AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಮೋಟಾರ್ಸ್- ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಪಾಲುದಾರಿಕೆಯಲ್ಲಿ ಆಕರ್ಷಕ ಸಾಲ ಯೋಜನೆ

ಭಾರೀ, ಮಧ್ಯಮ ಟ್ರಕ್​ಗಳ ಖರೀದಿಯ ಮೇಲೆ ಟಾಟಾ ಮೋಟಾರ್ಸ್ ಮತ್ತು ಜಮ್ಮು- ಕಾಶ್ಮೀರ ಬ್ಯಾಂಕ್​ನ ಜಂಟಿ ಗ್ರಾಹಕರಿಗೆ ವಿಶೇಷ ಟಾಟಾ ಡಿಲೈಟ್ ಪಾಯಿಂಟ್​ಗಳನ್ನು ನೀಡುತ್ತದೆ. ಟಾಟಾ ಮೋಟಾರ್ಸ್- ಜಮ್ಮು-ಕಾಶ್ಮೀರ ಬ್ಯಾಂಕ್ ಹಣಕಾಸು ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್-ಅಪ್ ಟ್ರಕ್​ಗಳಿಗೆ ವಿಶೇಷ ವಾಹನ ನಿರ್ವಹಣಾ ಕಾರ್ಯಕ್ರಮ ಒದಗಿಸಲಿದೆ.

ಟಾಟಾ ಮೋಟಾರ್ಸ್- ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಪಾಲುದಾರಿಕೆಯಲ್ಲಿ ಆಕರ್ಷಕ ಸಾಲ ಯೋಜನೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 09, 2021 | 4:02 PM

Share

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪೆನಿ ಟಾಟಾ ಮೋಟಾರ್ಸ್ ಈಗ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್​ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪಾಲುದಾರಿಕೆಯಿಂದ ಟಾಟಾ ಮೋಟಾರ್ಸ್​ನ ವಾಣಿಜ್ಯ ವಾಹನ ಎಲ್ಲಕ್ಕೂ ಪ್ರಯೋಜನಕಾರಿ ಕೊಡುಗೆಗಳು ದೊರೆಯುವಂತಾಗುತ್ತದೆ. ಭಾರೀ, ಮಧ್ಯಮ ಟ್ರಕ್​ಗಳ ಖರೀದಿಯ ಮೇಲೆ ಟಾಟಾ ಮೋಟಾರ್ಸ್ ಮತ್ತು ಜಮ್ಮು- ಕಾಶ್ಮೀರ ಬ್ಯಾಂಕ್​ನ ಜಂಟಿ ಗ್ರಾಹಕರಿಗೆ ವಿಶೇಷ ಟಾಟಾ ಡಿಲೈಟ್ ಪಾಯಿಂಟ್​ಗಳನ್ನು ನೀಡುತ್ತದೆ. ಟಾಟಾ ಮೋಟಾರ್ಸ್- ಜಮ್ಮು-ಕಾಶ್ಮೀರ ಬ್ಯಾಂಕ್ ಹಣಕಾಸು ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್-ಅಪ್ ಟ್ರಕ್​ಗಳಿಗೆ ವಿಶೇಷ ವಾಹನ ನಿರ್ವಹಣಾ ಕಾರ್ಯಕ್ರಮ ಒದಗಿಸಲಿದೆ. ಜಮ್ಮು-ಕಾಶ್ಮೀರ ಬ್ಯಾಂಕ್ ವಿಶೇಷ ಸಾಲದಿಂದ ಮೌಲ್ಯಕ್ಕೆ (ಲೋನ್ ಟು ವ್ಯಾಲ್ಯೂ- ಎಲ್​ಟಿವಿ) ಅನುಪಾತಗಳನ್ನು ಒದಗಿಸುತ್ತದೆ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಎಲ್ಲ ವಾಹನ ವಿಭಾಗಗಳಿಗೆ ವಿಸ್ತೃತ ಅವಧಿಯನ್ನು ಒದಗಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ದೇಶಾದ್ಯಂತ 950ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.

