AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಂಡವಪುರಕ್ಕೂ ಕಾಲಿಟ್ಟ ಸೈಬರ್ ಚೋರರು: ಕಾರು ಗಿಫ್ಟ್ ಬಂದಿರುವುದಾಗಿ ಬಡ ರೈತನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ!

cyber crime: ವಂಚನೆಗೊಳಗಾದ ಸಂಜೀವ್ ಗೌಡ ಈಗ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದೇನೆ ಹೇಳಿ ಮೋಸ ಹೋಗುವವರ ಇರುವ ತನಕ... ಮೋಸ ಮಾಡುವವರು ಇದ್ದೆ ಇರ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸೂಕ್ತ ಉದಾಹರಣೆಯಾಗಿದೆ.

ಪಾಂಡವಪುರಕ್ಕೂ ಕಾಲಿಟ್ಟ ಸೈಬರ್ ಚೋರರು: ಕಾರು ಗಿಫ್ಟ್ ಬಂದಿರುವುದಾಗಿ ಬಡ ರೈತನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ!
ಪಾಂಡವಪುರಕ್ಕೂ ಕಾಲಿಟ್ಟ ಸೈಬರ್ ಚೋರರು
TV9 Web
| Updated By: ಸಾಧು ಶ್ರೀನಾಥ್​|

Updated on: Jan 19, 2023 | 2:53 PM

Share

ಆತ ಬಡ ರೈತ, ತಾನಾಯ್ತು ತನ್ನ ಗದ್ದೆ ಆಯ್ತು ಅಂತ ಇದ್ದವ.. ಆದ್ರೆ ಆತನ ಮನೆಗೆ ಬಂದ ಅದೊಂದು ಪೋಸ್ಟ್ ಆತನ ಸುಂದರ ಬಾಳನ್ನು ಕೆಡಿಸಿಟ್ಟಿದೆ. ಸೈಬರ್ ಚೋರರ (cyber crime) ಚಕ್ರವ್ಯೂಹದಲ್ಲಿ ಸಿಲುಕಿದ ರೈತ (farmer) ಈಗ ಲಕ್ಷ ಲಕ್ಷ ಹಣ ಕಳೆದು ಕೊಂಡು ಪರಿತಪಿಸುವಂತಾಗಿದೆ. ಕೈಯಲ್ಲಿ ಮೊಬೈಲ್ ಹಿಡಿದು ನಿಂತಿರುವ ಆ ವ್ಯಕ್ತಿ ಅದೇನನ್ನೊ ತೋರಿಸುತ್ತ ಪರಿತಪಿಸುತ್ತಿದ್ದಾನೆ ಈಗ. ಕಣ್ ಕಣ್ ಬಿಟ್ಕೊಂಡು ಕ್ಯಾಮರಾ ನೋಡ್ತಾ ನಿಂತಿರುವ ಈತನ ಹೆಸರು ಸಂಜೀವ್ ಗೌಡ ಅಂತ, ಬಡ ರೈತನೇ ಸರಿ ಈತ. ಮಂಡ್ಯ (mandya) ಜಿಲ್ಲೆ ಪಾಂಡವಪುರ (pandavapura) ತಾಲೂಕಿನ ಜಕ್ಕನಹಳ್ಳಿ ಗ್ರಾಮದವ. ಗಿಫ್ಟ್ ಕೂಪನ್ ಬಂತು ಅದರಲ್ಲಿ XUV 700 ಕಾರು (car) ಸಿಕ್ತು ಅಂತ ಕನಸು ಕಾಣುತ್ತಿದ್ದವ ಇವತ್ತು ಪೊಲೀಸ್ ಠಾಣೆಯ ಕದ ತಟ್ಟಿದ್ದಾನೆ. ದಿನನಿತ್ಯ ಹೊಲ ಗದ್ದೆ ಅಂತಾ ತಿರುಗಾಡ ಬೇಕಿದ್ದವ ಈಗ ಪೊಲೀಸು, ಕೇಸು ಅಂತಾ ಒದ್ದಾಡುತ್ತಿದ್ದಾನೆ.

