AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದು ನನ್ನ ವೈಯಕ್ತಿಕ ವಿಚಾರ, ನೀವು ಹಾಗೆಲ್ಲ ನೋಡುವಂತಿಲ್ಲ -CCB ತಂಡಕ್ಕೆ ಖನ್ನಾ ಆವಾಜ್​

ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್​ ಆಗಿದ್ರೂ A3 ಆರೋಪಿ ವಿರೇನ್​ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ. ಬಂಧನವಾಗಿ ಇಷ್ಟು ದಿನವಾದರೂ ಖನ್ನಾ ತನ್ನ ಮೊಬೈಲ್​ ಅನ್​ಲಾಕ್​ ಮಾಡಿಕೊಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಅದು ನನ್ನ ವೈಯಕ್ತಿಕ ವಿಚಾರ. ನೀವು ಹಾಗೆಲ್ಲ ನೋಡುವಂತಿಲ್ಲವೆಂದು ಅಧಿಕಾರಿಗಳಿಗೆ ಕಿರಿಕ್​ ಕೊಡುತ್ತಿದ್ದನಂತೆ. CCB ಪೊಲೀಸರ ಸೂಚನೆಗೆ ಕೇರ್​ ಮಾಡದ ಖನ್ನಾ ಎಷ್ಟೇ ಮನವಿ ಮಾಡಿದ್ರು […]

ಅದು ನನ್ನ ವೈಯಕ್ತಿಕ ವಿಚಾರ, ನೀವು ಹಾಗೆಲ್ಲ ನೋಡುವಂತಿಲ್ಲ -CCB ತಂಡಕ್ಕೆ ಖನ್ನಾ ಆವಾಜ್​
KUSHAL V
|

Updated on: Sep 15, 2020 | 6:24 PM

Share

ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್​ ಆಗಿದ್ರೂ A3 ಆರೋಪಿ ವಿರೇನ್​ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ. ಬಂಧನವಾಗಿ ಇಷ್ಟು ದಿನವಾದರೂ ಖನ್ನಾ ತನ್ನ ಮೊಬೈಲ್​ ಅನ್​ಲಾಕ್​ ಮಾಡಿಕೊಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಅದು ನನ್ನ ವೈಯಕ್ತಿಕ ವಿಚಾರ. ನೀವು ಹಾಗೆಲ್ಲ ನೋಡುವಂತಿಲ್ಲವೆಂದು ಅಧಿಕಾರಿಗಳಿಗೆ ಕಿರಿಕ್​ ಕೊಡುತ್ತಿದ್ದನಂತೆ. CCB ಪೊಲೀಸರ ಸೂಚನೆಗೆ ಕೇರ್​ ಮಾಡದ ಖನ್ನಾ ಎಷ್ಟೇ ಮನವಿ ಮಾಡಿದ್ರು ತನಿಖಾಧಿಕಾರಿಗೆ ಸಹಕರಿಸುತ್ತಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ವಿರೇನ್​ ಖನ್ನಾ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಬಿಟ್ಟಿದ್ದ.

ಕೊನೆಗೆ, ಕೋರ್ಟ್ ಮೂಲಕ ಸೂಚನೆ ನೀಡಿಸಿದ CCB ಪೊಲೀಸರು ಆತನಿಗೆ ಮೊಬೈಲ್​ ಫೋನ್​ ಅನ್​ಲಾಕ್​ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಖನ್ನಾ ಮೊಬೈಲ್​ ಅನ್​ಲಾಕ್​ ಮಾಡಿಕೊಟ್ಟಿದ್ದು ಸದ್ಯ FSL ತಜ್ಞರಿಂದ ವಿರೇನ್ ಖನ್ನಾ​ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ.

ಇದೀಗ, ಕಳೆದ ಎರಡು ದಿ‌ನಗಳಿಂದ ಪರಿಶೀಲನೆ ನಡೆಸಲಾಗುತ್ತಿದ್ದು ಖನ್ನಾ ಮೊಬೈಲ್​ನಲ್ಲಿ ಪ್ರಮುಖ ಮಾಹಿತಿಗಳು, ದೊಡ್ಡ ದೊಡ್ಡವರ ಫೋನ್ ನಂಬರ್​ಗಳು ಪತ್ತೆಯಾಗಿದೆ. ಜೊತೆಗೆ, WhatsApp ಚಾಟ್ ಕೂಡ ರಿಟ್ರೀವ್ ಮಾಡುತ್ತಿರುವ ತಜ್ಞರಿಗೆ ಖನ್ನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಮಾಹಿತಿಯನ್ನು ಇಟ್ಟುಕೊಂಡು ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