ಬೆಳಗಾವಿ ಜೈಲಿಂದ ರಿಲೀಸ್ ಆಗ್ತಿದ್ದಂತೆ ಕಿಡ್ನ್ಯಾಪ್​: ಮಂಗಳೂರಲ್ಲಿ ರೌಡಿಶೀಟರ್ ಮರ್ಡರ್!

ಮಂಗಳೂರು: ಎರಡು ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ರೌಡಿಶೀಟರ್ ಹಾಗೂ ಕುಖ್ಯಾತ ದರೋಡೆಕೋರ ತಸ್ಲಿಮ್​ನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ‌.ರೋಡ್​ ಬಳಿ ಇನ್ನೋವಾ ಕಾರಿನಲ್ಲಿ ರೌಡಿಶೀಟರ್ ತಸ್ಲಿಮ್ ಶವ ಪತ್ತೆಯಾಗಿದ್ದು, ಈ ಕೊಲೆ ಪ್ರಕರಣ ಮಂಗಳೂರನ್ನು ಬೆಚ್ಚಿಬೀಳಿಸಿದೆ. ಕೇರಳ ಮೂಲದ ಮುತ್ತಾಸಿಮ್ ಅಲಿಯಾಸ್ ತಸ್ಲಿಮ್ ಭೂಗತ ಪಾತಕಿಗಳ ಜತೆ ನೇರ ಸಂಪರ್ಕ ಹೊಂದಿದ್ದ. ಹಾಗಾಗಿ ತಸ್ಲಿಮ್​ನನ್ನು ಇತ್ತೀಚೆಗೆ ಮಂಗಳೂರು ಪೊಲೀಸರು ಬಂಧಿಸಿದ್ದರು. ಬೆಳಗಾವಿ ಜೈಲಿನಲ್ಲಿದ್ದ ತಸ್ಲಿಮ್, 2 […]

ಬೆಳಗಾವಿ ಜೈಲಿಂದ ರಿಲೀಸ್ ಆಗ್ತಿದ್ದಂತೆ ಕಿಡ್ನ್ಯಾಪ್​: ಮಂಗಳೂರಲ್ಲಿ ರೌಡಿಶೀಟರ್ ಮರ್ಡರ್!

Updated on: Feb 02, 2020 | 7:13 PM

ಮಂಗಳೂರು: ಎರಡು ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ರೌಡಿಶೀಟರ್ ಹಾಗೂ ಕುಖ್ಯಾತ ದರೋಡೆಕೋರ ತಸ್ಲಿಮ್​ನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ‌.ರೋಡ್​ ಬಳಿ ಇನ್ನೋವಾ ಕಾರಿನಲ್ಲಿ ರೌಡಿಶೀಟರ್ ತಸ್ಲಿಮ್ ಶವ ಪತ್ತೆಯಾಗಿದ್ದು, ಈ ಕೊಲೆ ಪ್ರಕರಣ ಮಂಗಳೂರನ್ನು ಬೆಚ್ಚಿಬೀಳಿಸಿದೆ.

ಕೇರಳ ಮೂಲದ ಮುತ್ತಾಸಿಮ್ ಅಲಿಯಾಸ್ ತಸ್ಲಿಮ್ ಭೂಗತ ಪಾತಕಿಗಳ ಜತೆ ನೇರ ಸಂಪರ್ಕ ಹೊಂದಿದ್ದ. ಹಾಗಾಗಿ ತಸ್ಲಿಮ್​ನನ್ನು ಇತ್ತೀಚೆಗೆ ಮಂಗಳೂರು ಪೊಲೀಸರು ಬಂಧಿಸಿದ್ದರು. ಬೆಳಗಾವಿ ಜೈಲಿನಲ್ಲಿದ್ದ ತಸ್ಲಿಮ್, 2 ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಜೈಲಿನಿಂದ ಹೊರಬಂದ ತಕ್ಷಣ ಬೆಳಗಾವಿಯಿಂದ ತಸ್ಲಿಮ್​ನನ್ನ ಅಪಹರಿಸಿದ್ದರು. ತಸ್ಲಿಮ್​ನನ್ನು ಅಪಹರಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.





sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us