ಅಸಲಿಗೆ ಸಂಜೀವ್ ಗೌಡರ ಪತ್ನಿ ನ್ಯೂ ಇಯರ್ ಆಫರ್ ಎಂದು ಮಿಶೋ ಆಪ್ ನಲ್ಲಿ ಕೆಲ ವಸ್ತುಗಳನ್ನ ಖರೀದಿಸಿದ್ದರು. ಆರ್ಡರ್ ಮಾಡಿದ ವಸ್ತುಗಳು ಸಹ ಮನೆಗೆ ಡೆಲಿವರಿ ಬಂದಿತ್ತು. ಆರ್ಡರ್ ಬಂದ ಒಂದು ವಾರದ ಬಳಿಕ ಸಂಜೀವ್ ಗೌಡರ ಮನೆಗೆ ಒಂದು ಪೋಸ್ಟ್ ಬಂದಿತ್ತು. ಅದನ್ನ ಓಪನ್ ಮಾಡಿ ನೋಡಿದಾಗ ಅದರಲ್ಲೊಂದು ಕೂಪನ್ ಇತ್ತು. ಅದನ್ನ ಸ್ಕ್ರಾಚ್​​ ಮಾಡಿ ನೋಡಿದಾಗ XUV 700 ಕಾರನ್ನ ಗೆದ್ದಿರುವುದಾಗಿ ತೋರಿಸಿತ್ತು.

ಬಳಿಕ ಮಿಶೋ ಕಂಪನಿ ವತಿಯಿಂದ ಕರೆ ಮಾಡ್ತಾಯಿದ್ದೇವೆ, ಕಾರನ್ನ ಯಾವಾಗ ಡೆಲವರಿ ಪಡೆಯುತ್ತೀರಾ? ಎಂದು ಕೇಳಿದ್ದಾರೆ. ಆದ್ರೆ ಸಂಜೀವ್ ಗೌಡ ನಮಗೆ ಕಾರು ಬೇಡ ಹಣ ಕೊಡಿ ಎಂದು ಕೇಳಿ ಕೊಂಡಿದ್ದಾನೆ. ಇದಕ್ಕೂ ಸೈಬರ್ ಚೋರರು ತಕ್ಷಣ ಒಪ್ಪಿಕೊಂಡಿದ್ದು, 29 ಲಕ್ಷದ 60 ಸಾವಿರ ಹಣ ನಿಮ್ಮ ಖಾತೆಗೆ ವರ್ಗಾವಣೆ ಮಾಡ್ಬೇಕಿದ್ರೆ ಸರ್ವಿಸ್ ಚಾರ್ಜ್ ಗಾಗಿ ಒಂದಿಷ್ಟು ಹಣ ನೀಡಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ

Dr K Sudhakar: ಆರೋಗ್ಯ ಸಚಿವರೇ! 9 ತಿಂಗಳು ತುಂಬಿದೆ, ದಾಬಸ್​​ಪೇಟೆ ಟ್ರಾಮಾ ಸೆಂಟರ್​​ಗೆ ತುರ್ತು ಚಿಕಿತ್ಸೆ ನೀಡಿ ಇನ್ನಾದರೂ ಆಸ್ಪತ್ರೆ ಬಾಗಿಲು ತೆಗೆಯಿರಿ

ಹಂತ ಹಂತವಾಗಿ 7 ಲಕ್ಷದ 23 ಸಾವಿರ ಹಣವನ್ನ ಪೀಕಿದ್ದಾರೆ. ನಿಜವಾಗಿಯೂ ಕಾಸು ಬರುತ್ತದೆಂದು ನಂಬಿದ ಸಂಜೀವ್ ಗೌಡ ತನ್ನ ಹೆಂಡತಿಯ ಚಿನ್ನಾಭರಣಗಳನ್ನ ಒತ್ತೆಯಿಟ್ಟು ಹಣವನ್ನ ವರ್ಗಾವಣೆ ಮಾಡಿದ್ದಾನೆ. ಆದ್ರೆ ಇತ್ತ ಹಣ ಪಡೆದ ಸೈಬರ್ ಚೋರರು ಕೈ ಎತ್ತಿದ್ದಾರೆ ಎಂದು ಮಂಡ್ಯ ಎಸ್ ಪಿ ಎನ್. ಯತೀಶ್ ಸ್ಥೂಲವಾಗಿ ಮಾಹಿತಿ ನೀಡಿದ್ದಾರೆ.

ವಂಚನೆಗೊಳಗಾದ ಸಂಜೀವ್ ಗೌಡ ಈಗ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅದೇನೆ ಹೇಳಿ ಮೋಸ ಹೋಗುವವರ ಇರುವ ತನಕ… ಮೋಸ ಮಾಡುವವರು ಇದ್ದೆ ಇರ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸೂಕ್ತ ಉದಾಹರಣೆಯಾಗಿದೆ.

ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್