AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾದರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ

ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಸದ್ದಿಲ್ಲದೆ ಸಂಚು ರೂಪಿಸುತ್ತಿದ್ದ ನಿಷೇಧಿತ ಪಿಎಫ್​ಐ, ದೇಶದಲ್ಲಿ ಗಲಭೆ, ಜಗಳ ಸೃಷ್ಟಿಸಿ ಕೋಮು ಸಾಮರಸ್ಯ ಕದಡಲೆಂದೇ ಒಂದು ಮಿಲಿಟರಿ ಮಾದರಿಯ ಸೇನೆಯನ್ನು ಸಜ್ಜುಗೊಳಿಸಿತ್ತು.

ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾದರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ
ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾಧರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ
TV9 Web
| Updated By: Rakesh Nayak Manchi|

Updated on:Oct 07, 2022 | 7:31 AM

Share

ಮಂಗಳೂರು: ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಸದ್ದಿಲ್ಲದೆ ಸಂಚು ರೂಪಿಸುತ್ತಿದ್ದ ನಿಷೇಧಿತ ಪಿಎಫ್​ಐ (PFI) ಸಂಘಟನೆಯ ಒಂದೊಂದೇ ಅಸಲಿ ಮುಖವಾಡ ಕಳಚಿ ಬೀಳುತ್ತಿದೆ. ಇದೀಗ ಮತ್ತೊಂದು ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ದೇಶದಲ್ಲಿ ಗಲಭೆ, ಜಗಳ ಸೃಷ್ಟಿಸಿ ಕೋಮು ಸಾಮರಸ್ಯ ಕದಡಲೆಂದೇ ಒಂದು ಮಿಲಿಟರಿ ಮಾದರಿಯ ಸೇನೆಯನ್ನು ಸಜ್ಜುಗೊಳಿಸಿತ್ತು. ಸಾಮರ್ಥ್ಯವುಳ್ಳ  ಯುವಕರೇ ಇದಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಏನೇ ಜಗಳ, ಗಲಭೆ ಇದ್ದರೆ ಬೇರೆ ಯಾರೂ ಹೋಗುವಂತಿಲ್ಲ. ಕೊಲೆ, ಪ್ರತಿಕಾರ, ಜಗಳಕ್ಕೆ ಇದೇ ತಂಡದ ಸದಸ್ಯರು ಹೋಗಬೇಕಿತ್ತು. ಈ ಕುಕೃತ್ಯ ಎಸಗುವ ತಂಡಕ್ಕೂ ಒಂದು ಹೆಸರಿದೆ. ಆ ತಂಡದ ಹೆಸರು ಇದೀಗ ಟಿವಿ9ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪಿಎಫ್ಐ ಮಿಲಿಟರಿ ಮಾಧರಿಯ ಪರ್ಯಾಯ ಸೇನೆ ತಯಾರು ಮಾಡಲು ಪಿಎಫ್​ಐ ಹೊರಟ್ಟಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಕರಾವಳಿಯಲ್ಲಿ ಆಳವಾಗಿ ಬೇರೂರಿದ್ದ ಪಿಎಫ್​ಐ, ದೇಶದಲ್ಲಿ ದುಷ್ಕೃತ್ಯ ಎಸಗಲು ಡೇಂಜರಸ್ ತಂಡವನ್ನು ರಚಿಸಿತ್ತು. ಅದಕ್ಕೆ ಅಸಾಲ್ಟ್ ಟೀಮ್ ಎಂದು ಹೆಸರಿಡಲಾಗಿತ್ತು. ಇದು ಸೇನೆಯ ಮೊದಲ ಹಂತದ ಗುಂಪಿನ ಹೆಸರಾಗಿದೆ.

ಅಸಾಲ್ಟ್ ಟೀಮ್ ಅನ್ನೊದು ಪಿಎಫ್ಐ ಪೂರ್ಣ ತರಬೇತಿ ಪಡೆದ ಗುಂಪಿನ ಹೆಸರಾಗಿದೆ. ಈ ತಂಡಕ್ಕೆ ಆಯ್ಕೆಯಾದವರಿಗೆ ಕಠಿಣ ತರಬೇತಿ ನೀಡಲಾಗುತ್ತಿತ್ತು. ಗಟ್ಟುಮುಟ್ಟಾದ ದೇಹದಾಡ್ಯ ಮತ್ತು ಕಿಲಾಡಿಗಳಿಗೆ ಅಸಾಲ್ಟ್ ಟೀಮ್ ತರಬೇತಿ ನೀಡುತ್ತಿತ್ತು. ಈ ತಂಡವು ಕೇವಲ ದಾಳಿ ಹಾಗೂ ಅಪರಾಧ ಕೃತ್ಯಗಳನ್ನು ಎಸಗಲೆಂದೇ ರಚಿಸಲಾಗಿದೆ ಎಂಬುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ದೇಶದಲ್ಲಿ ಏನೇ ಗಲಾಟೆ, ಗಲಭೆ ಮಾಡಲು ಬೇರೆಯವರು ಹೋಗುವಂತಿರಲಿಲ್ಲ. ಕೊಲೆ, ಪ್ರತಿಕಾರ, ಗಲಾಟೆ, ಗಲಭಗೆ ಅಸಾಲ್ಟ್ ಟೀಮ್ ಸದಸ್ಯರೇ ಹೋಗಬೇಕಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Fri, 7 October 22

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್