AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ. ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ […]

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!
ಸಾಧು ಶ್ರೀನಾಥ್​
|

Updated on:Feb 18, 2020 | 2:05 PM

Share

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ.

ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ ಈ ಭೂಪ ಸಾಯಿಬಣ್ಣ. ಸಂಬಂಧದಲ್ಲಿ ದೊಡ್ಡಪ್ಪನ ಮಗ. ಅಂದ್ರೆ ಸಹೋದರನಾಗಬೇಕು. ಒಂದು ಕಪ್ ಟೀ ಕೊಡು ಅಂತಾ ನಾಗರಾಜ್​ಗೆ ಕೇಳಿದ್ದಾನೆ. ಆದ್ರೆ, ನಾಗರಾಜ್​ ಕೊಡಲ್ಲ ಅಂದಿದ್ದಾನೆ. ಇಷ್ಟಕ್ಕೆ ರೊಚ್ಚಿಗೆದ್ದ ಸಾಯಿಬಣ್ಣ, ಮಲಗಿದ್ದ ನಾಗರಾಜ್ ಮೇಲೆರಗಿದ್ದಾನೆ. ನೋಡ ನೋಡ್ತಿದ್ದಂತೆ ಕೊಡಲಿಯಿಂದ ಕೊಚ್ಚಿ ಕೊಲೆಗಿದ್ದಾನೆ.

ಇನ್ನು, ಸಾಯಿಬಣ್ಣ ಆಗಾಗ ಬಂದು ಟೀ ಕುಡಿದು ದುಡ್ಡು ಕೊಡದೇ ಹೋಗ್ತಿದ್ದನಂತೆ. ಕೇಳಿದ್ರೆ ಅಕೌಂಟ್​ಗೆ ಹಚ್ಚು ಅಂತಾ ಹೇಳ್ತಿದ್ದನಂತೆ. ನಿನ್ನೆಯೂ ಪುಕ್ಸಟ್ಟೆ ಟೀ ಕೇಳಿದ್ದಕ್ಕೆ ನಾಗರಾಜ್ ಕೊಡಲ್ಲ ಅಂದಿದ್ದಾನೆ. ಅಷ್ಟಕ್ಕೆ ಈ ಸಾಬಣ್ಣ ಅಟ್ಯಾಕ್ ಮಾಡಿದ್ದಾನೆ. ಡೆಡ್ಲಿ ಹಲ್ಲೆ ಬಳಿಕ ನಾಗರಾಜ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದ. ಜೀವ ಇದೆ ಅಂತಾ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ, ಆದಾಗಲೇ ನಾಗರಾಜ್ ಪ್ರಾಣಬಿಟ್ಟಿದ್ದ.

ಸುದ್ದಿ ತಿಳಿದ ವಡಗೇರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಸಾಯಿಬಣ್ಣನನ್ನು ಬಂಧಿಸಿದ್ರು. ಇನ್ನು, ಆರೋಪಿ ಸಾಯಿಬಣ್ಣ ಮಾನಸಿಕ ಅಸ್ವಸ್ಥ ಅಂತಾ ಗ್ರಾಮಸ್ಥರು ಹಾಗೂ ಸಂಬಂಧಿಕರು ಹೇಳ್ತಿದ್ದಾರೆ. ಅದೇನೆ ಇರಲಿ, ಒಂದು ಕಪ್ ಟೀ ಕೊಡದಿದ್ದಕ್ಕೆ ಈ ಕ್ರೂರಿ ತನ್ನ ಸಹೋದರನ ಹೆಣ ಕೆಡವಿದ್ದು ನಿಜಕ್ಕೂ ಘೋರ ದುರಂತ.

Published On - 12:54 pm, Tue, 18 February 20

Follow Us
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!