ಭೈರತಿ ನಾಳೆಯೇ ಮಂತ್ರಿ, ಆದ್ರೆ ಇದೇನಿದು KR Puram ಇನ್ಸ್​ಪೆಕ್ಟರ್ ಅಸಹ್ಯ!

ಬೆಂಗಳೂರು: ಅತ್ತೂಕರೆದು, ವಿಧಾನಸೌಧಕ್ಕೆ ಓಡೋಡಿಬಂದು, ಕೊನೆಗೂ ನಾಳೆಯೇ ಮಂತ್ರಿ ಸ್ಥಾನ ಅಲಂಕರಿಸಲು ಕೋಟುಬೂಟು ತೊಟ್ಟು ಸಿದ್ಧರಾಗಿರುವ ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ತೀರಾ ಮುಜುಗುರದ ಸನ್ನಿವೇಶ ಎದುರಿಸಿದ್ದಾರೆ. ಮೂವರು ಇನ್ಸ್​ಪೆಕ್ಟರ್​​ಗಳು ಅವರನ್ನು ಸುತ್ತುವರಿದು ವಾಚಾಮಗೋಚರ ಹೊಗಳಿ ಹೊನ್ನಶೂಲಕ್ಕೇರಿಸಿ, ಕೈಗೊಂದು ಬೆಳ್ಳಿ ಗದೆ ಮತ್ತು ಬಾಯಿಗೆ ಕೇಕ್​ ತಿನ್ನಿಸಿ ಸಂಭ್ರಮಿಸಿದ್ದಾರೆ. ಇದನ್ನು ಕಂಡು ಸ್ವತಃ ಭೈರತಿಗೆ ತೀವ್ರ ಮುಜುಗುರವಾಗಿದೆ. ಕಮಿಷನರ್​ ಭಾಸ್ಕರ್​ ರಾವ್ ಎಲ್ಲಿದ್ದರೂ ಇದರತ್ತ ಸ್ವಲ್ಪ ಕಣ್ಣಾಡಿಸಲಿ ತಾನು ಒಬ್ಬ ಪೊಲೀಸ್​ ಅಧಿಕಾರಿ ಎಂಬುದನ್ನೂ […]

ಭೈರತಿ ನಾಳೆಯೇ ಮಂತ್ರಿ, ಆದ್ರೆ ಇದೇನಿದು KR Puram ಇನ್ಸ್​ಪೆಕ್ಟರ್ ಅಸಹ್ಯ!

Updated on: Feb 05, 2020 | 3:15 PM

ಬೆಂಗಳೂರು: ಅತ್ತೂಕರೆದು, ವಿಧಾನಸೌಧಕ್ಕೆ ಓಡೋಡಿಬಂದು, ಕೊನೆಗೂ ನಾಳೆಯೇ ಮಂತ್ರಿ ಸ್ಥಾನ ಅಲಂಕರಿಸಲು ಕೋಟುಬೂಟು ತೊಟ್ಟು ಸಿದ್ಧರಾಗಿರುವ ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ತೀರಾ ಮುಜುಗುರದ ಸನ್ನಿವೇಶ ಎದುರಿಸಿದ್ದಾರೆ. ಮೂವರು ಇನ್ಸ್​ಪೆಕ್ಟರ್​​ಗಳು ಅವರನ್ನು ಸುತ್ತುವರಿದು ವಾಚಾಮಗೋಚರ ಹೊಗಳಿ ಹೊನ್ನಶೂಲಕ್ಕೇರಿಸಿ, ಕೈಗೊಂದು ಬೆಳ್ಳಿ ಗದೆ ಮತ್ತು ಬಾಯಿಗೆ ಕೇಕ್​ ತಿನ್ನಿಸಿ ಸಂಭ್ರಮಿಸಿದ್ದಾರೆ. ಇದನ್ನು ಕಂಡು ಸ್ವತಃ ಭೈರತಿಗೆ ತೀವ್ರ ಮುಜುಗುರವಾಗಿದೆ.

