AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾದರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ

ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಸದ್ದಿಲ್ಲದೆ ಸಂಚು ರೂಪಿಸುತ್ತಿದ್ದ ನಿಷೇಧಿತ ಪಿಎಫ್​ಐ, ದೇಶದಲ್ಲಿ ಗಲಭೆ, ಜಗಳ ಸೃಷ್ಟಿಸಿ ಕೋಮು ಸಾಮರಸ್ಯ ಕದಡಲೆಂದೇ ಒಂದು ಮಿಲಿಟರಿ ಮಾದರಿಯ ಸೇನೆಯನ್ನು ಸಜ್ಜುಗೊಳಿಸಿತ್ತು.

ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾದರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ
ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾಧರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ
TV9 Web
| Updated By: Rakesh Nayak Manchi

Updated on:Oct 07, 2022 | 7:31 AM

Share

ಮಂಗಳೂರು: ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಸದ್ದಿಲ್ಲದೆ ಸಂಚು ರೂಪಿಸುತ್ತಿದ್ದ ನಿಷೇಧಿತ ಪಿಎಫ್​ಐ (PFI) ಸಂಘಟನೆಯ ಒಂದೊಂದೇ ಅಸಲಿ ಮುಖವಾಡ ಕಳಚಿ ಬೀಳುತ್ತಿದೆ. ಇದೀಗ ಮತ್ತೊಂದು ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ದೇಶದಲ್ಲಿ ಗಲಭೆ, ಜಗಳ ಸೃಷ್ಟಿಸಿ ಕೋಮು ಸಾಮರಸ್ಯ ಕದಡಲೆಂದೇ ಒಂದು ಮಿಲಿಟರಿ ಮಾದರಿಯ ಸೇನೆಯನ್ನು ಸಜ್ಜುಗೊಳಿಸಿತ್ತು. ಸಾಮರ್ಥ್ಯವುಳ್ಳ  ಯುವಕರೇ ಇದಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಏನೇ ಜಗಳ, ಗಲಭೆ ಇದ್ದರೆ ಬೇರೆ ಯಾರೂ ಹೋಗುವಂತಿಲ್ಲ. ಕೊಲೆ, ಪ್ರತಿಕಾರ, ಜಗಳಕ್ಕೆ ಇದೇ ತಂಡದ ಸದಸ್ಯರು ಹೋಗಬೇಕಿತ್ತು. ಈ ಕುಕೃತ್ಯ ಎಸಗುವ ತಂಡಕ್ಕೂ ಒಂದು ಹೆಸರಿದೆ. ಆ ತಂಡದ ಹೆಸರು ಇದೀಗ ಟಿವಿ9ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪಿಎಫ್ಐ ಮಿಲಿಟರಿ ಮಾಧರಿಯ ಪರ್ಯಾಯ ಸೇನೆ ತಯಾರು ಮಾಡಲು ಪಿಎಫ್​ಐ ಹೊರಟ್ಟಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಕರಾವಳಿಯಲ್ಲಿ ಆಳವಾಗಿ ಬೇರೂರಿದ್ದ ಪಿಎಫ್​ಐ, ದೇಶದಲ್ಲಿ ದುಷ್ಕೃತ್ಯ ಎಸಗಲು ಡೇಂಜರಸ್ ತಂಡವನ್ನು ರಚಿಸಿತ್ತು. ಅದಕ್ಕೆ ಅಸಾಲ್ಟ್ ಟೀಮ್ ಎಂದು ಹೆಸರಿಡಲಾಗಿತ್ತು. ಇದು ಸೇನೆಯ ಮೊದಲ ಹಂತದ ಗುಂಪಿನ ಹೆಸರಾಗಿದೆ.

ಅಸಾಲ್ಟ್ ಟೀಮ್ ಅನ್ನೊದು ಪಿಎಫ್ಐ ಪೂರ್ಣ ತರಬೇತಿ ಪಡೆದ ಗುಂಪಿನ ಹೆಸರಾಗಿದೆ. ಈ ತಂಡಕ್ಕೆ ಆಯ್ಕೆಯಾದವರಿಗೆ ಕಠಿಣ ತರಬೇತಿ ನೀಡಲಾಗುತ್ತಿತ್ತು. ಗಟ್ಟುಮುಟ್ಟಾದ ದೇಹದಾಡ್ಯ ಮತ್ತು ಕಿಲಾಡಿಗಳಿಗೆ ಅಸಾಲ್ಟ್ ಟೀಮ್ ತರಬೇತಿ ನೀಡುತ್ತಿತ್ತು. ಈ ತಂಡವು ಕೇವಲ ದಾಳಿ ಹಾಗೂ ಅಪರಾಧ ಕೃತ್ಯಗಳನ್ನು ಎಸಗಲೆಂದೇ ರಚಿಸಲಾಗಿದೆ ಎಂಬುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ದೇಶದಲ್ಲಿ ಏನೇ ಗಲಾಟೆ, ಗಲಭೆ ಮಾಡಲು ಬೇರೆಯವರು ಹೋಗುವಂತಿರಲಿಲ್ಲ. ಕೊಲೆ, ಪ್ರತಿಕಾರ, ಗಲಾಟೆ, ಗಲಭಗೆ ಅಸಾಲ್ಟ್ ಟೀಮ್ ಸದಸ್ಯರೇ ಹೋಗಬೇಕಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Fri, 7 October 22

ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