AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮುಂದೆ ನಿಲ್ಲಿಸಿದ ಆಟೋ ಚಕ್ರಗಳೇ ಇವರಿಗೆ ಟಾರ್ಗೆಟ್.. ಕಳ್ಳರ ಕೈಚಳಕಕ್ಕೆ ಕುಟುಂಬ ಕಂಗಾಲು

ಎರಡು ತಿಂಗಳಲ್ಲಿ ಒಂದೇ ಮನೆಯ ಮೂರು ಆಟೋಗಳ ಚಕ್ರವನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಇದರಿಂದ ಬೇಸತ್ತ ಕುಟುಂಬ ಚಿಂತೆಗೆ ಬಿದ್ದಿದೆ. ತಮ್ಮ ಮೂರು ಆಟೋಗಳ ಚಕ್ರವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಹಾಕುತ್ತಿದ್ದಾನೆ.

ಮನೆ ಮುಂದೆ ನಿಲ್ಲಿಸಿದ ಆಟೋ ಚಕ್ರಗಳೇ ಇವರಿಗೆ ಟಾರ್ಗೆಟ್.. ಕಳ್ಳರ ಕೈಚಳಕಕ್ಕೆ ಕುಟುಂಬ ಕಂಗಾಲು
ಕೊಪ್ಪಳದಲ್ಲಿ ಆಟೋ ಚಕ್ರಗಳ ಕಳ್ಳತನ
Follow us
ಆಯೇಷಾ ಬಾನು
|

Updated on:Dec 01, 2020 | 11:26 AM

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳ್ಳರು ಕೈಚಳಕ ತೋರಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಆಟೋಗಳ ಚಕ್ರವನ್ನು ಖದೀಮರು ಕದ್ದಿರುವ ಘಟನೆ ನಗರದ 15 ನೇ ವಾರ್ಡ್​ನಲ್ಲಿ ನಡೆದಿದೆ.

ಕಳೆದ ಎರಡು ತಿಂಗಳಿನಿಂದ ಕೆಲ ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ ಆಟೋಗಳ ಮೇಲೆ ಕಣ್ಣು ಹಾಕಿದ್ದಾರೆ. ಕತ್ತಲಾಗುತ್ತಿದ್ದಂತೆ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಕಳ್ಳರು ಯಾವುದೇ ಅನುಮಾನ ಬರದಂತೆ ಕಳ್ಳತನ ಮಾಡ್ತಿದ್ದಾರೆ. ಎರಡು ತಿಂಗಳಲ್ಲಿ ಒಂದೇ ಮನೆಯ ಮೂರು ಆಟೋಗಳ ಚಕ್ರವನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಇದರಿಂದ ಬೇಸತ್ತ ಕುಟುಂಬ ಚಿಂತೆಗೆ ಬಿದ್ದಿದೆ. ತಮ್ಮ ಮೂರು ಆಟೋಗಳ ಚಕ್ರವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಹಾಕುತ್ತಿದ್ದಾನೆ.

ಸಾಲ ಮಾಡಿ ಮೂರು ಮಕ್ಕಳಿಗೆ ಆಟೋ ಕೊಡಿಸಿದ್ವಿ. ಒಂದು ಚಕ್ರಕ್ಕೆ ₹ 5000 ಹಾಕಬೇಕು, ಚಕ್ರದ ಜೊತೆಗೆ ಹಾರ್ನ್ ಕೂಡಾ ಕದ್ದೊಯ್ದಿದ್ದಾರೆ. ದುಡಿಮೆ‌ ಇಲ್ಲ ನಾವೇನ್ ಮಾಡೋಣ ಸ್ವಾಮಿ ಎಂದು ಮಕ್ಕಳಿಗೆ ಆಟೋ ಕೊಡಿಸಿದ್ದ ತಾಯಿ ಕಣ್ಣೀರು ಹಾಕಿದ್ದಾರೆ. ವಿಪರ್ಯಾಸವೆಂದ್ರೆ ಆಟೋ ಚಕ್ರಗಳು ಕಳ್ಳತನವಾದ್ರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

Published On - 10:41 am, Tue, 1 December 20

ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಹಲ್ಲೆ, ಘಟನೆ ವಿವರಿಸಿದ ಸುಧಾ ನಾಗರಾಜ್
ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಹಲ್ಲೆ, ಘಟನೆ ವಿವರಿಸಿದ ಸುಧಾ ನಾಗರಾಜ್
ಅಧಿಕಾರಿಗಳನ್ನು ಸಿಎಂ ಯಾವತ್ತೂ ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ: ಡಾ ಯತೀಂದ್ರ
ಅಧಿಕಾರಿಗಳನ್ನು ಸಿಎಂ ಯಾವತ್ತೂ ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ: ಡಾ ಯತೀಂದ್ರ
ಯತ್ನಾಳ್ ಅವರಿಗೆ ನೈತಿಕ ಬೆಂಬಲವಾಗಿ ನಿಂತಿದ್ದೇನೆ: ಮೃತ್ಯುಂಜಯ ಸ್ವಾಮೀಜಿ
ಯತ್ನಾಳ್ ಅವರಿಗೆ ನೈತಿಕ ಬೆಂಬಲವಾಗಿ ನಿಂತಿದ್ದೇನೆ: ಮೃತ್ಯುಂಜಯ ಸ್ವಾಮೀಜಿ