ಯುಪಿಐ ಆ್ಯಪ್​ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ

UPI rules changes from 2025 August: ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಯುಪಿಐನಲ್ಲಿ ಆಗಸ್ಟ್ 1ರಿಂದ ಒಂದಷ್ಟು ನಿಯಮ ಬದಲಾವಣೆ ತರುತ್ತಿದೆ. ಯುಪಿಐ ಬಳಕೆದಾರರು ಬ್ಯಾಂಕ್ ಬ್ಯಾಲನ್ಸ್ ಅನ್ನು ಮಿತಿಗಿಂತ ಹೆಚ್ಚು ಬಾರಿ ಬಳಸಲು ಆಗುವುದಿಲ್ಲ. ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​ಗಳ ವಿವರವನ್ನು ಪರಿಶೀಲಿಸಲು ನಿರ್ಬಂಧ ಇದೆ.

ಯುಪಿಐ ಆ್ಯಪ್​ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ
ಫೋನ್​ಪೇ

Updated on: Jul 27, 2025 | 6:57 PM

ನವದೆಹಲಿ, ಜುಲೈ 27: ಯುಪಿಐ ಪೇಮೆಂಟ್ ಸಿಸ್ಟಂನಲ್ಲಿ (UPI) ಆಗಸ್ಟ್ 1ರಿಂದ ಒಂದಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಬ್ಯಾಲನ್ಸ್ ಪರಿಶೀಲನೆ, ಆಟೊಪೇಯಂತಹ ಫೀಚರ್​ಗಳಿಂದ ಹಿಡಿದು ಎಪಿಐ ಬಳಕೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯವರೆಗೆ ಕ್ರಮ ಬದಲಾವಣೆ ಮಾಡಲಾಗುತ್ತಿದೆ. ಯುಪಿಐ ಸೇವೆಗಳನ್ನು ಹೆಚ್ಚು ಸಮರ್ಪಕವಾಗಿಸಲು ಮತ್ತು ಸುಸ್ಥಿರಗೊಳಿಸಲು ಈ ಬದಲಾವಣೆ ಆಗುತ್ತಿದೆ.

ಬ್ಯಾಲನ್ಸ್ ಪರಿಶೀಲನೆಗೆ ಮಿತಿ

ಗೂಗಲ್ ಪೇ, ಪೇಟಿಎಂ, ಫೋನ್​ಪೇ ಇತ್ಯಾದಿ ಯುಪಿಐ ಬಳಕೆದಾರರು ಗಮನಿಸಬೇಕಾದ ಬೆಳವಣಿಗೆ ಇದು. ನೀವು ಒಂದು ಯುಪಿಐ ಆ್ಯಪ್​ನಲ್ಲಿ ಒಂದು ದಿನದಲ್ಲಿ 50 ಬಾರಿ ಮಾತ್ರ ಯಾವುದೇ ಬ್ಯಾಂಕ್ ಅಕೌಂಟ್​ನ ಬ್ಯಾಲನ್ಸ್ ಪರಿಶೀಲಿಸಬಹುದು. ಅದಕ್ಕಿಂತ ಹೆಚ್ಚು ಬಾರಿ ಬ್ಯಾಲನ್ಸ್ ಚೆಕ್ ಮಾಡಲು ಆಗುವುದಿಲ್ಲ.

ಇದನ್ನೂ ಓದಿ: ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​​ಗಳ ಮಾಹಿತಿ

ನಿಮ್ಮ ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​​ಗಳ ಬಗ್ಗೆ ಒಂದು ದಿನದಲ್ಲಿ 25 ಬಾರಿ ಮಾತ್ರ ಮಾಹಿತಿ ಪಡೆಯಬಹುದು.

ಆಟೊಡೆಬಿಟ್​ಗೆ ನಿರ್ಬಂಧ

ಒಟಿಟಿ ಪ್ಲಾಟ್​ಫಾರ್ಮ್​ಗಳು, ಮ್ಯುಚುವಲ್ ಫಂಡ್ ಎಸ್​ಐಪಿ ಇತ್ಯಾದಿಗೆ ನಿಯಮಿತವಾಗಿ ಹಣ ಪಾವತಿಸುತ್ತೇವೆ. ತನ್ನಂತಾನೇ ಇವು ಕಡಿತಗೊಳ್ಳಲು ಅಟೊಡೆಬಿಟ್ ಆಯ್ಕೆ ಇದೆ. ಕಡಿಮೆ ಟ್ರಾಫಿಕ್ ಇರುವ ಬೆಳಗಿನ 10 ಗಂಟೆಯೊಳಗಿನ ಅವಧಿ, ಮಧ್ಯಾಹ್ನ 1 ಗಂಟೆಯಿಂದ 5 ಗಂಟೆಯವರೆಗಿನ ಅವಧಿ, ಹಾಗೂ ರಾತ್ರಿ 9:30ರ ನಂತರದ ಅವಧಿಯಲ್ಲಿ ಆಟೊಡೆಬಿಟ್ ಆಗುವಂತೆ ನಿರ್ಬಂಧಿಸಲಾಗಿದೆ.

90 ಸೆಕೆಂಡ್ ಗ್ಯಾಪ್

ನೀವು ಮಾಡಿದ ಟ್​ರಾನ್ಸಾಕ್ಷನ್ ಇನ್ನೂ ಬಾಕಿ ಇದ್ದು, ಅದರ ಸ್ಟೇಟಸ್ ಪರಿಶೀಲಿಸಲು ನಿರ್ಬಂಧ ಹಾಕಲಾಗುತ್ತಿದೆ. ಮೂರು ಬಾರಿ ಮಾತ್ರ ಸ್ಟೇಟಸ್ ಪರಿಶೀಲಿಸಬಹುದು. ಪ್ರತೀ ಪರಿಶೀಲನೆ ನಡೆಯುವೆ ಕನಿಷ್ಠ 90 ಸೆಕೆಂಡ್ ಗ್ಯಾಪ್ ಇರಬೇಕು.

ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ

ಈ ಯುಪಿಐ ನಿಯಮ ಬದಲಾವಣೆ ಯಾಕೆ?

ಯುಪಿಐ ಬಳಕೆ ಈಗ ಬಹಳಷ್ಟು ಆಗುತ್ತಿದೆ. ಒಂದು ತಿಂಗಳಲ್ಲಿ 1,600 ಕೋಟಿಯಷ್ಟು ಟ್ರಾನ್ಸಾಕ್ಷನ್​ಗಳು ಆಗುತ್ತವೆ. ಹೀಗಾಗಿ, ಯುಪಿಐ ನೆಟ್ವರ್ಕ್ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಇದನ್ನು ತಪ್ಪಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಈ ಕ್ರಮ ತೆಗೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Sun, 27 July 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us