AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಇನ್ಶೂರೆನ್ಸ್​​ ಹಣಕ್ಕಾಗಿ ಜ್ಯುವೆಲ್ಲರಿ ಮಾಲೀಕನ ನಾಟಕ; ವಿಚಾರಣೆ ವೇಳೆ ಹೊರಬಂತು ಅಸಲಿ ಕಹಾನಿ

ಬಂಗಾರದ ಅಂಗಡಿ ಮಾಲೀಕನ ಕಥೆ ಮತ್ತು ನಿರ್ದೇಶನ ಕಂಡು ಪೊಲೀಸರು ದಂಗಾಗಿದ್ದಾರೆ. ಈತ ಹೆಣದ ಕಥೆ ಯಾವ ಕ್ರೈಂ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಗಳೂರಿನ ನಗರತ್​ ಪೇಟೆಯ ಕೇಸರ್ ಬಂಗಾರದ ಅಂಗಡಿ ಮಾಲಿಕ ರಾಜ್ ಜೈನ್ ಇನ್ಶೂರೆನ್ಸ್​​ನ ನಾಲ್ಕು ಕೋಟಿ ರೂ. ಹಣಕ್ಕಾಗಿ ಕೆಟ್ಟ ದಾರಿ ತುಳಿದಿದ್ದಾನೆ.

ಬೆಂಗಳೂರು: ಇನ್ಶೂರೆನ್ಸ್​​ ಹಣಕ್ಕಾಗಿ ಜ್ಯುವೆಲ್ಲರಿ ಮಾಲೀಕನ ನಾಟಕ; ವಿಚಾರಣೆ ವೇಳೆ ಹೊರಬಂತು ಅಸಲಿ ಕಹಾನಿ
ಸಾಂದರ್ಭಿಕ ಚಿತ್ರ
ಜಗದೀಶ ಬಿ.
| Edited By: ವಿವೇಕ ಬಿರಾದಾರ|

Updated on: Aug 01, 2023 | 10:37 AM

Share

ಬೆಂಗಳೂರು: ಬಂಗಾರದ ಅಂಗಡಿ (Jewellery Shop) ಮಾಲೀಕನ ಕಥೆ ಮತ್ತು ನಿರ್ದೇಶನ ಕಂಡು ಪೊಲೀಸರು (Police) ದಂಗಾಗಿದ್ದಾರೆ. ಈತ ಹೆಣದ ಕಥೆ ಯಾವ ಕ್ರೈಂ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಗಳೂರಿನ (Bengaluru) ನಗರತ್​ ಪೇಟೆಯ ಕೇಸರ್ ಬಂಗಾರದ ಅಂಗಡಿ ಮಾಲಿಕ ರಾಜ್ ಜೈನ್ ಇನ್ಶೂರೆನ್ಸ್​​ನ (Insurance) ನಾಲ್ಕು ಕೋಟಿ ರೂ. ಹಣಕ್ಕಾಗಿ ಕೆಟ್ಟ ದಾರಿ ತುಳಿದಿದ್ದಾನೆ. ಹೌದು ಇನ್ಶೂರೆನ್ಸ್​​ ಹಣ ಕ್ಲೈಮ್​ ಮಾಡಿಕೊಳ್ಳಲು ತನ್ನ 2.7 ಕೇಜಿ ಚಿನ್ನವನ್ನು ದರೋಡೆ ಮಾಡಿದ್ದಾರೆ ಎಂದು ನಾಟಕವಾಡಿದ್ದಾನೆ.

ರಾಜ್ ಜೈನ್ ದರೋಡೆ ನಾಟಕವಾಡಲು 20 ದಿನಗಳಿಂದ ಪ್ಲ್ಯಾನ್ ಮಾಡಿದ್ದಾನೆ. ಈತ ಸಿನಿಮಾ ಸ್ಟೈಲ್​ನ ದರೋಡೆ ಕೃತ್ಯಕ್ಕೆ ತನ್ನ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾನೆ. ಅವರಿಗೆ ಇದೇ ರೀತಿ ಉತ್ತರ ಕೊಡಬೇಕೆಂದು ಟ್ರೈನಿಂಗ್​ ಸಹ ನೀಡಿದ್ದನು.

