರೂ ಕೂಡ ಅವಳಿಜವಳಿ. ಅನಂತ್ ಅಂಬಾನಿ ಮೂರನೇ ಮಗ. ಈ ಮೂವರೂ ಕೂಡ ಕಳೆದ ತಿಂಗಳು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮಂಡಳಿ ಸದಸ್ಯರಾಗಿ ನೇಮಕವಾಗಿದ್ದರು.

ಇದನ್ನೂ ಓದಿ: ಅಂಬಾನಿ ಮಕ್ಕಳಿಗೆ ಸಂಬಳ ಬೇಡ; ಮಂಡಳಿ ಸಭೆಯಲ್ಲಿ ಪಾಲ್ಗೊಂಡರೆ ಸಂಭಾವನೆ: ಆರ್​ಐಎಲ್ ನಿರ್ಣಯ

ಆಕಾಶ್ ಅಂಬಾನಿ ಅವರು ಜಿಯೋ ಇನ್ಫೋಕಾಮ್​ನ ಛೇರ್ಮನ್ ಆಗಿ ಜವಾಬ್ದಾರಿ ಪಡೆದಿದ್ದಾರೆ. ಇಶಾ ಅಂಬಾನಿ ರಿಲಾಯನ್ಸ್ ರೀಟೇಲ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ.

ಪಿರಾಮಲ್ ಕುಟುಂಬದ ಸೊಸೆಯಾಗಿರುವ ಇಶಾ ಅಂಬಾನಿ ಅಮೆರಿಕದ ಯಾಲೆ ಯೂನಿವರ್ಸಿಟಿ ಮತ್ತು ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಓದಿದವರು. 2016ರಲ್ಲಿ ಭಾರತದ ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಜಿಯೋದ ಪೂರ್ಣ ಕಾರ್ಯತಂತ್ರವನ್ನು ಇಶಾ ಅಂಬಾನಿ ರೂಪಿಸಿದ್ದರು ಎನ್ನಲಾಗುತ್ತಿದೆ. ಇದೀಗ ರಿಲಾಯನ್ಸ್ ರೀಟೇಲ್ ಸಂಸ್ಥೆಗೆ ಅವರು ಹೊಸ ಕಾಯಕಲ್ಪ ತರುವ ಪ್ರಯತ್ನದಲ್ಲಿದ್ದಾರೆ.

ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

ಇದೇ ವೇಳೆ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ನಿರ್ದೇಶಕರಾಗಿರುವ ಇತರ ಇಬ್ಬರೆಂದರೆ ಅಂಶುಮಾನ್ ಠಾಕೂರ್ ಮತ್ತು ಹಿತೇಶ್ ಸೇಥಿಯಾ. ಅಂಶುಮಾನ್ ಠಾಕೂರ್ ಅವರು 2014ರಿಂದ ರಿಲಾಯನ್ಸ್ ಗ್ರೂಪ್​ನಲ್ಲಿದ್ದಾರೆ. ಅದಕ್ಕೆ ಮುನ್ನ ಅವರು ಮಾರ್ಗನ್ ಸ್ಟಾನ್ಲೀ, ಎರ್ನ್ಸ್ಟ್ ಅಂಡ್ ಯಂಗ್ ಮತ್ತು ಆರ್ಥರ್ ಆಂಡರ್ಸನ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಒಟ್ಟು 24 ವರ್ಷದ ಕೆಲಸದ ಅನುಭವ ಹೊಂದಿದ್ದಾರೆ.

ಇನ್ನು, ಹಿತೇಶ್ ಸೇಠಿಯಾ ಅವರು ಸಿಎ ಓದಿದ್ದು ಹಾರ್ವರ್ಡ್ ಬಿಸಿನೆಸ್ ಸ್ಕೂಲ್​ನಲ್ಲೂ ಶಿಕ್ಷಣ ಪಡೆದಿದ್ದಾರೆ. ಐಸಿಐಸಿಐ ಬ್ಯಾಂಕ್​ನಲ್ಲಿ ಹೆಚ್ಚಿನ ಕೆಲಸದ ಅನುಭವ ಪಡೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು