AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಹತ್ಯೆ, ಕೊಲೆ ಮಾಡಿದ್ದು ವೈದ್ಯನಾ, ಕಾರು ಚಾಲಕನಾ?

ಪತಿ ಮತ್ತು ಮಗ ನಿಧನವಾದ ನಂತರ ಶಾಂತಿ ಸ್ಟೀಲ್ ಇಂಡಸ್ಟ್ರೀಸ್ ಮಾಲಿಕ ಉದ್ಯಮಿ ಉಗ್ರಪ್ಪ ಪತ್ನಿ ಶಾಂತಮ್ಮ (50) ಏಕಾಂಗಿಯಾಗಿ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿರುವ ಫಾರ್ಮ್ ಹೌಸ್​ನಲ್ಲಿ ವಾಸವಾಗಿದ್ದರು. ಮಾರ್ಚ್​ 6 ರಂದು ಫಾರ್ಮ್​ ಹೌಸ್​ನಲ್ಲಿ ಶಾಂತಮ್ಮ ಅವರ ಶವ ಪತ್ತೆಯಾಗುತ್ತದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ, ಅಚ್ಚರಿ ವಿಚಾರಗಳು ತಿಳಿಯುತ್ತವೆ.

ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಹತ್ಯೆ, ಕೊಲೆ ಮಾಡಿದ್ದು ವೈದ್ಯನಾ, ಕಾರು ಚಾಲಕನಾ?
ಪ್ರಾತಿನಿಧಿಕ ಚಿತ್ರ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: ವಿವೇಕ ಬಿರಾದಾರ|

Updated on: Apr 10, 2024 | 8:14 AM

Share

ರಾಮನಗರ, ಏಪ್ರಿಲ್​ 10: ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿರುವ ಫಾರ್ಮ್ ಹೌಸ್​ನಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ, ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಾಂತಿ ಸ್ಟೀಲ್ ಇಂಡಸ್ಟ್ರೀಸ್ ಮಾಲಿಕ ಉದ್ಯಮಿ ಉಗ್ರಪ್ಪ ಪತ್ನಿ ಶಾಂತಮ್ಮ (50) ಕೊಲೆಯಾದ ಮಹಿಳೆ.

ಕೊಲೆಯಾದ ಶಾಂತಿ ಅವರ ಪತಿ‌ ಉಗ್ರಪ್ಪ ವಿವಿಧ ಉದ್ಯಮಗಳನ್ನು ಮಾಡುತ್ತಿದ್ದರು. ಪತ್ನಿಯ ಹೆಸರಿನಲ್ಲಿ “ಶಾಂತಿ ಸ್ಟೀಲ್ಸ್​​” ಅಂತ ಹಲವು ಎಜೆನ್ಸಿಗಳನ್ನು ನಡೆಸುತ್ತಿದ್ದರು. ಬೆಂಗಳೂರಿನ ಹೊಸಕೇರೆಹಳ್ಳಿಯಲ್ಲಿ ವಾಸಿಸುತ್ತಿದ್ದ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕಗ್ಗಲಿಪುರದ ಬಳಿ ಫಾರ್ಮ‌ಹೌಸ್ ಕಟ್ಟಿದ್ದರು. ಆಗಾಗ ಇಲ್ಲಿಗೆ ಬಂದು ನೆಲೆಸುತ್ತಿದ್ದರು. ಆದರೆ ಕೆಲ ದಿನಗಳ ಬಳಿಕ ಉದ್ಯಮಿ ಉಗ್ರಪ್ಪ ಹೃದಯಾಘಾತದಿಂದ ನಿಧನವಾದರು. ಪತಿ ಅಗಲಿಕೆಯ ನೋವಿನಿಂದ ಇದ್ದ ಶಾಂತಿ, ಮಗ ಹರ್ಷಿತ್​ನೊಂದಿಗೆ ವಾಸವಾಗಿದ್ದರು.

