AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲಾನ್ ಮಸ್ಕ್ ಅವರ ಎಐ ಕಂಪನಿ ಬಿಟ್ಟು ಎದುರಾಳಿ ಓಪನ್​ಎಐ ಸೇರಿದ ಭಾರತ ಮೂಲದ ಉದಯ್ ರುದ್ರರಾಜು

Indian origin Uday Ruddarraju shares experience of working under Elon Musk: ಎಕ್ಸ್​ಎಐ ಸ್ಟಾರ್ಟಪ್​ನಲ್ಲಿ ಇನ್​ಫ್ರಾಸ್ಟ್ರಕ್ಚರ್ ಮುಖ್ಯಸ್ಥನಾಗಿ ಒಂದು ವರ್ಷ ಕೆಲಸ ಮಾಡಿದ್ದ ಉದಯ್ ರುದ್ರರಾಜು ರಾಜೀನಾಮೆ ಕೊಟ್ಟಿದ್ದಾರೆ. ಇಲಾನ್ ಮಸ್ಕ್ ಅವರ ವಿರೋಧಿ ಎನ್ನಲಾದ ಸ್ಯಾಮ್ ಆಲ್ಟ್​ಮ್ಯಾನ್ ಅವರ ಓಪನ್ ಎಐ ಕಂಪನಿಗೆ ಸೇರಿದ್ದಾರೆ. ಎಕ್ಸ್​ಎಐನಲ್ಲಿನ ತಮ್ಮ ಕೆಲಸದ ಅನುಭವ, ಇಲಾನ್ ಮಸ್ಕ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇಲಾನ್ ಮಸ್ಕ್ ಅವರ ಎಐ ಕಂಪನಿ ಬಿಟ್ಟು ಎದುರಾಳಿ ಓಪನ್​ಎಐ ಸೇರಿದ ಭಾರತ ಮೂಲದ ಉದಯ್ ರುದ್ರರಾಜು
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 13, 2025 | 7:43 PM

Share

ನವದೆಹಲಿ, ಜುಲೈ 13: ಒಂದು ವರ್ಷದ ಹಿಂದೆ ಇಲಾನ್ ಮಸ್ಕ್ ಅವರ ಎಕ್ಸ್ ಎಐ (xAI) ಎನ್ನುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿಗೆ ಅದರ ಇನ್​ಫ್ರಾಸ್ಟ್ರಕ್ಚರ್ ಮುಖ್ಯಸ್ಥನಾಗಿ ಸೇರಿದ್ದ ಭಾರತ ಮೂಲದ (Indian origin) ಉದಯ್ ರುದ್ದರ್​ರಾಜು (Uday Ruddarraju) ಅವರು ಇದೀಗ ರಾಜೀನಾಮೆ ನೀಡಿ ಎದುರಾಳಿ ಸ್ಯಾಮ್ ಆಲ್ಟ್​ಮ್ಯಾನ್ ಅವರ ಓಪನ್​ಎಐ ಕಂಪನಿಗೆ ಸೇರಿದ್ದಾರೆ. ಉದಯ್ ರುದ್ರರಾಜು ತಾನು ಎಕ್ಸ್ ಎಐಗೆ ರಾಜೀನಾಮೆ ನೀಡಿದ್ದು, ಹಾಗೂ ಆ ಸ್ಟಾರ್ಟಪ್​​ನಲ್ಲಿ ತಮ್ಮ ಒಂದು ವರ್ಷದ ಅನುಭವ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ. ಇಲಾನ್ ಮಸ್ಕ್ ಅವರ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ.

ಎಕ್ಸ್​ಎಐ ಬಹಳ ಕಡಿಮೆ ಅವಧಿಯಲ್ಲಿ ಅನಿರೀಕ್ಷಿತ ಸಾಧನೆ ಮಾಡಿತಾ?

