AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್​ಬಿಐ ಸ್ಪಷ್ಟನೆ

RBI Clarification: ಕೆಲ ನೋಟುಗಳ ಸೀರಿಯಲ್ ನಂಬರ್​ನಲ್ಲಿ ಸ್ಟಾರ್ ಚಿಹ್ನೆ ಇರುವುದು ಕಂಡು ಬಂದು ಜನರಿಗೆ ಅನುಮಾನ ಹುಟ್ಟಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಆರ್​ಬಿಐ, * ಚಿಹ್ನೆ ಇರುವ ನೋಟುಗಳು ಅಮಾನ್ಯವಲ್ಲ ಎಂದು ಹೇಳಿದೆ.

Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್​ಬಿಐ ಸ್ಪಷ್ಟನೆ
ಸ್ಟಾರ್ ಗುರುತು (*) ಇರುವ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 27, 2023 | 6:54 PM

Share

ನವದೆಹಲಿ, ಜುಲೈ 27: ನಾಣ್ಯ, ನೋಟುಗಳ (Coins and Bank Notes) ವಿಚಾರದಲ್ಲಿ ಜನರಿಗೆ ಒಂದು ರೀತಿಯಲ್ಲಿ ಸದಾ ಅನುಮಾನಗಳೇ ತುಂಬಿರುತ್ತವೆ. 10 ರುಪಾಯಿ ನಾಣ್ಯ, 5 ರುಪಾಯಿ ನೋಟು ಇತ್ಯಾದಿಯನ್ನು ಜನರೂ ಮುಟ್ಟೋದಿಲ್ಲ, ಅಂಗಡಿಯವರೂ ಸ್ವೀಕರಿಸಲ್ಲ. ಸೋಷಿಯಲ್ ಮೀಡಿಯಾ, ವಾಟ್ಸಾಪ್ ಇತ್ಯಾದಿ ಕಡೆ, ಹಾಗೆಯೇ ಕೆಲವೊಮ್ಮೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳಿಂದ ಪ್ರಸಾರವಾಗುವ ತಪ್ಪು ಮಾಹಿತಿ ಇದಕ್ಕೆ ಕಾರಣವಾಗಿರುತ್ತದೆ. ಸ್ಟಾರ್ (*) ಚಿಹ್ನೆ ಇರುವ ಕರೆನ್ಸಿ ನೋಟುಗಳ (Star Notes) ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆಯಾಗುತ್ತದೆ.

ನೋಟಿನ ಸೀರಿಯಲ್ ನಂಬರ್​ನಲ್ಲಿ ಸ್ಟಾರ್ ಗುರುತು (*) ಇರುವ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆ ಆಗುತ್ತಿವೆ. ಈ ನೋಟುಗಳನ್ನು ಅಮಾನ್ಯವಾಗಿವೆ ಎಂದು ಕೆಲ ಗುಂಪುಗಳು ವಾದಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು ಸ್ಟಾರ್ (*) ಚಿಹ್ನೆ ಇರುವ ನೋಟು ಸಂಪೂರ್ಣ ಸಿಂಧುವಾಗಿದ್ದು ಯಾವುದೇ ನೋಟಿನಂತೆ ಚಲಾವಣೆ ಮಾಡಬಹುದು ಎಂದು ಹೇಳಿದೆ.

ನೋಟುಗಳಲ್ಲಿ ಸ್ಟಾರ್ ಚಿಹ್ನೆ ಎಲ್ಲಿರುತ್ತದೆ?

ಯಾವುದೇ ನೋಟಿನಲ್ಲೂ ನೀವು ಸೀರಿಯಲ್ ನಂಬರ್ ಅನ್ನು ನೋಡಬಹುದು. ಈ ನಂಬರ್​ನಲ್ಲಿ ಮೊದಲಿಗೆ 3 ಅಂಕಿಗಳ ಆಲ್ಫಾನ್ಯೂಮರಿಕ್ ಸಂಖ್ಯೆಯ ಪ್ರಿಫಿಕ್ಸ್ ಇರುತ್ತದೆ. ಅದಾದ ಬಳಿಕ ಸೀರಿಯಲ್ ನಂಬರ್ ಇರುತ್ತದೆ. ಕೆಲ ನೋಟುಗಳಲ್ಲಿ ಪ್ರಿಫಿಕ್ಸ್ ಮತ್ತು ಸೀರಿಯಲ್ ನಂಬರ್ ಮಧ್ಯೆ * ಚಿಹ್ನೆ ದಾಖಲಾಗಿರುತ್ತದೆ.

ಇದನ್ನೂ ಓದಿ: Bank Holidays In August: ಬ್ಯಾಂಕುಗಳಿಗೆ ಆಗಸ್ಟ್ ತಿಂಗಳಲ್ಲಿ ರಜಾ ದಿನಗಳೆಷ್ಟು? ಒಟ್ಟು 14, ಕರ್ನಾಟಕದಲ್ಲಿ 7; ಇಲ್ಲಿದೆ ಪಟ್ಟಿ

ನೋಟುಗಳಲ್ಲಿ ಸ್ಟಾರ್ ಚಿಹ್ನೆ ಯಾಕೆ ಹಾಕಲಾಗಿರುತ್ತದೆ?

ಆರ್​ಬಿಐ ಹೇಳಿರುವ ಪ್ರಕಾರ, ನೋಟುಗಳನ್ನು ಮುದ್ರಿಸುವಾಗ ಕೆಲವು ದೋಷದಿಂದ ಕೂಡಿರಬಹುದು. ಸೀರಿಯಲ್ ನಂಬರ್ ಪ್ರಕಾರ ಬಂಡಲ್​ಗಳಲ್ಲಿ ನೋಟುಗಳಿರುತ್ತವೆ. ದೋಷಯುಕ್ತ ನೋಟುಗಳಿದ್ದಲ್ಲಿ ಅದಕ್ಕೆ ಬದಲಿಯಾಗಿ ಬೇರೆ ನೋಟು ಮುದ್ರಿಸಿ ಬಂಡಲ್​ಗೆ ಸೇರಿಸಲಾಗುತ್ತದೆ. ಈ ಬದಲೀ ನೋಟುಗಳ ಸೀರಿಯಲ್ ನಂಬರ್ ಮಧ್ಯೆ * ಗುರುತನ್ನು ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