ಆದರೆ ದುರ್ದೈವ ‌ಐದು ವರ್ಷಗಳ ಹಿಂದೆ ಮಗ‌ ಹರ್ಷಿತ್ ಕೂಡ ಬಿಡದಿ ಬಳಿ ಅಪಘಾತದಲ್ಲಿ ಮೃತಪಟ್ಟರು. ಪತಿ ಹಾಗೂ ಮಗನ ಸಾವಿನಿಂದ ಮೃತ ಶಾಂತಮ್ಮ ಮಾನಸಿಕವಾಗಿ ಜರ್ಜರಿತವಾಗಿದ್ದರು. ಹೀಗಾಗಿ ಬೆಂಗಳೂರಿನ ಹೊಸಕರೆಹಳ್ಳಿಯ ಮನೆ ಬಿಟ್ಟು ಕಗ್ಗಲಿಪುರದ ಫಾರ್ಮ್ ಹೌಸಿನಲ್ಲಿ ವಾಸವಾಗಿದ್ದರು. ಕೊರೊನಾ ಸಂದರ್ಭದಲ್ಲಿ ತೀರಾ ಆರೋಗ್ಯ ಹದಗೆಟ್ಟ ಕಾರಣ ಶಾಂತಮ್ಮ ಅವರ ಅಕ್ಕನ ಮಗ ವೈದ್ಯ ನಂಜೇಶ್, ಶಾಂತಮ್ಮ ಅವರ ಕೇರ್ ಟೇಕ್ ಮಾಡಿ, ಫಾರ್ಮ್ ಹೌಸಿನಲ್ಲೇ ಆರಾಮವಾಗಿ ಇರುವಂತೆ ಸಲಹೆ ನೀಡಿದ್ದರು. ವೈದ್ಯ ನಂಜೇಶ್​ ಕೂಡ ಆಗಾಗ ಫಾರ್ಮ್​ ಹೌಸ್​ಗೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು.

ಮಾರ್ಚ್​ 5ರ ಸಂಜೆ 6:30ಕ್ಕೆ ಚಾಲಕ ವಿರೇಶ್​ನನ್ನು ಕರೆದುಕೊಂಡು ಶಾಂತಮ್ಮ ಹೊರಗಡೆ ಹೋಗಿದ್ದರು. ರಾತ್ರಿ ಫಾರ್ಮ್ ಹೌಸಿಗೆ ಮರಳಿದ್ದಾರೆ. ಶಾಂತಮ್ಮ ಕೂತಿದ್ದ ಕಾರು ಒಳ ಬಂದ ಬಳಿಕ ಚಾಲಕ ಶಾಂತಮ್ಮ ಅವರನ್ನು ಕೆಳಗಿಳಿಯಲು ಹೇಳಿದ್ದಾನೆ. ಚಾಲಕ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಿಂಬದಿಯಿಂದ ಶಾಂತಮ್ಮ ಅವರ ತೆಲೆಗೆ ಹೊಡೆದಿದ್ದಾನೆ.‌ ಇದರಿಂದ ಶಾಂತಮ್ಮ ಕುಸಿದು ಬಿದ್ದಿದ್ದಾರೆ. ಶಾಂತಮ್ಮ ನೆಲಕ್ಕೆ ಬಿದ್ದ ಮೇಲೆಯೂ ತಲೆಗೆ ಹಲವು ಬಾರಿ ಹಲ್ಲೆ‌ ಮಾಡಿರುವ ಆರೋಪಿ, ಶಾಂತಮ್ಮ ಸತ್ತಿದ್ದಾರಾ ಅಂತ ಕಚಿತಪಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ವಿಡಿಯೋ ಕಾಲ್​​ನಲ್ಲಿ ಬೆಂಗಳೂರು ಮಹಿಳೆಯ ಬೆತ್ತಲಾಗಿಸಿ 14.57 ಲಕ್ಷ ರೂ. ಎಗರಿಸಿದ ಸೈಬರ್ ವಂಚಕರು!

