AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ Drugs ಜಾಲ: A9 ಅಶ್ವಿನ್ ಅಲಿಯಾಸ್ ಭೋಗಿ ಸೆರೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು CCB ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. A9 ಅಶ್ವಿನ್ ಅಲಿಯಾಸ್​ ಭೋಗಿ ರವಿಶಂಕರ್​ ಸ್ನೇಹಿತ ಎಂದು ಹೇಳಲಾಗಿದೆ. ಪ್ರಕರಣದ 8ನೇ ಆರೋಪಿಯಾದ ಅಭಿಸ್ವಾಮಿ ಕೂಡ ಭೋಗಿಗೆ ಆಪ್ತ ಎಂದು ತಿಳಿದುಬಂದಿದೆ. ಡ್ರಗ್ಸ್​ ದಂಧೆಗೆ ಭೋಗಿ ಕಾಲಿಡಲು ಅಭಿಸ್ವಾಮಿ ನೆರವು ನೀಡಿದ್ದನಂತೆ. ಅಭಿಸ್ವಾಮಿ ಮೂಲಕ ಅಶ್ವಿನ್ ನೈಜೀರಿಯನ್​ ಪೆಡ್ಲರ್​ಗಳ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ. ಪೆಡ್ಲರ್​ಗಳಿಗೆ ಕರೆ ಮಾಡಿದರೆ […]

ಸ್ಯಾಂಡಲ್​ವುಡ್​ Drugs ಜಾಲ: A9 ಅಶ್ವಿನ್ ಅಲಿಯಾಸ್ ಭೋಗಿ ಸೆರೆ
KUSHAL V
|

Updated on: Oct 13, 2020 | 2:27 PM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು CCB ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. A9 ಅಶ್ವಿನ್ ಅಲಿಯಾಸ್​ ಭೋಗಿ ರವಿಶಂಕರ್​ ಸ್ನೇಹಿತ ಎಂದು ಹೇಳಲಾಗಿದೆ. ಪ್ರಕರಣದ 8ನೇ ಆರೋಪಿಯಾದ ಅಭಿಸ್ವಾಮಿ ಕೂಡ ಭೋಗಿಗೆ ಆಪ್ತ ಎಂದು ತಿಳಿದುಬಂದಿದೆ. ಡ್ರಗ್ಸ್​ ದಂಧೆಗೆ ಭೋಗಿ ಕಾಲಿಡಲು ಅಭಿಸ್ವಾಮಿ ನೆರವು ನೀಡಿದ್ದನಂತೆ. ಅಭಿಸ್ವಾಮಿ ಮೂಲಕ ಅಶ್ವಿನ್ ನೈಜೀರಿಯನ್​ ಪೆಡ್ಲರ್​ಗಳ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ.

ಪೆಡ್ಲರ್​ಗಳಿಗೆ ಕರೆ ಮಾಡಿದರೆ ಪಿಲ್ಸ್, ಕೊಕೇನ್​ ಕೊಡ್ತಾರೆ ಎಂದು ಅಶ್ವಿನ್ ಅಲಿಯಾಸ್​ ಭೋಗಿ​ಗೆ ಅಭಿಸ್ವಾಮಿ ತಿಳಿಸಿದ್ದನಂತೆ. ಹಾಗಾಗಿ, ಪೆಡ್ಲರ್​ಗಳ ಸಂಪರ್ಕ ಬೆಳೆಸಿಕೊಂಡು ಭೋಗಿ ದಂಧೆಗಿಳಿದಿದ್ದ ಎಂದು ತಿಳಿದುಬಂದಿದೆ. ಒಮ್ಮೆ, ಪ್ರಶಾಂತ್ ರಾಜು ಸ್ನೇಹಿತ ಸಂತೋಷ್​ ದೆಹಲಿಯಿಂದ ಬಂದಿದ್ದ ವೇಳೆ ಡ್ರಗ್ಸ್​ಗಾಗಿ ರವಿಶಂಕರ್​ಗೆ ಕರೆಮಾಡಿದ್ದನಂತೆ. ಆಗ, ರವಿಶಂಕರ್ ಭೋಗಿಗೆ ಕರೆ ಮಾಡಿ ಡ್ರಗ್ಸ್​ ಬೇಕೆಂದು ಹೇಳಿದ್ದನಂತೆ. ಆಗ, ನನ್ನ ಬಳಿ ಡ್ರಗ್ಸ್ ಇಲ್ಲವೆಂದು ಅಶ್ವಿನ್ ಭೋಗಿ ನೈಜೀರಿಯನ್​ ಪೆಡ್ಲರ್​ ಒಬ್ಬನ ನಂಬರ್​ ನೀಡಿದ್ದನಂತೆ. ಈ ಮಾಹಿತಿಯನ್ನು ರವಿಶಂಕರ್ ವಿಚಾರಣೆ ವೇಳೆ ಹೇಳಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು