ಟ್ರಾಫಿಕ್​​ ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೇ ಎಗರಿಸಿದ ಕಿಲಾಡಿ ಕಳ್ಳ

ಬೆಂಗಳೂರು: ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೆ ಕಳ್ಳ ಕದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಅಶೋಕ್ ಗಜರೆ ಎಂಬಾತ ನೋ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದ. ಈ ಕಾರಣ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಪಿಸಿ ಮುಲ್ಲ ಮುಸ್ತಫಾ ಚಾಲಕನಿಗೆ ಫೈನ್ ಹಾಕಿದ್ದರು. ಇದರಿಂದ ಪೇದೆ ಮೇಲೆ ಸಿಟ್ಟಿಗೆದ್ದ ಅಶೋಕ್ ಗಜರೆ ಪೇದೆ ಮುಲ್ಲ ಮುಸ್ತಫಾರನ್ನ  ವೈಜಿ ಪಾಳ್ಯ ಪೊಲೀಸ್ ವಸತಿ ಗೃಹದವರೆಗೆ ಫಾಲೋ ಮಾಡಿದ್ದಾನೆ. ನಂತರ ಪೇದೆ ಬೈಕ್ ನಿಲ್ಲಿಸಿ ಮನೆ ಒಳಗೆ ಹೋದ ಮೇಲೆ ಆಶೋಕ್ ವಾಕಿಟಾಕಿ […]

ಟ್ರಾಫಿಕ್​​ ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೇ ಎಗರಿಸಿದ ಕಿಲಾಡಿ ಕಳ್ಳ
ಸಾಧು ಶ್ರೀನಾಥ್​

Updated on: Sep 23, 2019 | 5:58 PM

ಬೆಂಗಳೂರು: ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೆ ಕಳ್ಳ ಕದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಅಶೋಕ್ ಗಜರೆ ಎಂಬಾತ ನೋ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದ. ಈ ಕಾರಣ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಪಿಸಿ ಮುಲ್ಲ ಮುಸ್ತಫಾ ಚಾಲಕನಿಗೆ ಫೈನ್ ಹಾಕಿದ್ದರು. ಇದರಿಂದ ಪೇದೆ ಮೇಲೆ ಸಿಟ್ಟಿಗೆದ್ದ ಅಶೋಕ್ ಗಜರೆ ಪೇದೆ ಮುಲ್ಲ ಮುಸ್ತಫಾರನ್ನ  ವೈಜಿ ಪಾಳ್ಯ ಪೊಲೀಸ್ ವಸತಿ ಗೃಹದವರೆಗೆ ಫಾಲೋ ಮಾಡಿದ್ದಾನೆ.

ನಂತರ ಪೇದೆ ಬೈಕ್ ನಿಲ್ಲಿಸಿ ಮನೆ ಒಳಗೆ ಹೋದ ಮೇಲೆ ಆಶೋಕ್ ವಾಕಿಟಾಕಿ ಸೇರಿ ಪೇದೆಯ ಬೈಕ್ ನಲ್ಲಿದ್ದ ಪೊಲೀಸ್ ರೇನ್ ಕೋಟ್, ಟ್ಯಾಬ್, ಮಾಸ್ಕ್ ಕದ್ದಿದ್ದಾನೆ. ಶಬ್ದ ಕೇಳಿ ಹೊರ ಬಂದ ಪೇದೆಗೆ ಕಳ್ಳ ಅಶೋಕ್ ‘ನಂಗೆ ಫೈನ್ ಹಾಕ್ತಿಯಾ..? ನಾನ್ಯಾರೆಂದು ತೋರಿಸ್ತೀನಿ’ ಎಂದು ಪೇದೆಗೆ ಆವಾಜ್ ಹಾಕಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Published On - 5:53 pm, Mon, 23 September 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us