AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PIDF: ಪೇಮೆಂಟ್ ಸ್ವೀಕೃತಿ ಸಾಧನಗಳಿಗೆ ಸಬ್ಸಿಡಿ ನೀಡುವ ಸ್ಕೀಮ್; ಪಿಐಡಿಎಫ್ ಅವಧಿ 2 ವರ್ಷ ಹೆಚ್ಚಿಸಿದ ಆರ್​ಬಿಐ

RBI Extends Scheme By 2 Years: ಪೇಮೆಂಟ್ಸ್ ಇನ್​ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ (ಪಿಐಡಿಎಫ್) ಸ್ಕೀಮ್ ಅನ್ನು ಆರ್​ಬಿಐ ಎರಡು ವರ್ಷ ವಿಸ್ತರಣೆ ಮಾಡಿದೆ. 2021ರ ಜನವರಿಯಲ್ಲಿ ದೇಶದೆಲ್ಲೆಡೆ ಪೇಮೆಂಟ್ ಸೌಕರ್ಯ ವ್ಯವಸ್ಥೆ ಹೆಚ್ಚಿಸಲು ಆರ್​ಬಿಐ ಪಿಐಡಿಎಫ್ ಸ್ಕೀಮ್ ಅರಂಭಿಸಿತ್ತು. ಸೌಂಡ್ ಬಾಕ್ಸ್ ಸಾಧನ ಹಾಗೂ ಆಧಾರ್ ಚಾಲಿತ ಬಯೋಮೆಟ್ರಿಕ್ ಸಾಧನಗಳಿಗೆ ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ಸಬ್ಸಿಡಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

PIDF: ಪೇಮೆಂಟ್ ಸ್ವೀಕೃತಿ ಸಾಧನಗಳಿಗೆ ಸಬ್ಸಿಡಿ ನೀಡುವ ಸ್ಕೀಮ್; ಪಿಐಡಿಎಫ್ ಅವಧಿ 2 ವರ್ಷ ಹೆಚ್ಚಿಸಿದ ಆರ್​ಬಿಐ
ಭಾರತೀಯ ರಿಸರ್ವ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 29, 2023 | 6:46 PM

Share

ನವದೆಹಲಿ, ಡಿಸೆಂಬರ್ 29: ಪೇಮೆಂಟ್ಸ್ ಇನ್​ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ (ಪಿಐಡಿಎಫ್) ಸ್ಕೀಮ್ ಅನ್ನು ಆರ್​ಬಿಐ ಎರಡು ವರ್ಷ ವಿಸ್ತರಣೆ ಮಾಡಿದೆ. ಈ ಸ್ಕೀಮ್ 2025ರ ಡಿಸೆಂಬರ್ 31ರವರೆಗೂ ಇರಲಿದೆ. ‘ಪಿಐಡಿಎಫ್ ಸ್ಕೀಮ್ ಅನ್ನು ಇನ್ನೂ ಎರಡು ವರ್ಷ ವಿಸ್ತರಿಸಲಾಗಿದೆ. ಇದರ ಫಲಾನುಭವಿಗಳ ವ್ಯಾಪ್ತಿ ಹೆಚ್ಚಿಸಲು ಅನುವಾಗುವಂತೆ, ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳನ್ನು ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ವರ್ತಕರಾಗಿ ಸೇರ್ಪಡೆ ಮಾಡಲಾಗಿದೆ,’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 2021ರ ಜನವರಿಯಲ್ಲಿ ಪಿಐಡಿಎಫ್ ಅನ್ನು ಮೂರು ವರ್ಷಗಳಿಗೆಂದು ಚಾಲನೆಗೊಳಿಸಿತ್ತು. ಪಾಯಿಂಟ್ ಆಫ್ ಸೇಲ್ (PoS) ಟರ್ಮಿನಲ್, ಕ್ಯೂಆರ್ ಕೋಡ್ ಇತ್ಯಾದಿ ಪಾವತಿ ಸ್ವೀಕೃತಿ ಸೌಕರ್ಯ ವ್ಯವಸ್ಥೆಯನ್ನು ಕೆಳ ಸ್ತರದ ನಗರ, ಪಟ್ಟಣಗಳು, ಈಶಾನ್ಯ ರಾಜ್ಯಗಳು, ಜಮ್ಮು ಕಾಶ್ಮೀರ, ಲಡಾಖ್ ರಾಜ್ಯಗಳಲ್ಲಿ ಅಳವಡಿಕೆಗೆ ಉತ್ತೇಜಿಸುವುದ ಪಿಐಡಿಎಫ್​ ಸ್ಕೀಮ್​ನ ಉದ್ದೇಶವಾಗಿದೆ. ಈ ಸ್ಕೀಮ್​ನಲ್ಲಿ ಸರ್ಕಾರ ಇರಿಸಿರುವ ಹಣ ಸದ್ಯ ಒಂದು ಸಾವಿರ ಕೋಟಿ ರೂಗೂ ಹೆಚ್ಚಿದೆ.

