AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಇನ್ಶೂರೆನ್ಸ್​​ ಹಣಕ್ಕಾಗಿ ಜ್ಯುವೆಲ್ಲರಿ ಮಾಲೀಕನ ನಾಟಕ; ವಿಚಾರಣೆ ವೇಳೆ ಹೊರಬಂತು ಅಸಲಿ ಕಹಾನಿ

ಬಂಗಾರದ ಅಂಗಡಿ ಮಾಲೀಕನ ಕಥೆ ಮತ್ತು ನಿರ್ದೇಶನ ಕಂಡು ಪೊಲೀಸರು ದಂಗಾಗಿದ್ದಾರೆ. ಈತ ಹೆಣದ ಕಥೆ ಯಾವ ಕ್ರೈಂ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಗಳೂರಿನ ನಗರತ್​ ಪೇಟೆಯ ಕೇಸರ್ ಬಂಗಾರದ ಅಂಗಡಿ ಮಾಲಿಕ ರಾಜ್ ಜೈನ್ ಇನ್ಶೂರೆನ್ಸ್​​ನ ನಾಲ್ಕು ಕೋಟಿ ರೂ. ಹಣಕ್ಕಾಗಿ ಕೆಟ್ಟ ದಾರಿ ತುಳಿದಿದ್ದಾನೆ.

ಬೆಂಗಳೂರು: ಇನ್ಶೂರೆನ್ಸ್​​ ಹಣಕ್ಕಾಗಿ ಜ್ಯುವೆಲ್ಲರಿ ಮಾಲೀಕನ ನಾಟಕ; ವಿಚಾರಣೆ ವೇಳೆ ಹೊರಬಂತು ಅಸಲಿ ಕಹಾನಿ
ಸಾಂದರ್ಭಿಕ ಚಿತ್ರ
Follow us
Jagadisha B
| Updated By: ವಿವೇಕ ಬಿರಾದಾರ

Updated on: Aug 01, 2023 | 10:37 AM

ಬೆಂಗಳೂರು: ಬಂಗಾರದ ಅಂಗಡಿ (Jewellery Shop) ಮಾಲೀಕನ ಕಥೆ ಮತ್ತು ನಿರ್ದೇಶನ ಕಂಡು ಪೊಲೀಸರು (Police) ದಂಗಾಗಿದ್ದಾರೆ. ಈತ ಹೆಣದ ಕಥೆ ಯಾವ ಕ್ರೈಂ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಗಳೂರಿನ (Bengaluru) ನಗರತ್​ ಪೇಟೆಯ ಕೇಸರ್ ಬಂಗಾರದ ಅಂಗಡಿ ಮಾಲಿಕ ರಾಜ್ ಜೈನ್ ಇನ್ಶೂರೆನ್ಸ್​​ನ (Insurance) ನಾಲ್ಕು ಕೋಟಿ ರೂ. ಹಣಕ್ಕಾಗಿ ಕೆಟ್ಟ ದಾರಿ ತುಳಿದಿದ್ದಾನೆ. ಹೌದು ಇನ್ಶೂರೆನ್ಸ್​​ ಹಣ ಕ್ಲೈಮ್​ ಮಾಡಿಕೊಳ್ಳಲು ತನ್ನ 2.7 ಕೇಜಿ ಚಿನ್ನವನ್ನು ದರೋಡೆ ಮಾಡಿದ್ದಾರೆ ಎಂದು ನಾಟಕವಾಡಿದ್ದಾನೆ.

ರಾಜ್ ಜೈನ್ ದರೋಡೆ ನಾಟಕವಾಡಲು 20 ದಿನಗಳಿಂದ ಪ್ಲ್ಯಾನ್ ಮಾಡಿದ್ದಾನೆ. ಈತ ಸಿನಿಮಾ ಸ್ಟೈಲ್​ನ ದರೋಡೆ ಕೃತ್ಯಕ್ಕೆ ತನ್ನ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾನೆ. ಅವರಿಗೆ ಇದೇ ರೀತಿ ಉತ್ತರ ಕೊಡಬೇಕೆಂದು ಟ್ರೈನಿಂಗ್​ ಸಹ ನೀಡಿದ್ದನು.

