AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ. ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ […]

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!
ಸಾಧು ಶ್ರೀನಾಥ್​
|

Updated on:Feb 18, 2020 | 2:05 PM

Share

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ.

ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ ಈ ಭೂಪ ಸಾಯಿಬಣ್ಣ. ಸಂಬಂಧದಲ್ಲಿ ದೊಡ್ಡಪ್ಪನ ಮಗ. ಅಂದ್ರೆ ಸಹೋದರನಾಗಬೇಕು. ಒಂದು ಕಪ್ ಟೀ ಕೊಡು ಅಂತಾ ನಾಗರಾಜ್​ಗೆ ಕೇಳಿದ್ದಾನೆ. ಆದ್ರೆ, ನಾಗರಾಜ್​ ಕೊಡಲ್ಲ ಅಂದಿದ್ದಾನೆ. ಇಷ್ಟಕ್ಕೆ ರೊಚ್ಚಿಗೆದ್ದ ಸಾಯಿಬಣ್ಣ, ಮಲಗಿದ್ದ ನಾಗರಾಜ್ ಮೇಲೆರಗಿದ್ದಾನೆ. ನೋಡ ನೋಡ್ತಿದ್ದಂತೆ ಕೊಡಲಿಯಿಂದ ಕೊಚ್ಚಿ ಕೊಲೆಗಿದ್ದಾನೆ.

ಇನ್ನು, ಸಾಯಿಬಣ್ಣ ಆಗಾಗ ಬಂದು ಟೀ ಕುಡಿದು ದುಡ್ಡು ಕೊಡದೇ ಹೋಗ್ತಿದ್ದನಂತೆ. ಕೇಳಿದ್ರೆ ಅಕೌಂಟ್​ಗೆ ಹಚ್ಚು ಅಂತಾ ಹೇಳ್ತಿದ್ದನಂತೆ. ನಿನ್ನೆಯೂ ಪುಕ್ಸಟ್ಟೆ ಟೀ ಕೇಳಿದ್ದಕ್ಕೆ ನಾಗರಾಜ್ ಕೊಡಲ್ಲ ಅಂದಿದ್ದಾನೆ. ಅಷ್ಟಕ್ಕೆ ಈ ಸಾಬಣ್ಣ ಅಟ್ಯಾಕ್ ಮಾಡಿದ್ದಾನೆ. ಡೆಡ್ಲಿ ಹಲ್ಲೆ ಬಳಿಕ ನಾಗರಾಜ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದ. ಜೀವ ಇದೆ ಅಂತಾ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ, ಆದಾಗಲೇ ನಾಗರಾಜ್ ಪ್ರಾಣಬಿಟ್ಟಿದ್ದ.

ಸುದ್ದಿ ತಿಳಿದ ವಡಗೇರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಸಾಯಿಬಣ್ಣನನ್ನು ಬಂಧಿಸಿದ್ರು. ಇನ್ನು, ಆರೋಪಿ ಸಾಯಿಬಣ್ಣ ಮಾನಸಿಕ ಅಸ್ವಸ್ಥ ಅಂತಾ ಗ್ರಾಮಸ್ಥರು ಹಾಗೂ ಸಂಬಂಧಿಕರು ಹೇಳ್ತಿದ್ದಾರೆ. ಅದೇನೆ ಇರಲಿ, ಒಂದು ಕಪ್ ಟೀ ಕೊಡದಿದ್ದಕ್ಕೆ ಈ ಕ್ರೂರಿ ತನ್ನ ಸಹೋದರನ ಹೆಣ ಕೆಡವಿದ್ದು ನಿಜಕ್ಕೂ ಘೋರ ದುರಂತ.

Published On - 12:54 pm, Tue, 18 February 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್