ಉದಯ್ ರುದ್ರರಾಜು ಅವರು ತಮ್ಮ ಒಂದು ವರ್ಷದ ಎಕ್ಸ್​ಎಐ ಕೆಲಸವನ್ನು ಮರೆಯಲಾಗದ ಅನುಭವ ಎಂದು ಬಣ್ಣಿಸಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಕಂಪನಿ ಇಷ್ಟು ಸಾಧನೆ ಮಾಡುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದು ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ದೂರದ ನಾಡಲ್ಲಿ ಬಿಲಿಯನೇರ್​​ಗಳಾದವರು; ಅಮೆರಿಕದಲ್ಲಿ ಇಸ್ರೇಲ್, ತೈವಾನ್, ಚೀನೀಯರನ್ನೂ ಮೀರಿಸಿದ ಭಾರತೀಯರು

‘ನಾನು ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ, ನಾಲ್ಕು ತಿಂಗಳಲ್ಲಿ ಒಂದು ಲಕ್ಷ ಜಿಪಿಯುಗಳನ್ನು ಅಳವಡಿಸಬಹುದು ಎಂದು ಹೇಳುತ್ತಿದ್ದುದನ್ನು ಕೇಳಿದ್ದೆ. ಪೂರ್ಣ ಕಾರ್ಯ ನಿರ್ವಹಣೆಯ ಸೈಟ್ ಇಲ್ಲದೇ ಇದನ್ನು ಮಾಡಲು ಸಾಧ್ಯವಾ? ಹಾಗನ್ನುತ್ತಿದ್ದವರೆಲ್ಲಾ ಹುಚ್ಚರು ಎಂದು ಭಾವಿಸಿದ್ದೆ. ಆದರೆ, ನಾವು ಎರಡು ಪಟ್ಟು ಹೆಚ್ಚು ಅಳವಡಿಸಿದೆವು. ಅದರಲ್ಲೂ ಗ್ರೋಕ್-3 ಅನ್ನು ಯಶಸ್ವಿಯಾಗಿ ಟ್ರೇನ್ ಮಾಡಿದ್ದು ನನಗೆ ಬಹಳ ಹೆಮ್ಮೆ ತಂದಿತು. ನಾನು ಮೊದಲು ಅಂದುಕೊಂಡಿದ್ದು ತಪ್ಪಾಯಿತಲ್ಲಾ ಎಂದು ಖುಷಿಯಾಯಿತು’ ಎಂದು ರುದ್ರರಾಜು ಸಂತಸ ವ್ಯಕ್ತಪಡಿಸಿದ್ದಾರೆ.

ಇಲಾನ್ ಮಸ್ಕ್ ಬಗ್ಗೆ ರುದ್ರರಾಜು ಹೇಳಿದ್ದಿದು…

ತಾನು ಇಲಾನ್ ಮಸ್ಕ್ ಅವರಿಗೆ ನೇರವಾಗಿ ರಿಪೋರ್ಟಿಂಗ್ ಮಾಡುತ್ತಿದ್ದೆ. ಅವರಿಂದ ನೇರವಾಗಿ ಕಲಿಯುವ ಅವಕಾಶ ಸಿಕ್ಕಿತು. ಎಷ್ಟು ತೀವ್ರತೆಯಿಂದ ಗಮನ ಹರಿಸಬೇಕು, ಹೇಗೆ ಎಕ್ಸಿಕ್ಯೂಟ್ ಮಾಡಬೇಕು ಎಂಬುದನ್ನು ಒಳಗಿಂದ ಪ್ರತ್ಯಕ್ಷವಾಗಿ ಕಂಡೆ ಎಂದು ಹೇಳಿದ ಅವರು ಇಲಾನ್ ಮಸ್ಕ್ ಅವರ ಕ್ಷಮತೆಯನ್ನು ಹೊಗಳಿದ್ದಾರೆ.

ಇದನ್ನೂ ಓದಿ: ಮಾವನ ಕಂಪನಿಯಲ್ಲಿ ಯಾಕೆ ಸೇರಲಿಲ್ಲ? ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ ಮಾಜಿ ಪ್ರಧಾನಿ ಬಗ್ಗೆ ತಮಾಷೆ

‘ಜೆನ್ಸೆನ್ ಹುವಾಂಗ್ ಹೇಳಿದ್ದು ನಿಜ. ಇಲಾನ್ ಮತ್ತವರ ತಂಡಗಳು ಸಾಧನೆ ವಿಷಯಕ್ಕೆ ಬಂದರೆ ಒಂದೇ ತೆರನಾದವರು. ಎಐ ಕಂಪ್ಯೂಟಿಂಗ್​ನ ಭವಿಷ್ಯವನ್ನು ರೂಪಿಸಲು ಸಣ್ಣ ಪಾತ್ರ ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಋಣಿಯಾಗಿದ್ದೇನೆ’ ಎಂದು ಭಾರತ ಮೂಲದ ಉದಯ್ ರುದ್ರರಾಜು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