ಧನುರ್ಮಾಸದ ಚಳಿಯಲ್ಲಿ ಗನ್​ ಸೌಂಡ್​: ರೌಡಿಶೀಟರ್ಸ್​ ಮೇಲೆ ಪೊಲೀಸ್​ ಫೈರಿಂಗ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್​ಗಳ ಮೇಲೆ ಪೊಲೀಸರು ಗುಂಡಿನ ಮೊರೆತ ನಡೆಸಿದ್ದಾರೆ. ಬಿಟಿಎಂ ಲೇಔಟ್ ಬಳಿಯ ರಾಂಕಾ ಕಾಲೋನಿ ಬಳಿ ರೌಡಿಶೀಟರ್‌ಗಳಾದ ಹಂದಿ ಮಹೇಶ್, ಸತೀಶ್ ಮೇಲೆ ಪೊಲೀಸರು ಶೂಟೌಟ್​ ಮಾಡಿದ್ದಾರೆ. ಸತೀಶ್ ಮೇಲೆ 3 ಕೊಲೆ ಸೇರಿದಂತೆ 5 ಪ್ರಕರಣ, ಹಂದಿ ಮಹೇಶ್ ಮೇಲೆ 2 ಕೊಲೆ, ಹಲ್ಲೆ ಸೇರಿದಂತೆ 6 ಪ್ರಕರಣಗಳಿದ್ದವು. ಹೀಗಾಗಿ ಆರೋಪಿಗಳಿಬ್ಬರನ್ನೂ ಹಿಡಿಯಲು ಸಿಸಿಬಿ ಪೊಲೀಸರು ತೆರಳಿದ್ದರು. ಮೊದಲು ರೌಡಿಶೀಟರ್​ಗಳಿಗೆ ಶರಣಾಗುವಂತೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಶರಣಾಗದೆ ಹನುಮೇಶ್ […]

ಧನುರ್ಮಾಸದ ಚಳಿಯಲ್ಲಿ ಗನ್​ ಸೌಂಡ್​: ರೌಡಿಶೀಟರ್ಸ್​ ಮೇಲೆ ಪೊಲೀಸ್​ ಫೈರಿಂಗ್
ಸಾಧು ಶ್ರೀನಾಥ್​

Updated on: Jan 13, 2020 | 11:32 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್​ಗಳ ಮೇಲೆ ಪೊಲೀಸರು ಗುಂಡಿನ ಮೊರೆತ ನಡೆಸಿದ್ದಾರೆ. ಬಿಟಿಎಂ ಲೇಔಟ್ ಬಳಿಯ ರಾಂಕಾ ಕಾಲೋನಿ ಬಳಿ ರೌಡಿಶೀಟರ್‌ಗಳಾದ ಹಂದಿ ಮಹೇಶ್, ಸತೀಶ್ ಮೇಲೆ ಪೊಲೀಸರು ಶೂಟೌಟ್​ ಮಾಡಿದ್ದಾರೆ.

ಸತೀಶ್ ಮೇಲೆ 3 ಕೊಲೆ ಸೇರಿದಂತೆ 5 ಪ್ರಕರಣ, ಹಂದಿ ಮಹೇಶ್ ಮೇಲೆ 2 ಕೊಲೆ, ಹಲ್ಲೆ ಸೇರಿದಂತೆ 6 ಪ್ರಕರಣಗಳಿದ್ದವು. ಹೀಗಾಗಿ ಆರೋಪಿಗಳಿಬ್ಬರನ್ನೂ ಹಿಡಿಯಲು ಸಿಸಿಬಿ ಪೊಲೀಸರು ತೆರಳಿದ್ದರು. ಮೊದಲು ರೌಡಿಶೀಟರ್​ಗಳಿಗೆ ಶರಣಾಗುವಂತೆ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಶರಣಾಗದೆ ಹನುಮೇಶ್ ಎಂಬ ಪೇದೆ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿಶೀಟರ್‌ಗಳ ಮೇಲೆ ಸಿಸಿಬಿ ಇನ್ಸ್​ಪೆಕ್ಟರ್​ಗಳಾದ ಕೇಶವಮೂರ್ತಿ ಮತ್ತು ಪುನೀತ್ ಕುಮಾರ್​ ಫೈರಿಂಗ್ ನಡೆಸಿದ್ದಾರೆ. ಗಾಯಾಳು ರೌಡಿಶೀಟರ್‌ಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published On - 7:28 am, Mon, 13 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us