3 ವರ್ಷದ ಹಿಂದೆ ನಡೆದ ಆ ದುರ್ಘಟನೆಯೇ ತಾಯಿಯ ಹತ್ಯೆಗೆ ಮೂಲವಾಯಿತಾ!?

ಬೆಂಗಳೂರು: ನಗರದ ಕೆ ಆರ್​ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್​ಗಾಗಿ ಅಂಡಮಾನ್​ಗೆ ಎಸ್ಕೇಪ್​ ಆಗಿದ್ದ ಅಮೃತಾ- ಶ್ರೀಧರ್​ ಪ್ರಕರಣಕ್ಕೆ ಟ್ವಿಸ್ಟ್​ಗೆ ಸಿಕ್ಕಿದೆ. ಅಂಡಮಾನ್​ನಲ್ಲಿ ಬೈಕ್​ ರೈಡ್​ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್​ ಪುರಂ ಇನ್ಸ್​ಪೆಕ್ಟರ್​ ಅಂಬರೀಷ್​ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್​ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ […]

3 ವರ್ಷದ ಹಿಂದೆ ನಡೆದ ಆ ದುರ್ಘಟನೆಯೇ ತಾಯಿಯ ಹತ್ಯೆಗೆ ಮೂಲವಾಯಿತಾ!?

Updated on: Feb 06, 2020 | 6:26 PM

ಬೆಂಗಳೂರು: ನಗರದ ಕೆ ಆರ್​ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್​ಗಾಗಿ ಅಂಡಮಾನ್​ಗೆ ಎಸ್ಕೇಪ್​ ಆಗಿದ್ದ ಅಮೃತಾ- ಶ್ರೀಧರ್​ ಪ್ರಕರಣಕ್ಕೆ ಟ್ವಿಸ್ಟ್​ಗೆ ಸಿಕ್ಕಿದೆ. ಅಂಡಮಾನ್​ನಲ್ಲಿ ಬೈಕ್​ ರೈಡ್​ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್​ ಪುರಂ ಇನ್ಸ್​ಪೆಕ್ಟರ್​ ಅಂಬರೀಷ್​ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ.

ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್​ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ ಶ್ರೀಧರ್ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತಪಟ್ಟಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಆದರೂ ಪ್ರಕರಣದ ಸಂಪೂರ್ಣ ವಿವರ, ವಿವಿಧ ಆಯಾಮಗಳು ಬಯಲಿಗೆ ಬರಬೇಕಿವೆ ಎಂದೂ ಪೊಲೀಸರು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ಏನಾಗಿತ್ತೆಂದ್ರೆ..

2017ರಲ್ಲಿ ಹೊಸಕೋಟೆ ಬಳಿ ಕಾರು ಅಪಘಾತವೊಂದು ನಡೆದಿತ್ತು. ವೇಗವಾಗಿ ಕಾರ್ ಚಲಾಯಿಸಿ ಮೇಲಿನ ಇಬ್ಬರೂ ಆರೋಪಿಗಳು ಆ ಕೃತ್ಯ ಎಸಗಿದ್ದರು. ಪ್ರಕರಣವೊಂದರಲ್ಲಿ ಮೂವರು ಮೃತಪಟ್ಟು, ಒಬ್ಬರಿಗೆ ಗಂಭೀರ ಗಾಯವಾಗಿತ್ತು. ಪ್ರಕರಣದಲ್ಲಿ ಕಾರು ಸಂಪೂರ್ಣವಾಗಿ ಜಖಂ ಆಗಿತ್ತು. ಅಪಘಾತ ಪ್ರಕರಣ ಮತ್ತು ಕಾರಿಗಾಗಿ ಲಕ್ಷಾಂತರ ರೂ. ಖರ್ಚು ತಗುಲಿತ್ತು. ಈ ಖರ್ಚಿಗಾಗಿ ಅಮೃತಾ ₹15 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಆ ಪ್ರಕರಣದಿಂದಾಗಿಯೇ ಅಮ್ಮನನ್ನು ಸಾಯಿಸುವ ಪ್ರಮೇಯ ಬಂತು ಎಂದು ಅಮೃತಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

Published On - 4:24 pm, Thu, 6 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us