AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರಿಂದ ಭರ್ಜರಿ ಬೇಟೆ: ನೈಜಿರಿಯಾ ಗ್ಯಾಂಗ್ ಅರೆಸ್ಟ್, ₹ 1 ಕೋಟಿ ಮೌಲ್ಯದ MDMA ಮಾತ್ರೆ ಜಪ್ತಿ

ಆರೋಪಿಗಳು ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದರು. ಡಾರ್ಕ್ ವೆಬ್ ಮೂಲಕ ಬ್ರಿಟನ್​ನಿಂದ ಟ್ಯಾಬ್ಲೆಟ್ ಸರಬರಾಜಾಗುತ್ತಿತ್ತು. ಬಳಿಕ ಈ ಗ್ಯಾಂಗ್ ಅದನ್ನು ನಗರದಲ್ಲಿ ಮಾರಾಟ ಮಾಡ್ತಿತ್ತು.

ಪೊಲೀಸರಿಂದ ಭರ್ಜರಿ ಬೇಟೆ: ನೈಜಿರಿಯಾ ಗ್ಯಾಂಗ್ ಅರೆಸ್ಟ್, ₹ 1 ಕೋಟಿ ಮೌಲ್ಯದ MDMA ಮಾತ್ರೆ ಜಪ್ತಿ
ಮಾದಕ ವಸ್ತು ಮಾರಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ನೈಜಿರಿಯನ್ ಪ್ರಜೆಗಳು.
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on: Dec 24, 2020 | 1:46 PM

Share

ಬೆಂಗಳೂರು: ಪೊಲೀಸರ ಖೆಡ್ಡಾಗೆ ನೈಜಿರಿಯಾದ ಗ್ಯಾಂಗ್ ಸಿಕ್ಕಿಬಿದ್ದಿದೆ. ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದವರನ್ನು ಸೆರೆಹಿಡಿದು ಸುಮಾರು ₹ 1 ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್​ಮಸ್ ಮತ್ತು ಹೊಸ ವರ್ಷಾಚರಣೆ ಸೆಲೆಬ್ರೇಷನ್ ನಡೆಯಲಿದೆ. ಇದನ್ನೇ ಗುರಿಯಾಗಿಟ್ಟುಕೊಂಡು ದುಡ್ಡು ಮಾಡಲು ಫೀಲ್ಡ್​ಗಿಳಿದಿದ್ದ ನೈಜಿರಿಯನ್ ಮೂಲದ ಖತರ್ನಾಕ್ ಗ್ಯಾಂಗನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದರು. ಡಾರ್ಕ್ ವೆಬ್ ಮೂಲಕ ಬ್ರಿಟನ್​ನಿಂದ ಟ್ಯಾಬ್ಲೆಟ್ ಸರಬರಾಜಾಗುತ್ತಿತ್ತು. ಬಳಿಕ ಈ ಗ್ಯಾಂಗ್ ಅದನ್ನು ನಗರದಲ್ಲಿ ಮಾರಾಟ ಮಾಡ್ತಿತ್ತು.

ಇವರ ಬಳಿ ವೀಸಾ ಮತ್ತು ಸೂಕ್ತವಾದ ಪಾಸ್ ಪೋರ್ಟ್ ಇರಲಿಲ್ಲ. ಆದರೂ ಅಕ್ರಮವಾಗಿ ನೆಲಸಿ ಮಾದಕ ವಸ್ತು ಮಾರಾಟ ಮಾಡ್ತಿದ್ರು. ಕ್ರಿಸ್​ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.

ಬಾಗ್ಮನೆ ಟೆಕ್ ಪಾರ್ಕ್ ಬಳಿ ಇರುವ ಕೃಷ್ಣಪ್ಪ ಗಾರ್ಡನ್ ಹತ್ತಿರ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಬೈಯಪ್ಪನಹಳ್ಳಿ ಪೊಲೀಸರು ನೈಜೀರಿಯನ್ ಗ್ಯಾಂಗ್​ಗೆ ಸೇರಿದವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3,300 MDMA ಮಾತ್ರೆ, 600 ಗ್ರಾಂ ಟ್ಯಾಬ್ಲೆಟ್ ಪೌಡರ್ ಸೇರಿ ಒಟ್ಟು ₹ 1 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ವಿವರ ನೀಡಿದ್ದಾರೆ.

ಮಣಿಪಾಲ: 10 ಲಕ್ಷ ರೂಪಾಯಿ ಮೌಲ್ಯದ MDMA Drugs ಸಂಗ್ರಹಿಸಿದ್ದ ಯುವಕ ಅರೆಸ್ಟ್​

Follow Us
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!