ಈ ಪಾಲುದಾರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ವ್ಯಾಪಾರ ಘಟಕದ ಅಧ್ಯಕ್ಷ ಗಿರೀಶ್ ವಾಘ್, “ಜಮ್ಮು ಮತ್ತು ಕಾಶ್ಮೀರದ ಮಾರುಕಟ್ಟೆ ನಾಯಕನಾಗಿ, ಕೇಂದ್ರಾಡಳಿತ ಪ್ರದೇಶದ ಅತಿದೊಡ್ಡ ಬ್ಯಾಂಕ್​ನೊಂದಿಗೆ ಸೇರಲು ನಾವು ಸಂತೋಷಗೊಂಡಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್​ನೊಂದಿಗೆ ಈ ಪಾಲುದಾರಿಕೆಯು ನಮ್ಮ ಗ್ರಾಹಕರಿಗೆ ವಾಹನ ಹಣಕಾಸು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದು ಸರಕು, ಪ್ರಯಾಣಿಕರ ಮತ್ತು ನಿರ್ಮಾಣ ವಿಭಾಗಗಳಲ್ಲಿ ಟಾಟಾ ಮೋಟಾರ್ಸ್​ನ ವ್ಯಾಪಕ ಶ್ರೇಣಿಯ ಉತ್ಪನ್ನಗಳೊಂದಿಗೆ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿಗೆ ಇರುವ ಅನುಭವವನ್ನು ಬಳಸಿಕೊಳ್ಳುತ್ತೇವೆ. ನಮ್ಮ ಪ್ರಯತ್ನಗಳೊಂದಿಗೆ ಹಣಕಾಸಿನ ತಡೆರಹಿತ ಲಭ್ಯತೆಯನ್ನು ಖಚಿತಪಡಿಸುತ್ತೇವೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಮ್ಮ ಮತ್ತು ಕಾಶ್ಮೀರ ಬ್ಯಾಂಕ್ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಆರ್.ಕೆ.ಚಿಬ್ಬರ್, “ದೊಡ್ಡ ಮತ್ತು ಗುಣಮಟ್ಟದ ಬ್ರ್ಯಾಂಡ್​ಗಳೊಂದಿಗೆ ಪಾಲುದಾರಿಕೆಯು ಜೆ.ಕೆ.ಬ್ಯಾಂಕ್​ನ ಸ್ಟ್ರಾಟೆಜಿಕ್ ಯೋಜನೆಯ ಕೇಂದ್ರಬಿಂದು ಆಗಿದೆ. ನಮ್ಮ ಗ್ರಾಹಕರಿಗೆ ವ್ಯಾಪಕ ಮತ್ತು ಎಂಡ್-ಟು-ಎಂಡ್ ಹಣಕಾಸು ಪರಿಹಾರಗಳ ಲಭ್ಯತೆಯಲ್ಲಿ ಖಚಿತಪಡಿಸಿಕೊಳ್ಳಲು ಟಾಟಾ ಮೋಟಾರ್ಸ್​ನೊಂದಿಗೆ ಪಾಲುದಾರಿಕೆಯನ್ನು ನಾವು ಒಂದು ಅವಕಾಶವಾಗಿ ನೋಡುತ್ತೇವೆ. ಈ ಒಪ್ಪಂದವು ಗ್ರಾಹಕರಿಗೆ ಪ್ರೀಮಿಯಂ ಗೋ-ಟು-ಮಾರ್ಕೆಟ್ ಪ್ಯಾಕೇಜ್​ಗೆ ಅನುವು ಮಾಡಿಕೊಡುತ್ತದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್​ನ ಹೆಚ್ಚು ಕಸ್ಟಮೈಸ್ ಹಣಕಾಸು ಸಾಲ ಯೋಜನೆಗಳು ಟಾಟಾ ಮೋಟಾರ್ಸ್ ನೀಡುವ ವಾಣಿಜ್ಯ ವಾಹನಗಳ ವೈವಿಧ್ಯಮಯ ಆಯ್ಕೆಗಳೊಂದಿಗೆ ಸೇರಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ

(Tata Motors signed MOU with Jammu and Kashmir bank for commercial vehicle finance solution)

Published On - 4:01 pm, Fri, 9 July 21

Follow Us
Web contact
Web contact

TV9 Kannada

Read More
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!