ಗೆಳತಿಗಾಗಿ OLXನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕದ್ದು ಸಿಕ್ಕಿಬಿದ್ದ ರೋಮಿಯೋ

ಹಾಸನ: ಗೆಳತಿ ಜೊತೆ ಸುತ್ತಾಡಲು OLXನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳತನ ಮಾಡಿ ಖದೀಮ ಸಿಕ್ಕಿಬಿದ್ದಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. ಹಾಸನದ ರೈಲ್ವೆ ನಿಲ್ದಾಣ ಬಳಿ ಆರೋಪಿ ಪ್ರಮೋದ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರವಣಬೆಳಗೊಳದ ಪುನೀತ್ ಎಂಬುವರು ತಮ್ಮ ಯಮಹ ಬೈಕ್ ಮಾರಾಟದ ಬಗ್ಗೆ OLXನಲ್ಲಿ ಜಾಹೀರಾತು ನೀಡಿದ್ರು. ಮಾರಾಟಕ್ಕಿಟ್ಟಿದ್ದ ಬೈಕ್ ಅನ್ನು ಖರೀದಿ ಮಾಡೋದಾಗಿ ಮಾಲೀಕರನ್ನು ಪ್ರಮೋದ್ ಸಂಪರ್ಕಿಸಿದ್ದಾನೆ. ಫೆಬ್ರವರಿ 9 ರಂದು ಟೆಸ್ಟ್​ ಡ್ರೈವ್​ಗೆಂದು ಹೋಗಿ ಆರೋಪಿ ಪ್ರಮೋದ್(19) ಬೈಕ್ ಸಮೇತ ಎಸ್ಕೇಪ್ […]

ಗೆಳತಿಗಾಗಿ OLXನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕದ್ದು ಸಿಕ್ಕಿಬಿದ್ದ ರೋಮಿಯೋ
ಸಾಧು ಶ್ರೀನಾಥ್​

Updated on: Feb 19, 2020 | 9:11 AM

ಹಾಸನ: ಗೆಳತಿ ಜೊತೆ ಸುತ್ತಾಡಲು OLXನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳತನ ಮಾಡಿ ಖದೀಮ ಸಿಕ್ಕಿಬಿದ್ದಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. ಹಾಸನದ ರೈಲ್ವೆ ನಿಲ್ದಾಣ ಬಳಿ ಆರೋಪಿ ಪ್ರಮೋದ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶ್ರವಣಬೆಳಗೊಳದ ಪುನೀತ್ ಎಂಬುವರು ತಮ್ಮ ಯಮಹ ಬೈಕ್ ಮಾರಾಟದ ಬಗ್ಗೆ OLXನಲ್ಲಿ ಜಾಹೀರಾತು ನೀಡಿದ್ರು. ಮಾರಾಟಕ್ಕಿಟ್ಟಿದ್ದ ಬೈಕ್ ಅನ್ನು ಖರೀದಿ ಮಾಡೋದಾಗಿ ಮಾಲೀಕರನ್ನು ಪ್ರಮೋದ್ ಸಂಪರ್ಕಿಸಿದ್ದಾನೆ. ಫೆಬ್ರವರಿ 9 ರಂದು ಟೆಸ್ಟ್​ ಡ್ರೈವ್​ಗೆಂದು ಹೋಗಿ ಆರೋಪಿ ಪ್ರಮೋದ್(19) ಬೈಕ್ ಸಮೇತ ಎಸ್ಕೇಪ್ ಆಗಿದ್ದಾನೆ.

ಬೈಕ್ ಕಳುವಾದ ಬಗ್ಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಮಾಲೀಕರು ದೂರು ದಾಖಲಿಸಿದ್ದರು. ನಿನ್ನೆ ಹಾಸನದ ರೈಲ್ವೆ ನಿಲ್ದಾಣದ ಬಳಿ ಬೈಕ್ ಸಮೇತ ಆಲೂರು ಮೂಲದ ಆರೋಪಿ ಪ್ರಮೋದ್​ನನ್ನು ಪೊಲೀಸರು ಬಂಧಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us