AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇಟಿಂಗ್ ಆ್ಯಪ್ ತಂದ ಅವಾಂತರ, ಯುವಕನ ಪಾಡು ಹೇಳೋದೇ ಬೇಡ… ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್ ಸ್ಟೋರಿ

ಇದು ಡೇಟಿಂಗ್ ಆ್ಯಪ್ ತಂದ ಅವಾಂತರ, ಪಾಪ ಯುವಕನ ಪಾಡು ಹೇಳೋದೇ ಬೇಡ.. ಆಕೆಗೆ ಈತನ ಮೇಲೆ, ಕೊನೆಯದಾಗಿ ನಿನ್ನನ್ನು ನೋಡಬೇಕು ಎಂದಿದ್ದಕ್ಕೆ ಓಡೋದಿ ಬಂದ ಪ್ರಿಯಕರನನ್ನು ಅಪಹರಿಸಿದ ಪ್ರಿಯತಮೆ ತನ್ನ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದಳು.

ಡೇಟಿಂಗ್ ಆ್ಯಪ್ ತಂದ ಅವಾಂತರ, ಯುವಕನ ಪಾಡು ಹೇಳೋದೇ ಬೇಡ... ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್ ಸ್ಟೋರಿ
ಸಾಂದರ್ಭಿಕ ಚಿತ್ರImage Credit source: fanpop.com
TV9 Web
| Edited By: |

Updated on:Aug 27, 2022 | 9:44 AM

Share

ಡೇಟಿಂಗ್ ಆ್ಯಪ್​ನಲ್ಲಿ ಪರಪಸ್ಪರ ಪರಿಚಯ ಮಾಡಿಕೊಂಡ ಯುವಕ ಮತ್ತು ಯುವತಿ ದಿನಗಳು ಕಳೆಯುತ್ತಿದ್ದಂತೆ ಪ್ರೀತಿಗೆ ಬಿದ್ದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಜೋಡಿ ಹಕ್ಕಿ, ಲಿವಿಂಗ್ ಟುಗೆದರ್ ಸಂಬಂಧವನ್ನು ಆರಂಭಿಸಿತು. ಅದೇನೋ ಗೊತ್ತಿಲ್ಲ, ಇಬ್ಬರು ಕೂಡಿ ಸುಖವಾಗಿ ಬಾಳು ನಡೆಸಬೇಕು ಎಂದು ಕನಸು ಕಂಡಿದ್ದ ಜೋಡಿ ಹಕ್ಕಿಯ ಸುತ್ತಲೂ ನಿಧಾನವಾಗಿ ಅನುಮಾನದ ಹುತ್ತ ಬೆಳೆದು ನಿಂತಿತು. ಆಕೆಗೆ ಈತನ ಮೇಲೆ, ಈತನಿಗೆ ಆಕೆಯ ಮೇಲೆ ಅನುಮಾನ. ಕೊನೆಯದಾಗಿ ನಿನ್ನನ್ನು ನೋಡಬೇಕು ಎಂದು ಪ್ರಿಯಕರನ ಜೊತೆ ಹೇಳಿಕೊಂಡಿದ್ದಕ್ಕೆ ಪ್ರಿಯಕರ ಓಡೋಡಿ ಬಂದಿದ್ದಾನೆ. ಈ ವೇಳೆ ಕಾರಿನಲ್ಲಿ ಎಂಟ್ರಿ ಕೊಟ್ಟ ಪ್ರಿಯತಮೆಯ ಗುಂಪೊಂದು ಆತನನ್ನು ಅಪಹರಿಸಿ ಹಲ್ಲೆ ನಡೆಸಿತು. ಈ ವಿಚಿತ್ರ ಪ್ರೇಮ್ ಕಹಾನಿ ನಡೆದಿದ್ದು ಬೆಂಗಳೂರು ನಗರದಲ್ಲಿ.