ಎಲ್ಲವೂ ಪ್ಲಾನ್​​ವಾದ ಬಳಿಕ ಒಂದು 2.7 ಕೆಜಿ ಚಿನ್ನ ಅಂಗಡಿಗೆ ತಂದಿದ್ದಾನೆ. ನಂತರ ಸಿಬ್ಬಂದಿ ಕೈಯಲ್ಲಿ ಚಿನ್ನವಿದ್ದ ಬ್ಯಾಗ್​ನ್ನು ಕೊಟ್ಟು ಕಳುಹಿಸಿದ್ದಾನೆ. ಇದನ್ನು ತೆಗೆದುಕೊಂಡು ಸಿಬ್ಬಂದಿ ಡಿಯೋ ಬೈಕ್​ನಲ್ಲಿ ಕಾಲಿನ ಬಳಿ ಇಟ್ಟುಕೊಂಡು ಮೈಸೂರು ರಸ್ತೆಯ ಫ್ಲೇ ಓವರ್​ ಮೇಲೆ ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅಟ್ಯಾಕ್ ಮಾಡಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ನಂತರ ಬಾಲಕರು ಚಿನ್ನ ಕಳೆದುಹೋಗಿದೆ ಎಂದು ಪೊಲೀಸ್​ ಠಾಣೆಗೆ ಬಂದಿದ್ದಾರೆ. ಆದರೆ ಅಸಲಿಗೆ ಮೈಸೂರು ರಸ್ತೆಯ ಫ್ಲೇಓವರ್ ಮೇಲೆ ದರೋಡೆ ನಡೆದಿರಲಿಲ್ಲ.

ಇದನ್ನೂ ಓದಿ: ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ಎಂದು ಶಂಕಿಸಿದ ಅಣ್ಣನನ್ನು ಕೊಂದ ತಮ್ಮ

ಹೌದು ಡಿಯೋ ಬೈಕ್​ನ ಮುಂದೆ ಇಟ್ಟುಕೊಂಡಿದ್ದ ಚಿನ್ನವನ್ನು ಡಿಕ್ಕಿಯಲ್ಲಿ ಇಟ್ಟುಕೊಂಡು ಕಾಟನ್​​ಪೇಟೆ ಪೊಲೀಸ್​ ಠಾಣೆಗೆ ಬಂದು 3.7 ಕೇಜಿ ಚಿನ್ನ ದರೊಡೆಯಾಗಿದೆ ಎಂದು ದೂರು ನೀಡಿದ್ದಾರೆ. ನಂತರ ಠಾಣೆಯಿಂದ ಹೊರಗಡೆ ಬಂದು ಡಿಯೋ ಬೈಕ್​​ನ ಡಿಕ್ಕಿಯಲ್ಲಿದ್ದ ಚಿನ್ನವನ್ನು ಬೇರೊಂದು ಗಾಡಿಗೆ ಶಿಫ್ಟ್ ಮಾಡಿ ಹೈದ್ರಾಬಾದ್​​ಗೆ ಸಾಗಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವಾಗ ಪೊಲೀಸರಿಗೆ ಸಿಬ್ಬಂದಿ ಮೇಲೆ ಅನುಮಾನ ಬಂದು ಅವರ ಕಾಲ್​ ಹಿಸ್ಟ್ರಿ ಚೆಕ್​ ಮಾಡಿದ್ದಾರೆ. ಆಗ ಹೊರ ಬಂತು ಅಸಲಿ ಕಹಾನಿ. ಸಿಬ್ಬಂದಿ ಚಿನ್ನವನ್ನು ಮತ್ತೊಂದು ಬೈಕ್​ಗೆ ಶಿಫ್ಟ್ ಮಾಡಿದ ಬಳಿಕ ವಾಟ್ಸ್ ಆ್ಯಪ್ ಮೂಲಕ ಮಾಲೀಕನಿಗೆ ಕರೆ ಮಾಡಿ ಮತ್ತೊಂದು ಗಾಡಿಯಲ್ಲಿ ಚಿನ್ನ ಇಟ್ಟು ಹೈದರಾಬಾದ್​ಗೆ ಕಳುಹಿಸಿದ್ದಾಗಿ ಹೇಳಿದ್ದಾರೆ.

ಈ ವಿಚಾರ ತಿಳಿದು ಪೊಲೀಸರು ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಸದ್ಯ ಕಾಟನ್​​ಪೇಟೆ ಪೊಲೀಸರು ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್