AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಲಯನ್ಸ್ ಅಯ್ಯಪ್ಪ’ ಹತ್ಯೆ ಪ್ರಕರಣ: ಡಬಲ್​ ಮರ್ಡರ್​ ಜಸ್ಟ್​ ಮಿಸ್, ಸದ್ಯಕ್ಕೆ ಇಬ್ಬರ ಅರೆಸ್ಟ್

ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ರಾತ್ರಿ ಹತ್ಯೆಯಾಗಿದ್ದ ಅಯ್ಯಪ್ಪ ದೊರೆ, ಮಾರನೆಯ ದಿನ ಎಚ್‌ಎಂಟಿ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಸಂಬಂಧ ಈಗ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ. ಮಧುಕರ್ ಅಂಗೂರ್ ಹತ್ಯೆಗೂ ಹೊಂಚು ಹಾಕಿದ್ದರು: ಅಯ್ಯಪ್ಪ ಹತ್ಯೆಗೆ ಸುಧೀರ್ ಎಂಬಾತ ಸೂರಜ್ ಎಂಬಾತನಿಗೆ 1 ಕೋಟಿ ರೂಪಾಯಿ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ. 2017ರಲ್ಲಿ ಅಲಯನ್ಸ್ ವಿವಿಯಲ್ಲಿ ಸುಧೀರ್ ಅಂಗೂರ್ ಹಾಗೂ […]

'ಅಲಯನ್ಸ್  ಅಯ್ಯಪ್ಪ' ಹತ್ಯೆ ಪ್ರಕರಣ: ಡಬಲ್​ ಮರ್ಡರ್​ ಜಸ್ಟ್​ ಮಿಸ್, ಸದ್ಯಕ್ಕೆ ಇಬ್ಬರ ಅರೆಸ್ಟ್
ಸಾಧು ಶ್ರೀನಾಥ್​
|

Updated on:Oct 25, 2019 | 6:02 PM

Share

ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ರಾತ್ರಿ ಹತ್ಯೆಯಾಗಿದ್ದ ಅಯ್ಯಪ್ಪ ದೊರೆ, ಮಾರನೆಯ ದಿನ ಎಚ್‌ಎಂಟಿ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಸಂಬಂಧ ಈಗ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ.

ಮಧುಕರ್ ಅಂಗೂರ್ ಹತ್ಯೆಗೂ ಹೊಂಚು ಹಾಕಿದ್ದರು: ಅಯ್ಯಪ್ಪ ಹತ್ಯೆಗೆ ಸುಧೀರ್ ಎಂಬಾತ ಸೂರಜ್ ಎಂಬಾತನಿಗೆ 1 ಕೋಟಿ ರೂಪಾಯಿ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ. 2017ರಲ್ಲಿ ಅಲಯನ್ಸ್ ವಿವಿಯಲ್ಲಿ ಸುಧೀರ್ ಅಂಗೂರ್ ಹಾಗೂ ಮಧುಕರ್ ಅಂಗೂರ್ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು.

ಗಲಾಟೆಯಲ್ಲಿ ಅಯ್ಯಪ್ಪ, ಮಧುಕರ್ ಅಂಗೂರ್ ಜೊತೆ ಸೇರಿದ್ದರು. ಈ ಘಟನೆಯ ಬಳಿಕ ಸುಧೀರ್ ಅಂಗೂರ್, ಸೂರಜ್ ಗೆ ಒಂದು ಕೋಟಿ ಹಣ ನೀಡಿ ಹತ್ಯೆ ಮಾಡುವಂತೆ ಸುಪಾರಿ ಕೊಟ್ಟಿದ್ದ. ಸೋದರ ಮಧುಕರ್ ಅಂಗೂರ್ ಹತ್ಯೆಗೆ ಇದೇ ಸುಧೀರ್ ಅಂಗೂರ್ ಸುಪಾರಿ ನೀಡಿದ್ದಎಂದು ತಿಳಿದುಬಂದಿದೆ. ಅಲ್ಲಿಗೆ ಡಬಲ್​ ಮರ್ಡರ್​ ಜಸ್ಟ್​ ಮಿಸ್ ಆಗಿದೆ.

ಅಲಯನ್ಸ್ ವಿವಿ ಎಕ್ಸಿಕ್ಯೂಟಿವ್ ಹಾಗೂ ಶಿವಸೇನೆಯ ಕಾರ್ಯಕರ್ತನಾಗಿದ್ದ ಸೂರಜ್ ಸುಪಾರಿ ಪಡೆದ ನಂತರ ಗ್ಯಾಂಗ್ ರಚನೆ ಮಾಡಿ ಮಧುಕರ್ ಅಂಗೂರ್ ಹಾಗೂ ಅಯ್ಯಪ್ಪ ದೊರೆ ಇಬ್ಬರ ನಡಾವಳಿ ಬಗ್ಗೆ, ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ. ಹಂತಕರು ಕಳೆದ ಆರು ತಿಂಗಳಿಂದ ನಿಗಾ ಇಟ್ಟಿದ್ದರು. ಅ. 15ರಿಂದ ಪ್ಲಾನ್ ಮಾಡಿ ಮಂಗಳವಾರ ವಾಕಿಂಗ್‌ಗೆ ಬಂದಿದ್ದ ಅಯ್ಯಪ್ಪ ದೊರೆ ಹತ್ಯೆ ಮಾಡಿದ್ದಾರೆ.

ಪ್ರಕರಣದ ಇಂಚಿಂಚು ಮಾಹಿತಿ ಇಲ್ಲಿದೆ  ಮೃತರ ಪತ್ನಿ ಭಾವನರಿಂದ ದೂರು ಪಡೆಯಲಾಗಿತ್ತು. ಮೊದಲಿಗೆ ಮೂರು ತಂಡ ರಚನೆ ಮಾಡಲಾಗಿತ್ತು. ನಂತರದಲ್ಲಿ 8 ತಂಡಗಳಿಗೆ ಏರಿಸಲಾಯಿತು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ನಂತರ ತನಿಖೆ ನಡೆಸಿದಾಗ ಯೂನಿವರ್ಸಿಟಿ ವಿವಾದ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ, ಸುಧೀರ್ ಅಂಗೂರ್ ವಿಚಾರಣೆ ಮಾಡಿದಾಗ ಸೂರಜ್ ಸಿಂಗ್ ವಿಚಾರ ಹೇಳಿದ. ಮುಂದೆ, ಸೂರಜ್ ಸಿಂಗ್ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಪ್ರಕಾರ ಮರಣ ಮೃದಂಗ ಹೀಗಿತ್ತು: 17 ಬಾರಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಸೂರಜ್ ಸಿಂಗ್ ಗೆ ಇನ್ನೂ ಕೆಲವರು ಜೊತೆಯಾಗಿ ಕುತ್ತಿಗೆ ಹಾಗೂ ಕೈ ಸೇರಿದಂತೆ ಕೆಲವು ಕಡೆ ಹಲ್ಲೆ ಮಾಡಿದಾಗ ಅಯ್ಯಪ್ಪ, ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ, ಸುಧೀರ್ ಅಂಗೂರ್ ಬಂಧನ ಮಾಡಲಾಗಿದೆ. ಆತನ ಜೊತೆಗೆ ಸೂರಜ್ ನನ್ನು ಸಹ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.

Published On - 1:05 pm, Thu, 17 October 19

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..