ಉಪ್ಪಿನ ಋಣ ತೀರಿತು! ಮಟನ್ ಸಾಂಬಾರ್‌ಗೆ ಉಪ್ಪು ಹೆಚ್ಚಾಯ್ತು ಅಂತ ಪತಿ ಏನು ಮಾಡಿದ?

ಚಿಕ್ಕಬಳ್ಳಾಪುರ: ಮನುಷ್ಯನಿಗೆ ಕೋಪ ಅನ್ನೋದೆ ದೊಡ್ಡ ಶತ್ರು. ಯಾಕಂದ್ರೆ ಬುದ್ಧಿ ಇರುವ ಮನುಷ್ಯ ತಾಳ್ಮೆ ಕಳೆದುಕೊಂಡು ಕೋಪಕ್ಕೆ ಮೈಮರೆತು ಪ್ರಾಣಿಯಂತೆ ವರ್ತಿಸುತ್ತಾನೆ. ಕೋಪದಿಂದ ಮಾಡಬಾರದ ತಪ್ಪುಗಳನ್ನು ಮಾಡ್ತಾನೆ. ಅದೇ ರೀತಿ ಇಲ್ಲೊಬ್ಬ ಸಾಂಬಾರ್​ಗೆ ಉಪ್ಪು ಹೆಚ್ಚು ಹಾಕಿದ್ದಕ್ಕೆ ಪತ್ನಿಯನ್ನೇ ಕೊಂದಿದ್ದಾನೆ. ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯಾ ಗ್ರಾಮದಲ್ಲಿದ್ದ ಮಧುರಾ ತವರು ಮನೆಯಲ್ಲಿದ್ದ ತನ್ನನ್ನು ನೋಡಲು ಗಂಡ ಬರ್ತಿದ್ದಾನೆ ಅಂತ ಪ್ರೀತಿಯಿಂದ ಮಟನ್ ಸಾಂಬಾರ್ ಮಾಡಿದ್ದಾಳೆ. ಆದರೆ ಗಂಡನನ್ನು ನೋಡುವ ಆತುರದಲ್ಲಿ ಮಟನ್ ಸಾಂಬಾರ್‌ಗೆ ಉಪ್ಪು ಹೆಚ್ಚು […]

ಉಪ್ಪಿನ ಋಣ ತೀರಿತು! ಮಟನ್ ಸಾಂಬಾರ್‌ಗೆ ಉಪ್ಪು ಹೆಚ್ಚಾಯ್ತು ಅಂತ ಪತಿ ಏನು ಮಾಡಿದ?
ಸಾಧು ಶ್ರೀನಾಥ್​

Updated on: May 11, 2020 | 12:55 PM

ಚಿಕ್ಕಬಳ್ಳಾಪುರ: ಮನುಷ್ಯನಿಗೆ ಕೋಪ ಅನ್ನೋದೆ ದೊಡ್ಡ ಶತ್ರು. ಯಾಕಂದ್ರೆ ಬುದ್ಧಿ ಇರುವ ಮನುಷ್ಯ ತಾಳ್ಮೆ ಕಳೆದುಕೊಂಡು ಕೋಪಕ್ಕೆ ಮೈಮರೆತು ಪ್ರಾಣಿಯಂತೆ ವರ್ತಿಸುತ್ತಾನೆ. ಕೋಪದಿಂದ ಮಾಡಬಾರದ ತಪ್ಪುಗಳನ್ನು ಮಾಡ್ತಾನೆ. ಅದೇ ರೀತಿ ಇಲ್ಲೊಬ್ಬ ಸಾಂಬಾರ್​ಗೆ ಉಪ್ಪು ಹೆಚ್ಚು ಹಾಕಿದ್ದಕ್ಕೆ ಪತ್ನಿಯನ್ನೇ ಕೊಂದಿದ್ದಾನೆ.

ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯಾ ಗ್ರಾಮದಲ್ಲಿದ್ದ ಮಧುರಾ ತವರು ಮನೆಯಲ್ಲಿದ್ದ ತನ್ನನ್ನು ನೋಡಲು ಗಂಡ ಬರ್ತಿದ್ದಾನೆ ಅಂತ ಪ್ರೀತಿಯಿಂದ ಮಟನ್ ಸಾಂಬಾರ್ ಮಾಡಿದ್ದಾಳೆ. ಆದರೆ ಗಂಡನನ್ನು ನೋಡುವ ಆತುರದಲ್ಲಿ ಮಟನ್ ಸಾಂಬಾರ್‌ಗೆ ಉಪ್ಪು ಹೆಚ್ಚು ಹಾಕಿದ್ದಾಳೆ. ಅದಕ್ಕೆ ಕೋಪಗೊಂಡ ಬಾಲಚಂದ್ರ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಉಪ್ಪಿನ ಋಣ ತೀರಿ ಹೋಗಿದೆ. ಚೇಳೂರು ಪೊಲೀಸರು ಆರೋಪಿ ಬಾಲಚಂದ್ರನನ್ನು ಬಂಧಿಸಿದ್ದಾರೆ.

Published On - 11:19 am, Mon, 11 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us