AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ Drugs ಜಾಲ: A9 ಅಶ್ವಿನ್ ಅಲಿಯಾಸ್ ಭೋಗಿ ಸೆರೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು CCB ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. A9 ಅಶ್ವಿನ್ ಅಲಿಯಾಸ್​ ಭೋಗಿ ರವಿಶಂಕರ್​ ಸ್ನೇಹಿತ ಎಂದು ಹೇಳಲಾಗಿದೆ. ಪ್ರಕರಣದ 8ನೇ ಆರೋಪಿಯಾದ ಅಭಿಸ್ವಾಮಿ ಕೂಡ ಭೋಗಿಗೆ ಆಪ್ತ ಎಂದು ತಿಳಿದುಬಂದಿದೆ. ಡ್ರಗ್ಸ್​ ದಂಧೆಗೆ ಭೋಗಿ ಕಾಲಿಡಲು ಅಭಿಸ್ವಾಮಿ ನೆರವು ನೀಡಿದ್ದನಂತೆ. ಅಭಿಸ್ವಾಮಿ ಮೂಲಕ ಅಶ್ವಿನ್ ನೈಜೀರಿಯನ್​ ಪೆಡ್ಲರ್​ಗಳ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ. ಪೆಡ್ಲರ್​ಗಳಿಗೆ ಕರೆ ಮಾಡಿದರೆ […]

ಸ್ಯಾಂಡಲ್​ವುಡ್​ Drugs ಜಾಲ: A9 ಅಶ್ವಿನ್ ಅಲಿಯಾಸ್ ಭೋಗಿ ಸೆರೆ
KUSHAL V
|

Updated on: Oct 13, 2020 | 2:27 PM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು CCB ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. A9 ಅಶ್ವಿನ್ ಅಲಿಯಾಸ್​ ಭೋಗಿ ರವಿಶಂಕರ್​ ಸ್ನೇಹಿತ ಎಂದು ಹೇಳಲಾಗಿದೆ. ಪ್ರಕರಣದ 8ನೇ ಆರೋಪಿಯಾದ ಅಭಿಸ್ವಾಮಿ ಕೂಡ ಭೋಗಿಗೆ ಆಪ್ತ ಎಂದು ತಿಳಿದುಬಂದಿದೆ. ಡ್ರಗ್ಸ್​ ದಂಧೆಗೆ ಭೋಗಿ ಕಾಲಿಡಲು ಅಭಿಸ್ವಾಮಿ ನೆರವು ನೀಡಿದ್ದನಂತೆ. ಅಭಿಸ್ವಾಮಿ ಮೂಲಕ ಅಶ್ವಿನ್ ನೈಜೀರಿಯನ್​ ಪೆಡ್ಲರ್​ಗಳ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ.

ಪೆಡ್ಲರ್​ಗಳಿಗೆ ಕರೆ ಮಾಡಿದರೆ ಪಿಲ್ಸ್, ಕೊಕೇನ್​ ಕೊಡ್ತಾರೆ ಎಂದು ಅಶ್ವಿನ್ ಅಲಿಯಾಸ್​ ಭೋಗಿ​ಗೆ ಅಭಿಸ್ವಾಮಿ ತಿಳಿಸಿದ್ದನಂತೆ. ಹಾಗಾಗಿ, ಪೆಡ್ಲರ್​ಗಳ ಸಂಪರ್ಕ ಬೆಳೆಸಿಕೊಂಡು ಭೋಗಿ ದಂಧೆಗಿಳಿದಿದ್ದ ಎಂದು ತಿಳಿದುಬಂದಿದೆ. ಒಮ್ಮೆ, ಪ್ರಶಾಂತ್ ರಾಜು ಸ್ನೇಹಿತ ಸಂತೋಷ್​ ದೆಹಲಿಯಿಂದ ಬಂದಿದ್ದ ವೇಳೆ ಡ್ರಗ್ಸ್​ಗಾಗಿ ರವಿಶಂಕರ್​ಗೆ ಕರೆಮಾಡಿದ್ದನಂತೆ. ಆಗ, ರವಿಶಂಕರ್ ಭೋಗಿಗೆ ಕರೆ ಮಾಡಿ ಡ್ರಗ್ಸ್​ ಬೇಕೆಂದು ಹೇಳಿದ್ದನಂತೆ. ಆಗ, ನನ್ನ ಬಳಿ ಡ್ರಗ್ಸ್ ಇಲ್ಲವೆಂದು ಅಶ್ವಿನ್ ಭೋಗಿ ನೈಜೀರಿಯನ್​ ಪೆಡ್ಲರ್​ ಒಬ್ಬನ ನಂಬರ್​ ನೀಡಿದ್ದನಂತೆ. ಈ ಮಾಹಿತಿಯನ್ನು ರವಿಶಂಕರ್ ವಿಚಾರಣೆ ವೇಳೆ ಹೇಳಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

Follow Us
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