AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರಿಂದ ಭರ್ಜರಿ ಬೇಟೆ: ನೈಜಿರಿಯಾ ಗ್ಯಾಂಗ್ ಅರೆಸ್ಟ್, ₹ 1 ಕೋಟಿ ಮೌಲ್ಯದ MDMA ಮಾತ್ರೆ ಜಪ್ತಿ

ಆರೋಪಿಗಳು ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದರು. ಡಾರ್ಕ್ ವೆಬ್ ಮೂಲಕ ಬ್ರಿಟನ್​ನಿಂದ ಟ್ಯಾಬ್ಲೆಟ್ ಸರಬರಾಜಾಗುತ್ತಿತ್ತು. ಬಳಿಕ ಈ ಗ್ಯಾಂಗ್ ಅದನ್ನು ನಗರದಲ್ಲಿ ಮಾರಾಟ ಮಾಡ್ತಿತ್ತು.

ಪೊಲೀಸರಿಂದ ಭರ್ಜರಿ ಬೇಟೆ: ನೈಜಿರಿಯಾ ಗ್ಯಾಂಗ್ ಅರೆಸ್ಟ್, ₹ 1 ಕೋಟಿ ಮೌಲ್ಯದ MDMA ಮಾತ್ರೆ ಜಪ್ತಿ
ಮಾದಕ ವಸ್ತು ಮಾರಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ನೈಜಿರಿಯನ್ ಪ್ರಜೆಗಳು.
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on: Dec 24, 2020 | 1:46 PM

Share

ಬೆಂಗಳೂರು: ಪೊಲೀಸರ ಖೆಡ್ಡಾಗೆ ನೈಜಿರಿಯಾದ ಗ್ಯಾಂಗ್ ಸಿಕ್ಕಿಬಿದ್ದಿದೆ. ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದವರನ್ನು ಸೆರೆಹಿಡಿದು ಸುಮಾರು ₹ 1 ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್​ಮಸ್ ಮತ್ತು ಹೊಸ ವರ್ಷಾಚರಣೆ ಸೆಲೆಬ್ರೇಷನ್ ನಡೆಯಲಿದೆ. ಇದನ್ನೇ ಗುರಿಯಾಗಿಟ್ಟುಕೊಂಡು ದುಡ್ಡು ಮಾಡಲು ಫೀಲ್ಡ್​ಗಿಳಿದಿದ್ದ ನೈಜಿರಿಯನ್ ಮೂಲದ ಖತರ್ನಾಕ್ ಗ್ಯಾಂಗನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದರು. ಡಾರ್ಕ್ ವೆಬ್ ಮೂಲಕ ಬ್ರಿಟನ್​ನಿಂದ ಟ್ಯಾಬ್ಲೆಟ್ ಸರಬರಾಜಾಗುತ್ತಿತ್ತು. ಬಳಿಕ ಈ ಗ್ಯಾಂಗ್ ಅದನ್ನು ನಗರದಲ್ಲಿ ಮಾರಾಟ ಮಾಡ್ತಿತ್ತು.

ಇವರ ಬಳಿ ವೀಸಾ ಮತ್ತು ಸೂಕ್ತವಾದ ಪಾಸ್ ಪೋರ್ಟ್ ಇರಲಿಲ್ಲ. ಆದರೂ ಅಕ್ರಮವಾಗಿ ನೆಲಸಿ ಮಾದಕ ವಸ್ತು ಮಾರಾಟ ಮಾಡ್ತಿದ್ರು. ಕ್ರಿಸ್​ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.

ಬಾಗ್ಮನೆ ಟೆಕ್ ಪಾರ್ಕ್ ಬಳಿ ಇರುವ ಕೃಷ್ಣಪ್ಪ ಗಾರ್ಡನ್ ಹತ್ತಿರ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಬೈಯಪ್ಪನಹಳ್ಳಿ ಪೊಲೀಸರು ನೈಜೀರಿಯನ್ ಗ್ಯಾಂಗ್​ಗೆ ಸೇರಿದವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3,300 MDMA ಮಾತ್ರೆ, 600 ಗ್ರಾಂ ಟ್ಯಾಬ್ಲೆಟ್ ಪೌಡರ್ ಸೇರಿ ಒಟ್ಟು ₹ 1 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ವಿವರ ನೀಡಿದ್ದಾರೆ.

ಮಣಿಪಾಲ: 10 ಲಕ್ಷ ರೂಪಾಯಿ ಮೌಲ್ಯದ MDMA Drugs ಸಂಗ್ರಹಿಸಿದ್ದ ಯುವಕ ಅರೆಸ್ಟ್​

Follow Us
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