
ಬೆಂಗಳೂರು: ಕರ್ತವ್ಯನಿರತ ಪ್ರೊಬೇಷನರಿ PSI ಮೇಲೆ ಚಾಲಕನೊಬ್ಬ ಹಲ್ಲೆಮಾಡಿರುವ ಘಟನೆ ಯಶವಂತಪುರ RTOಕಚೇರಿ ಬಳಿ ನಡೆದಿದೆ. ಯಶವಂತಪುರ ಠಾಣೆ PSI ಷರ್ಫುದ್ದೀನ್ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ, ಹಲ್ಲೆ ನಡೆಸಿದ ಆರೋಪಿ ಉದಯ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಿಂದ PSI ಷರ್ಫುದ್ದೀನ್ ತಲೆಗೆ ಗಂಭೀರ ಗಾಯಗಳಾಗಿದೆ. ಹಾಗಾಗಿ, ಅಧಿಕಾರಿಯನ್ನು ಸ್ಥಳೀಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಷರ್ಫುದ್ದೀನ್ ನೀಡಿದ ದೂರಿನನ್ವಯ ಉದಯ್ ಕುಮಾರ್ ಬಂಧನವಾಗಿದೆ.