ಒಬ್ಬಂಟಿ ಮಹಿಳೆಯೊಬ್ಬರು ವಾಸಿಸುತ್ತಿದ್ರೂ, ಬೆಳಗಿನ ಜಾವ ವಾಕಿಂಗ್ ಬರುತ್ತಿದ್ದ ಶಾಂತಮ್ಮ ಅವತ್ತು‌ ಹೊತ್ತೇರಿದರೂ ಹೊರಗಡೆ ಬಂದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಶಾಂತಮ್ಮ ಅವರ ಮೃತದೇಹ ಕಂಡಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಬಳಿಕ ಶಾಂತಮ್ಮ ಅವರ ಕಾರು ಚಾಲಕ ವಿರೇಶ್ ಸ್ಥಳೀಯರಿಗೆ ಕರೆ ಮಾಡಿ “ನಾನು ಮಂಗಳೂರಿನಿಂದ ಕರೆ ಮಾಡುತ್ತಿದ್ದೇನೆ. ಯಾರೋ ಅಪರಿಚಿತರು ಒಳ ನುಗ್ಗಿ ಶಾಂತಮ್ಮ ಹಾಗೂ ನನ್ನ ತಲೆಗೆ ಹೊಡೆದರು. ನಾನು ಹೇಗೋ ಕಷ್ಟಪಟ್ಟು ಬದುಕಿದೆ. ‌ಆದರೆ ಶಾಂತಮ್ಮ ಅವರ ಪರಿಸ್ಥಿತಿ ಹೇಗಿದೆ ನನಗೆ ಗೊತ್ತಿಲ್ಲ ಅಂತ ಹೇಳಿದ್ದಾನೆ.‌ ಇದೆ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು ಚಾಲಕ ವಿರೇಶ್ ಹೇಳುವ ಪ್ರಕಾರ, ಹಲ್ಲೆ ನಡೆದ ಕೂಡಲೇ ತನನ್ನು ತಾನು ಬಚಾವ್ ಮಾಡಿಕೊಳ್ಳಲು ಅಲ್ಲಿಂದ ಮಂಗಳೂರಿಗೆ ಹೋಗಿರುವುದಾಗಿ ಹೇಳಿದ್ದಾನೆ. ಆದರೆ ತನ್ನನ್ನು ಬಚಾವ್ ಮಾಡಿಕೊಳ್ಳಲೇ ಬೇಕಿದ್ದರೆ 500‌ ಕಿ.ಮಿ ದೂರ ಇರುವ ಮಂಗಳೂರು ಹೋಗುವ ಬದಲು 5‌ ಕಿಮಿ ದೂರದಲ್ಲಿರುವ ಕಗ್ಗಲಿಪುರ ಪೊಲೀಸ್ ಠಾಣೆಗೆ ಬರಬಹುದಿತ್ತಲ್ವಾ ಎಂಬ ಪ್ರಶ್ನೆಗೆ ಚಾಲಕ ವಿರೇಶ್ ಬಳಿ ಯಾವುದೆ ಉತ್ತರ ಇಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಾಂತಮ್ಮ ತನ್ನ ಕೋಟ್ಯಾಂತರ ಆಸ್ತಿಯ ವಿಲ್​ನ್ನು ತನ್ನ ಅಕ್ಕನ ಮಗ ವೈದ್ಯ ನಂಜೇಶ್​ ಅವರ ಹೆಸರಿಗೆಮಾಡಿದ್ದಾರೆ. ಕನಕಪುರ ಸೇರಿದಂತೆ ಹಲವು ಕಡೆ ಆಸ್ತಿ ಇದ್ದು ಬಹುಕೋಟಿ ಮೌಲ್ಯದ ಹಲವು ಜಾಗಗಳನ್ನು ನಂಜೇಶ್ ಅವರ ಹೆಸರಿಗೆ​ ಮಾಡಲಾಗಿದೆ.‌ ತಾನು ‌ಸತ್ತ ಬಳಿಕ ಇವೆಲ್ಲವೂ ನೀನೆ ನೋಡಿಕೊ ಎಂದಿದ್ದ ಶಾಂತಮ್ಮ, ಇತ್ತೀಚೆಗೆ ತಮ್ಮ ಆಸ್ತಿ ಬಡವರಿಗೆ ದಾನ ಮಾಡಬೇಕು‌ ಅಂತ ಅಂದುಕೊಂಡಿದ್ದರಂತೆ. ತಾವಿರುವ ಫಾರ್ಮ್ ಹೌಸ್ ಕೂಡ ರಾಮಕೃಷ್ಣ ಶಾಂತಿ‌ಧಾಮ ಮಾಡಬೇಕು, ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತನ್ನೆಲ್ಲ ಆಸ್ತಿ ದಾನ ಮಾಡಬೇಕು ಅಂತ ನಿರ್ಧಾರ ಮಾಡಿದ್ದರಂತೆ. ಅಷ್ಟೆ ಅಲ್ಲದೆ ಆಶ್ರಮ ನಿರ್ಮಾಣಕ್ಕೆ ದುಡ್ಡು ಕೂಡ ದಾನವಾಗಿ ನೀಡಿದ್ದರು ಎನ್ನಲಾಗಿದೆ.‌ ಈ ವಿಚಾರಕ್ಕೆ ಆಗಾಗ ಕುಟುಂಬಸ್ಥರಲ್ಲಿ ಮಾತಿನ ಚಕಮಕಿಯೂ ನಡೆದಿತ್ತು ಎನ್ನಲಾಗಿದೆ.

