AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market: ವಾರದ ಮೊದಲ ವಹಿವಾಟಿನ ದಿನವೇ ಸೆನ್ಸೆಕ್ಸ್ 900 ಅಂಕ ಕುಸಿತ; ಡಾಲರ್ ಎದುರು ಜಾರಿದ ರೂಪಾಯಿ ಮೌಲ್ಯ

ದೇಶೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರದಂದು ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಕ, ನಿಫ್ಟಿ 315 ಅಂಕ ಕುಸಿದಿದೆ. ಇದೇ ಸಮಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 81.55ಕ್ಕೆ ಕುಸಿದಿದೆ.

Stock Market: ವಾರದ ಮೊದಲ ವಹಿವಾಟಿನ ದಿನವೇ ಸೆನ್ಸೆಕ್ಸ್ 900 ಅಂಕ ಕುಸಿತ; ಡಾಲರ್ ಎದುರು ಜಾರಿದ ರೂಪಾಯಿ ಮೌಲ್ಯ
ಷೇರು ಮಾರುಕಟ್ಟೆ: ವಾರದ ಮೊದಲ ವಹಿವಾಟಿನ ದಿನವೇ ಸೆನ್ಸೆಕ್ಸ್ 900 ಅಂಕ ಕುಸಿತ; ಡಾಲರ್ ಎದುರು ಜಾರಿದ ರೂಪಾಯಿ ಮೌಲ್ಯ
TV9 Web
| Edited By: |

Updated on:Sep 26, 2022 | 12:09 PM

Share

ದೇಶೀಯ ಷೇರು ಮಾರುಕಟ್ಟೆ (stock Market)ಯಲ್ಲಿ ಈ ವಾರದ ಮೊದಲ ದಿನ ಸೋಮವಾರ ಭಾರಿ ಕುಸಿತ ಕಂಡಿದೆ. ಮಾರುಕಟ್ಟೆಯ ಆರಂಭದಲ್ಲಿಯೇ ಸೆನ್ಸೆಕ್ಸ್ (Sensex) 900ಕ್ಕೂ ಹೆಚ್ಚು ಅಂಕ ಕುಸಿದಿತ್ತು. ಸದ್ಯ ಸೆನ್ಸೆಕ್ಸ್ 952.39 ಅಂಕಗಳ ಕುಸಿತದೊಂದಿಗೆ 57,146.53 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಅದೇ ಸಮಯದಲ್ಲಿ ನಿಫ್ಟಿ (Nifty) 315.60 ಪಾಯಿಂಟ್‌ಗಳ ಕುಸಿತವನ್ನು 17,011.75 ಅಂಕಗಳಿಗೆ ತಲುಪಿದೆ. ವಾರದ ಮೊದಲ ವಹಿವಾಟಿನ ದಿನವು ಜಾಗತಿಕ ಮಾರುಕಟ್ಟೆಯಿಂದ ದೇಶೀಯ ಮಾರುಕಟ್ಟೆಗೆ ಕೆಟ್ಟ ಚಿಹ್ನೆಗಳನ್ನು ಕಂಡಿತು.

ಡಾಲರ್ ಎದುರು ರೂಪಾಯಿ ಮೌಲ್ಯ 81.55ಕ್ಕೆ ಕುಸಿತ

ಸೋಮವಾರ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು 43 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 81.52ಕ್ಕೆ ತಲುಪಿದೆ. ಸದ್ಯ ಇದು 81.55ಕ್ಕೆ ಕುಸಿದಿದೆ. ಇದು ಅತ್ಯಂತ ಕಡಿಮೆ ಮಟ್ಟವಾಗಿದ್ದು, ಎರಡು ವರ್ಷಗಳ ಯುಎಸ್ ಖಜಾನೆ ಇಳುವರಿ ಶೇ 4.2 ಗಳಿಸಿದೆ. ಇದು 2007ರ ಅಕ್ಟೋಬರ್ 12 ರಿಂದ ಅದರ ಗರಿಷ್ಠ ಮಟ್ಟವಾಗಿದೆ. ಡಾಲರ್ ಸೂಚ್ಯಂಕವು ರಾತ್ರಿಯಲ್ಲಿ 114 ಪಾಯಿಂಟ್‌ಗಳಿಂದ ಎರಡು ದಶಕಗಳ ಗರಿಷ್ಠ ಮಟ್ಟಕ್ಕೆ ಏರಿತು. ಈ ಎರಡು ಪ್ರಮುಖ ಕಾರಣಗಳಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಶುಕ್ರವಾರದಂದು ರೂಪಾಯಿಯು 30 ಪೈಸೆ ಕುಸಿದು, ಅಮೆರಿಕನ್ ಡಾಲರ್ ಎದುರು 81.09ಕ್ಕೆ ಕುಸಿತಗೊಂಡು ಮುಕ್ತಾಯವಾಗಿತ್ತು.

ಉಕ್ರೇನ್‌ನಲ್ಲಿನ ಸಂಘರ್ಷದಿಂದಾಗಿ ಭೌಗೋಳಿಕ ರಾಜಕೀಯ ಅಪಾಯಗಳ ಹೆಚ್ಚಳ, ದೇಶೀಯ ಷೇರುಗಳಲ್ಲಿನ ನೆಗೆಟಿವ್ ಟ್ರೆಂಡ್ ಮತ್ತು ಗಮನಾರ್ಹ ವಿದೇಶಿ ನಿಧಿಯ ಹೊರಹರಿವು ಹೂಡಿಕೆದಾರರ ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡಿದೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿಯು ಗ್ರೀನ್‌ಬ್ಯಾಕ್ ವಿರುದ್ಧ 81.47 ರಲ್ಲಿ ಪ್ರಾರಂಭವಾಯಿತು. ಆ ನಂತರ 81.52ಕ್ಕೆ ಕುಸಿಯಿತು. ಅದರ ಹಿಂದಿನ ಮುಕ್ತಾಯಕ್ಕಿಂತ 43 ಪೈಸೆಗಳ ಕುಸಿತವನ್ನು ದಾಖಲಿಸಿತು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Mon, 26 September 22

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