ಎಲ್ಲವೂ ಪ್ಲಾನ್​​ವಾದ ಬಳಿಕ ಒಂದು 2.7 ಕೆಜಿ ಚಿನ್ನ ಅಂಗಡಿಗೆ ತಂದಿದ್ದಾನೆ. ನಂತರ ಸಿಬ್ಬಂದಿ ಕೈಯಲ್ಲಿ ಚಿನ್ನವಿದ್ದ ಬ್ಯಾಗ್​ನ್ನು ಕೊಟ್ಟು ಕಳುಹಿಸಿದ್ದಾನೆ. ಇದನ್ನು ತೆಗೆದುಕೊಂಡು ಸಿಬ್ಬಂದಿ ಡಿಯೋ ಬೈಕ್​ನಲ್ಲಿ ಕಾಲಿನ ಬಳಿ ಇಟ್ಟುಕೊಂಡು ಮೈಸೂರು ರಸ್ತೆಯ ಫ್ಲೇ ಓವರ್​ ಮೇಲೆ ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅಟ್ಯಾಕ್ ಮಾಡಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ನಂತರ ಬಾಲಕರು ಚಿನ್ನ ಕಳೆದುಹೋಗಿದೆ ಎಂದು ಪೊಲೀಸ್​ ಠಾಣೆಗೆ ಬಂದಿದ್ದಾರೆ. ಆದರೆ ಅಸಲಿಗೆ ಮೈಸೂರು ರಸ್ತೆಯ ಫ್ಲೇಓವರ್ ಮೇಲೆ ದರೋಡೆ ನಡೆದಿರಲಿಲ್ಲ.

ಇದನ್ನೂ ಓದಿ: ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ಎಂದು ಶಂಕಿಸಿದ ಅಣ್ಣನನ್ನು ಕೊಂದ ತಮ್ಮ

ಹೌದು ಡಿಯೋ ಬೈಕ್​ನ ಮುಂದೆ ಇಟ್ಟುಕೊಂಡಿದ್ದ ಚಿನ್ನವನ್ನು ಡಿಕ್ಕಿಯಲ್ಲಿ ಇಟ್ಟುಕೊಂಡು ಕಾಟನ್​​ಪೇಟೆ ಪೊಲೀಸ್​ ಠಾಣೆಗೆ ಬಂದು 3.7 ಕೇಜಿ ಚಿನ್ನ ದರೊಡೆಯಾಗಿದೆ ಎಂದು ದೂರು ನೀಡಿದ್ದಾರೆ. ನಂತರ ಠಾಣೆಯಿಂದ ಹೊರಗಡೆ ಬಂದು ಡಿಯೋ ಬೈಕ್​​ನ ಡಿಕ್ಕಿಯಲ್ಲಿದ್ದ ಚಿನ್ನವನ್ನು ಬೇರೊಂದು ಗಾಡಿಗೆ ಶಿಫ್ಟ್ ಮಾಡಿ ಹೈದ್ರಾಬಾದ್​​ಗೆ ಸಾಗಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವಾಗ ಪೊಲೀಸರಿಗೆ ಸಿಬ್ಬಂದಿ ಮೇಲೆ ಅನುಮಾನ ಬಂದು ಅವರ ಕಾಲ್​ ಹಿಸ್ಟ್ರಿ ಚೆಕ್​ ಮಾಡಿದ್ದಾರೆ. ಆಗ ಹೊರ ಬಂತು ಅಸಲಿ ಕಹಾನಿ. ಸಿಬ್ಬಂದಿ ಚಿನ್ನವನ್ನು ಮತ್ತೊಂದು ಬೈಕ್​ಗೆ ಶಿಫ್ಟ್ ಮಾಡಿದ ಬಳಿಕ ವಾಟ್ಸ್ ಆ್ಯಪ್ ಮೂಲಕ ಮಾಲೀಕನಿಗೆ ಕರೆ ಮಾಡಿ ಮತ್ತೊಂದು ಗಾಡಿಯಲ್ಲಿ ಚಿನ್ನ ಇಟ್ಟು ಹೈದರಾಬಾದ್​ಗೆ ಕಳುಹಿಸಿದ್ದಾಗಿ ಹೇಳಿದ್ದಾರೆ.

ಈ ವಿಚಾರ ತಿಳಿದು ಪೊಲೀಸರು ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಸದ್ಯ ಕಾಟನ್​​ಪೇಟೆ ಪೊಲೀಸರು ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್