ಸಿಲ್ವರ್ ಮೇಲೆ ಚಿನ್ನದ ಲೇಪನ ಮಾಡಿ ಬ್ಯಾಂಕ್​ಗೆ ಲಕ್ಷಾಂತರ ರೂ. ವಂಚನೆ, ಯಾವೂರಲ್ಲಿ?

343 ಗ್ರಾಂ ತೂಕದ ವಿವಿಧ ನಕಲಿ ಚಿನ್ನಾಭರಣಗಳನ್ನ ಇಟ್ಟು 6 ಲಕ್ಷದ 10 ಸಾವಿರ ಪಡೆದಿದ್ದ ಆರೋಪಿ ರಾಜೀವ್ ಬಳಿಕ ತನ್ನ ತಮ್ಮನ ರಾಘವೇಂದ್ರನ ಹೆಸ್ರಲ್ಲೂ 10 ಲಕ್ಷ ರೂ. ಪಡೆದಿದ್ದ. ಅದು ಸಾಲದೆಂಬಂತೆ ಆರೋಪಿ ರಾಘವೇಂದ್ರ ಪತ್ನಿ ಲಾವಣ್ಯ ಹೆಸ್ರಲ್ಲಿ 4 ಲಕ್ಷದ 80 ಸಾವಿರ ಹಣ ಪಡೆದಿದ್ದ.

ಸಿಲ್ವರ್ ಮೇಲೆ ಚಿನ್ನದ ಲೇಪನ ಮಾಡಿ ಬ್ಯಾಂಕ್​ಗೆ ಲಕ್ಷಾಂತರ ರೂ. ವಂಚನೆ, ಯಾವೂರಲ್ಲಿ?
Edited By: ಸಾಧು ಶ್ರೀನಾಥ್​

Updated on: Dec 03, 2020 | 1:21 PM

ಬೆಂಗಳೂರು: ನಕಲಿ ಚಿನ್ನಾಭರಣ ಅಡವಿಟ್ಟು ಹಣ ಪಡೆದು ಬ್ಯಾಂಕ್​ಗೆ ವಂಚಿಸಿರುವ ಘಟನೆ ಬೆಂಗಳೂರಿನ ಬಸವನಗುಡಿ ಶಾಖೆಯ ಸೆಂಟ್ರಲ್ ಬ್ಯಾಂಕ್ ಆಫ್​ ಇಂಡಿಯಾ ಬ್ಯಾಂಕ್​ನಲ್ಲಿ ನಡೆದಿದೆ.

ರಾಜೀವ್ ಎಂಬಾತ ಇದೇ ಬ್ಯಾಂಕ್ ನಲ್ಲಿ ಅಪ್ರೈಸರ್ ಆಗಿ ಕೆಲಸ ಮಾಡ್ತಿದ್ದ. ಈತ ವೆಂಕಟೇಶ್ ಎಂಬಾತನ ಜೊತೆ ಸೇರಿ ಬ್ಯಾಂಕ್​ಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಿಲ್ವರ್ ಮೇಲೆ ಚಿನ್ನದ ಲೇಪವನ್ನ ಮಾಡಿ 409 ತೂಕದ ಚಿನ್ನಾಭರಣವನ್ನ ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿದ್ದ ವೆಂಕಟೇಶ್ ಬ್ಯಾಂಕ್​ನಿಂದ 6 ಲಕ್ಷ ರೂ. ಸಾಲ ಪಡೆದಿದ್ದ.

343 ಗ್ರಾಂ ತೂಕದ ವಿವಿಧ ನಕಲಿ ಚಿನ್ನಾಭರಣಗಳನ್ನ ಇಟ್ಟು 6 ಲಕ್ಷದ 10 ಸಾವಿರ ಪಡೆದಿದ್ದ ಆರೋಪಿ ರಾಜೀವ್ ಬಳಿಕ ತನ್ನ ತಮ್ಮನ ರಾಘವೇಂದ್ರನ ಹೆಸ್ರಲ್ಲೂ 10 ಲಕ್ಷ ರೂ. ಪಡೆದಿದ್ದ. ಅದು ಸಾಲದೆಂಬಂತೆ ಆರೋಪಿ ರಾಘವೇಂದ್ರ ಪತ್ನಿ ಲಾವಣ್ಯ ಹೆಸ್ರಲ್ಲಿ 4 ಲಕ್ಷದ 80 ಸಾವಿರ ಹಣ ಪಡೆದಿದ್ದ.

ಅನುಮಾನ ಬರದಂತೆ ಅಲ್ವ ಸ್ಪಲ್ವ ಹಣವನ್ನ ಪಾವತಿ ಮಾಡ್ತಿದ್ದ ಆರೋಪಿಗಳು ಬಳಿಕ 8 ಲಕ್ಷ ಹಣವನ್ನ ಬಾಕಿ ಉಳಿಸಿಕೊಂಡು ಬ್ಯಾಂಕ್​ಗೆ ವಂಚನೆ ಮಾಡಿದ್ದಾರೆ. ನಂಬಿಕೆ ಮೇರೆಗೆ ಬ್ಯಾಂಕ್ ಸಿಬ್ಬಂದಿಗಳು ಚಿನ್ನಾಭರಣಗಳನ್ನ ಸರಿಯಾಗಿ ಚೆಕ್ ಮಾಡಿಲ್ಲ. ಕೊನೆಗೆ ಇವರ ವಂಚನೆ ತಿಳಿದ ಬ್ಯಾಂಕ್ ಸಿಬ್ಬಂದಿ ಶಿವಶಂಕರ್ ಎಂಬುವವರು ದೂರು ದಾಖಲಿಸಿದ್ದಾರೆ. ಸದ್ಯ ಬಸವನಗುಡಿ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಚಿನ್ನವನ್ನು ಕದ್ದು ಸಾಗಿಸಲು ಈ ಬುದ್ಧಿವಂತರು ಬಳಸಿದ ತಂತ್ರವೇನು ಗೊತ್ತಾ?

Published On - 1:27 pm, Mon, 30 November 20

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us