ಆದರೆ ಕೆಲ‌ ತಿಂಗಳುಗಳ ಹಿಂದೆ ಚಾಲಕನಾಗಿ‌ ಕೆಲಸಕ್ಕೆ ಸೇರಿಕೊಂಡ ಚಾಲಕ ವಿರೇಶ್ ‌ನಡೆ ಅನುಮಾನ ಆಗಿತ್ತು ಅಂತ ವೈದ್ಯ ನಂಜೇಶ್ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ‌ಇದರ ಅನ್ವಯ ಚಾಲಕ ವಿರೇಶ್​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ವಿಚಾರಣೆ ವೇಳೆ ಮಹತ್ವದ ಸುಳಿವು ಪಡೆದುಕೊಂಡಿರುವ ರಾಮನಗರ ಪೊಲೀಸರು, ಬೆಂಗಳೂರಿನ ಹೊಸಕೇರಿಹಳ್ಳಿಯಲ್ಲಿರುವ ಮನೆಯ ಸಿಸಿಟಿವು ಡಿವಿಆರ್ ಮಂಗಳೂರನಿಂದ ವಶ ಪಡಿಸಿಕೊಂಡಿದ್ದಾರೆ. ಇದರರ್ಥ ಕೊಲೆ ನಡೆದ ಬಳಿಲ ಹೊಸಕೆರೆಹಳ್ಳಿಯ ಮನೆಯಲ್ಲಿನ ಹಣ ಒಡವೆ ದೋಚಲು ಅಲ್ಲಿ ಯಾರೋ ಹೋಗಿವರುವ ಮಾಹಿತಿ ಖಚಿತಗೊಂಡಿದೆ. ಅಲ್ಲದೆ ಇಪ್ಪತ್ತೆರಡು ವರ್ಷದ ಒಬ್ಬ ಮುಸ್ಲಿಂ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಮಾರ್ಚ್​ 5ರ ಸಂಜೆ 6:30‌ಕ್ಕೆ ಮುಸ್ಲಿಂ ಯುವಕ ಎಲ್ಲಿದ್ದ ಎಂಬ ಖಚಿತ ಮಾಹಿತಿ ಪಡೆಯಲು ಅಂದಿನ ಆತನ ಲೊಕೆಶನ್ ಡೇಟಾ ಪರಿಶೀಲನೆ ಮಾಡುತ್ತಿದ್ದಾರೆ.

ಎರಡು ಆಯಾಮಾಗಳಲ್ಲಿ ಪ್ರಕರಣವನ್ನು ತನಿಖೆ ಮಾಡುತ್ತಿರುವ ಕಗ್ಗಲಿಪುರ ಪೊಲೀಸರು ಇನ್ನೂ ಯಾವುದೇ ಉಪಸಂಹಾರಕ್ಕೆ ಬಂದಿಲ್ಲ. ಇಡೀ ಆಸ್ತಿ ತನ್ನ ಹೆಸರಿಗೆನೇ ಬರೆದುಕೊಟ್ಟ ಶಾಂತಮ್ಮ ಕೊಲೆಗೆ ವೈದ್ಯ ನಂಜೇಶ್ ಸುಪಾರಿ ಕೊಟ್ಟಿದ್ನಾ, ಅಥವಾ ಮನೆಯಲ್ಲಿದ್ದ ಚಿನ್ನಾಭರಣ ದೋಚಲು ಮುಸ್ಲಿಂ ಯುವಕನ ಸಹಾಯ ಪಡೆದು ಚಾಲಕ ವಿರೇಶ್ ಮಾಡಿದ ಕುತಂತ್ರವೇ? ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Syed Nizamuddin
Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