AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರಮಂಗಲದ ಪಬ್​​ನಲ್ಲಿ ನಡುರಾತ್ರಿ ಟ್ಯಾಕ್ಸ್​​ ಇನ್​ಸ್ಪೆಕ್ಟರ್​​ಗೆ ಕೂಡಿಹಾಕಿ ಹಲ್ಲೆ ಮಾಡಿದ ಪಬ್ ಮಾಲಿಕ, ಬೌನ್ಸರ್​​ಗಳು!

ನೀನು ಫೇಕ್ ಜಿಎಸ್​ಟಿ ಇನ್​ಸ್ಪೆಕ್ಟರ್ ಎಂದು ಇನ್​ಸ್ಪೆಕ್ಟರ್​​ ವಿನಯ್​ಗೆ ಪಬ್​ ಮಾಲಿಕ ರಾಕೇಶ್ ಬೈದಿದ್ದಾನೆ. ಅದಾಗುತ್ತಿದ್ದಂತೆ ಇನ್​ಸ್ಪೆಕ್ಟರ್​​ ವಿನಯ್​ನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ. ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

ಕೋರಮಂಗಲದ ಪಬ್​​ನಲ್ಲಿ ನಡುರಾತ್ರಿ ಟ್ಯಾಕ್ಸ್​​ ಇನ್​ಸ್ಪೆಕ್ಟರ್​​ಗೆ ಕೂಡಿಹಾಕಿ ಹಲ್ಲೆ ಮಾಡಿದ ಪಬ್ ಮಾಲಿಕ, ಬೌನ್ಸರ್​​ಗಳು!
ಕೋರಮಂಗಲದ ಪಬ್​​ನಲ್ಲಿ ಟ್ಯಾಕ್ಸ್​​ ಇನ್​ಸ್ಪೆಕ್ಟರ್​​ಗೆ ಕೂಡಿಹಾಕಿ ಹಲ್ಲೆ ಮಾಡಿದ ಪಬ್ ಮಾಲಿಕ, ಬೌನ್ಸರ್​​ಗಳು!
TV9 Web
| Edited By: |

Updated on:Nov 10, 2021 | 10:56 AM

Share

ಬೆಂಗಳೂರು: ಕೋರಮಂಗಲದ ಪಬ್​​ನಲ್ಲಿ ಜಿಎಸ್​ಟಿ ಇನ್​ಸ್ಪೆಕ್ಟರ್​​ ಒಬ್ಬರನ್ನು ಕೂಡಿಹಾಕಿ, ಪಬ್ ಮಾಲಿಕ ಮತ್ತು ಬೌನ್ಸರ್​​ಗಳು ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರಿ ಹ್ಯಾಪಿ ಬ್ರೋ ಪಬ್ ಗೆ ಬಂದಿದ್ದ ಜಿಎಸ್​ಟಿ ಇನ್​ಸ್ಪೆಕ್ಟರ್​​ ವಿನಯ್ ಮಂಡಲ್ ಭೇಟಿ ನೀಡಿದ್ದರು. ನೈಟ್​ ಪಾರ್ಟಿ ನಡುವೆ ಪಬ್​ ಮಾಲಿಕ ರಾಕೇಶ್ ಗೌಡ ತೆರಿಗೆ ಅಧಿಕಾರಿ ಬಳಿ ಬಂದು ಪರಿಚಯ ಮಾಡಿಕೊಂಡಿದ್ದ. ತಡರಾತ್ರಿ ಹನ್ನೆರಡು ಗಂಟೆ ಬಳಿಕ ಬಿಲ್ ಕೇಳಿದ್ದ. ಆಗ ಅವರಿಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ರಾತ್ರಿ ಒಂದು ಗಂಟೆಯವರೆಗೂ ಇಬ್ಬರೂ ವಾದ ಮಾಡಿಕೊಂಡಿದ್ದಾರೆ.

ಬಳಿಕ ನೀನು ಫೇಕ್ ಜಿಎಸ್​ಟಿ ಇನ್​ಸ್ಪೆಕ್ಟರ್ ಎಂದು ಇನ್​ಸ್ಪೆಕ್ಟರ್​​ ವಿನಯ್​ಗೆ ಪಬ್​ ಮಾಲಿಕ ರಾಕೇಶ್ ಬೈದಿದ್ದಾನೆ. ಅದಾಗುತ್ತಿದ್ದಂತೆ ಇನ್​ಸ್ಪೆಕ್ಟರ್​​ ವಿನಯ್​ನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ. ಬೆಳಗಿನ ಜಾವ ಮೂರು ಗಂಟೆಯ ತನಕ ಹಲ್ಲೆ ಮಾಡಿರುವ ಅರೋಪ ಕೇಳಿಬಂದಿದೆ. ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

ಪಬ್ ಮಾಲೀಕ ರಾಕೇಶ್‌ಗೌಡ, ಬೌನ್ಸರ್ಸ್ ಅರೆಸ್ಟ್: ತಾಜಾ ಮಾಹಿತಿಗಳ ಪ್ರಕಾರ ಪಬ್ ಮಾಲೀಕ ರಾಕೇಶ್‌ ಗೌಡ ಮತ್ತು ಬೌನ್ಸರ್​​ಗಳನ್ನು ಬೆಂಗಳೂರಿನ ಕೋರಮಂಗಲ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

(koramangala pub owner rakesh beats up gst inspector vijay mandal)

Published On - 10:27 am, Wed, 10 November 21

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್