AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಗೆದಷ್ಟೂ ಸಿಗ್ತಿದೆ Drugs ಹುಳಗಳ ದೊರೆ ವಿರೇನ್​ ಖನ್ನಾನ 13 ದೇಶಗಳ ಆಸ್ತಿಪಾಸ್ತಿಯ ನಂಟು!

ಬೆಂಗಳೂರು: ಡ್ರಗ್ಸ್​ ದಂಧೆ ಕೇಸ್​ ತನಿಖೆಯ ಹಾದಿಯಲ್ಲಿ.. ಮಾದಕ ವಸ್ತುಗಳ ಮಾರಾಟ ಹಾಗೂ ಡ್ರಗ್ಸ್​ ಪಾರ್ಟಿಗಳ ಆಯೋಜನೆಯಿಂದ ಬೇನಾಮಿ ಆಸ್ತಿ ಸಂಪಾದಿಸಿರೋ ಆರೋಪಿಗಳಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ. ಈ ಕುರಿತು ರೋಚಕ ಸಂಗತಿಗಳ ಕಂಪ್ಲೀಟ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ಹೌದು, CCB ಆಯ್ತು, ED ಬಂದು ಹೋಯ್ತು ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್​, CCB, ED ಬಳಿಕ ಇದೀಗ ಕೇಸ್​ನ ತನಿಖೆಗೆ ಆದಾಯ ತೆರಿಗೆ ಅಥವಾ IT ಇಲಾಖೆಯು ಸಹ […]

ಬಗೆದಷ್ಟೂ ಸಿಗ್ತಿದೆ Drugs ಹುಳಗಳ ದೊರೆ ವಿರೇನ್​ ಖನ್ನಾನ 13 ದೇಶಗಳ ಆಸ್ತಿಪಾಸ್ತಿಯ ನಂಟು!
ವಿರೇನ್​ ಖನ್ನಾ
KUSHAL V
|

Updated on:Sep 15, 2020 | 12:55 PM

Share

ಬೆಂಗಳೂರು: ಡ್ರಗ್ಸ್​ ದಂಧೆ ಕೇಸ್​ ತನಿಖೆಯ ಹಾದಿಯಲ್ಲಿ.. ಮಾದಕ ವಸ್ತುಗಳ ಮಾರಾಟ ಹಾಗೂ ಡ್ರಗ್ಸ್​ ಪಾರ್ಟಿಗಳ ಆಯೋಜನೆಯಿಂದ ಬೇನಾಮಿ ಆಸ್ತಿ ಸಂಪಾದಿಸಿರೋ ಆರೋಪಿಗಳಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ. ಈ ಕುರಿತು ರೋಚಕ ಸಂಗತಿಗಳ ಕಂಪ್ಲೀಟ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ಹೌದು, CCB ಆಯ್ತು, ED ಬಂದು ಹೋಯ್ತು ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್​, CCB, ED ಬಳಿಕ ಇದೀಗ ಕೇಸ್​ನ ತನಿಖೆಗೆ ಆದಾಯ ತೆರಿಗೆ ಅಥವಾ IT ಇಲಾಖೆಯು ಸಹ ಎಂಟ್ರಿ ಕೊಟ್ಟಿದೆ.  ಆರೋಪಿಗಳ ಆದಾಯದ ಮೇಲೆ ಹದ್ದಿನ ಕಣ್ಣಿಟ್ಟಿರೋ ಇಲಾಖೆಗೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರೋದು ಕಂಡುಬಂದಿದೆ. ಹೀಗಾಗಿ, ಬಂಧಿತ ಆರೋಪಿಗಳ ಆದಾಯದ ಬಗ್ಗೆ IT ಟೀಂ ಪರಿಶೀಲನೆ ನಡೆಸಿದೆ.

ದೇಶ, ವಿದೇಶಗಳಲ್ಲಿದೆ ವಿರೇನ್ ಖನ್ನಾ ಅಪಾರ ಸಂಪತ್ತು! ವಿದೇಶಿ ಪಾರ್ಟಿ ಕಿಂಗ್​ಪಿನ್ ವಿರೇನ್ ಖನ್ನಾ ಮಾಡಿರೋ ಆಸ್ತಿಪಾಸ್ತಿ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ ನೋಡಿ. ವಿರೇನ್ ಖನ್ನಾ ಸುಮಾರು 250ಕ್ಕೂ ಹೆಚ್ಚು ಆಸ್ತಿ ಹೊಂದಿದ್ದಾನೆ. ಪ್ರತಿ ವರ್ಷ 2 ಕೋಟಿ 50 ಲಕ್ಷ ರೂಪಾಯಿ ಆದಾಯ ತೆರಿಗೆ ಪಾವತಿ ಸಹ ಮಾಡ್ತಾನೆ ಎಂದು ತಿಳದುಬಂದಿದೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 13 ದೇಶಗಳಲ್ಲಿ ವಿರೇನ್ ಕುಟುಂಬ ಆಸ್ತಿ ಹೊಂದಿದೆ. ಜೊತೆಗೆ, ದೆಹಲಿ, ಮುಂಬೈ, ಹಾಗೂ ಬೆಂಗಳೂರಿನಲ್ಲಿ ಫ್ಲ್ಯಾಟ್ ಹೊಂದಿರೋ ವಿರೇನ್ ಮಹಾರಾಷ್ಟ್ರದ ಪುಣೆ ಬಳಿ ಖನ್ನಾ ಹೆಸರಿನಲ್ಲಿ ಫಾರ್ಮ್​ಹೌಸ್ ಸಹ ಖರೀದಿಸಿದ್ದಾನೆ.

ಮೂರು ಇವೆಂಟ್ ಕಂಪನಿಗಳನ್ನ ಹೊಂದಿರೋ ಡ್ರಗ್ಸ್​ ಕೇಸ್​ನ A3 ಆರೋಪಿ ವಿರೇನ್ 4-5 ಐಷಾರಾಮಿ ಕಾರುಗಳನ್ನ ಸಹ ಖರೀದಿಸಿದ್ದಾನೆ. ಜೊತೆಗೆ, ಡ್ರಗ್  ಪೆಡ್ಲರ್​ಗಳ ಜೊತೆ ವಿರೇನ್ ಖನ್ನಾ ನೇರ ಸಂಪರ್ಕ ಹೊಂದಿರೋದು ಕೂಡ ಪತ್ತೆಯಾಗಿದ್ದು Drugs ಪಾರ್ಟಿಗಳ ಅನಭಿಷಿಕ್ತ ದೊರೆ ವಿರೇನ್​ ಖನ್ನಾನ ಸಂಪತ್ತನ್ನು ಮೊಗೆದಷ್ಟು ಮತ್ತಷ್ಟು, ಮಗದಷ್ಟೂ ಸಿಗುತ್ತಿದೆ..

Published On - 12:47 pm, Tue, 15 September 20

Follow Us
ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್