ಕಮಿಷನರ್​ ಭಾಸ್ಕರ್​ ರಾವ್ ಎಲ್ಲಿದ್ದರೂ ಇದರತ್ತ ಸ್ವಲ್ಪ ಕಣ್ಣಾಡಿಸಲಿ
ತಾನು ಒಬ್ಬ ಪೊಲೀಸ್​ ಅಧಿಕಾರಿ ಎಂಬುದನ್ನೂ ಮರೆತು, ಹಾದಿಬೀದಿಯ ಕಾರ್ಯಕರ್ತನಂತೆ ಜೈಕಾರ ಹಾಕಿದ್ದನ್ನು ಕಂಡು ಸ್ವತಃ ಭೈರತಿ ಸಿಟ್ಟು ಮಾಡಿಕೊಂಡಿದ್ದಾನೆ. ಬಿಹೇವ್​ ಯುವರ್​ ಸೆಲ್ಫ್​ ಎಂದು ಇನ್ಸ್‌ಪೆಕ್ಟರ್ ಅಂಬರೀಶ್​ಗೆ ಕೈತೋರಿಸಿ, ಬೈದಿದ್ದಾರೆ. ಆದರೂ ಆ ಪೊಲೀಸಪ್ಪ ಇನ್ನೂ ಜೋರಾಗಿಯೇ ಜೈಕಾರ ಹಾಕಿದ್ದಾನೆ. ಬೆಂಗಳೂರು ಪೊಲೀಸ್ ಕಮಿಷನರ್​ ಭಾಸ್ಕರ್​ ರಾವ್ ಅವರು ಎಲ್ಲಿದ್ದರೂ ಈ ಪ್ರಕರಣದತ್ತ ಸ್ವಲ್ಪ ಕಣ್ಣಾಡಿಸಬೇಕು ಎಂದು ಕೆಆರ್​ ಪುರಂ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಪೊಲೀಸರ ದೊಡ್ಡ ‘ಅಪರಾಧ’
ಇಷ್ಟಕ್ಕೂ ಏನಾಯಿತೆಂದ್ರೆ ಮೊನ್ನೆ ಭೈರತಿ ಬಸವರಾಜ್ ಅವರ 56 ನೇ ಹುಟ್ಟುಹಬ್ಬ ಇತ್ತು. ಇದೇ ಸುಸಂದರ್ಭ ಎಂದು ಕೆ ಆರ್ ಪುರಂ ಠಾಣೆಯ ಇನ್ಸ್‌ಪೆಕ್ಟರ್ ಅಂಬರೀಶ್ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಇವರಿಗೆ ಅಕ್ಕಪಕ್ಕ ಸ್ಟೇಷನ್​​ಗಳ ಇನ್ನೂ ಇಬ್ಬರು ಇನ್ಸ್‌ಪೆಕ್ಟರ್​ಗಳು ಸಾಥ್​ ನೀಡಿದ್ದಾರೆ. ಖುದ್ದು ಅಂಬರೀಶ್, ಭೈರತಿಗೆ ಬೆಳ್ಳಿ ಗದೆ ನೀಡಿದ್ದಾರೆ. ಸಾಲದು ಅಂತಾ ಕೇಕ್​ ತಿನ್ನಿಸಿ, ಜೈಕಾರಗಳನ್ನು ಹಾಕಿದ್ದಾರೆ. ಇದನ್ನೆಲ್ಲ ಕಂಡು, ಶಿಸ್ತಿಗೆ ಹೆಸರಾದ ಇಲಾಖೆಯಲ್ಲಿ ಏನಿದು ಅಸಹ್ಯ? ಇದು ಪೊಲೀಸರ ದೊಡ್ಡ ‘ಅಪರಾಧ’ವೇ ಸರಿ ಎಂದು ಕೆ ಆರ್ ಪುರಂ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ಸ್‌ಪೆಕ್ಟರ್​ಗೆ ಖಡಕ್ ನೋಟಿಸ್ ಜಾರಿ
ಇದನ್ನೆಲ್ಲ ಕಂಡು ಕೆಂಡಾಮಂಡಲಗೊಂಡಿರುವ ವೈಟ್​ಫೀಲ್ಡ್​ ವಿಭಾಗದ ಡಿಸಿಪಿ ಅನುಚೇತ್ ಸೀದಾ ನೋಟಿಸ್​ ಜಾರಿ ಮಾಡಿದ್ದಾರೆ. ಮಹಾನುಭಾವ ಅಂಬರೀಶ್ ಏನಿದೆಲ್ಲ ನಿನ್ನ ಅವತಾರ? ಇಲಾಖೆಯ ಮಾನ ಮರ್ಯಾದೆ ಹೀಗಾ ಹರಾಜಿಗೆ ಹಾಕೋದು? ಎಂದು ಗದರಿಕೊಂಡು, ವಿವರಣೆ ನೀಡುವಂತೆ ಖಡಕ್ ನೋಟಿಸ್ ನೀಡಿದ್ದಾರೆ.

Published On - 12:51 pm, Wed, 5 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us