AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದು ನನ್ನ ವೈಯಕ್ತಿಕ ವಿಚಾರ, ನೀವು ಹಾಗೆಲ್ಲ ನೋಡುವಂತಿಲ್ಲ -CCB ತಂಡಕ್ಕೆ ಖನ್ನಾ ಆವಾಜ್​

ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್​ ಆಗಿದ್ರೂ A3 ಆರೋಪಿ ವಿರೇನ್​ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ. ಬಂಧನವಾಗಿ ಇಷ್ಟು ದಿನವಾದರೂ ಖನ್ನಾ ತನ್ನ ಮೊಬೈಲ್​ ಅನ್​ಲಾಕ್​ ಮಾಡಿಕೊಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಅದು ನನ್ನ ವೈಯಕ್ತಿಕ ವಿಚಾರ. ನೀವು ಹಾಗೆಲ್ಲ ನೋಡುವಂತಿಲ್ಲವೆಂದು ಅಧಿಕಾರಿಗಳಿಗೆ ಕಿರಿಕ್​ ಕೊಡುತ್ತಿದ್ದನಂತೆ. CCB ಪೊಲೀಸರ ಸೂಚನೆಗೆ ಕೇರ್​ ಮಾಡದ ಖನ್ನಾ ಎಷ್ಟೇ ಮನವಿ ಮಾಡಿದ್ರು […]

ಅದು ನನ್ನ ವೈಯಕ್ತಿಕ ವಿಚಾರ, ನೀವು ಹಾಗೆಲ್ಲ ನೋಡುವಂತಿಲ್ಲ -CCB ತಂಡಕ್ಕೆ ಖನ್ನಾ ಆವಾಜ್​
KUSHAL V
|

Updated on: Sep 15, 2020 | 6:24 PM

Share

ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್​ ಆಗಿದ್ರೂ A3 ಆರೋಪಿ ವಿರೇನ್​ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ. ಬಂಧನವಾಗಿ ಇಷ್ಟು ದಿನವಾದರೂ ಖನ್ನಾ ತನ್ನ ಮೊಬೈಲ್​ ಅನ್​ಲಾಕ್​ ಮಾಡಿಕೊಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಅದು ನನ್ನ ವೈಯಕ್ತಿಕ ವಿಚಾರ. ನೀವು ಹಾಗೆಲ್ಲ ನೋಡುವಂತಿಲ್ಲವೆಂದು ಅಧಿಕಾರಿಗಳಿಗೆ ಕಿರಿಕ್​ ಕೊಡುತ್ತಿದ್ದನಂತೆ. CCB ಪೊಲೀಸರ ಸೂಚನೆಗೆ ಕೇರ್​ ಮಾಡದ ಖನ್ನಾ ಎಷ್ಟೇ ಮನವಿ ಮಾಡಿದ್ರು ತನಿಖಾಧಿಕಾರಿಗೆ ಸಹಕರಿಸುತ್ತಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ವಿರೇನ್​ ಖನ್ನಾ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಬಿಟ್ಟಿದ್ದ.

ಕೊನೆಗೆ, ಕೋರ್ಟ್ ಮೂಲಕ ಸೂಚನೆ ನೀಡಿಸಿದ CCB ಪೊಲೀಸರು ಆತನಿಗೆ ಮೊಬೈಲ್​ ಫೋನ್​ ಅನ್​ಲಾಕ್​ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಖನ್ನಾ ಮೊಬೈಲ್​ ಅನ್​ಲಾಕ್​ ಮಾಡಿಕೊಟ್ಟಿದ್ದು ಸದ್ಯ FSL ತಜ್ಞರಿಂದ ವಿರೇನ್ ಖನ್ನಾ​ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ.

ಇದೀಗ, ಕಳೆದ ಎರಡು ದಿ‌ನಗಳಿಂದ ಪರಿಶೀಲನೆ ನಡೆಸಲಾಗುತ್ತಿದ್ದು ಖನ್ನಾ ಮೊಬೈಲ್​ನಲ್ಲಿ ಪ್ರಮುಖ ಮಾಹಿತಿಗಳು, ದೊಡ್ಡ ದೊಡ್ಡವರ ಫೋನ್ ನಂಬರ್​ಗಳು ಪತ್ತೆಯಾಗಿದೆ. ಜೊತೆಗೆ, WhatsApp ಚಾಟ್ ಕೂಡ ರಿಟ್ರೀವ್ ಮಾಡುತ್ತಿರುವ ತಜ್ಞರಿಗೆ ಖನ್ನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಮಾಹಿತಿಯನ್ನು ಇಟ್ಟುಕೊಂಡು ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