ಮಹದೇವಪ್ರಸಾದ್ ಮತ್ತು ಕ್ಲಾರಾ ಎಂಬ ಯುವಕ-ಯುವತಿ ಡೇಟಿಂಗ್ ಆ್ಯಪ್​ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ದಿನಗಳು ಉರುಳುತ್ತಿದ್ದಂತೆ ಇಬ್ಬರ ನಡುವಿನ ಸಲುಗೆ ಹೆಚ್ಚಾಗಿ ಸ್ನೇಹ ಸಂಬಂಧ ಪ್ರೀತಿಗೆ ಮರಳಿದೆ. ನಂತರ ಒಂದು ಹೆಜ್ಜೆ ಮುಂದಿಟ್ಟ ಜೋಡಿ ಹಕ್ಕಿ ಲಿವಿಂಗ್ ಟುಗೆದರ್ ಸಂಬಂಧವನ್ನು ಆರಂಭಿಸಿತು. ಹಾಗೋ ಹೀಗೋ ಆರಂಭದಲ್ಲಿ ಸುಖವಾಗಿ ಇದ್ದರು. ದಿನಗಳು ಉರುಳುತ್ತಿದ್ದಂತೆ ಇಬ್ಬರ ತಲೆಯಲ್ಲಿ ಅನುಮಾನ ಎಂಬ ಭೂತ ಹೊಕ್ಕಿತು. ಅದರಂತೆ ಕ್ಲಾರಾಗೆ, ಮಹದೇವಪ್ರಸಾದ್​ಗೆ ಬೇರೆ ಸಂಬಂಧ ಇದೆ ಎಂಬ ಅನುಮಾನ, ಇತ್ತ ಮಹದೇವಪ್ರಸಾದ್​ಗೆ ಕ್ಲಾರಾಗೆ ಬೇರೆ ಸಂಬಂಧ ಇದೆ ಎಂಬ ಅನುಮಾನ ಹುಟ್ಟುಕೊಂಡಿದೆ.

ಜೋಡಿ ಹಕ್ಕಿಯ ನಡುವೆ ವಿಲನ್ ಆಗಿ ಬಂದ ಅನುಮಾನವು ಅವರ ಸಂಬಂಧದಲ್ಲಿ ಬಿರುಕು ಉಂಟುಮಾಡಿತು. ಪರಸ್ಪರ ಇಬ್ಬರ ಮೇಲೆ ಅನುಮಾನ ಹುಟ್ಟಿಕೊಂಡ ಹಿನ್ನೆಲೆ ಕ್ಲಾರಾ ಮತ್ತು ಮಹದೇವಪ್ರಸಾದ್ ಲಿವಿಂಗ್ ಟುಗೆದರ್ ಸಂಬಂಧ ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಆದರೆ ಕ್ಲಾರಾಗೆ ಮಾತ್ರ ಮಹದೇವಪ್ರಸಾದ್ ಮೇಲೆ ತೀವ್ರ ಕೋಪಗೊಂಡ ಹಿನ್ನೆಲೆ ತನ್ನ ಸಹಚರರೊಂದಿಗೆ ಸೇರಿಕೊಂಡು ಅಪಹರಿಸುವ ಪ್ಲಾನ್ ಅನ್ನು ಮಾಡಿಕೊಂಡಳು.

ಅದರಂತೆ, ಕಳೆದ 10 ದಿನಗಳ ಹಿಂದೆ ಕೊನೆಯ ಬಾರಿ ನಿನ್ನನ್ನು ನೋಡಬೇಕು ಎಂದು ಕ್ಲಾರಾ ತನ್ನ ಮನೆ ಬಳಿ ಮಹದೇವಪ್ರಸಾದ್​ನನ್ನು ಕರೆಸಿಕೊಂಡಿದ್ದಾಳೆ. ಅದರಂತೆ 11.30ರ ಸುಮಾರಿಗೆ ಕ್ಲಾರಾ ಇದ್ದಲ್ಲಿಗೆ ಓಡೋಡಿ ಹೋಗಿದ್ದಾನೆ. ಈ ವೇಳೆ ಒಟ್ಟು ಎಂಟು ಮಂದಿಯ ತಂಡವೊಂದು ಸೇರಿಕೊಂಡು ಮಹದೇವಪ್ರಸಾದ್​ನನ್ನು ಕಾರಿನಲ್ಲಿ ಅಪರಹಣ ಮಾಡಿದೆ. ಈ ತಂಡದಲ್ಲಿ ಕ್ಲಾರಾ ಕೂಡ ಒಬ್ಬಳು. ಮಹದೇವಪ್ರಸಾದ್​ನನ್ನು ಅಪಹರಿಸಿ ಹಲ್ಲೆ ನಡೆಸಿದ ಗುಂಪು ಆತನನ್ನು ವಾಪಸ್ಸು ಮನೆಗೆ ತಂದು ಬಿಟ್ಟು ಹೋಗಿದೆ.

ಘಟನೆ ಸಂಬಂಧ ಹನುಂತನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಎಂದು ಮಂದಿಯನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 am, Sat, 27 August 22

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು