AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ. ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ […]

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!
ಸಾಧು ಶ್ರೀನಾಥ್​
|

Updated on:Feb 18, 2020 | 2:05 PM

Share

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ.

ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ ಈ ಭೂಪ ಸಾಯಿಬಣ್ಣ. ಸಂಬಂಧದಲ್ಲಿ ದೊಡ್ಡಪ್ಪನ ಮಗ. ಅಂದ್ರೆ ಸಹೋದರನಾಗಬೇಕು. ಒಂದು ಕಪ್ ಟೀ ಕೊಡು ಅಂತಾ ನಾಗರಾಜ್​ಗೆ ಕೇಳಿದ್ದಾನೆ. ಆದ್ರೆ, ನಾಗರಾಜ್​ ಕೊಡಲ್ಲ ಅಂದಿದ್ದಾನೆ. ಇಷ್ಟಕ್ಕೆ ರೊಚ್ಚಿಗೆದ್ದ ಸಾಯಿಬಣ್ಣ, ಮಲಗಿದ್ದ ನಾಗರಾಜ್ ಮೇಲೆರಗಿದ್ದಾನೆ. ನೋಡ ನೋಡ್ತಿದ್ದಂತೆ ಕೊಡಲಿಯಿಂದ ಕೊಚ್ಚಿ ಕೊಲೆಗಿದ್ದಾನೆ.

ಇನ್ನು, ಸಾಯಿಬಣ್ಣ ಆಗಾಗ ಬಂದು ಟೀ ಕುಡಿದು ದುಡ್ಡು ಕೊಡದೇ ಹೋಗ್ತಿದ್ದನಂತೆ. ಕೇಳಿದ್ರೆ ಅಕೌಂಟ್​ಗೆ ಹಚ್ಚು ಅಂತಾ ಹೇಳ್ತಿದ್ದನಂತೆ. ನಿನ್ನೆಯೂ ಪುಕ್ಸಟ್ಟೆ ಟೀ ಕೇಳಿದ್ದಕ್ಕೆ ನಾಗರಾಜ್ ಕೊಡಲ್ಲ ಅಂದಿದ್ದಾನೆ. ಅಷ್ಟಕ್ಕೆ ಈ ಸಾಬಣ್ಣ ಅಟ್ಯಾಕ್ ಮಾಡಿದ್ದಾನೆ. ಡೆಡ್ಲಿ ಹಲ್ಲೆ ಬಳಿಕ ನಾಗರಾಜ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದ. ಜೀವ ಇದೆ ಅಂತಾ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ, ಆದಾಗಲೇ ನಾಗರಾಜ್ ಪ್ರಾಣಬಿಟ್ಟಿದ್ದ.

ಸುದ್ದಿ ತಿಳಿದ ವಡಗೇರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಸಾಯಿಬಣ್ಣನನ್ನು ಬಂಧಿಸಿದ್ರು. ಇನ್ನು, ಆರೋಪಿ ಸಾಯಿಬಣ್ಣ ಮಾನಸಿಕ ಅಸ್ವಸ್ಥ ಅಂತಾ ಗ್ರಾಮಸ್ಥರು ಹಾಗೂ ಸಂಬಂಧಿಕರು ಹೇಳ್ತಿದ್ದಾರೆ. ಅದೇನೆ ಇರಲಿ, ಒಂದು ಕಪ್ ಟೀ ಕೊಡದಿದ್ದಕ್ಕೆ ಈ ಕ್ರೂರಿ ತನ್ನ ಸಹೋದರನ ಹೆಣ ಕೆಡವಿದ್ದು ನಿಜಕ್ಕೂ ಘೋರ ದುರಂತ.

Published On - 12:54 pm, Tue, 18 February 20

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