ಗಂಡ ಹೆಂಡಿರ ಜಗಳದಲ್ಲಿ ಕೂಸು ಹತವಾಯ್ತು, ಎಲ್ಲಿ?

ಬೆಂಗಳೂರು: ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆಯಿದೆ. ಆದರೆ, ಗಂಡ ಹೆಂಡಿರ ಜಗಳದಲ್ಲಿ ಕೂಸು ಸಾವನ್ನಪ್ಪಿರೋ ಘಟನೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ನಿವಾಸಿಗಳಾದ ಜನನಿ ಮತ್ತು ಶ್ರೀನಿವಾಸ್ ದಂಪತಿ ಎರಡು‌ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. 3 ತಿಂಗಳ ಹಿಂದೆ ದಂಪತಿಗೆ ಹೆಣ್ಣು ಮಗು ಹುಟ್ಟಿತ್ತು. ಅದರೆ, ಇತ್ತೀಚೆಗೆ ಪ್ರತಿದಿನ ಜಗಳವಾಡುತ್ತಿದ್ದ ದಂಪತಿ ನಿನ್ನೆ ರಾತ್ರಿಯೂ ಸಹ ಜಗಳಕ್ಕೆ ಮುಂದಾದರು. ಜಗಳ ವಿಕೋಪಕ್ಕೆ ತಿರುಗಿ ಕೋಪದಲ್ಲಿ […]

ಗಂಡ ಹೆಂಡಿರ ಜಗಳದಲ್ಲಿ ಕೂಸು ಹತವಾಯ್ತು, ಎಲ್ಲಿ?
Follow us
|

Updated on:Jul 05, 2020 | 7:38 PM

ಬೆಂಗಳೂರು: ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆಯಿದೆ. ಆದರೆ, ಗಂಡ ಹೆಂಡಿರ ಜಗಳದಲ್ಲಿ ಕೂಸು ಸಾವನ್ನಪ್ಪಿರೋ ಘಟನೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ನಿವಾಸಿಗಳಾದ ಜನನಿ ಮತ್ತು ಶ್ರೀನಿವಾಸ್ ದಂಪತಿ ಎರಡು‌ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. 3 ತಿಂಗಳ ಹಿಂದೆ ದಂಪತಿಗೆ ಹೆಣ್ಣು ಮಗು ಹುಟ್ಟಿತ್ತು. ಅದರೆ, ಇತ್ತೀಚೆಗೆ ಪ್ರತಿದಿನ ಜಗಳವಾಡುತ್ತಿದ್ದ ದಂಪತಿ ನಿನ್ನೆ ರಾತ್ರಿಯೂ ಸಹ ಜಗಳಕ್ಕೆ ಮುಂದಾದರು. ಜಗಳ ವಿಕೋಪಕ್ಕೆ ತಿರುಗಿ ಕೋಪದಲ್ಲಿ ಶ್ರೀನಿವಾಸ್ ಜನನಿಯನ್ನು ನೂಕಿದ್ದಾನೆ. ಈ ವೇಳೆ ಜನನಿ ಪಕ್ಕದಲ್ಲೇ ಜೋಳಿಗೆಯಲ್ಲಿ ಮಲಗಿದ್ದ ಮಗುವಿನ ಮೇಲೆ ಬಿದ್ದಿದ್ದಾಳೆ. ಇದರಿಂದ ಗಾಬರಿಯಾದ ಮಗು ಅಳಲಾರಂಭಿಸಿತು.

ಮಗುವಿನ ಅಳುವನ್ನು ಕೇಳಿ ಕೋಪಗೊಂಡ ಶ್ರೀನಿವಾಸ್ ಮಗುವನ್ನು ಜೋಳಿಗೆಯಿಂದ ಹೊರತೆಗೆದು ಬಿಸಾಡಿದ್ದಾನೆ. ಗೋಡೆಗೆ ತಗಲಿದ ಕೂಸು ಕೊನೆಗೆ ಪ್ರಜ್ಞೆ ತಪ್ಪಿತ್ತು. ತಕ್ಷಣವೇ ಜನನಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಳು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದ್ದೆ. ಇನ್ನು ಸ್ಥಳಕ್ಕೆ ಭೇಟಿಕೊಟ್ಟ ಅತ್ತಿಬೆಲೆ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿದ್ದಾರೆ.

Published On - 3:57 pm, Sun, 5 July 20