ಇದನ್ನೂ ಓದಿ: India@ 2075- ಅಮೆರಿಕವನ್ನು ಆರ್ಥಿಕವಾಗಿ ಭಾರತ ಯಾವಾಗ ಹಿಂದಿಕ್ಕಬಹುದು?: ಜಿಯೋಪೊಲಿಟಿಕಲ್ ತಜ್ಞೆ ವೆಲಿನಾ ಅಂದಾಜು

ಇನ್ನೂ ಒಂದು ಗಮನಾರ್ಹ ಅಂಶ ಎಂದರೆ, ಪಾವತಿ ಸ್ವೀಕೃತಿ ಸೌಕರ್ಯ ವ್ಯವಸ್ಥೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಅಥವಾ ಪ್ರಚುರಪಡಿಸಲು ಸರ್ಕಾರವು ಸೌಂಡ್ ಬಾಕ್ಸ್ ಸಾಧನ ಹಾಗೂ ಆಧಾರ್ ಚಾಲಿತ ಬಯೋಮೆಟ್ರಿಕ್ ಸಾಧನಗಳಿಗೆ ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ಸಬ್ಸಿಡಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಕಾಶ್ಮೀರ ಹಾಗು ಲಡಾಖ್​ನಲ್ಲಿ ಈ ಸೌಂಡ್ ಬಾಂಕ್ಸ್ ಮತ್ತು ಬಯೋಮೆಟ್ರಿಕ್ ಸಾಧನಗಳ ಒಟ್ಟು ವೆಚ್ಚದಲ್ಲಿ ಶೇ. 90ರಷ್ಟು ಸಬ್ಸಿಡಿ ಸಿಗುತ್ತದೆ.

2023ರ ನವೆಂಬರ್ 30ರವರೆಗಿನ ಮಾಹಿತಿ ಪ್ರಕಾರ ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ಸಬ್ಸಿಡಿ ಪಡೆದು ಸ್ಥಾಪಿತವಾದ ಭೌತಿಕ ಪೇಮೆಂಟ್ ಅಕ್ಸೆಪ್ಟೆನ್ಸ್ ಡಿವೈಸ್​​ಗಳ ಸಂಖ್ಯೆ 8,27,901 ಇದೆ. ಡಿಜಿಟಲ್ ಸಾಧನಗಳು 2,71,95,902 ಇದೆ. ಪಿಒಎಸ್ ಟರ್ಮಿನಲ್​ಗಳು, ಮೊಬೈಲ್ ಪಿಒಎಸ್, ಜಿಪಿಆರ್​ಎಸ್ (ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್) ಮತ್ತು ಪಿಎಸ್​ಟಿಎನ್​ಗಳು ಫಿಸಿಕಲ್ ಡಿವೈಸ್​ನಲ್ಲಿ ಸೇರಿವೆ. ಯುಪಿಐ ಕ್ಯುಆರ್, ಭಾರತ್ ಕ್ಯೂಆರ್ ಕೋಡ್ ಇತ್ಯಾದಿ ಕ್ಯೂಆರ್ ಕೋಡ್ ಇತ್ಯಾದಿಯವು ಡಿಜಿಟಲ್ ಡಿವೈಸ್ ಪಟ್ಟಿಗೆ ಸೇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?